ಅಭಿಪ್ರಾಯ / ಸಲಹೆಗಳು

Crime Reported in  Cyber Crime PS

ಪಿರ್ಯಾದಿದಾರರು ಮಂಗಳೂರಿನ ಐ.ಸಿ.ಐ.ಸಿ.ಐ ಮುಡಿಪು ಬ್ರಾಂಚ್  ನಲ್ಲಿ ಖಾತೆ  ಹೊಂದಿರುತ್ತಾರೆ. ಪಿರ್ಯಾದಿದಾರರು 05-02-2021 ರಂದು ಉನ್ನತ ವ್ಯಾಸಾಂಗದ ನಿಮಿತ್ತ ಸ್ವಿಟ್ಜರ್ ಲ್ಯಾಂಡ್ ಗೆ ಹೋಗಬೇಕಾಗಿದ್ದು ಸದ್ರಿ ವ್ಯಾಸಂಗದ ಮಾಡುವ ಸಮಯ  ಆ ದೇಶದಲ್ಲಿ ಉಳಕೊಳ್ಳಮಲು ರೂಮ್ ಒಂದನ್ನು ಹುಡುಕಾಡುತಿದ್ದರು. ದಿನಾಂಕ 29-12-2019 ರಂದು ಬೆಳಿಗ್ಗೆ 10.00 ಗಂಟೆ ಸಮಯ ಪಿರ್ಯದಿದಾರರು ಗೂಗಲ್ ನಲ್ಲಿ wgzimmer.ch ಎಂಬ ವೆಬ್ ಸೈಟ್ ಒಂದರಲ್ಲಿ ಸ್ವಿಟ್ಜರ್ ಲ್ಯಾಂಡ್ ನಲ್ಲಿ ರೂಮ್ ಬಾಡಿಗೆಗೆ ಇರುವ ಬಗ್ಗೆ ಜಾಹೀರಾತೊಂದನ್ನು ನೋಡಿ ಅದರಲ್ಲಿ ನಮೂದಿಸಿದ್ದ ಮೊಬೈಲ್ ಸಂಖ್ಯೆ +447983981516 ನೇ ದಕ್ಕೆ ಕರೆ ಮಾಡಿರುತ್ತಾರೆ. ಕರೆಯನ್ನು ಯಾರೋ ಮಹಿಳೆಯು ಸ್ವೀಕರಿಸಿದ್ದು ಹೆಸರು Antonio Marja Emilia ಎಂಬುದಾಗಿ ತಿಳಿಸಿದ್ದು ತಾನು ಸ್ವಿಟ್ಜರ್ ಲ್ಯಾಂಡ್ ನಲ್ಲಿ ಉಳಕೊಂಡಿದ್ದು ತನ್ನ ಬಳಿ ಬಾಡಿಗೆಗೆ ಕೊಡಲು ರೂಮ್ ಇರುವುದಾಗಿ ಹೇಳಿ ಮುಂದಿನ ವಿವರಗಳನ್ನು ಪಿರ್ಯಾದಿದಾರರ ವಾಟ್ಸಪ್ ನಂಬರ್ ಗೆ ಕಳುಹಿಸುವುದಾಗಿ ತಿಳಿಸಿ ನಂತರದ ದಿನಗಳಲ್ಲಿ ವಾಟ್ಸಪ್ ಸಂದೇಶದ ಮೂಲಕ ಸಂಪರ್ಕದಲ್ಲಿದ್ದು ದಿನಾಂಕ 31-12-2019ರಂದು ಸದ್ರಿ ಮಹಿಳೆಯು  ತನ್ನ ಗುರುತಿನ ಬಗ್ಗೆ ತನ್ನ ಪಾಸ್ ಪೋರ್ಟ್ ನಂ. CIJ9PR0YW ನ ಪ್ರತಿಯನ್ನು ಹಾಗೂ ರೂಮಿನ rent agreement ಗಳನ್ನು ಕಳುಹಿಸಿದ್ದು ಪಿರ್ಯಾದಿದಾರರು ಕೂಡಾ ತನ್ನ ನನ್ನ ಗುರುತಿನ ಬಗ್ಗೆ ನನ್ನ ಪಾಸ್ ಪೋರ್ಟ್ ಪ್ರತಿಯನ್ನು ಕಳುಹಿಸಿರುತ್ತಾರೆ.  