ಅಭಿಪ್ರಾಯ / ಸಲಹೆಗಳು

Crime Reported in : Traffic South PS

ದಿನಾಂಕ 01-03-2022 ರಂದು ಪಿರ್ಯಾದಿ NITHYANANDHA SAMPALIGA ದಾರರು ರಾತ್ರಿ  ಸಮಯ ಮೋಟಾರ್ ಸೈಕಲ್ ನಂಬ್ರ KA-03-EQ-7479 ನೇದರಲ್ಲಿ ಸಹಸವಾರರಾಗಿಯೂ ಹಾಗೂ ಅವರ ಸಂಬಂಧಿ ಶಶಿಧರ್ ರವರು ಸವಾರನಾಗಿ ಮಂಗಳೂರು ಕಡೆಯಿಂದ ಮಿಜಾರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 11:00 ಗಂಟೆಗೆ ಮಂಗಳೂರು ತಾಲ್ಲೂಕು ಪಚ್ಚನಾಡಿ ಗ್ರಾಮದ ಪದವಿನಂಗಡಿಯ ಶ್ರೀ ಮದ್ ಸುದೀಂದ್ರ ತೀರ್ಥ ಸಭಾಭವನದ ಎದುರು ತಲುಪಿದಾಗ ಸವಾರ ಶಶಿಧರ್ ರವರು ಮೋಟಾರ್ ಸೈಕಲ್ ನ್ನು  ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿಮಾಡಿ ಮೋಟಾರ್ ಸೈಕಲ್ ನ ನಿಯಂತ್ರಣ ಕಳೆದುಕೊಂಡು ಸ್ಕೀಡ್ದಾಗಿ ರಸ್ತೆಮದ್ಯದ ಡಿವೈಡರ್ ಗೆ ಮೋಟಾರ್ ಸೈಕಲ್ ನ್ನು ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು ಸವಾರ ಮೋಟಾರ್ ಸೈಕಲ್ ಸಮೇತ ಕಾಂಕ್ರೀಟ್ ರಸ್ತೆಗೆ ಎಸೆಯಲ್ಪಟ್ಟು ಈ ಅಪಘಾತದ  ಪರಿಣಾಮ ಪಿರ್ಯಾದಿದಾರರಿಗೆ ತಲೆಗೆ ಗುದ್ದಿದ ಗಾಯ ಹಾಗೂ ಮುಖಕ್ಕೆ ಅಲ್ಲಲ್ಲಿ ತರಚಿದ ಗಾಯವಾಗಿದ್ದು .ಸವಾರ ಶಶಿಧರ್ ರವರಿಗೆ ತಲೆಗೆ ಗುದ್ದಿದ ಗಂಬೀರ ಗಾಯ ಹಾಗೂ ಮುಖಕ್ಕೆ ಹಣೆಗೆ ಬಾಯಿಗೆ ತರಚಿದ ರಕ್ತಗಾಯವಾಗಿದ್ದು ಅಲ್ಲಿ ಸೇರಿದ ಜನರು ಪಚರಿಸಿ ಅವರನ್ನು ಅಂಬುಲೆನ್ಸ್ ವೊಂದರಲ್ಲಿ ಚಿಕಿತ್ಸೆ ಬಗ್ಗೆ ಎ.ಜೆ ಆಸ್ಪತ್ರೆಗೆ ದಾಖಲಿಸಿದ್ದು ವೈದ್ಯರು ಪರೀಕ್ಷಿಸಿ ಅವರನ್ನು ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಎಂಬಿತ್ಯಾದಿ.

