ಅಭಿಪ್ರಾಯ / ಸಲಹೆಗಳು

Crime Reported in CEN Crime PS Mangaluru City      

ಪಿರ್ಯಾದಿದಾರರು ಬಜಾಜ್ ಫೈನಾನ್ಸ್ನ ಗ್ರಾಹಕರಾಗಿದ್ದು  ಈಗಾಗಲೇ   ಬಜಾಜ್ ಪೈನಾನ್ಸ್ ನಿಂದ  ಲೋನ್ ಪಡೆದು  ಅದನ್ನು  ಪೂರ್ಣವಾಗಿ ಮರುಪಾವತಿಸಿದ್ದು  ಮತ್ತೋಮ್ಮೆ  ಲೋನ್  ಪಡೆಯುವ ಅಲೋಚನೆಯಲ್ಲಿದ್ದರು, ತದನಂತರ ದಿನಾಂಕ 25-05-2022 ರಂದು 13:27 ಗಂಟೆಗೆ ಮೊಬೈಲ್ ನಂ. 9330891346 ನೇ ನಂಬ್ರದಿಂದ  ಪಿರ್ಯಾದಿದಾರರ ಮೊಬೈಲ್  ಕರೆ ಬಂದಿದ್ದು  ತಾವು ಬಜಾಜ್   ಫೈನಾನ್ಸ್ ನಿಂದ ಕರೆಮಾಡುತ್ತಿರುವುದಾಗಿ  ಹಾಗೂ   ಲೋನ್   ಮಂಜೂರು ಮಾಡಲು  ಕೆವೈಸಿ  ಕಳುಹಿಸುವಂತೆ ತಿಳಿಸಿದ್ದು ಅದನ್ನು  ನಂಬಿದ ಪಿರ್ಯಾದಿದಾರರು   ಅವರು ನೀಡಿದ ವಾಟ್ಸಾಪ್ ನಂಬ್ರ.9394421162 ಗೆ  ತಮ್ಮ ಕೆವೈಸಿ  ಮಾಹಿತಿಯನ್ನು  ಹಂಚಿಕೊಂಡಿರುತ್ತಾರೆ , ಅನಂತರ  ಮತ್ತೊಂದು  ಮೊಬೈಲ್ ನಂ.9163081559 ನೇದ್ದರಿಂದ  ಕರೆ ಬಂದಿದ್ದು ಸದ್ರಿ ಕರೆಯನ್ನು  ಸ್ವೀಕರಿಸಿದಾಗ  ಕರೆ ಮಾಡಿದ  ವ್ಯಕ್ತಿಯು ಪಿರ್ಯಾದಿದಾರರಿಗೆ  ಲೋನ್  ಮಂಜೂರಾಗಿರುವಂತೆ  ಹಾಗೂ  ಅದರ  ಮಾಹಿತಿಯನ್ನು  ವಾಟ್ಸಾಪ್ ನಲ್ಲಿ  ಕಳುಹಿಸಿದ್ದು  ಅದಕ್ಕಾಗಿ  ಅಗ್ರಿಮೆಂಟ್ ಚಾರ್ಜ್ ಸ್, ಲೋನ್ ಪೇಮೆಂಟ್ ಹೋಲ್ಡ್  ಚಾರ್ಜ್ ಸ್ ನ್ನು  ಗೂಗಲ್ ಪೇ ನಂಬ್ರ.7362908397 ನೇದ್ದಕ್ಕೆ ವರ್ಗಾಯಿಸುವಂತೆ   ತಿಳಿಸಿದ್ದು ಅದನ್ನು ನಂಬಿದ ಪಿರ್ಯಾದಿದಾರರು ದಿನಾಂಕ 25-05-2022 ರಂದು ತಮ್ಮ  ಗುರುಪುರ ಕೈಕಂಬ ಬ್ರಾಂಚ್ ಕೆನರಾ ಬ್ಯಾಂಕ್  ಖಾತೆ ನೇಯದರಿಂದ ಒಟ್ಟು ರೂ.18,119/- ಹಣವನ್ನು   ಸದ್ರಿ ಗೂಗಲ್ ಪೇ ನಂಬ್ರಕ್ಕೆ ಹಂತ ಹಂತವಾಗಿ  ವರ್ಗಾಯಿಸಿದ್ದು  ತದನಂತರ ಸದ್ರಿ  ಅಪರಿಚಿತ ವ್ಯಕ್ತಿಗಳು  ಲೋನ್ ನ್ನು ನೀಡದೆ, ಹಣವನ್ನು  ವಾಪಾಸ್ಸು  ಮಾಡದೇ  ಮೋಸ ಮಾಡಿರುತ್ತಾರೆ. ಎಂಬಿತ್ಯಾದಿಯಾಗಿರುತ್ತದೆ