ಸದ್ರಿ ರೂಮಿನ deposit  ಹಾಗೂ rent amount ಬಗ್ಗೆ ರೂ.99,500/- ನ್ನು ತನ್ನ ಭಾರತೀಯ ಸಹೋದ್ಯೋಗಿಯ ಹೆಚ್.ಡಿ.ಎಫ್.ಸಿ ಬ್ಯಾಂಕ್ ಖಾತೆ ಸಂಖ್ಯೆ 50100286144631ನೇ ದಕ್ಕೆ ಕಳುಹಿಸುವಂತೆ ಹೇಳಿರುತ್ತಾರೆ. ಅದರಂತೆ ದಿನಾಂಕ 01-01-2020 ನಾನು ಸದ್ರಿ ಮಹಿಳೆ ನೀಡಿದ ಬ್ಯಾಂಕ್ ಖಾತೆಗೆ ರೂ.10/- ನ್ನು ಪರೀಕ್ಷಿಸುವ ಸಲುವಾಗಿ ಕಳುಹಿಸಿದ್ದು ತದನಂತರ ರೂ.99,490/- ನ್ನು ಐ.ಎಂ.ಪಿ.ಎಸ್ ಮುಖೇನ ಕಳುಹಿಸಿರುತ್ತಾರೆ. ನಂತರದ ದಿನಗಳಲ್ಲಿ ಪಿರ್ಯಾದಿದಾರರು ಪದೇ ಪದೇ +447983981516 ನೇ ದಕ್ಕೆ ಕರೆ ಮಾಡಿದಾಗ ಸದ್ರಿ ಮೊಬೈಲ್ ನಂಬ್ರ ರೀಚ್ ಆಗದೇ ಇದ್ದು ವಾಟ್ಸಪ್ ನಲ್ಲಿ ಸಂದೇಶ ಕಳುಹಿಸಿರುತ್ತಾರೆ ಆದರೆ ಸದ್ರಿ +447983981516 ನೇ ಮೊಬೈಲ್ ನಂಬ್ರವನ್ನು ಹೊಂದಿರುವ ವ್ಯಕ್ತಿ ಪಿರ್ಯಾದಿದಾರರನ್ನು block contact ನಲ್ಲಿ ಇರಿಸಿರುವುದಾಗಿ ಗಮನಕ್ಕೆ ಬಂದಿರುತ್ತದೆ. ನಂತರ ಪಿರ್ಯಾದಿದಾರರು ಸ್ವಿಟ್ಜರ್ ಲ್ಯಾಂಡಿಗೆ ತೆರಳಿದ್ದು ಸದ್ರಿ ವಿಳಾಸದಲ್ಲಿ ಯಾವುದೇ ಬಾಡಿಗೆ ಮನೆ ಇರುವುದಿಲ್ಲ ನಂತರ ಬೇರೆ ಕಡೆ ವ್ಯವಸ್ಥೆ ಮಾಡಿಕೊಂಡು ಉನ್ನತ ವ್ಯಾಸಾಂಗ ಮುಗಿಸಿ ದಿನಾಂಕ 29-06-2020 ರಂದು ಊರಿಗೆ ಮರಳಿರುತ್ತಾರೆ. ಆದುದರಿಂದ ಪಿರ್ಯಾದಿದಾರರ  ಉನ್ನತ ವ್ಯಾಸಾಂಗದ ಕುರಿತು ಸ್ವಿಟ್ಜರ್ ಲ್ಯಾಂಡ್ ನಲ್ಲಿ ಉಳಕೊಳ್ಳಲು ಬಾಡಿಗೆಗೆ ರೂಮನ್ನು ಮಾಡಿಕೊಡುವುದಾಗಿ ತಿಳಿಸಿ ಮೋಸದಿಂದ ಅರ್ಜಿದಾರರ ಬ್ಯಾಂಕ್ ಖಾತೆಯಿಂದ ರೂ.99,500/- ನ್ನು ತನ್ನ ಖಾತೆಗೆ ವರ್ಗಾಯಿಸಿರುವ ವ್ಯಕ್ತಿಯ ಮೇಲೆ ಕಾನೂನು ಕ್ರಮ ಜರುಗಿಸುವರೇ ಕೋರಿಕೆ. ಎಂಬಿತ್ಯಾದಿ.

