Feedback / Suggestions

Crime Reported in: Traffic North Police Station      

ದಿನಾಂಕ: 03-06-2022 ರಂದು ಪಿರ್ಯಾದಿ Raghuraj ದಾರರು KA-19/AD-2922 ನಂಬ್ರದ ಟಿಪ್ಪರ್ ಲಾರಿಯಲ್ಲಿ ಹಳೆಯಂಗಡಿ ಕಡೆಯಿಂದ ಕಿನ್ನಿಗೋಳಿ ಮೂಲಕ ನೆಲ್ಲಿಗುಡ್ಡೆ ಕಡೆಗೆ ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 10:00 ಗಂಟೆಗೆ ಮೂರುಕಾವೇರಿ ಮಾರಿಗುಡಿ ದೇವಸ್ಥಾನದ ಸಮೀಪ ಇಳಿ ಜಾರು ಡಾಂಬಾರು ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಂತೆ ಎದುರಿನಿಂದ ಅಂದರೆ ಮೂಡಬಿದ್ರೆ/ನೆಲ್ಲಿಗುಡ್ಡೆ ಕಡೆಯಿಂದ KA-19-C-8514 ನಂಬ್ರದ ಆಟೋರಿಕ್ಷಾವನ್ನು ಅದರ ಚಾಲಕನಾದ ಸುರೇಶ್ ಪೂಜಾರಿ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಟಿಪ್ಪರ್ ಲಾರಿಯ ಎದುರಿನ ಬಲಬದಿ ಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಆಟೋರಿಕ್ಷಾದಲ್ಲಿ ಪ್ರಯಾಣಿಸುತಿದ್ದ ಶ್ರೀಮತಿ. ಗಿರಿಜಾ ರವರಿಗೆ ಬಲಕಾಲಿನ ಮೋಣಗಂಟಿಗೆ ಕೋಲು ಕಾಲಿಗೆ ಗುದ್ದಿದ ಗಾಯವಾಗಿದ್ದು, ಶ್ರೀಮತಿ. ಸವಿತಾ ರವರಿಗೆ ಎಡಕಾಲಿಗೆ ಗುದ್ದಿದ ಗಾಯವಾಗಿದ್ದು, ಹಾಗೂ ಕು|| ದೀಕ್ಷಾ ರವರಿಗೆ ಬಲಕಾಲಿನ ಮೊಣಗಂಟಿಗೆ ಮತ್ತು ಹಣೆಗೆ ರಕ್ತಗಾಯವಾಗಿದ್ದು ಅಲ್ಲದೇ ಅಪಘಾತ ಪಡಿಸಿದ.  ಆಟೋರಿಕ್ಷಾ ಚಾಲಕ ಸುರೇಶ್ ಪೂಜಾರಿ ಯವರಿಗೆ ಕೂಡಾ ಹಣೆಗೆ ತರೆಚಿದ ರೀತಿಯ ಗಾಯವಾಗಿದ್ದು ಗಾಯಾಳುಗಳು ಕಿನ್ನಿಗೋಳಿಯ ಕನ್ಸೆಟ್ಟಾ ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಹಾಗೂ ಈ ಅಪಘಾತದಿಂದ ಅಪಘಾತ ಪಡಿಸಿದ ಆಟೋರಿಕ್ಷಾದ ಮುಂಭಾಗ ಹಾಗೂ ಬಲಬದಿ ಬಾಡಿ ಜಖಂಗೊಂಡಿದ್ದು ಟಿಪ್ಪರ್ ಲಾರಿಯ ಎದುರಿನ ಬಲಬದಿ ಕೂಡಾ ಜಖಂಗೊಂಡಿರುತ್ತದೆ. ಎಂಬಿತ್ಯಾಧಿ.

     

