ಅಭಿಪ್ರಾಯ / ಸಲಹೆಗಳು

Crime Reported in CEN Crime PS

ದಿನಾಂಕ 03-02-2022 ರಂದು  ಠಾಣಾ ಸಿಬ್ಬಂದಿಯವರಾದ ಲಕ್ಷ್ಮೀಶ ಮತ್ತು ಕರೆಪ್ಪ ಪೂಜಾರಿರವರು ಬೆಳಿಗ್ಗೆ 09-00 ಗಂಟೆಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬಂದ ಮಾಹಿತಿ ಏನೆಂದರೆ ಮಂಗಳೂರು ನಗರದ ಉರ್ವಸ್ಟೋರ್ ಸುಂಕದಕಟ್ಟೆ ರಸ್ತೆಯ ಗುರು ಮಾರುತಿ ವ್ಯಾಯಾಮ ಶಾಲೆಯ ಬಳಿ ಒಬ್ಬವ್ಯಕ್ತಿಯು ಯಾವುದೋ ಅಮಲು ವಸ್ತುವನ್ನು ಸೇವಿಸಿ ನಶೆ ಹೊಂದಿ ಸದ್ರಿ ರಸ್ತೆಯಲ್ಲಿ ನಡೆದಾಡುವ ನಾಗರಿಕರಿಗೆ ಮತ್ತು ವಾಹನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವುದಾಗಿ ತಿಳಿಸಿದ ಮೇರೆಗೆ ತಕ್ಷೀರು ಸ್ಥಳಕ್ಕೆ 09-10 ಗಂಟೆಗೆ ತಲುಪಿದಾಗ ಅವಿನಾಶ್ ಎಂಬವನು ಮಾಧಕ ವಸ್ತು ಗಾಂಜಾವನ್ನು ಸಿಗರೇಟ್ ಗೆ ಹಾಕಿ ಎಳೆದಿದ್ದು ತಾನು ಗಾಂಜಾ ವನ್ನು ಅಪರಿಚಿತ ವ್ಯಕ್ತಿಯಿಂದ ಗಾಂಜಾ ಪಡೆದು ಸಿಗರೇಟಿಗೆ ಹಾಕಿ ಎಳೆಯುತ್ತಿದ್ದುದಾಗಿ ಒಪ್ಪಿಕೊಂಡಿದ್ದು ಆಪಾದಿನ ಅವಿನಾಶ್ ಎಂಬವನನ್ನು ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಮಾಧಕ ವಸ್ತು ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ತಪಾಸಣೆ ಮಾಡಿದಾಗ ಮಾಧಕ  ವಸ್ತು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದರಿಂದ ಆಪಾದಿತನ ವಿರುದ್ಧ ಎನ್.ಡಿ.ಪಿಎಸ್. ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

 

2) ದಿನಾಂಕ 03-02-2022 ರಂದು ರಾಜಾರಾಮ್ ರವರು ಪಿ.ಸಿ ಬೀಮಣ್ಣ ರವರ ಜೊತೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ 09-15 ಗಂಟೆಗೆ ಬಾತ್ಮೀದಾರರು ಕರೆ ಮಾಡಿ ಮಂಗಳೂರು ನಗರದ ದಂಬೆಲ್ ಸೇತುವೆ ಬಳಿ ಓರ್ವ ಯುವಕ ಯಾವುದೋ ಅಮಲು ವಸ್ತುವನ್ನು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿರುವುದಾಗಿ ಮಾಹಿತಿ ನೀಡಿದ್ದು ಬಾತ್ಮಿದಾರರು ತಿಳಿಸಿದ ಸ್ಥಳಕ್ಕೆ 9-40 ಗಂಟೆಗೆ ದಾಳಿ ನಡೆಸಿ ಮಾದಕ ವಸ್ತು ಸೇವನೆ ಮಾಡಿ ನಶೆಯಲ್ಲಿ ರಸ್ತೆಯಲ್ಲಿ ನಡೆದಾಡುವ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದ್ದ ಪ್ರಜ್ವಲ್ ವಿ.ಎಸ್ ಪ್ರಾಯ 30 ವ಼ರ್ಷ ಎಂಬಾತನನ್ನು ವಶಕ್ಕೆ ಪಡೆದು ಮಂಗಳೂರು ನಗರದ ಕುಂಟಿಕಾನದಲ್ಲಿರುವ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಲ್ಲಿ ಆಪಾದಿತನು ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಾಧಿಕಾರಿಯವರು ನೀಡಿದ ವೈದ್ಯಕೀಯ ಧೃಢಪತ್ರದ ಮೇರೆಗೆ ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

Crime Reported in Traffic South Police Station                                     

ದಿನಾಂಕ  02-02-2022 ರಂದು   ಪಿರ್ಯಾದಿ HARISH SHETTY ದಾರರು   ಅವರ ಬಾಬ್ತು   ಸ್ಕೂಟರ್ ನಂಬ್ರ    KA-19-EL-1459  ನೇದರಲ್ಲಿ  ಜಪ್ಪಿನಮೊಗರು ಕಡೆಯಿಂದ ಅವರ ಮನೆಯಾದ ತೌರ್ದೋಲ್ಯ ಕಡೆಗೆ ಸ್ಕೂಟರ್ ರನ್ನು   ಸವಾರಿ ಮಾಡಿಕೊಂಡು  ಹೋಗುತ್ತಿರುವ ಸಮಯ ಸುಮಾರು  ಸಂಜೆ 6:30 ಗಂಟೆಗೆ ಜಪ್ಪಿನಮೊಗರಿನ ಕೇಶವ ಅಂಗಡಿಮಾರು ರವರ ಮನೆಯ ಎದುರುಗಡೆ ತಲುಪುತ್ತಿದ್ದಂತೆ ಅವರ  ಎದುರಿನಿಂದ   ಅಂದರೆ ಕಡೆಕಾರು  ಕಡೆಯಿಂದ ಜಪ್ಪಿನಮೊಗರು ಕಡೆಗೆ ಆಟೋರಿಕ್ಷಾ ನಂಬ್ರ  KA-19-AD-5500  ನೇದನ್ನು ಅದರ ಚಾಲಕ ಪ್ರವೀಣ ಎಂಬಾತನು ಆಟೋರಿಕ್ಷಾವನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರು   ಸವಾರಿ ಮಾಡುತ್ತಿದ್ದ  ಸ್ಕೂಟರ್ ಗೆ   ಡಿಕ್ಕಿ   ಹೊಡೆದೆನು . ಈ   ಅಪಘಾತದ  ಪರಿಣಾಮ   ಪಿರ್ಯಾದಿದಾರು   ಸ್ಕೂಟರ್ ಸಮೇತ ಡಾಮಾರು  ರಸ್ತೆಗೆ  ಬಿದ್ದು  ಅವರ ಬಲಕಾಲಿನ ಕೋಲುಕಾಲಿಗೆ ಮೂಲೆ ಮುರಿತದ ಗಂಭೀರ   ಸ್ವರೂಪದ   ಗಾಯವಾಗಿದ್ದು  ಅವರನ್ನು   ಚಿಕಿತ್ಸೆ  ಬಗ್ಗೆ  ಅಪಘಾತ ಪಡಿಸಿದ ಆಟೋರಿಕ್ಷಾ ಚಾಲಕ  ಆದೇ ಆಟೋರಿಕ್ಷಾದಲ್ಲಿ  ಮಂಗಳೂರು ಸಿಟಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 03-02-2022 08:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080