Crime Reported in  Traffic North PS

ಪಿರ್ಯಾದಿದಾರರಾದ ಜಿನ್ಸಂನ್ ಎನ್. ಜೋನ್ ಹಾಗೂ ಅವರ ಗೆಳೆಯರಾದ ಜೋಬಿನ್ ಜಾರ್ಜ್, ಅಜೋಮೊನ್ ಜೋಸೆಫ್ ಮತ್ತು ಜಿತಿನ್ ರವರಯೊಂದಿಗೆ ನಿನ್ನೆ ದಿನಾಂಕ: 01-08-2021 ರಂದು ಭಾನುವಾರದ ವಿಹಾರದ ಬಗ್ಗೆ ಮಂಗಳೂರು ಕಡೆಯಿಂದ ಮುಕ್ಕ ಬೀಚ್ ಕಡೆಗೆ  ಹೋಗಿದ್ದವರು ಅಲ್ಲಿಯೇ ರಾತ್ರಿ ಊಟ ಮುಗಿಸಿ  ಬಳಿಕ ಮಧ್ಯ ರಾತ್ರಿ ಅಂದರೆ (ದಿನಾಂಕ:02-08-2021) 00-00 ಗಂಟೆಗೆ ಮುಕ್ಕ ಬೀಚ್ ನಿಂದ ಮಂಗಳೂರು ಕಡೆಗೆ KL-17-W-0060 ನಂಬ್ರದ ಕಾರಿನಲ್ಲಿ ಜೋಬಿನ್ ಜಾರ್ಜ್ ರವರು ಚಾಲಕರಾಗಿ ಜಿನ್ಸಂನ್ ಎನ್. ಜೋನ್ ರವರು ಕಾರಿನ ಎದುರಿನ ಸೀಟಿನಲ್ಲಿ ಕುಳಿತಿದ್ದು, ಅಜೋಮೊನ್ ಜೋಸೆಫ್ ಮತ್ತು ಜಿತಿನ್ ರವರು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತುಕೊಂಡು ಜೋಬಿನ್ ಜಾರ್ಜ್ ರವರು ಕಾರನ್ನು ಚಲಾಯಿಸಿಕೊಂಡು ಬರುತ್ತಾ ಮಧ್ಯರಾತ್ರಿ (ದಿನಾಂಕ:02-08-2021) 00-30 ಗಂಟೆಗೆ ಕೂಳೂರು ಬ್ರಿಡ್ಜ್ ಬಳಿ ಇರುವ ರಸ್ತೆಯ ಹಂಪ್ಸ್ ನಲ್ಲಿ ಜೋಬಿನ್ ಜಾರ್ಜ್ ರವರು ತನ್ನ ಕಾರನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ  ಚಾಲಕ ಕಾರಿನ ನಿಯಂತ್ರಣ ತಪ್ಪಿ ಕಾರು ಮುಂದೆ ಚಲಿಸಿ ಕೂಳೂರು ನದಿಗೆ ಬಿದ್ದ ಪರಿಣಾಮ, ಪಿರ್ಯಾದಿದಾರರ ಬಲಕೈ ಭುಜಕ್ಕೆ ಗುದ್ದಿದ ರೀತಿಯ ಗಾಯವಾಗಿದ್ದು, ಜಿತಿನ್ ರವರ  ಕೆನ್ನೆಯ ಎಡಬದಿಗೆ, ಬಲಕೈ ಮೊಣಗಂಟಿನ ಬಳಿ ತರಚಿದ ರೀತಿಯ ಗಾಯವಾಗಿದ್ದು, ಹಾಗೂ ಬೆನ್ನಿಗೆ ಗುದ್ದಿದ ರೀತಿಯ ಗಾಯವಾಗಿದ್ದು, ಅಜೋಮೊನ್ ಜೋಸೆಫ್ ನಿಗೆ ಹಣೆಗೆ ಮೂಳೆ ಮುರಿತದ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದು  ಚಿಕಿತ್ಸೆಯ ಬಗ್ಗೆ ಗಾಯಾಳುಗಳು ಎ.ಜೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Crime Reported in  Urva PS  

