Feedback / Suggestions

Crime Reported in  Mangalore Women PS

ಪಿರ್ಯಾದಿದಾರರಾದ ಅಪ್ರಾಪ್ತ ನೊಂದ ಬಾಲಕಿಯು 10 ನೇ ತರಗತಿ ಕಲಿಯುತ್ತಿದ್ದು, 2015-2016 ನೇ ಇಸವಿಯಲ್ಲಿ 5ನೇ ತರಗತಿ ಕಲಿಯುತ್ತಿದ್ದಾಗ ಅಪ್ರಾಪ್ತ ನೊಂದ ಬಾಲಕಿಯ ತಂದೆಯಾದ ಆರೋಪಿ ರಾಮಚಂದ್ರಪ್ಪ ಎಂಬಾತನು ಮನೆಯಲ್ಲಿ ಯಾರೂ ಇಲ್ಲದ ಸಮಯ ನೊಂದ ಬಾಲಕಿಗೆ ಅತ್ಯಾಚಾರ ಮಾಡಿರುತ್ತಾರೆ. ಅಲ್ಲದೇ ಇದೇ ರೀತಿ ಹಲವಾರು ಬಾರಿ ಅತ್ಯಾಚಾರವೆಸಗಿರುವುದರಿಂದ  ಅಪ್ರಾಪ್ತ ನೊಂದ ಬಾಲಕಿಯು ದೈಹಿಕ ಹಾಗೂ ಮಾನಸಿಕ ತೊಂದರೆಯಿಂದ  ಬಳಲುತ್ತಿರುವುದಾಗಿದೆ ಎಂಬಿತ್ಯಾದಿ.

Crime Reported in  Mangalore North PS

ಪ್ರಕರಣದ ಪಿರ್ಯಾದಿದಾರರು ಅಪ್ರಾಪ್ತ ವಯಸ್ಸಿನವರಾಗಿದ್ದು, ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದು, 2020 ನೇ ಇಸವಿ ಡಿಸೆಂಬರ್‌‌ ತಿಂಗಳಿನಲ್ಲಿ ಆರಾಪ್‌ ಎಂಬಾತನ ಪರಿಚಯವಾಗಿದ್ದು, 2021 ನೇ ಇಸವಿ ಜನವರಿ ತಿಂಗಳಿನಲ್ಲಿ ಆರೋಪಿ ಆರಾಫ್‌ ಮತ್ತು ಪಿರ್ಯಾದಿದಾರರ ವಿಚಾರ ಮನೆಯಲ್ಲಿ ಗೊತ್ತಾಗಿ ಆತನಲ್ಲಿ ಮಾತನಾಡದಂತೆ ತಿಳಿಸಿದರಿಂದ ಪಿರ್ಯಾದಿದಾರರು ಆತನ ಸಂಪರ್ಕದಿಂದ  ದೂರವಿದ್ದು, ಅದರೂ ಆರೋಪಿತನು ಆತನ ಇನ್‌ಸ್ಟಾಗ್ರಾಂ ಆಕೌಂಟ್‌‌ನಿಂದ  ಪಿರ್ಯಾದಿದಾರರ ಇನ್‌ಸ್ಟಾಗ್ರಾಂ ಆಕೌಂಟ್‌‌ಗೆ ಪಿರ್ಯಾದಿದಾರರಿಗೆ ನೋವುಂಟಾಗುವಂತೆ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದು, ಪ್ರತಿದಿನ ಪಿರ್ಯಾದಿದಾರರು ಕಾಲೇಜ್‌ಗೆ ಹೋಗುವ ಸಮಯ ಹಿಂಬಾಲಿಸುತ್ತಿದ್ದನು. ದಿನಾಂಕ 08-04-2021 ರಂದು 12-30 ಗಂಟೆಗೆ ಆರೋಪಿತನು ಪಿರ್ಯಾದಿದಾರರ ಮನೆಯ ಬಳಿಗೆ ಬಂದು ಪಿರ್ಯಾದಿದಾರರ ಮನೆಯವರಿಗೆ ಅವಾಚ್ಯಶಬ್ದಗಳಿಂದ ಬೈದಿರುವುದಾಗಿದೆ ಎಂಬಿತ್ಯಾದಿಯಾಗಿದೆ.

