ಅಭಿಪ್ರಾಯ / ಸಲಹೆಗಳು

Crime Reported in: Barke PS

ಪಿರ್ಯಾದಿದಾರರಾದ ನಾಗರಾಜ್ ಫಕೀರಪ್ಪ ಗೊಲ್ಲರ ಪ್ರಾಯ 45 ವರ್ಷ ವರು ಮೂಲತ: ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಿವಾಸಿಯಾಗಿದ್ದು, ಪಿರ್ಯಾದಿದಾರರಿಗೆ ಮಂಡಿ ನೋವು ಇರುವುದರಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಿನಾಂಕ: 01-07-2022 ರಂದು ರಾತ್ರಿ ಸಮಯ ಸುಮಾರು 09-00 ಗಂಟೆಗೆ ತನ್ನ ಮಗಳಾದ ಕು. ದೀಪಿಕಾ ಪ್ರಾಯ 19 ವರ್ಷರವರೊಂದಿಗೆ ಹಾನಗಲ್ ನಿಂದ ಹೊರಟು ಈ ದಿನ ದಿನಾಂಖ: 02-07-2022 ರಂದು ಬೆಳಿಗ್ಗೆ ಸಮಯ ಸುಮಾರು 05-00 ಗಂಟೆಗೆ ಮಂಗಳೂರಿನ ಕೆ.ಎಸ್.ಆರ್ ಟಿ.ಸಿ ಬಸ್ಸು ನಿಲ್ದಾಣಕ್ಕೆ ತಲುಪಿ ಬಸ್ಸು ನಿಲ್ದಾಣದಲ್ಲಿ ಶೌಚಾಲಯಕ್ಕೆ ಪಿರ್ಯಾದಿದಾರರು ಗಂಡಸರ ಶೌಚಾಲಯಕ್ಕೆ ಹೋಗಿದ್ದು ತನ್ನ ಮಗಳು ಮಹಿಳೆಯ ಶೌಚಾಲಯಕ್ಕೆ ಹೋಗಿದ್ದು ಸದ್ರಿ ಪಿರ್ಯಾದಿದಾರರು ಶೌಚಾಲಯದಿಂದ ವಾಪಾಸು ಹೊರಗೆ ಬಂದು ಮಗಳು ದೀಪಿಕಾಳಿಗೆ ಕಾದು ಕುಳಿತು ಆಕೆ ಪಿರ್ಯಾದಿದಾರರ ಹತ್ತಿರ ಬಾರದೇ ಇದ್ದುದ್ದರಿಂದ ಸಂಶಯಗೊಂಡು, ಕೆ.ಎಸ್.ಆರ್.ಟಿ ಬಸ್ಸು ನಿಲ್ದಾಣದ ವಠಾರದಲ್ಲಿ ಹುಡುಕಾಡಿದರೂ ಪತ್ತೆಯಾಗದೇ ಇದ್ದುದರಿಂದ  ಕಾಣೆಯಾದ ಕುಮಾರಿ ದೀಪಿಕಾಳನ್ನು ಪತ್ತೆ ಹಚ್ಚಿ ಕೊಡಬೇಕು ಎಂಬಿತ್ಯಾದಿ ಸಾರಾಂಶ.

Crime Reported in: Bajpe PS

ದಿನಾಂಕ 01.07.2022 ರಂದು ಪಿರ್ಯಾದಿದಾರರಾದ Vinod Kumar ತನ್ನ ಚಿಕ್ಕಮ್ಮನ ಮನೆಯಾದ ಅದ್ಯಾಪಾಡಿಯಿಂದ ತನ್ನ ಬೈಕ್ ನಂ ಕೆಎ 19 ಎಬಿ 2754ನೇ ದರಲ್ಲಿ ಕೆಲಸಕ್ಕೆಂದು ಹೋಗುತ್ತಿರುವಾಗ ಮಂಗಳೂರು ತಾಲೂಕು ಬಜಪೆ ಗ್ರಾಮದ  ಕಳವಾರು ಶಾಂತಿಗುಡ್ಡೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಬೆಳಗ್ಗೆ ಸಮಯ ಸುಮಾರು 08.30 ಗಂಟೆಗೆ ರಸ್ತೆಯ ಎದುರಿನಿಂದ ಅಂದರೆ ಕಳವಾರು ಕಡೆಯಿಂದ ಬಂದು ಮೋಟಾರ್ ಸೈಕಲ್ (ಕೆಎ 19 ಇಎಂ 6003)ಎಫ್ ಝಡ್ ಬೈಕ್ ನ ಸವಾರನು ಅತೀವೇಗ ಮತ್ತು ಅಜಾಗರು ಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಬಲಕಾಲಿನ ಪಾದದ ಅಡಿಗೆ ರಕ್ತಗಾಯವಾಗಿರುತ್ತದೆ ಹಾಗೂ ಬಲಕೈ ನ 2 ಕಿರು ಬೆರಳಿಗೆ ರಕ್ತಗಾಯವಾಗಿದ್ದು ಹಾಗೂ ಎಡಕಾಲಿನ ಪಾದದ ಹಿಂಬದಿಗೆ ರಕ್ತಬರುವ ಗಾಯವಾಗಿರುತ್ತದೆ ಹಾಗೂ ಪಿರ್ಯಾದಿದಾರರ ಮೋಟಾರ್ ಸೈಕಲ್ ಜಖಂಗೊಂಡಿರುತ್ತದೆ ನಂತರ ಅಲ್ಲಿದ್ದ ಜನರು ಪಿರ್ಯಾದಿದಾರರನ್ನು ಚಿಕಿತ್ಸೆಗಾಗಿ ಫಾಧರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ

