ಅಭಿಪ್ರಾಯ / ಸಲಹೆಗಳು

Crime Reported in Mangalore South PS

 ದಿನಾಂಕ: 04-04-2022 ರಂದು ಪ್ರಕರಣದ ಪಿರ್ಯಾದಿದಾರರಾದ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಹೆಚ್ ಸಿ  ವೀರೇಶ್ ಕೆ.ಎಸ್ ರವರು ಪಿ ಸಿ ಹರೀಶ್ ರವರ ಜೊತೆ  ಖಾಸಗಿ ಮೋಟಾರ್ ಸೈಕಲ್ ನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದು, ಠಾಣಾ ವ್ಯಾಪ್ತಿಯ ರೈಲ್ವೆ ನೆಹರೂ ಮೈದಾನ, ಹಂಪನಕಟ್ಟೆ, ರೈಲ್ವೆ ಸ್ಟೇಷನ್ ಕಡೆಗಳಲ್ಲಿ  ರೌಂಡ್ಸ್ ಕರ್ತವ್ಯ ನಿರ್ವಹಿಸಿ 14-45 ಗಂಟೆ ಸುಮಾರಿಗೆ ಕಾಪ್ರಿಗುಡ್ಡ ಬಳಿ ರೌಂಡ್ಸ್ ನಲ್ಲಿದ್ದಾಗ, ಅತ್ತಾವರ ಕಟ್ಟೆ ಮೈದಾನದಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಓರ್ವ ಯುವಕ  ಗಾಂಜಾ ಸೇವನೆ ಮಾಡುತ್ತಿದ್ದಾನೆ ಎಂಬುದಾಗಿ  ಖಚಿತ ವರ್ತಮಾನ ಬಂದಂತೆ, ಸದ್ರಿ ಸ್ಥಳಕ್ಕೆ  ತೆರಳಿ, ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಪಡಿಸುತ್ತಿದ್ದ, ಅಸ್ಪಕ್.ಎ, ಪ್ರಾಯ: 26 ವರ್ಷ, ವಾಸ: ಚಾಂಗಲ್ ಹೌಸ್, ಟಿ.ಪಿ.ಸೆಂಟರ್, ಹರಿಪ್ಪಡ, ಅಲಪುಝ ಜಿಲ್ಲೆ, ಕೇರಳ ರಾಜ್ಯ ಎಂಬಾತನನ್ನು, 15-00 ಗಂಟೆಗೆ ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ  ಆರೋಪಿಯು  ಗಾಂಜಾ ಸೇವನೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು,  ವೈದ್ಯಕೀಯ  ತಪಾಸಣೆಗೆ ಎಜೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ತಪಾಸಣೆ ನಡೆಸಿದಾಗ, ಆರೋಪಿಯು ಗಾಂಜಾ ಸೇವನೆ ನಡೆಸಿರುವುದು ದೃಢಪಟ್ಟಿರುವುದರಿಂದ ಆರೋಪಿಯ ವಿರುದ್ದ ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

 

2) ದಿನಾಂಕ: 04-04-2022 ರಂದು ಪ್ರಕರಣದ ಪಿರ್ಯಾದಿದಾರರಾದ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಹೆಚ್ ಸಿ ಸದಾನಂದ ಹಳ್ಳಿ ರವರು ಪಿ ಸಿ  ರಾಘವೇಂದ್ರ ರವರ ಜೊತೆ  ಖಾಸಗಿ ಮೋಟಾರ್ ಸೈಕಲ್ ನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದು, ಠಾಣಾ ವ್ಯಾಪ್ತಿಯ ಶಿವನಗರ,ಮಂಕಿಸ್ಟಾಂಡ್,ಮಂಗಳಾದೇವಿ, ಮುಳಿಹಿತ್ಲು ಕಡೆಗಳಲ್ಲಿ  ರೌಂಡ್ಸ್ ಕರ್ತವ್ಯ ನಿರ್ವಹಿಸಿ 14-30 ಗಂಟೆ ಸುಮಾರಿಗೆ ಬೋಳಾರದ ಬಳಿ ರೌಂಡ್ಸ್ ನಲ್ಲಿದ್ದಾಗ, ಬೋಳಾರದ ಜಾಯ್ ಲ್ಯಾಂಡ್ ಶಾಲೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ  ಓರ್ವ ಯುವಕ  ಗಾಂಜಾ ಸೇವನೆ ಮಾಡುತ್ತಿದ್ದಾನೆ ಎಂಬುದಾಗಿ  ಖಚಿತ ವರ್ತಮಾನ ಬಂದಂತೆ, ಸದ್ರಿ ಸ್ಥಳಕ್ಕೆ  ತೆರಳಿ, ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಪಡಿಸುತ್ತಿದ್ದ, ರಾಮಕೃಷ್ಣ ಆರ್, ಪ್ರಾಯ: 26 ವರ್ಷ, ವಾಸ: ಕಕ್ಕಾಟ್ ಹೌಸ್, ಚಿರುಧನಾ, ಹರಿಪ್ಪಡ, ಆಲಪುಝ ಜಿಲ್ಲೆ, ಕೇರಳ ರಾಜ್ಯ.  ಎಂಬಾತನನ್ನು, 14-50 ಗಂಟೆಗೆ ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ  ಆರೋಪಿಯು  ಗಾಂಜಾ ಸೇವನೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು,    ವೈದ್ಯಕೀಯ  ತಪಾಸಣೆಗೆ ಎಜೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ತಪಾಸಣೆ ನಡೆಸಿದಾಗ, ಆರೋಪಿಯು ಗಾಂಜಾ ಸೇವನೆ ನಡೆಸಿರುವುದು ದೃಢಪಟ್ಟಿರುವುದರಿಂದ ಆರೋಪಿಯ ವಿರುದ್ದ ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