 

Crime Reported in:Traffic North Police Station            

ದಿನಾಂಕ: 01-06-2022 ರಂದು ಪಿರ್ಯಾದಿದಾರರಾದ ವಲೇರಿಯನ್ ಎಂ ರೆಬೆಲ್ಲೋ ರವರು ಅವರ  ಬಾಬ್ತು KA-19-B-5114 ನಂಬ್ರದ ಆಟೋ ರಿಕ್ಷಾವನ್ನು ಬಾಡಿಗೆ ಮುಗಿಸಿ ತನ್ನ ಮನೆಯ ಕಡೆಗೆ ಅಂದರೆ ಮುಲ್ಕಿ ಕಡೆಯಿಂದ ರಾಹೆ 66 ರ ಡಾಮಾರು ರಸ್ತೆಯಲ್ಲಿ ಕಾರ್ನಾಡು ಬೈಪಾಸ್ ಕಡೆಗೆ ಬರುತ್ತಾ ಸಮಯ ರಾತ್ರಿ 10:15 ಗಂಟೆಗೆ ಬಾಳೆಹಿತ್ಲು, ಕಾರ್ನಾಡು ಹಾಲು ಉತ್ಪಾದಕರ ಸಂಘದ ಎದುರು ತಲುಪಿದಾಗ ಮುಲ್ಕಿ ಕಡೆಯಿಂದ ಅಂದರೆ ನಾನು ಚಲಾಯಿಸಿಕೊಂಡು ಹೋಗುತ್ತಿದ್ದ ಆಟೋ ರಿಕ್ಷಾ ಹಿಂದಿನಿಂದ KA-19-HH-5679 ನಂಬ್ರದ ಮೋಟಾರ್ ಸೈಕಲ್ ನ್ನು ಅದರ ಸವಾರನಾದ ಶುಶ್ರುತನು ಸಹ ಸವಾರನನ್ನಾಗಿ ಶೋಭಿತನನ್ನು ಕುಳ್ಳಿರಿಸಿಕೊಂಡು ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಆಟೋ ರಿಕ್ಷಾದ ಹಿಂಬದಿಯ ಬಲಭಾಗಕ್ಕೆ ಡಿಕ್ಕಿ ಪಡಿಸಿದ್ದು ಇದರ ಪರಿಣಾಮ ಆಟೋ ರಿಕ್ಷಾವು ರಸ್ತೆಯ ತೋಡಿಗೆ ಮುಗುಚಿ ಬಿದ್ದಿದ್ದು ಮೊಟಾರ್ ಸೈಕಲ್ ಸವಾರ ಸಹ ಸವಾರ ಸಮೇತ ಡಾಮಾರು ರಸ್ತೆಯಲ್ಲಿ ಬಿದ್ದಿದ್ದು ಇದರಿಂದ ನನ್ನ ಬಲ ಕೈ ಭುಜದ ಬಳಿ ಗುದ್ದಿದ ರೀತಿಯ ಗಾಯ ಹಾಗೂ ಬಲಕೈ ಮೊಣಗಂಟಿನಿಂದ ಮುಂಗೈವರೆಗೆ ಚರ್ಮ ಹರಿದ ರೀತಿಯ ರಕ್ತಗಾಯವಾಯಿತು ಅಲ್ಲದೇ ಮೋಟಾರ್ ಸೈಕಲ್ ಸವಾರನಾದ ಶುಶ್ರುತ್ ನಿಗೆ ಎಡ ಕಾಲಿನ ಬಳಿ ಗುದ್ದಿದ ರೀತಿಯ ಗಾಯ ಹಾಗೂ ಬಲಕೈ ಹಾಗೂ ಎಡಕೈ ನಲ್ಲಿ ತರಚಿದ ಗಾಯ ಹಾಗೂ ಸಹ ಸವಾರನಾದ ಶೋಭಿತನಿಗೂ ಮುಖದ ಬಳಿ ಕೈ ಹಾಗೂ ಕಾಲಿಗೆ ತರಚಿದ ರೀತಿಯ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

                      

