ಅಭಿಪ್ರಾಯ / ಸಲಹೆಗಳು

Crime Reported in Traffic North PS

ದಿನಾಂಕ: 29-09-2021 ರಂದು ಪಿರ್ಯಾದಿದಾರರಾದ ಪ್ರಶಾಂತ್ ಆಚಾರ್ಯ ರವರ ತಮ್ಮನಾದ ಜಗದೀಶ್ ರವರ ಬಾಬ್ತು KA-19-HF-4983 ನಂಬ್ರದ ಸ್ಕೂಟರಿನಲ್ಲಿ ದೇವರಾಜ ಎಂಬಾತನು ಜಗದೀಶ್ ರವರನ್ನು ಸಹಸವಾರರಾಗಿ ಕುಳ್ಳಿರಿಸಿಕೊಂಡು ಕುಳಾಯಿ ಜಂಕ್ಷನ್ ಕಡೆಯಿಂದ ಕೋಡಿಕೆರೆ ಮಾರ್ಗವಾಗಿ ಜೋಕಟ್ಟೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಮಧ್ಯಾಹ್ನ ಸಮಯ ಸುಮಾರು 3:00 ಗಂಟೆಗೆ ಕುಳಾಯಿ ಕೋಡಿಕೆರೆ ಎಂಬಲ್ಲಿ  ದೇವರಾಜನ್ನು ಸ್ಕೂಟರನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೋಗುತ್ತಾ ರಸ್ತೆಯಲ್ಲಿದ್ದ ಹಂಮ್ಸ್ ನಲ್ಲಿ ಕೂಡ ಅದೇ ವೇಗದಲ್ಲಿ ಚಲಾಯಿಸಿದ ಪರಿಣಾಮ ದೇವರಾಜನು ಸ್ಕೂಟರಿನ ಹತೋಟಿ ತಪ್ಪಿ ಸ್ಕೂಟರ್ ಸಮೇತ ಸವಾರ ಹಾಗೂ ಸಹಸವಾರ ಡಾಮಾರು ರಸ್ತೆಗೆ ಬಿದ್ದು, ದೇವರಾಜನಿಗೆ ಬಲಕೈ ಭುಜದ ಬಳಿ ಹಾಗೂ ಎಡಕೈ ಮೊಣಗಂಟಿನ ಬಳಿ ತರಚಿದ ಗಾಯ ಹಾಗೂ ಸಹಸವಾರ  ಜಗದೀಶ್ ರವರಿಗೆ ತಲೆಗೆ ಗುದ್ದಿದ ಗಂಭೀರ ಸ್ವರೂಪದ ಒಳಗಾಯ, ಬಲಕೈ ಮೊಣಗಂಟು, ಎಡಕೈ ಮೊಣಗಂಟಿನ ಬಳಿ, ಬೆನ್ನಿನಲ್ಲಿ, ಬಲಕಾಲಿನ ಕೋಲು ಕಾಲಿನಲ್ಲಿ ಅಲ್ಲಲ್ಲಿ ತರಚಿದ ರೀತಿಯ ಗಾಯವಾಗಿ ಚಿಕಿತ್ಸೆಯ ಬಗ್ಗೆ ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Crime Reported in Konaje PS      

ಮಂಗಳೂರು ತಾಲೂಕು ಬೆಳ್ಮ ಗ್ರಾಮದ ರೆಂಜಾಡಿ ಎಂಬಲ್ಲಿರುವ ಪಿರ್ಯಾದಿ Rahammatulla ದಾರರ ಅಕ್ಕ ರಮ್ಲತ್ ರವರ ಮನಗೆ ಆರೋಪಿ ಇರ್ಫಾನ್ ಮತ್ತು ಇತರೆ 3 ಜನರು ಅಕ್ರಮ ಪ್ರವೇಶ ಮಾಡಿ, ಮನೆಯ ಒಳಗಡೆ ಇದ್ದ ಚೇರ, ಬಟ್ಟೆ ಹಾಗೂ ಪಾತ್ರೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಪಿರ್ಯಾದಿದಾರರ ಅಕ್ಕ, ಪಿರ್ಯಾದಿದಾರರ ಸೊಸೆಯನ್ನು ದೂಡಿ ಹಾಕಿ ಬೆದರಿಕೆ ಒಡ್ಡಿ ಹೋಗಿರುತ್ತಾರೆ ಪಿರ್ಯಾದಿದಾರರ ಮಗ ಮೊಹಮ್ಮದ್ ಇಝಾನ್ ರವರ ಶಾಲೆಯ ಶುಲ್ಕ ಬಾಕಿ ಇರುವ ಕಾರಣಕ್ಕೆ ಆರೋಪಿಗಳು ಕೃತ್ಯ ನಡೆಸಿದ್ದಾಗಿರುತ್ತದೆ ಎಂಬಿತ್ಯಾದಿ

Crime Reported in Mulki PS

ದಿನಾಂಕ: 29-9-2021 ರಂದು ಮದ್ಯಾಹ್ನ 1-30 ಗಂಟೆಯ ಸಮಯಕ್ಕೆ ಫಿರ್ಯಾದಿದಾರರಾದ  ರಮೇಶ್ ಅಂಚನ್ ರವರು ಠಾಣೆಗೆ ಬಂದು ದಿನಾಂಕ: 26-09-2021 ರಂದು ಮದ್ಯಾಹ್ನ 2-30 ಗಂಟೆಗೆ ವೆಂಕಟೇಶ್  ನಾನಿಲ್ ಮತ್ತು ಯೋಗೀಶ್ ನಾನೀಲ್ ರವರು ಇಂದಿರಾ ನಗರದ ಬೊಳ್ಳೂರು ಮುಖ್ಯ ರಸ್ತೆಗೆ ಅಡ್ಡವಾಗಿ ಕಲ್ಲುಗಳನ್ನು ಹಾಕಿರುವ ಬಗ್ಗೆ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ: 26-09-2021ರಂದು ಮದ್ಯಾಹ್ನ 2-30 ಗಂಟೆಗೆ ಮಂಗಳೂರು ತಾಲೂಕು ಹಳೆಯಂಗಡಿ ಗ್ರಾಮದ ಬೊಳ್ಳೂರು ಇಂದಿರಾ ನಗರ ರಸ್ತೆಯ ವಿಚಾರವಾಗಿ ಆರೋಪಿಗಳಾದ ವೆಂಕಟೇಶ್ ನಾನಿಲ್ ಮತ್ತು ಯೋಗೀಶ್ ನಾನಿಲ್ ರವರು ಫಿರ್ಯಾದಿದಾರರನ್ನು ಉದ್ದೇಶಿಸಿ ಈ ರಸ್ತೆಯಲ್ಲಿ ಓಡಾಡಲು ನೀನೇನು ನನಗೆ ಹುಟ್ಟಿದ್ದೀಯಾ, ಅಥವಾ ನನ್ನ ಅಪ್ಪ ಭೋಜನಿಗೆ ಹುಟ್ಟಿದ್ದೀಯಾ ಎಂಬಿತ್ಯಾದಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಲು ಮುಂದಾಗಿದ್ದಲ್ಲದೇ ಜೀವ ಬೆದರಿಕೆಯನ್ನು ಹಾಕಿದ್ದಾರೆ ಎಂಬುದಾಗಿ ದೂರಿನ ಸಾರಾಂಶವಾಗಿದೆ.

 

 

ಇತ್ತೀಚಿನ ನವೀಕರಣ​ : 01-10-2021 07:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080