Crime Reported in  Bajpe PS

ಫಿರ್ಯಾದಿ Puuvappa H.M PSI ರವರಿಗೆ   ದಿನಾಂಕ 09-04-2021 ರಂದು ಬೆಳಿಗ್ಗೆ ಅಡ್ಡೂರು ಗ್ರಾಮ, ಪಾಂಡೇಲು ಮಂಜೊಟ್ಟಿ ಎಂಬಲ್ಲಿ ಅಬ್ದುಲ್ ಮಜೀದ್ ಎಂಬವರ ಮನೆಯ ಹಿಂಬದಿಯಲ್ಲಿ ದನವನ್ನು ಕಳವು ಮಾಡಿ ಅಕ್ರಮವಾಗಿ ಕಡಿದು ಮಾಂಸ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಬೆಳಿಗ್ಗೆ 08:00 ಗಂಟೆಗೆ ಮಂಗಳೂರು ತಾಲೂಕು,  ಅಡ್ಡೂರು ಗ್ರಾಮ, ಪಾಂಡೇಲು ಮಂಜೊಟ್ಟಿ ಎಂಬಲ್ಲಿರುವ ಅಬ್ದುಲ್ ಮಜೀದ್ ಎಂಬವರ ಮನೆಯ ಬಳಿ ಹೋಗಿ ನೋಡಿದಾಗ ಇಬ್ಬರು ವ್ಯಕ್ತಿಗಳು ದನವನ್ನು ಕಡಿದು ಹತ್ಯೆ ಮಾಡಿ ಮಾಂಸ ಮಾಡುತ್ತಿರುವುದು ಕಂಡು ಬಂದಿದ್ದು,  ಸದ್ರಿಯವರು ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದವರನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದು ಹೆಸರು ವಿಳಾಸವನ್ನು ಹೇಳಿದಾಗ ಒಬ್ಬಾತನು ತನ್ನ ಹೆಸರು 1)ಅಬ್ದುಲ್ ಮಜೀದ್ (35 ವರ್ಷ) ಮತ್ತು ಇನ್ನೊಬ್ಬ ತನ್ನ ಹೆಸರು 2)ಪಿ. ಮುಸ್ತಾಫ್ (30 ವರ್ಷ) ಎಂಬುದಾಗಿ ತಿಳಿಸಿರುತ್ತಾರೆ. ಸದ್ರಿಯವರನ್ನು ವಿಚಾರಿಸಿದಾಗ ದನವನ್ನು ಕಳವು ಮಾಡಿ ಈ ಸ್ಥಳದಲ್ಲಿ ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ತುಂಡರಿಸುತ್ತಿರುವುದಾಗಿ ತಿಳಿಸಿದಂತೆ  ಒಟ್ಟು 164 ಕೆ.ಜಿ ದನದ ಮಾಂಸವಿದ್ದು ಇವುಗಳ ಅಂದಾಜು ಬೆಲೆ ಸುಮಾರು 35,000/- ರೂಪಾಯಿ ಆಗಬಹುದು. ಆರೋಪಿ ಮತ್ತು ಸೊತ್ತು ಸ್ವಾಧೀನಪಡಿಸಿಕೊಂಡು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.

Crime Reported in  Ullal PS

ದಿನಾಂಕ 8-4-2021 ರಂದು ಬೆಳಿಗ್ಗೆ 11-15 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಮೊಗವೀರಪಟ್ನ ಅರಬ್ಬೀ ಸಮುದ್ರ ದಡದಿಂದ ಪಶ್ಚಿಮಕ್ಕೆ ಸುಮಾರು 60 ಕಿಮೀ ದೂರದಲ್ಲಿ ಫಿರ್ಯಾದಿದಾರರಾದ ಮೊಹಮ್ಮದ್ ಫಯಾಜ್ ಹಸನ್ ರವರು ತನ್ನ ಅಣ್ಣ ದಾವೂದ್ನ ಮಾಲಕತ್ವದ IND-KA-01-MO-3022 ನೇ ನೋಂದಣಿ ನಂಬ್ರದ ಮೀನುಗಾರಿಕಾ ಗಿಲ್ನೆಟ್ ಬೋಟ್ ನಲ್ಲಿ ಫಿರ್ಯಾದಿದಾರರಾದ ಮೊಹಮ್ಮದ್ ಫಯಾಜ್ ಹಸನ್, ದಾವೂದ್, ಸಫಾನ್, ಜಾವೇದ್,  ಜಾಫರ್, ಜಮೀಲ್ ರವರು ಮೀನುಗಾರಿಕೆ ಮಾಡುತ್ತಾ ಮೀನು ತುಂಬಿದ ಮೀನಿನ ಬಲೆಯನ್ನು ದೋಣಿಗೆ ಎಳೆಯುತ್ತಿದ್ದಾಗ ದಾವೂದ್ (35) ರವರು ಆಯ ತಪ್ಪಿ ಅರಬ್ಬೀ ಸಮುದ್ರದ ನೀರಿಗೆ ಬಿದ್ದು ಕಾಣೆಯಾಗಿದ್ದು, ಕಾಣೆಯಾದವರನ್ನು ಹುಡುಕಾಡಿ ಈ ತನಕ ಪತ್ತೆಯಾಗದೇ ಇದ್ದುದರಿಂದ  ಕಾಣೆಯಾದವರನ್ನು ಪತ್ತೆ ಹಚ್ಚಿ ಕೊಡುವಂತೆ  ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

 

Last Updated: 09-04-2021 06:33 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080