Crime Reported in: Bajpe PS     

ದಿನಾಂಕ 02.06.2022 ರಂದು ಫಿರ್ಯಾದಿ Ibhrahim Basha ಬೆಳ್ಳಿಗ್ಗೆ  ಸುಮಾರು 05-15 ಗಂಟೆಗೆ ಮಂಗಳೂರು ತಾಲೂಕು, ಮೂಡುಪೆರಾರ ಗ್ರಾಮದ, ಎ ಕೆ ಉರ್ದು ಶಾಲೆಯ ಎದುರು ವಾಕ್ ಮಾಡುತ್ತಿರುವಾಗ ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ 169  ನೇದರಲ್ಲಿ  ಕಾರ್ ನಂಬ್ರ ಕೆಎ-15ಎನ್-7573 ನೇಯದನ್ನು ಅದರ ಚಾಲಕ ಸುಹೈಲ್ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವಂತೆ  ಚಲಾಯಿಸಿಕೊಂಡು ಹೋಗುತ್ತಾ  ಕಾರಿನ ವೇಗವನ್ನು ನಿಯಂತ್ರಿಸಲಾಗದೇ ಕಾರು ರಸ್ತೆಯ ಬಲ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ  ಕಾರಿನಲ್ಲಿದ್ದ ಅಶ್ವಿನಿ ಪ್ರಾಯ(29ವರ್ಷ) ಎಂಬುವವರು ಮೃತ ಪಟ್ಟಿದ್ದು ,ಕಾರಿನಲ್ಲಿದ್ದ ಪುಂಡಲಿಕ, ಪುಷ್ಪ, ಸಂತೊಷ ಮತ್ತು ಮಗು ಶ್ರೇಯಾ ಗಂಭಿರ ಮತ್ತು ಸಾಮಾನ್ಯ ಸ್ವರೂಪ ಗಾಯಗೊಂಡವವರನ್ನು ಪಿರ್ಯಾದುದಾರರು ಸ್ಥಳೀಯರೊಂದಿಗೆ ಉಪಚರಿಸಿ ಆಸ್ಪತ್ರೆಗೆ ಕಳಿಸಲಾಗಿದೆ.ಎಂಬಿತ್ಯಾದಿ

 

 

Crime Reported in Mangalore East Traffic PS

ಪಿರ್ಯಾದಿದಾರರಾದ ಮಹಮ್ಮದ್ ಫದಿ ಇಹ್ಸಾನ್ ಪ್ರಾಯ: 19 ವರ್ಷ ಎಂಬುವರು ನಿನ್ನೆ ದಿನ ದಿನಾಂಕ: 31/05/2022 ರಂದು ತಾವು ವಿದ್ಯಾಭ್ಯಾಸ ಮಾಡಿಕೊಂಡಿದ್ದ ಸೈಂಟ್  ಅಲೋಶಿಯಸ್ ಐ.ಟಿ.ಐ ಕಾಲೇಜ್ ಗೇಟಿನಿಂದ ಹೊರಬಂದು ಕಾಲೇಜ್ ಎದುರು ರಸ್ತೆಯನ್ನು ದಾಟಲು ನಿಂತುಕೊಂಡಿದ್ದ ಸಮಯ ಸುಮಾರು ಮಧ್ಯಾಹ್ನ 12-30 ಗಂಟೆಗೆ ಕಾಲೇಜ್ ಎದುರು ಕೋರ್ಟ್ ಕಡೆಯಿಂದ ರಾಧಾ ಮೆಡಿಕಲ್ಸ್ ಕಡೆಗೆ ಇರುವ ಸಾರ್ವಜನಿಕ ರಸ್ತೆಯಲ್ಲಿ ಕಾರು ನೋಂದಣಿ ಸಂಖ್ಯೆ: MH-02-BJ-4975 ಎಂಬುದನ್ನು ಅದರ ಚಾಲಕ ಅನಿಮಿಕ್ ರೇ ಎಂಬಾತನು ಕೋರ್ಟ್ ಕಡೆಯಿಂದ ದುಡುಕುತನ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಪಡಿಸಿದ್ದರಿಂದ ಪಿರ್ಯಾದಿದಾರರು ಸದರಿ ರಸ್ತೆಗೆ ಬಿದ್ದು ಗಾಯಗೊಂಡಿದ್ದು ಚಿಕಿತ್ಸೆ ಬಗ್ಗೆ ತೇಜಸ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರ ಎಡಕಾಲಿನ ತೊಡೆಯಲ್ಲಿ ಮೂಳೆ ಮುರಿತದ ಗಾಯವಾಗಿರುವ ಬಗ್ಗೆ ತಿಳಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ನರ್ಸಿಂಗ್ ಹೋಮ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು ಈ ಸಮಯ ಢಿಕ್ಕಿ ಪಡಿಸಿದ ಕಾರು ಚಾಲಕನು ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿ ನಂತರ ಚಿಕಿತ್ಸಾ ವೆಚ್ಚ ಭರಿಸಲು ನಿರಾಕರಿಸಿದ್ದರಿಂದ ಈ ದಿನ ತಡವಾಗಿ ದೂರು ನೀಡಿತ್ತಿರುವುದಾಗಿದೆ ಎಂಬಿತ್ಯಾದಿ.

