ಅಭಿಪ್ರಾಯ / ಸಲಹೆಗಳು

Crime Reported in  Mangalore East PS

 ಮಂಗಳೂರು ಪೂರ್ವ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ Savitrutej P D  ರವರು ದಿನಾಂಕ: 23-7-2021 ರಂದು ರಾತ್ರಿ  ರೌಂಡ್ಸ್ ಕರ್ತವ್ಯದ ಬಗ್ಗೆ ಠಾಣಾ ಪಿ.ಸಿ.ಅರ್ ವಾಹನದಲ್ಲಿ ಸಿಬ್ಬಂದಿಗಳ ಜೊತೆ ರಾತ್ರಿ ವೇಳೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ದಿನಾಂಕ: 24-07-2021 ರಂದು  ಬೆಳಗ್ಗಿನ ಜಾವ ಸುಮಾರು 04-30 ಗಂಟೆ ವೇಳೆಗೆ ಮಂಗಳೂರು ನಗರದ   ಕಂಕನಾಡಿ – ಪಂಪ್ ವೆಲ್ ರಸ್ತೆಯಲ್ಲಿ  ಹೋಂಡಾ ಶೋ ರೂಮ್ ನ  ಹತ್ತಿರ  2 ಜನರು  ತನ್ನ  ಇರುವಿಕೆಯನ್ನು ಮರೆಮಾಚಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದನ್ನು ಕಂಡು ಸಂಶಯಗೊಂಡು ಟಾರ್ಚ್ ಬೆಳಕಿನ ಸಹಾಯದಿಂದ ಅವರ ಹತ್ತಿರ ಹೋಗುವಷ್ಟ ರಲ್ಲಿ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಓಡಿ ಹೋಗಲು ಪ್ರಯತ್ನಿಸಿದವರನ್ನು ಸಿಬ್ಬಂದಿಯವರು ಹಿಡಿದು ವಿಚಾರಿಸಿದಾಗ ಅವರ  ಹೆಸರು (1) ಶಿವ ನಾಯಕ ಪ್ರಾಯ: 44 ವರ್ಷ  ವಾಸ: ಚೆನ್ನಳ್ಳಿ ತಾಂಡ, ಹರ್ಕನಾಳು ಅಂಚೆ, ಹರನಪ್ಪ ಹಳ್ಳಿ ತಾಲೂಕು, ವಿಜಯನಗರ ಜಿಲ್ಲೆ ಹಾಲಿ ವಾಸ: ಬಿ ಸಿ ರೊಡ್ ಪ್ರೈ ಓವರ್ ಬಿಡ್ಜ್ ಕೆಳಗೆ  ವಾಸ, ಬಿ ಸಿ ರೋಡ್, ಬಂಟ್ವಾಳ ತಾಲೂಕು  (2) ರವಿ ವಾಲ್ಮಿಕಿ,ಪ್ರಾಯ: 40 ವರ್ಷ  ವಾಸ: ಸಾಸ್ವಿಹಳ್ಳಿ ಅಂಚೆ ಮತ್ತು ಗ್ರಾಮ,  ಅಣ್ಣಿಗೇರಿ ತಾಲೂಕು ಗದಗ ಜಿಲ್ಲೆ  ಹಾಲಿ ವಾಸ: ಪರ್ಲ್ ರೆಸಿಡೆನ್ಸಿ, ಕೈಕಂಬ, ಬಿ ಸಿ ರೋಡ್ ಬಂಟ್ವಾಳ ತಾಲೂಕು  ಎಂದು ತಿಳಿಸಿದ್ದು, ಇವರು ಅಪರ ವೇಳೆಯಲ್ಲಿ ಮೇಲಿನ ಸ್ಥಳದಲ್ಲಿ ಇದ್ದ ಬಗ್ಗೆ ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡದೇ ಇದ್ದುದ್ದರಿಂದ ಇವನು ಯಾವುದೋ ಬೇವಾರಂಟು ತಕ್ಷೀರನ್ನು ನಡೆಸುವ ಉದ್ದೇಶದಿಂದ ಸದ್ರಿ ಸ್ಥಳದಲ್ಲಿ ರಾತ್ರಿ ವೇಳೆ ಹೊಂಚು ಹಾಕುತ್ತಿರುವುದಾಗಿ ಇವನ ವರ್ತನೆಯಿಂದ ಬಲವಾದ ಸಂಶಯ ಬಂದಿದ್ದು, ಇವನನ್ನು ವಶಕ್ಕೆ ಪಡೆದು ಇಲಾಖಾ ವಾಹನದಲ್ಲಿ ಠಾಣೆಗೆ ಕರೆ ತಂದು ಇವರ ವಿರುದ್ದ  ಕಲಂ 96 ಕೆ.ಪಿ ಕಾಯ್ದೆಯಂತೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