2ದಿನಾಂಕ:02-03-2022 ರಂದು ಪಿರ್ಯಾದಿ DIVYARAJ ದಾರರು ಬೆಳಿಗ್ಗೆ ಸಮಯ 6-25 ಗಂಟಗೆ ಕೆಲಸದ ನಿಮಿತ್ತ ಕುತ್ತಾರ್ ಜಂಕ್ಷನ್ ನಿಂದ ಅಂದರೆ ಮಂಗಳೂರು ಕಡೆಯಿಂದ ಬಿಸಿ ರೋಡ್ ಕಡೆಗೆ ಹೋಗುವ ಅಂಬಿಕಾ ಟ್ರಾವೆಲ್ಸ್ ನ ಭಗವತಿ ಎಂಬ ಹೆಸರಿನ ಬಸ್ಸು ನಂಬ್ರ:KA-19-B-9001ನೇದರಲ್ಲಿ ಪ್ರಯಾಣಿಕನಾಗಿ ಕುಳಿತು ಅದೇ ಬಸ್ಸಿನ ಹಿಂಬದಿ ಡೋರ್ ನ ಮೆಟ್ಟಿಲು ಬಳಿ ಇರುವ ಸೀಟ್ ನಲ್ಲಿ ಪಿರ್ಯಾದಿದಾರರ ಜೋತೆ ಕೆಲಸ ಮಾಡುವ ಜಯಪ್ರಕಾಶ್ ರವರು ಕುಳಿತು ತೊಕ್ಕೊಟುನಿಂದ ಪ್ರಯಾಣಿಸುತ್ತಿದ್ದು ಕೊಣಾಜೆ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 6-30 ಗಂಟೆಗೆ ಮಂಗಳೂರು ತಾಲ್ಲೂಕ್ ಕುತ್ತಾರ್ ಮದನಿ ನಗರದ ಪೆಟ್ರೋಲ್ ಪಂಪ್ ಎದುರು ತಲುಪುತ್ತಿದ್ದಂತೆ ಬಸ್ಸು ಚಾಲಕ ಅರುಣ್ ಕುಮಾರ್ ಎನ್ ಕೆ ಎಂಬಾತನು ಬಸ್ಸನ್ನು ಓಮ್ಮೇಲೆ ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದರ ಪರಿಣಾಮ ಬಸ್ಸಿನ ಹಿಂಬದಿ ಡೋರ್ ನ ಬಳೀ ಸೀಟ್ ನಲ್ಲಿ ಕುಳಿತ್ತಿದ್ದ ಜಯಪ್ರಕಾಶ್ ರವರು ಆಯತಪ್ಪಿ ಹಿಂಬದಿ ಡೋರ್ ನಿಂದ ಡಾಮಾರು ರಸ್ತೆಗೆ ಬಿದ್ದಿರುತ್ತಾರೆ ಇದರ ಪರಿಣಾಮ ಜಯಪ್ರಕಾಶರವರ ತಲೆಯ ಹಿಂಬದಿಗೆ,ಹಣೆಗೆ ಮತ್ತು ಕಾಲಿಗೆ ತೀವ್ರ ಸ್ವರೂಪದ ರಕ್ತ ಗಾಯವಾಗಿರುತ್ತದೆ ಕೂಡಲೇ ಪಿರ್ಯಾದಿದಾರರು ಕೂಗಿದಾಗ ಬಸ್ಸಿನ ಚಾಲಕ ಬಸ್ಸನ್ನು ನಿಲ್ಲಿಸಿದ್ದು ಪಿರ್ಯಾದಿದಾರರು  ಹಾಗೂ ಅಲ್ಲಿ ಸೇರಿದ ಜನರು ಗಾಯಾಳು ಜಯಪ್ರಕಾಶ್ ರವರನ್ನು ಆಟೋರಿಕ್ಷಾವೊಂದರಲ್ಲಿ ಚಿಕಿತ್ಸೆ ಬಗ್ಗೆ ದೇರಳ ಕಟ್ಟೆ ಯೆನೆಪೋಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುತ್ತಾರೆ ಅಲ್ಲದೇ ಸದ್ರಿ ಬಸ್ಸಿನ ನಿರ್ವಾಹಕ ವಿನೋದ್ ರವರು ಪ್ರಯಾಣಿಕರ ಬಗ್ಗೆ ಮುಂಜಾಗ್ರತೆ ಕ್ರಮ ವಹಿಸದೇ ನಿರ್ಲಕ್ಷ್ಯತನ ವಹಿಸಿರುವುದು ಕಾರಣವಾಗಿರುತ್ತದೆ ಎಂಬಿತ್ಯಾದಿ.

