ಅಭಿಪ್ರಾಯ / ಸಲಹೆಗಳು

Crime Reported in Mangalore North PS

ದಿನಾಂಕ: 04.02.2022 ರಂದು ಫಿರ್ಯಾದಿದಾರರಾದ ಸಿ.ಪಿ.ಸಿ- ಗುರು ಬಿ.ಟಿ ಹಾಗೂ ಸಿಪಿಸಿ-ಮಾಹಾಂತೇಶ್ ರವರು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಸಮಯ ಸುಮಾರು 23.45 ಗಂಟೆಯ ವೇಳೆಗೆ ರೂಪವಾಣಿ ಚಲಚಿತ್ರ ಮಂದಿರದ ಎದುರು ಅಂದರೆ ಸೇಂಟ್ರಲ್ ಮಾರ್ಕೆಟ್ ನ ಬಳಿ ಸಾರ್ವಜನಿಕ ರಸ್ತೆಯಲ್ಲಿ ಒರ್ವ ವ್ಯಕ್ತಿ ಬಿದ್ದಿರುವುದನ್ನು ಕಂಡು ಆತನನ್ನು ನೋಡಿದಾಗ ಆತನ ,ಮುಖಕ್ಕೆ, ಬಾಯಿಗೆ, ಹಣೆಬಾಗ ಮತ್ತುದೇಹದ ಇತರೆ ಕಡೆ, ಗುದ್ದಿದ ಮತ್ತು ರಕ್ತ ಗಾಯ ವಾಗಿದ್ದವನನ್ನು ಕಂಡು ಆತನು ತೋದಲುತ್ತ ತನ್ನ ಹೆಸರು ವೆಂಕಟೇಶ ಮೂಡಶೆಡ್ಡೆ ವಾಮಂಜೂರು ಎಂದು ಹೇಳಿ ಆತನಿಗೆ ಮಾರ್ಕೆಟ್ ಪರಿಸರದಲ್ಲಿರುವ, ಬಸವ ಮತ್ತೆ ಮಂಜ ಎನ್ನುವರು ತನಗೆ ಕೈಯಿಂದ ಹೊಡೆದು, ಕಲ್ಲಿನಿಂದ ಮುಖಕ್ಕೆ, ಬಾಯಿಗೆ, ತಲೆಗೆ, ಮತ್ತಿತರೆ ಕಡೆ ಗುದ್ದಿರುವುದಾಗಿ ಹೇಳಿದಂತೆ ಫಿರ್ಯಾದಿದಾರರು 108 ಆಂಬ್ಯುಲೆನ್ಸ್ ಗೆ ಕರೆ ಮಾಡಿ ಸ್ಥಳಕ್ಕೆ ಆಂಬ್ಯಲೇನ್ಸ್ ನಲ್ಲಿ ಗಾಯಾಳುವನ್ನು ಸರ್ಕಾರಿ ವೆನಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲು ಮಾಡಿ ನೀಡಿದ ಫಿರ್ಯಾದಿ ಎಂಬಿತ್ಯಾದಿ

Crime Reported in CEN Crime PS

ದಿನಾಂಕ 05-02-2022 ರಂದು ಹೆಚ್.ಸಿ. ಲಕ್ಷ್ಮೀಶ ಹಾಗೂ ಹೆಚ್ ಸಿ ಸಂತೋಷ್  ರವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಬಾತ್ಮೀದಾರರು ಕರೆ ಮಾಡಿ ಮಂಗಳೂರು ನಗರದ ಉರ್ವಾದಲ್ಲಿರುವ ಇನ್ಫೋಸಿಸ್ ನ ಹಿಂಭಾಗದಲ್ಲಿನ ರಸ್ತೆ ಬದಿಯಲ್ಲಿ  ಓರ್ವ ಯುವಕ ಯಾವುದೋ ಅಮಲು ವಸ್ತುವನ್ನು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿರುವುದಾಗಿ ಮಾಹಿತಿ ನೀಡಿದ್ದು ತಕ್ಷೀರು ಸ್ಥಳಕ್ಕೆ 10-20 ಗಂಟೆಗೆ ದಾಳಿ ನಡೆಸಿ ಮಾದಕ ವಸ್ತು ಸೇವನೆ ಮಾಡಿ ನಶೆಯಲ್ಲಿ ರಸ್ತೆಯಲ್ಲಿ ನಡೆದಾಡುವ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದ್ದ ಕಾರ್ತಿಕ್ ದೇವಾಡಿಗ ಪ್ರಾಯ 21 ವರ್ಷ ಎಂಬಾತನನ್ನು ವಶಕ್ಕೆ ಪಡೆದು ಮಂಗಳೂರು ನಗರದ ಕುಂಟಿಕಾನದಲ್ಲಿರುವ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಲ್ಲಿ ಆಪಾದಿತನು ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಾಧಿಕಾರಿಯವರು ನೀಡಿದ ವೈದ್ಯಕೀಯ ಧೃಢಪತ್ರದ ಮೇರೆಗೆ ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 05-02-2022 07:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080