 

Crime Reported in: Kankanady Town PS                                    

ಪಿರ್ಯಾದುದಾರರ H.S Cypry D'Souza ಜೊತೆ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶ ಕುಷಿನಗರದ ಜಬ್ಬರ್ ಅನ್ಸಾರಿ (35) ಎಂಬುವವರು ಈ ದಿನ ದಿನಾಂಕ 01-06-2022 ರಂದು ಪಂಪವೆಲ್ ನಲ್ಲಿ ನಿರ್ಮಾಣ ಹಂತದಲ್ಲಿರುವ  ಕ್ರೀಕ್ ಗ್ಯಾಲೆಕ್ಸಿ ಎಂಬ ಬಹು ಮಹಡಿ ಕಟ್ಟಡದ 10 ನೇ ಮಹಡಿಯಲ್ಲಿ ಇಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಕೆಲಸವನ್ನು ಮಾಡುತ್ತಿರುವಾಗ ಸಮಯ ಸುಮಾರು ಸಂಜೆ 3:50 ಗಂಟೆಗೆ ಆಯ ತಪ್ಪಿ 10ನೇ ಮಹಡಿಯಿಂದ 3ನೇ ಮಹಡಿಗೆ ಬಿದ್ದು ತಲೆಯ ಎಡ ಭಾಗಕ್ಕೆ ತೀವ್ರ ರಕ್ತ ಗಾಯ, ಕತ್ತಿನ ಹಿಂಭಾಗ, ಎಡಕೈಯ ಮೊಣಗಂಟಿಗೆ ಮತ್ತು ಬಲಗಾಲಿನ ಪಾದಕ್ಕೆ ಗಾಯವಾಗಿದ್ದು ಪಿರ್ಯಾದುದಾರರು ಚಿಕಿತ್ಸೆಗೆ ಪಂಪವೆಲ್ ಬಳಿಯ ಇಂಡಿಯಾನ ಆಸ್ಪತ್ರೆಗೆ ಕರೆದುಕೊಂಡು ವೈದ್ಯರ ಮುಂದೆ ಹಾಜರುಪಡಿಸಿದಾಗ ವೈದ್ಯರು ಜಬ್ಬರ್  ಅನ್ಸಾರಿ ಯನ್ನು  ಪರೀಕ್ಷಿಸಿ ಚಿಕಿತ್ಸೆಯನ್ನು ನೀಡುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ಸಮಯ ಸುಮಾರು ಸಂಜೆ 6:45 ಗಂಟೆಗೆ ಮೃತಪಟ್ಟಿರುವುದಾಗಿದೆ. ಜಬ್ಬರ್ ಅನ್ಸಾರಿ 10 ನೇ ಮಹಡಿಯಲ್ಲಿ ಇಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಕೆಲಸವನ್ನು ಮಾಡುವ ವೇಳೆ ಆತನಿಂದ ಕೆಲಸ ಮಾಡಿಸುತ್ತಿದ್ದ ಕ್ರೀಕ್ ಗ್ಯಾಲೆಕ್ಸಿ ಎಂಬ ಬಹು ಮಹಡಿ ಕಟ್ಟಡದ ಮಾಲಿಕ ಮತ್ತು  ಕಟ್ಟಡದ ಇನ್ ಚಾರ್ಜ್ ಸೂಪ್ರವೈಸರ್ ಹಾಗೂ ಕಾಂಟ್ರಾಕ್ಟರ್ ರುಗಳು 10 ನೇ  ಮಹಡಿಯಲ್ಲಿ ಪೈಪ್ ಲೈನಿಂಗ್ ಡಕ್ಕ್ ನಲ್ಲಿ  ನಿಂತು ಕೆಲಸ ಮಾಡಿಸುತ್ತಿರುವ ಸಮಯ ಕೆಲಸಗಾರರಿಗೆ ಸುರಕ್ಷತಾ ದೃಷ್ಟಿಯಿಂದ ಸೇಪ್ಟಿ ಬೆಲ್ಟ್, ಸೇಪ್ಟಿ ಹೆಲ್ಮೆಟ್ ನೀಡದೇ ಮಾನವ ಜೀವಕ್ಕೆ ಅಪಾಯವುಂಟು ಮಾಡುವ ಸಾದ್ಯತೆ ಇದೆ ಎಂದು ತಿಳಿದು ತೀವ್ರ ನಿರ್ಲಕ್ಷವಹಿಸಿರುವುದೇ ಈ ಅನಾಹುತಕ್ಕೆ ಕಾರಣವಾಗಿರುತ್ತದೆ ಎಂಬಿತ್ಯಾದಿ.