 

 

Crime Reported in Mangalore East Traffic PS

 ಪಿರ್ಯಾದಿದಾರರಾದ  ರಾಜಪ್ಪನ್ (63)ರವರು ದಿನಾಂಕ: 01-03-2022 ರಂದು ಎಂದಿನಂತೆ ಮಂಗಳೂರು ನಗರದ ಕೆ ಪಿ ಟಿ ಬಳಿಯ ಕದ್ರಿ ಪಾರ್ಕ್ ಹಿಂಭಾಗ ರಾಷ್ಟ್ರೀಯ ಹೆದ್ದಾರಿ 66 ನೇ ಡಾಮಾರು ರಸ್ತೆಯ ಪಕ್ಕದಲ್ಲಿ ಮಣ್ಣಿನ ಮಡಿಕೆಗಳನ್ನು ಮಾರಾಟ ಮಾಡಿಕೊಂಡಿದ್ದ ವೇಳೆ ಸಂಜೆ ಸಮಯ ಸುಮಾರು 3:35 ಗಂಟೆಗೆ KA-19-ME-3704 ನಂಬ್ರದ ಕಾರೊಂದನ್ನು ಅದರ ಚಾಲಕ ಅಶ್ರಫ್ ಕೆ ಎಂ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಪದವು ಕಡೆಯಿಂದ ಕೆ ಪಿ ಟಿ ಜಂಕ್ಷನ್ ಕಡೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ನೇ ಡಾಮಾರು ರಸ್ತೆಯಲ್ಲಿ ರಸ್ತೆಯ ತೀರಾ ಎಡ ಭಾಗಕ್ಕೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಮಾರಾಟ ಮಾಡಿಕೊಂಡಿದ್ದ  ಮಡಿಕೆಗಳ ಮುಂಭಾಗ ಖರೀದಿಗಾಗಿ ನಿಂತಿದ್ದ ಗ್ರಾಹಕ ಶ್ರೀನಿಶ್ (26) ಎಂಬವರಿಗೆ ಢಿಕ್ಕಿ ಪಡಿಸಿ, ಮುಂದುವರೆದು ಮಡಿಕೆಗಳಿಗೆ ಢಿಕ್ಕಿಯಾಗಿ ಬಳಿಕ ಪಕ್ಕದಲ್ಲಿ ಕುಳಿತಿದ್ದ ಪಿರ್ಯಾದಿದಾರರಿಗೆ ಢಿಕ್ಕಿ ಪಡಿಸಿರುವುದಾಗಿದೆ. ಢಿಕ್ಕಿಯ ಪರಿಣಾಮ ಗ್ರಾಹಕ ಶ್ರೀನಿಶ್ ಎಂಬವರಿಗೆ ತಲೆಗೆ ಮತ್ತು ಮುಖಕ್ಕೆ ಗಂಭೀರ ಸ್ವರೂಪದ ಗಾಯಗೊಂಡವರನ್ನು ಅಪಘಾತ ಪಡಿಸಿದ ಕಾರು ಚಾಲಕನೇ ಎ.ಜೆ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿದ್ದು, ಪಿರ್ಯಾದಿದಾರರಿಗೆ ಬಲ ಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾದವರನ್ನು ತನ್ನ ಸಹೋದರ ಸಂಬಂಧಿ ಆಸ್ಪತ್ರೆಗೆ ಸಾಗಿಸಿ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿ ಚಿಕಿತ್ಸೆಯಲ್ಲಿರುವುದಾಗಿದೆ. ಅಪಘಾತ ಪಡಿಸಿದ ಕಾರು ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ಕೋರಿಕೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 02-03-2022 07:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080