Crime Reported in  Mangalore East Traffic PS   

ಪಿರ್ಯಾದಿ SUCHITRA N ರವರ ತಂದೆ:ಸಿ .ಕೆ .ನಾರಾಯಣ(61) ರವರು ದಿನಾಂಕ: 22-07-2021 ರಂದು ಅತ್ತಾವರದ ಡಿ ಮಾರ್ಟ್  ನಿಂದ ಸಾಮಾನು ಖರೀದಿಸಿ ಬಸ್ಸಿನಲ್ಲಿ ಬಂದು ಮಾರ್ನಮಿಕಟ್ಟೆ ಬಳಿ ಇಳಿದು ಮಂಕಿಸ್ಟ್ಯಾಂಡ್  ಹೊಸರಸ್ತೆಯಲ್ಲಿ ನಡೆದುಕೊಂಡು ಬರುತ್ತಾ ಸಾಯಂಕಾಲ ಸಮಯ ಸುಮಾರು 04.00 ಗಂಟೆಗೆ ಮಂಕಿಸ್ಟ್ಯಾಂಡ್ 2 ನೇ ಅಡ್ಡ ರಸ್ತೆಯ ಬಳಿ ರಸ್ತೆ ದಾಟುತ್ತಿದ್ದ ವೇಳೆ ಮಂಗಳಾದೇವಿ ಮಂಕಿಸ್ಟ್ಯಾಂಡ್  ಮುಖ್ಯ ರಸ್ತೆ ಕಡೆಯಿಂದ ಕಾಸಿಯಾ ಜಂಕ್ಷನ್  ಕಡೆಗೆ ಮಂಕಿಸ್ಟ್ಯಾಂಡ್ ಹೊಸರಸ್ತೆಯಲ್ಲಿ KL-10-BC-6612  ನಂಬ್ರದ ಮೋಟಾರು ಸೈಕಲನ್ನು ಅದರ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ  ಸಾರ್ವಜನಿಕ  ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ತಂದೆ ಸಿ.ಕೆ. ನಾರಾಯಣ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಸಿ.ಕೆ.ನಾರಾಯಣ ರವರು ಕಾಂಕ್ರೀಟ್ ರಸ್ತೆಗೆ ಬಿದ್ದು, ಸದ್ರಿಯವರ ಕೈ ಕಾಲುಗಳಿಗೆ ಅಲ್ಲಲ್ಲಿ ತರಚಿದ ಗಾಯ ಉಂಟಾಗಿದ್ದು,ಎಡಕೈ ತೋರು ಬೆರಳಿಗೆ ಚರ್ಮ ಹರಿದ ರಕ್ತಗಾಯ, ಎಡ ಕಣ್ಣಿನ ಬಳಿ, ಹಣೆಯ ಎಡಭಾಗ ಮತ್ತು ತಲೆಯ ಹಿಂಭಾಗ ಹಾಗೂ ಮುಂಭಾಗ ಅಲ್ಲಲ್ಲಿ ತರಚಿದ ಗಾಯ, ಮೇಲ್ತುಟಿಗೆ ಚರ್ಮ ಹರಿದ ರಕ್ತಗಾಯದಂತದ ಸಾಮಾನ್ಯ ಸ್ವರೂಪದ ಗಾಯಗಳು ಮತ್ತು ಎಡ ಪಕ್ಕೆಲುಬಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಉಂಟಾಗಿದ್ದು,ಚಿಕಿತ್ಸೆಯ ಬಗ್ಗೆ ಮಂಗಳೂರು ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 24-07-2021 03:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080