 

Crime Reported in: Traffic North Police Station              

ದಿನಾಂಕ 01/06/2022 ರಂದು ಸಂಜೆ ಫಿರ್ಯಾದಿ NARAYANA MOORTHI  ತನ್ನ ಮನೆಯಾದ ಕುಳಾಯಿ ಹೊನ್ನಕಟ್ಟೆಯಿಂದ ಲಲಿತ್ ಎಂಟರ್ ಪ್ರೈಸಸ್ ಅಂಗಡಿಗೆ ಹೋಗಿ ತಗಡಿನ ಶೀಟ್ ಬಗ್ಗೆ ವಿಚಾರಿಸಿ ವಾಪಸ್ ಅಲ್ಲಿಂದ ಹೊರಟು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಬಂದವರು ಸಂಜೆ 4.30 ಗಂಟೆ ಸುಮಾರಿಗೆ ಹೊನ್ನಕಟ್ಟೆ ಮಹಿಳಾ ಮಂಡಳಿ ಸಮೀಪ ರಸ್ತೆಯಲ್ಲಿ ಯಾವುದೇ ವಾಹನಗಳು ಬಾರದೇ ಇರುವುದನ್ನು ಕಂಡು ರಸ್ತೆ ದಾಟಲು ಹೊರಟಾಗ ಬೈಕಂಪಾಡಿ ಕಡೆಯಿಂದ ಸುರತ್ಕಲ್ ಕಡೆಗೆ KA 19 V 1639 ಮೋಟಾರ್ ಸೈಕಲ್ ನ್ನು ಅದರ ಚಾಲಕ ಸಹಸವಾರನನ್ನು ಕುಳ್ಳಿರಿಸಿಕೊಂಡು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರಿಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಎಸೆಯಲ್ಪಟ್ಟು ಬೈಕಿನಲ್ಲಿರುವವರೂ ಕೂಡ ಬೈಕ್ ಸಮೇತ ರಸ್ತೆಗೆ ಬಿದ್ದರು, ಸದ್ರಿ ಅಫಘಾತದಿಂದ ಫಿರ್ಯಾದಿದಾರರ ಬಲಕಣ್ಣಿನ ಮೇಲ್ಬದಿ ಮತ್ತು ಕೆಳಬದಿ, ತಲೆಯ ಎಡಬದಿ ಹಾಗೂ ಎಡಕಾಲಿನ ಪಾದಗಳಲ್ಲಿ ಗಾಯಗಳಾಗಿದ್ದು ಬಲಕೈ ಮತ್ತು ಬಲಗಾಲಿನಲ್ಲಿ ತರಚಿದ ಗಾಯವಾಗಿದ್ದು ಅಲ್ಲದೇ ಅಫಘಾತ ಪಡಿಸಿದ ಮೋಟಾರ್ ಸೈಕಲ್ ಸವಾರನಿಗೆ ಗಾಯವಾಗಿದ್ದು ಫಿರ್ಯಾದಿ ನಾರಾಯಣ ಮೂರ್ತಿ ಹಾಗೂ ಅಫಘಾತ ;ಪಡಿಸಿದ ಮೋಟಾರ್ ಸೈಕಲ್ ಸವಾರ ಚಿಕಿತ್ಸೆಯ ಬಗ್ಗೆ ಪದ್ಮಾವತಿ ಹಾಸ್ಪಿಟಲ್ ದಾಖಲಾಗಿರುವುದಾಗಿ ಎಂಬಿತ್ಯಾದಿ..