 

 

Crime Reported in Moodabidre PS

 ದಿನಾಂಕ: 04-04-2022 ರಂದು ಪಿರ್ಯಾದಿ RAJENDRA ದಾರರು ತನ್ನ ಅಣ್ಣನಾದ ರವೀಂದ್ರ ರವರ ಜೊತೆಗೆ ರವೀಂದ್ರ ರವರ ಬಾಬ್ತು ಕೆ.ಎ-21-ಕೆ-9593 ನಂಬ್ರದ ಮೋಟರ್ ಸೈಕಲ್ ನಲ್ಲಿ ಪರೋಟ ಲೈನ್ ಸೇಲ್ ಗೆಂದು ಮೂಡಬಿದರೆಯ ಲಾಡಿಯಿಂದ ಕೈಕಂಬ ಜಂಕ್ಷನ್ ಆಗಿ ಮಹಾವೀರ ಕಾಲೇಜು ಕ್ಯಾಂಟಿನ್ ಗೆಂದು ಹೋಗುತ್ತಾ ಮೂಡಬಿದರೆ ತಾಲೂಕು ಪ್ರಾಂತ್ಯ ಗ್ರಾಮದ, ಮಹಾವೀರ ಕಾಲೇಜು ಹತ್ತಿರದಲ್ಲಿರುವ ಮಾರಿಗುಡಿ ದೇವಸ್ಥಾನ ಬಳಿಗೆ ತಲುಪುವಾಗ ಸಮಯ ಸುಮಾರು 08-20 ಗಂಟೆಗೆ ಎದರುಗಡೆಯಿಂದ  ಅಂದರೆ ಬೆಳ್ತಂಗಡಿ ಕಡೆಯಿಂದ ಮೂಡಬಿದರೆ ಕಡೆಗೆ ಕೆ.ಎ-19-ಹೆಚ್.ಎಪ್-8339 ನಂಬ್ರದ ಮೋಟರ್ ಬೈಕ್ ಸವಾರರಾದ ಜಸ್ಟಿನ್ ಎಂಬುವರು ತನ್ನ ಮೋಟರ್ ಸೈಕಲ್ ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಬಲಬದಿಗೆ ಬಂದು ಪಿರ್ಯಾದಿದಾರರ ಅಣ್ಣ ರವೀಂದ್ರರವರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಅವರ ಅಣ್ಣ ರವೀಂದ್ರ ರವರು ಮೋಟರ್ ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಪಿರ್ಯಾದಿದಾರರಿಗೆ ಕಾಲುಗಳಿಗೆ ಮತ್ತು ತುಟಿಯ ಭಾಗದಲ್ಲಿ ಗುದ್ದಿದ ರೀತಿಯ ಗಾಯದ ನೋವುಗಳು ಹಾಗೂ ಪಿರ್ಯಾದಿದಾರರ ಅಣ್ಣ ರವೀಂದ್ರ ರವರ ತಲೆಗೆ ಗಂಬೀರ ಗಾಯವಾಗಿದ್ದು, ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮೂಡಬಿದರೆಯ ಆಳ್ವಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಅಲ್ಲಿ ರವೀಂದ್ರರವರು ಚಿಕಿತ್ಸೆ ಫಲಕಾರಿಯಾಗದೇ 9-28 ಗಂಟೆಗೆ ಮೃತಪಟ್ಟಿರುವುದು ಎಂಬಿತ್ಯಾದಿ

                               

ಇತ್ತೀಚಿನ ನವೀಕರಣ​ : 04-04-2022 07:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080