Feedback / Suggestions

Crime Reported in Surathkal PS

ಕಳೆದ ವರ್ಷ SHADI.COM ಎಂಬ ಹೆಸರಿನ ವಿವಾಹ  ಸೈಟ್ ನಲ್ಲಿ ಪರಿಚಯವಾದ ಆರೋಪಿ  ವಿಜಯ @ ರಮೇಶ್ @ ಜಗ್ನನಾಥ ಇವರು ವಿವಾಹವಾಗುವುದಾಗಿ ಪಿರ್ಯಾದಿದಾರರನ್ನು ನಂಬಿಸಿ ದಿನಾಂಕ 04/01/2021 ಮಧ್ಯಾಹ್ನ ಸುರತ್ಕಲ್ ಮುತ್ತೂಟ್ ಫೈನಾನ್ಸ್ ನಲ್ಲಿ ಎರಡು ನೆಕ್ಲೇಸ್, ಎರಡು ಕಿವಿಯೋಲೆ ಹಾಗೂ ಚಿನ್ನದ ಸರವನ್ನು ಅಡವಿರಿಸಿ ರೂಪಾಯಿ 3 ಲಕ್ಷ ಹಣವನ್ನು ಪಡೆದಿರುವುದಾಗಿದೆ. ಆ ಬಳಿಕ ಆರೋಪಿಯು ಪಿರ್ಯಾದಿದಾರರಿಗೆ ರೂಪಾಯಿ 1,50,000/- ನಗದು ಹಣವನ್ನು ಪಿರ್ಯಾದುದಾರರ ಬಾಬ್ತು ಹೆಚ್.ಡಿ.ಎಫ್.ಸಿ ಬ್ಯಾಂಕಿನ ಅಕೌಂಟಿಗೆ ಹಣವನ್ನು ವರ್ಗಾವಣೆ ಮಾಡಿ ಮತ್ತೆ ದಿನಾಂಕ: 22/02/2021 ರಂದು ಮಧ್ಯಾಹ್ನ ಪಿರ್ಯಾದಿದಾರರನ್ನು ಆರೋಪಿ ವಿಜಯ @ ರಮೇಶ್ @ ಜಗ್ನನಾಥ ಎಂಬವರು ಸುರತ್ಕಲ್ ನ ಮುತ್ತೂಟ್ ಫೈನಾನ್ಸ್ ಬಳಿ ಭೇಟಿಯಾಗಿ ಸೈಟ್ ತೆಗೆಯಲು ರೂಪಾಯಿ 1,50,000/- ಹಣ ಕಡಿಮೆಯಾಗಿರುವುದಾಗಿ ನಂಬಿಸಿ ಮತ್ತೆ ಅಡವಿನಿಂದ ಬಿಡಿಸಿದ ನೆಕ್ಲೇಸ್ ಹಾಗೂ ಕಿವಿಯ ಓಲೆಯನ್ನು ಮುತ್ತೂಟ್ ಫೈನಾನ್ಸ್ ನಲ್ಲಿ ಅಡವಿರಿಸಿ ರೂಪಾಯಿ 1,50,000/- ಹಣ ನಗದನ್ನು ಪಡೆದು ಮೊಬೈಲನ್ನು ಸ್ವಿಚ್ ಆಫ್ ಮಾಡಿ ತಲೆಮರಿಸಿಕೊಂಡಿರುತ್ತಾನೆ. ಆರೋಪಿಯು ಪಿರ್ಯಾದಿದಾರರನ್ನು ಮದುವೆಯಾಗುವುದಾಗಿ ನಂಬಿಸಿ ಮದುವೆಯಾಗದೇ ಪಡೆದ ಹಣವನ್ನು ವಾಪಸ್ಸು ನೀಡದೇ ವಂಚಿಸಿ ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ

Crime Reported in Mangalore East Traffic PS                                  

ದಿನಾಂಕ : 01-09-2021 ರಂದು ಬೆಳಿಗ್ಗೆ ಸಮಯ ಸುಮಾರು 8:15 ಗಂಟೆಗೆ ಪಿರ್ಯಾಧಿ AJAY ಕಾಲೇಜಿನಲ್ಲಿದ್ದ ಸಮಯ ಪಿರ್ಯಾದಿದಾರರ ದೊಡ್ಡಮ್ಮನ ಮಗ ರಿಂಕು ಎಂಬವರು ಕರೆ ಮಾಡಿ ತನ್ನ ಅಣ್ಣ ಭೋಲೆ ರವರಿಗೆ ಅತ್ತಾವರದ ಕಾಸಾ ಗ್ರಾಂಡೆ ಎದುರುಗಡೆ ರಿಕ್ಷಾವೊಂದು ಢಿಕ್ಕಿಪಡಿಸಿದ ವಿಚಾರ ತಿಳಿಸಿದ್ದು, ಪಿರ್ಯಾದಿದಾರರು ಆಸ್ಪತ್ರೆಗೆ ಬಂದು ವಿಷಯ ತಿಳಿದುಕೊಳ್ಳಲಾಗಿ, ಪಿರ್ಯಾದಿದಾರರ ಅಣ್ಣ ಭೋಲೆ ರವರು ಈ ದಿನ ಬೆಳಿಗ್ಗೆ ಸಮಯ ಸುಮಾರು 08-00 ಗಂಟೆಗೆ ತನ್ನ ಬಾಬ್ತು ಅತ್ತಾವರ ಕಾಸಾ ಗ್ರಾಂಡೆ ಎದುರುಗಡೆ ಇರುವ ಪಾನ್ ಬೀಡ ಅಂಗಡಿಗೆ ಕುಳಿತುಕೊಳ್ಳುವ ಸಲುವಾಗಿ ಕಾಂಕ್ರೀಟ್ ಕಲ್ಲೊಂದನ್ನು ಹೊತ್ತುಕೊಂಡು ಕಾಸಾ ಗ್ರಾಂಡೆ ಎದುರು ಫಳ್ನೀರಿನಿಂದ ಅತ್ತಾವರದ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ಮೂರು ರಸ್ತೆಗಳು ಕೂಡುವಲ್ಲಿ ರಸ್ತೆ ದಾಟುತ್ತಿದ್ದ ವೇಳೆ KA-20-A-4303 ನಂಬ್ರದ ಅಟೋ ರಿಕ್ಷಾವನ್ನು ಅದರ ಚಾಲಕ ಮೊಹಮ್ಮದ್ ರಫೀಕ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಯು-ಟರ್ನ್ ಮಾಡಲು ಹೋಗಿ ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ದೊಡ್ಡಮ್ಮನ ಮಗ  ಭೋಲೆ ರವರು ಕಲ್ಲು ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು  ಬಲ ಹುಬ್ಬಿಗೆ,  ಮೂಗಿನ ಬಲಬದಿ, ತುಟಿಯ ಬಲ ಮೇಲ್ಭಾಗ, ಬಲಬದಿ ಗದ್ದದ ಬಳಿ, ಬಲಕೈಗೆ ಅಲ್ಲಲ್ಲಿ ತರಚಿದ ರಕ್ತ ಗಾಯಗಳಾಗಿದ್ದು, ಬಲಕೈಯ ಉಂಗುರ ಬೆರಳಿಗೆ ಚರ್ಮ ಹರಿತ ರಕ್ತ ಗಾಯವಾಗಿರುತ್ತದೆ. ಗಾಯಾಳು ಭೋಲೆ ರವರನ್ನು ಅಪಘಾತಪಡಿಸಿದ ಅಟೋ ರಿಕ್ಷಾ ಚಾಲಕನೇ ಫಳ್ನೀರಿನ ಹೈಲ್ಯಾಂಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ ಎಂಬಿತ್ಯಾದಿ.

Crime Reported in Kankanady Town PS

ಪಿರ್ಯಾದಿ Manjuprasad KR ದಾರರು ಯೆನೋಪೊಯ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಅಕೌಂಟೆಟ್ ಆಗಿ ಕೆಲಸ ಮಾಡುತಿದ್ದು  ದಿನಾಂಕ 31-08-2021 ರಂದು ಶಾಲೆಯ ಕೆಲಸ ಕಾರ್ಯವನ್ನು ಮುಗಿಸಿ ಶಾಲೆಯ ಕೊಠಡಿಗಳಿಗೆ ಬೀಗವನ್ನು ಆನಂದರವರು ಹಾಕಿ ಸಂಜೆ  04.00 ಗಂಟೆಗೆ ಮನೆಗೆ ಹೋಗಿದ್ದು ನಂತರ ದಿನಾಂಕ 01-09-2021 ರಂದು ರಾತ್ರಿ 12.30 ಗಂಟೆಯ ನಂತರ ನಮ್ಮ ಸಂಸ್ಥೆಯ ನೋಡಿಕೊಳ್ಳುತ್ತಿರುವ ರಾಕೇಶ್ ರವರು ಕರೆ  ಮಾಡಿ ಮಾಡಿ  ಶಾಲೆಗೆ ಕಳ್ಳರು ಹೊಕ್ಕಿದ್ದು ಕೊಠಡಿಗಳನ್ನು ಒಡೆದು ತೆರೆದಿರುತ್ತಾರೆ ಎಂದು ಸೆಕ್ಯೂರಿಟಿ  ತಿಳಿಸಿದಂತೆ ಸ್ಥಳಕ್ಕೆ ಬಂದು ನೋಡಲಾಗಿ   ಶಾಲೆಯ ನೆಲ ಮಹಡಿಯಲ್ಲಿರುವ  ಅಕೌಂಟ್ ಆಫೀಸ್ ನ ಬಾಗಿಲು ಬೀಗವನ್ನು ಮುರಿದು ಬಾಗಿಲನ್ನು ತೆರೆದು ಯಾರೋ ಕಳ್ಳರು ಒಳ ಪ್ರವೇಶ ಮಾಡಿ ಕೋಣೆಯ ಒಳಗಿನ ಡ್ರಾವರ್ ಗಳನ್ನು ಜಖಂಗೊಳಿಸಿ ಹುಡುಕಾಡಿದ್ದು ಕಂಡು ಬಂದಿರುತ್ತದೆ. ಹಾಗೂ ಡ್ರಾವರ್ ನ್ನು ಕೂಡ ಒಡೆದು ತೆರೆದು ಅದರೊಳಗಿರಿಸಿದ ನಗದು ಹಣ ರೂ 44,046/- ವನ್ನು ಕಳವು ಮಾಡಿದ್ದು ಕಂಡು ಬಂದಿರುತ್ತದೆ. ಎಂಬಿತ್ಯಾದಿ

 

Last Updated: 03-09-2021 06:01 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080