 Crime Reported in: Traffic North Police Station

ದಿನಾಂಕ: 01-07-2022 ರಂದು ಪಿರ್ಯಾದಿದಾರರಾದ Lohith ಅವರ ಬಾಬ್ತು KA-05-LG-6289 ನೇ ನಂಬ್ರದ ಸ್ಕೂಟರಿನಲ್ಲಿ ಅವರ ತಂದೆ ಲೋಕನಾಥ ರವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರಿನ ಹೊಸಬೆಟ್ಟುವಿಗೆ ಗೃಹ ಪ್ರವೇಶ ಕಾರ್ಯಕ್ರಮದ ನಿಮಿತ್ತ ಬಂದವರು ಗೃಹ ಪ್ರವೇಶದ ಮನೆಗೆ ತಿರುಗುವ ರಸ್ತೆ ತಪ್ಪಿದ್ದು ಮುಂದಕ್ಕೆ ಸುರತ್ಕಲ್ ಕಡೆಗೆ ಹೋಗಿ ವಾಪಸ್ಸು ಹೊಸಬೆಟ್ಟು ಜಂಕ್ಷನ್ ಬರುವ ಸಲುವಾಗಿ ಗೋವಿಂದದಾಸ ಕಾಲೇಜು ಜಂಕ್ಷನ್ ನಲ್ಲಿ ತನ್ನ ಬಾಬ್ತು ಸ್ಕೂಟರ್ ನ್ನು ಇಂಟಿಕೇಟರ್ ಹಾಕಿ ಬಲಕ್ಕೆ ತಿರುಗಿಸಲು ತೆರೆದ ಡಿವೈಡರ್ ನಲ್ಲಿ ಬೆಳಿಗ್ಗೆ ಸಮಯ 08:45 ಗಂಟೆಗೆ ಸ್ಕೂಟರ್ ನ್ನು ತಿರುಗಿಸುತಿದ್ದಂತೆಯೇ ಹಿಂದಿನಿಂದ ಅಂದರೆ ಮಂಗಳೂರು ಕಡೆಯಿಂದ ಸುರತ್ಕಲ್ ಕಡೆಗೆ KL-14-N-5678 ನಂಬ್ರದ ಕಾರನ್ನು ಅದರ ಚಾಲಕ ಸೂರ್ಯ ಮಲ್ಯ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿನ ಬಲ ಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು ಅವರ ತಂದೆ ಲೋಕನಾಥ ರವರು ಸ್ಕೂಟರ್ ಸಮೇತ ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ ಪಿರ್ಯಾದಿದಾರರ ತಲೆಯ ಹಿಂಭಾಗಕ್ಕೆ ರಕ್ತ ಗಾಯವಾಗಿದ್ದು, ಲೋಕನಾಥ ರವರಿಗೆ ಬಲಕಾಲಿಗೆ ರಕ್ತಗಾಯ ಹಾಗೂ ಬಲಕೈ ಬೆರಳುಗಳಿಗೆ ಗುದ್ದಿದ ರೀತಿಯ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಎ ಜೆ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.                

Crime Reported in: Kankanady Town PS                                                  

ದಿನಾಂಕ:01-07-2022 ರಂದು ಸುಮಾರು 14:00 ಗಂಟೆಗೆ ಮಂಗಳೂರು ನಗರದ ಶಕ್ತಿನಗರ ಬಳಿಯಲ್ಲಿ ಮಾದಕ ವಸ್ತುಗಳನ್ನು ಸೇವನೆ ಮಾಡುತ್ತಿದ್ದ  ಅಕ್ಷಯ ಕುಮಾರ ಪ್ರಾಯ:26 ವಾಸ:ಐ,ಡಿ,ಎಸ್ ವಿಲ್ಲಾ ಸಂಜಯ ನಗರ ಶಕ್ತಿನಗರ ಮಂಗಳೂರು ಎಂಬಾತನನ್ನು ವಶಕ್ಕೆ ಪಡೆದುಕೊಂಡು ಎ ಜೆ ಆಸ್ಪತ್ರೆಯ ಫಾರೆನ್ಸಿಕ್ ವಿಭಾಗದಲ್ಲಿ ಮಾದಕ ವಸ್ತುಗಳ ಸೇವನೆ ಮಾಡಿರುವ ಕುರಿತಾಗಿ ತಪಾಸಣೆ ನಡೆಸಲಾಗಿ ಮೇಲ್ಕಂಡವನು ಮಾದಕ ದ್ರವ್ಯಗಳನ್ನು ಸೇವನೆ ಮಾಡಿರುವ ಬಗ್ಗೆ ವರದಿ ಬಂದಿದ್ದು ಸದ್ರಿಯಾತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 02-07-2022 07:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080