ಅಭಿಪ್ರಾಯ / ಸಲಹೆಗಳು

Crime Reported in  Cyber Crime PS

ಪಿರ್ಯಾದಿದಾರರರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಲ್ಲಿಕಟ್ಟೆ ಬ್ರಾಂಚಿನಲ್ಲಿ ಖಾತೆ ಹೊಂದಿರುತ್ತಾರೆ.  ದಿನಾಂಕ 12-06-2021 ರಂದು ಬೆಳಿಗ್ಗೆ  ಸಮಯ ಸುಮಾರು 11.40 ಗಂಟೆಗೆ ಯಾರೋ ಅಪರಿಚಿತರು 9874361421ನೇ ನಂಬ್ರದಿಂದ ಕರೆ ಮಾಡಿ ತಾನು ಮಲ್ಲಿಕಟ್ಟೆ ಸ್ಟೇಟ್ ಬ್ಯಾಂಕ್ ಬ್ರಾಂಚಿನಿಂದ ಮಾತನಾಡುತಿದ್ದು ಕೆ.ವೈ.ಸಿ ಬಗ್ಗೆ ಕರೆ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ. ಈ ವೇಳೆ ಪಿರ್ಯಾದಿದಾರರು ಆತನಲ್ಲಿ ಬ್ಯಾಂಕ್ ನ ಬ್ರಾಂಚ್ ಮೆನೆಜರ್ ಗೆ ಪೋನ್ ನೀಡಲು ತಿಳಿಸಿದ್ದು ಅಪರಿಚಿತ ವ್ಯಕ್ತಿಯು ಕರೆಯನ್ನು ಹೋಲ್ಡ್ ನಲ್ಲಿ ಇಟ್ಟುಕೊಂಡು ಪುನಃ ಮಾತನಾಡಿ ನಾವು ಕೆ.ವೈ.ಸಿ ವಿಭಾಗದಿಂದ ಮಾತನಾಡುವುದಾಗಿ ಗದರಿಸಿ ಮಾತನಾಡಿದ್ದು ಇದನ್ನು ಗಮನಿಸಿದ ಪಿರ್ಯಾದಿದಾರರು ಇದೊಂದು FRAUD CALL ಎಂಬುದಾಗಿ ಭಾವಿಸಿ ಕರೆಯನ್ನು ಕಟ್ ಮಾಡಿ ಅಕೌಂಟನ್ನು ಬ್ಲಾಕ್ ಮಾಡುವರೇ ಬ್ಯಾಂಕ್ ಗೆ ಕರೆ ಮಾಡಿ ಮಾಹಿತಿ ನೀಡಿರುತ್ತಾರೆ. ಈ ಮಧ್ಯೆ ಪಿರ್ಯಾದಿದಾರರು ತನ್ನ ಖಾತೆಯನ್ನು ಪರಿಶೀಲಿಸಿದಲ್ಲಿ ಸದ್ರಿ ಬ್ಯಾಂಕಿನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ ವ್ಯಕ್ತಿಯು ಪಿರ್ಯಾದಿದಾರರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ರೂ.45000/- ನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ.

Crime Reported in  Traffic South PS

ಪಿರ್ಯಾದಿ MOOSA FAIZAL ರವರು ದಿನಾಂಕ: 21-06-2021 ರಂದು  ಅವರ ಮನೆಯಾದ ಸಾಂಬಾರ್ ತೋಟದಿಂದ ಮುಡಿಪುವಿನಲ್ಲಿರುವ ಮೆಡಿಕಲ್ ಒಂದಕ್ಕೆ ಔಷದಿ ತರಲು  ಸ್ಕೂಟರ್ ನಂಬ್ರ : KA-19-HB-7601   ನೇದನ್ನು ಏಕಮುಖ ರಸ್ತೆಯ ಬಲಬದಿಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ  ಸಮಯ ಸುಮಾರು ಮದ್ಯಾಹ್ನ 12-00 ಗಂಟೆಗೆ ಮುಡಿಪುವಿನ ಮಂಗಳ ಬಾರ್ ಬಳಿ ತಲುಪಿದಾಗ ಅದೇ ರಸ್ತೆಯಲ್ಲಿ ಪಿರ್ಯಾದಿದಾರರ ಎಡ ಬದಿಯಲ್ಲಿ ನಿಲ್ಲಿಸಿದ್ದ ಓಮ್ನಿ ಕಾರು ನಂಬ್ರ KA-43-M-1588 ನೇದನ್ನು ಅದರ   ಚಾಲಕ ಮಚ್ಚೇಂದ್ರ ಎಂಬಾತನು ಯಾವುದೇ ಸೂಚನೆ ನೀಡದೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ  ರಸ್ತೆಯ ಬಲಬದಿಯಲ್ಲಿರುವ ತೆರೆದ ರಸ್ತೆ ವಿಭಾಜಕದ ಕಡೆಗೆ ಓಮ್ಮೆಲೆ  ಚಲಾಯಿಸಿ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ  ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಅವರ ಎಡಗಾಲಿನ ಪಾದದ ಬಳಿ ಮೂಳೆ ಮುರಿತದ ಗಾಯವಾಗಿದ್ದವರನ್ನು ಕೂಡಲೇ ಅಲ್ಲಿ ಸೇರಿದ ಜನರು ಅವರನ್ನು ಕಾರೊಂದರಲ್ಲಿ ಚಿಕಿತ್ಸೆ ಬಗ್ಗೆ ಕಣಚೂರು ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ.ಎಂಬಿತ್ಯಾದಿ. ಅಪಘಾತ ಪಡಿಸಿದ ಓಮ್ನಿ ಕಾರಿನ ಚಾಲಕ ಮಚ್ಚೇಂದ್ರ ಎಂಬುವರು ಪಿರ್ಯಾದಿದಾರರ ಚಿಕಿತ್ಸಾ ವೆಚ್ಚವನ್ನು ಆಸ್ಪತ್ರೆಯಲ್ಲಿ ಭರಿಸುವುದಾಗಿ ತಿಳಿಸಿ ಮೊಬೈಲ್ ನಂಬ್ರ ನೀಡಿ ಪರಾರಿಯಾಗಿರುತ್ತಾನೆ ನಂತರ ಆತನ ಮೊಬೈಲ್ ಗೆ ಕರೆ ಮಾಡಿದಾಗ ಆತನು ಚಿಕಿತ್ಸಾ ಚಿಕಿತ್ಸಾ ವೆಚ್ಚ  ಭರಿಸಲು ನಿರಾಕರಿಸಿದ್ದರಿಂದ ಈ ದೂರನ್ನು ನೀಡಲು ತಡವಾಗಿರುತ್ತದೆ

ಇತ್ತೀಚಿನ ನವೀಕರಣ​ : 25-06-2021 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080