2) ದಿನಾಂಕ: 01-06-2022 ರಂದು ಪಿರ್ಯಾದಿದಾರರಾದ ಭಿಮಾಶಂಕರ ಶಿ ಉಪ್ಪಲದಿನ್ನಿರವರು KA-19-G-0768 ನೇ ನಂಬ್ರದ 112 ಗಸ್ತು ವಾಹನದ ಚಾಲಕರಾಗಿದ್ದು ಸುರತ್ಕಲ್ ಜಂಕ್ಷನ್ ನಲ್ಲಿ ಇಲಾಖಾ ವಾಹನವನ್ನು ಫ್ಲೈ ಓವರ್ ಕೆಳಗಡೆ ನಿಲ್ಲಿಸಿ ಅವರ ಜೊತೆ ಕರ್ತವ್ಯದಲ್ಲಿದ್ದ ಪಿಸಿ ಮಸ್ತಾನ್ ಬಗಲಿ ರವರೊಂದಿಗೆ ವಾಹನದೊಂದಿಗೆ ಕೆಳಗೆ ಇಳಿದಿದ್ದು ರಸ್ತೆಯನ್ನು ಗಮನಿಸುತ್ತಿದ್ದಂತೆ ರಾತ್ರಿ ಸಮಯ 08:45 ಗಂಟೆಗೆ ಸುರತ್ಕಲ್ ಜಂಕ್ಷನ್ ಬಳಿ KA-19-HJ-6837 ನೇ ನಂಬ್ರದ ಮೋಟಾರ್ ಸೈಕಲ್ ನಲ್ಲಿ ಶಮೀರ್ ಎಂಬಾತನು ಬೈಕಂಪಾಡಿ ಕಡೆಯಿಂದ ಸುರತ್ಕಲ್ ಜಂಕ್ಷನ್ ಮುಖಾಂತರ ಕಾಟಿಪಳ್ಳದ ಕಡೆಗೆ ಹೋಗುವರೇ ಬಲಕ್ಕೆ ಇಂಡಿಕೇಟರ್ ಹಾಕಿ ತಿರುಗಿಸಿದ ಸಮಯ ಅದೇ ರಸ್ತೆಯಾಗಿ ಬೈಕಂಪಾಡಿ ಕಡೆಯಿಂದ ಸುರತ್ಕಲ್ ಜಂಕ್ಷನ್ ಮುಖಾಂತರ KA-22-D-8385 ನೇ ನಂಬ್ರದ ಲಾರಿಯನ್ನು ಅದರ ಚಾಲಕನಾದ ಕೈಲಾಶ್ ಬಿ ಪಾಟಿಲ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಶಮೀರ್ ರವರ ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿ ಒಮ್ಮೆಲೆ ಎಡಕ್ಕೆ ತಿರುಗಿಸಿ ಸುರತ್ಕಲ್ ಜಂಕ್ಷನ ನಲ್ಲಿ ನಿಲ್ಲಿಸಿದ KA-19-G-0768 ನೇ ನಂಬ್ರದ ಇಲಾಖಾ ವಾಹನಕ್ಕೆ ಡಿಕ್ಕಿಪಡಿಸಿ ಹಾಗೇ ಸುಮಾರು 100 ಮೀಟರ್ ದೂರ ಹೋಗಿ ಕಾಟಿಪಳ್ಳದ ಕಡೆ ಹೋಗುತ್ತಿದ್ದ KA-19-AC-4823 ನೇ ನಂಬ್ರದ ಆಟೋ ರಿಕ್ಷಾಕ್ಕೆ ಡಿಕ್ಕಿ ಪಡಿಸಸಿದ ಪರಿಣಾಮ ಮೋಟಾರ್ ಸೈಕಲ್ ಸಮೇತ ಮೋಟಾರ್ ಸೈಕಲ್ ಸವಾರನು ರಸ್ತೆಗೆ ಬಿದ್ದು ಸೊಂಟದ ಎಡ ಬದಿಯಲ್ಲಿ ಗುದ್ದಿದ ರೀತಿಯ ಗಾಯ ಮತ್ತು ಎಡ ಕೈ ಕೋಲುಕೈ ಬಳಿ ತರಚಿದ ರೀತಿಯ ರಕ್ತಗಾಯವಾಗಿ ಮುಕ್ಕದ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಅಲ್ಲದೇ ರಿಕ್ಷಾ ಮತ್ತು ಇಲಾಖಾ ವಾಹನ ಜಖಂಗೊಂಡಿರುತ್ತದೆ, ಅಲ್ಲದೇ ಲಾರಿ ಚಾಲಕನು ಯಾವುದೋ ಅಮಲು ಪದಾರ್ಥ ಸೇವಿಸಿದಂತೆ ಕಂಡು ಬಂದಿದ್ದು ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 02-06-2022 06:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080