Crime Reported in Moodabidre PS

 ದಿನಾಂಕ: 03-06-2022 ರಂದು ಪಿರ್ಯಾದು SANDEEP ದಾರರು ತನ್ನ ಬಾಬ್ತು ಮೋಟಾರು ಸೈಕಲಿನಲ್ಲಿ ಕಲ್ಲಮುಂಡ್ಕೂರು ಕಡೆಯಿಂದ ಸಂಪಿಗೆ ಕಡೆಗೆ ಹೋಗುತಿದ್ದು, ಅವರ ಮುಂದಿನಿಂದ ಅವರ ಜೊತೆ ಕೆಲಸ ಮಾಡುತ್ತಿರುವ ಶಿವರಾಜ್ ರವರು ಕೆಎ-20-ಇವಿ-8323 ನಂಬ್ರದ ಮೋಟಾರು ಸೈಕಲಿನಲ್ಲಿ ಹೋಗುತ್ತಾ ಬೆಳಿಗ್ಗೆ 08.30 ಗಂಟೆಗೆ ಸಂಪಿಗೆ ಗ್ರಾಮದ ಹಳೆನೀರು ಬಸ್ಸು ತಂಗುದಾಣದ ಬಳಿ ತಲುಪುತಿದ್ದಂತೆ ಮೂಡಬಿದ್ರೆ ಕಡೆಯಿಂದ ಕೆಎ-53-ಪಿ-4226 ನಂಬ್ರದ ರಿಟ್ಜ್ ಕಾರನ್ನು ಅದರ ಚಾಲಕ ಜಾನ್ ಜೆ ರೋಡ್ರಿಗಸ್ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಶಿವರಾಜ್ ರವರಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಮೋಟಾರು ಸೈಕಲು ಮತ್ತು ಕಾರು ಜಖಂಗೊಂಡು ಶಿವರಾಜ್ ರವರ ತಲೆಗೆ ಮತ್ತು ಹೊಟ್ಟೆಗೆ ಗುದ್ದಿದ ಗಂಭೀರ ರೀತಿಯ ಗಾಯವಾದವರನ್ನು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆ ಕೊಡಿಸಿ, ಅಲ್ಲಿಂದ ವೈಧ್ಯರ ಸಲಹೆಯಂತೆ ಮಂಗಳೂರು ಸರಕಾರಿ ವೆನ್ ಲಾಕ್ ಆಸ್ಪತ್ರೆಗೆ ಸಾಗಿಸುವಾಗ 14.51 ಗಂಟೆ ಸಮಯಕ್ಕೆ ಮೃತ ಪಟ್ಟಿರುವುದಾಗಿದೆ.

 

Crime Reported in Traffic South Police Station  

ದಿನಾಂಕ:03-06-2022 ರಂದು ಪಿರ್ಯಾದಿ MAHAMMAD FARUK ದಾರರ ಅಣ್ಣ ಮಹಮ್ಮದ್ ಜಲಾಲುದ್ದೀನ್ ರವರು ಮಧ್ಯಾಹ್ನ ಪಿರ್ಯಾದಿದಾರರ ಮನೆಯಲ್ಲಿದ್ದ  ಬೈಕ್ ನಂಬ್ರ:KA-19-HH-7056 ನೇದನ್ನು ಉಳ್ಳಾಲ ದರ್ಗಾ ಕಡೆಯಿಂದ ತೊಕ್ಕೊಟ್ಟು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 02:30 ಗಂಟೆಗೆ ಉಳ್ಳಾಲ ಅಕ್ಕರೆ ಕೆರೆ ಮಸೀದಿ ಬಳಿ ತಲುಪಿದಾಗ ತೊಕ್ಕೊಟ್ಟು ಕಡೆಯಿಂದ ಉಳ್ಳಾಲ ದರ್ಗಾ ಕಡೆಗೆ ಕಾರು ನಂಬ್ರ KA-20-MA-2754 ನೇದನ್ನು ಅದರ ಚಾಲಕ ಅಲ್ ಅಮೀನ್ ಅಹ್ಮದ್ ತ್ವಾಹ ಎಂಬಾತನು ಡುಡುಕುತನ ಹಾಗೂ ನಿರ್ಲಕ್ಷತನದಿಂದ ಕಾರನ್ನು ಚಲಾಯಿಸಿಕೊಂಡು ಬಂದು ಕಾರಿನ ಮುಂದಿನ ಬಲಭಾಗವನ್ನು  ಮಹಮ್ಮದ್ ಜಲಾಲುದ್ದೀನ್ ಹೋಗುತ್ತಿದ್ದ ಬೈಕ್ ಗೆ ಎದುರಿನಿಂದ ಡಿಕ್ಕಿ ಪಡಿಸಿದ ಪರಿಣಾಮ ಅವರು ಬೈಕ್ ಸಮೇತ ಕಾಂಕ್ರಿಟ್ ರಸ್ತೆಗೆ ಬಿದ್ದು ಅವರಿಗೆ ಎಡಗಡೆಯ ಪಕ್ಕಲುಬುಗೆ ಮೂಳೆ ಮುರಿತದ ಗಾಯ ಹಾಗೂ ಸೊಂಟಕ್ಕೆ ಗುದ್ದಿದ ರೀತಿಯ ಗಂಭೀರ ಗಾಯ ಮತ್ತು ಕೈಕಾಲುಗಳಿಗೆ ಗಾಯವಾಗಿದ್ದು, ಕೂಡಲೇ ಅಲ್ಲಿ ಸೇರಿದ್ದ ಜನರು ಹಾಗೂ ಕಾರಿನ  ಚಾಲಕ ಚಿಕಿತ್ಸೆ ಬಗ್ಗೆ ಆಟೋರಿಕ್ಷಾವೊಂದರಲ್ಲಿ ಸಹರಾ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು ಅಲ್ಲಿ ಪಿರ್ಯಾದಿದಾರರು ಅವರ ಅಣ್ಣ ಮಹಮ್ಮದ್ ಜಲಾಲುದ್ದೀನ್ ನಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ, ಎಂಬಿತ್ಯಾದಿ.

 

Last Updated: 04-06-2022 04:59 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080