ಉರ್ವಾ ಪೊಲೀಸ್ ಠಾಣಾ  ಮೊ.ನಂಬ್ರ 62/2016 ಕಲಂ 120(ಬಿ), 399 ಐ.ಪಿ.ಸಿ  ಪ್ರಕರಣದಲ್ಲಿ ಮಾನ್ಯ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಎಸ್.ಸಿ ನಂಬ್ರ 44/2021 ನೇದಕ್ಕೆ ಸಂಭಂಧಪಟ್ಟು ಹೊರಡಿಸಲಾದ ಜಾಮೀನು ರಹಿತ ವಾರೆಂಟ್ ಮತ್ತು ಉದ್ಘೋಷಣೆಗೆ ಸಂಭಂಧಪಟ್ಟು ಹಾಜರಾಗದೇ ಆವಿಧಯತೇಯನ್ನು ತೋರಿ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿರುವ - ಆರೋಪಿಯಾದ ರಕ್ಷಿತ್ ಮೊಯಿಲಿ @ ಕೋರಿ ರಕ್ಷಿತ್ ಪಡಿಕೆ ರಕ್ಷಿತ್ ಪ್ರಾಯ 24 ವರ್ಷ , ತಂದೆ : ಶಶಿಧರ್ , ವಾಸ : ಕಂಪ್ ಹೌಸ್ , ಪಂಚಲಿಂಗೇಶ್ವರ ದೇವಸ್ಥಾನದ ಬಳಿ , ಉರ್ವ ಚಿಲಿಂಬಿ , ಮಂಗಳೂರು ಈತನು  ಮಂಗಳೂರು ನಗರದ ಶೇಡಿಗುರಿ ಈರಿ ಎಂಬಲ್ಲಿರುವ ಕೊರ್ದಬ್ಬು ದೇವಸ್ತಾನ ಬಳಿ ಇರುವ ಬಗ್ಗೆ ದಿನಾಂಕ : 01-08-2021 ರಂದು ಸಮಯ  16-15 ಗಂಟೆಯ ವೇಳೆಗೆ ಪಿರ್ಯಾದಿ  Smt Bharathi G PI ದಾರರಿಗೆ ಖಚಿತ ವರ್ತಮಾನ ಬಂದಂತೆ ಸದ್ರಿಯವರನ್ನು  ಸಮಯ 16-45 ಗಂಟೆಯ ವೇಳೆಗೆ ಮಂಗಳೂರು ನಗರದ ಶೇಡಿಗುರಿ ಈರಿ ಎಂಬಲ್ಲಿರುವ ಕೋರ್ದಬ್ಬು ದೇವಸ್ಥಾನದ ಬಳಿಯಿಂದ ಸಿಬ್ಬಂದಿಗಳೊಂದಿಗೆ ವಶಕ್ಕೆ ಪಡೆದುಕೊಂಡಿದ್ದು ಆರೋಪಿಗೆ ಮಾನ್ಯ 3 ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಮಂಗಳೂರು ದಿಂದ 2 ಬಾರಿ ಜಾಮೀನು ರಹಿತ ವಾರಂಟ್, ಪ್ರೋಕ್ಲಮೇಷನ್ ಜ್ಯಾರಿಯಾಗಿರುವ ಬಗ್ಗೆ ತಿಳಿದಿದ್ದರೂ , ಈತನು ಉದ್ದೇಶ ಪೂರ್ವಕವಾಗಿ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಇದ್ದು ಈ ಬಗ್ಗೆ ಸದ್ರಿ ಆರೋಪಿತನ ಮೇಲೆ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ಆವಿಧಯತೇಯನ್ನು ತೋರಿಸಿ  ತಲೆಮರೆಸಿಕೊಂಡ ಬಗ್ಗೆ ಕಲಂ174 (ಎ) ಐ.ಪಿ.ಸಿ ರಿತ್ಯ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.

Crime Reported in  Kankanady Town PS

 ದಿನಾಂಕ 01-08-2021 ರಂದು  ಪದವು ಗ್ರಾಮದ ಮುಗ್ರೋಡಿ ಕಟ್ಟೆಪುಣಿ ಎಂಬಲ್ಲಿರುವ ಮೈದಾನದಲ್ಲಿ ಕೋಳಿ ಅಂಕಕ್ಕೆ ಹಣವನ್ನು ಪಣವಾಗಿಟ್ಟು, ಜೂಜಾಟ ಆಡುತ್ತಿದ್ದಾರೆಂದು ಖಚಿತ ವರ್ತಮಾನ ಬಂದ ಮೇರೆಗೆ ಮಾಹಿತಿ ಬಂದ ಸ್ಥಳಕ್ಕೆ ಹೋಗಿ ಗುಪ್ತವಾಗಿ ನೋಡಿದಾಗ ಏಳೆಂಟು ಜನರು  ಕೋಳಿ ಜೂಜಾಟ ಆಡುತ್ತಿದ್ದು ಕಂಡು ಬಂದಿರುತ್ತದೆ. ಈ ಬಗ್ಗೆ ಸಂಜೆ 06.45 ಗಂಟೆಗೆ ಪದವು ಗ್ರಾಮದ ಮುಗ್ರೋಡಿಯ ಕಟ್ಟೆಪುಣಿ ಎಂಬಲ್ಲಿರುವ ಮೈದಾನದಕ್ಕೆ  ದಾಳಿಮಾಡಿ ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ಜೂಜಾಟ  ಆಡುತ್ತಿದ್ದವರನ್ನು ಸುತ್ತುವರಿದು  ಶಿವಪ್ರಸಾದ್, ದೀಪಕ್, ಕೃಷ್ಣಪ್ಪ ಕೋಟ್ಯಾನ್ ಮತ್ತು ವಿಶ್ವನಾಥ ರವರನ್ನು ವಶಕ್ಕೆ ಪಡೆದು ಜೂಜಾಟಕ್ಕೆ ಬಳಸಿದ 6 ಅಂಕದ ಕೋಳಿ ಹಾಗೂ ನಗದು 1280/- ರೂ ಹಣ  ಮತ್ತು KA-19HD-2469 ಕಪ್ಪು ಬಣ್ಣದ ದ್ವಿಚಕ್ರ ವಾಹನವನ್ನು  ಮಹಜರು ಮುಖೇನಾ ಸ್ವಾಧಿನಪಡಿಸಿಕೊಂಡು ಆರೋಪಿತರ ವಿರುದ್ದ ಕ್ರಮ ಜರಗಿಸಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 02-08-2021 05:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080