ಅಭಿಪ್ರಾಯ / ಸಲಹೆಗಳು

Crime Reported in Traffic South Police Station   

ಪಿರ್ಯಾದಿ MAHAMMOD SAKEER ದಾರರು ಈ ದಿನ ದಿನಾಂಕ: 05-05-2022 ರಂದು ಬೆಳಿಗ್ಗೆ ಸಮಯ ಕಾರು ನಂಬ್ರ: KA-19-MG-3353 ನೇದರಲ್ಲಿ ಅವರ ಹೆಂಡತಿ ಮನೆಯಾದ ಬಂಟ್ವಾಳದಿಂದ ಫರಂಗಿಪೇಟೆ ಮಾರ್ಗವಾಗಿ ಅಡ್ಯಾರ್ ಕಟ್ಟೆ ಕಡೆಗೆ ಕಾರನ್ನು ಚಲಾಯಿಸಿಕೊಂಡು ಬರುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 05-50 ಗಂಟೆಗೆ ಮಂಗಳೂರು ತಾಲೂಕು ಅಡ್ಯಾರ್ ವಾರಿಧಿ ಹೊಟೇಲ್ ಬಳಿ ಕಾರು ನಂಬ್ರ: KL-14-U-9144 ನೇಯದ್ದು ಮಂಗಳೂರು ಕಡೆಯಿಂದ ಅರ್ಕುಳ ಕಡೆಗೆ ಹೋಗುವ ರಸ್ತೆಯಲ್ಲಿ ಹಾಗೂ ಈಚರ್ ಲಾರಿ ನಂಬ್ರ: KA-04-AC-5818 ನೇಯದ್ದು ಅರ್ಕುಳ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ರಸ್ತೆಯ ಡಿವೈಡರ್ ಮೇಲೆ ನಿಂತಿದ್ದು ಸದ್ರಿ ಅಪಘಾತ ಸ್ಥಳದಲ್ಲಿ ಕಾರಿನಲ್ಲಿದ್ದ ಚಾಲಕ ಹಾಗೂ 3 ಜನ ಪ್ರಯಾಣಿಕರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಈ ಅಪಘಾತದಿಂದ ಗಾಯಗೊಂಡ ಗಾಯಾಳುಗಳ ಹೆಸರು ಇಬ್ರಾಹಿಂ ಸಾಜಿತ್, ಸದ್ದಾಮ್ ಹುಸೈನ್, ರಮೀಝ್, ಮಹಮ್ಮದ್ ಸಾಕೀರ್ ಎಂಬುದಾಗಿರುತ್ತದೆ. ಈ ಅಪಘಾತದಿಂದ ಮಹಮ್ಮದ್ ಸಾಕೀರ್ ಎಂಬುವರಿಗೆ ತಲೆಗೆ, ಮುಖಕ್ಕೆ ಗಂಭೀರ ಸ್ವರೂಪದ ಗಾಯ, ಬಲ ಕೈಗೆ ಮೂಳೆ ಮುರಿತದ ಗಾಯ ಮತ್ತು ಸದ್ದಾಮ್ ಹುಸೈನ್ ರವರಿಗೆ ಸೊಂಟಕ್ಕೆ ಮೂಳೆ ಮುರಿತದ ಗಾಯ ಹಾಗೂ ತಲೆಗೆ ಗುದ್ದಿದ ಗಂಭೀರ ಸ್ವರೂಪದ ಗಾಯ ಮತ್ತು ರಮೀಝ್ ಎಂಬುವರಿಗೆ ತಲೆಗೆ ರಕ್ತಗಾಯ, ಮೂಗಿಗೆ ರಕ್ತಗಾಯ, ಬಲ ಕೈಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಹಾಗೂ ಇಬ್ರಾಹೀಂ ಸಾಜಿತ್ ಎಂಬುವರಿಗೆ ಎದೆಗೆ ಹಾಗೂ ಸೊಂಟಕ್ಕೆ ಗುದ್ದಿದ ಗಂಭೀರ ಸ್ವರೂಪದ ಗಾಯವಾಗಿ ಮೃತಪಟ್ಟಿರುತ್ತಾರೆ ಅವರನ್ನು ಸಾರ್ವಜನಿಕರೊಂದಿಗೆ ಸೇರಿ ಕಾರಿನಿಂದ ಹೊರತೆಗೆದು ಉಪಚರಿಸಿ ಚಿಕಿತ್ಸೆ ಬಗ್ಗೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಬೇರೆ ಬೇರೆ ಕಾರಿನಲ್ಲಿ ಫರ್ಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆಇನ್ನೊಬ್ಬ ಗಾಯಾಳು ಸದ್ದಾಮ್ ಎಂಬುವರನ್ನು ಪಿರ್ಯಾದಿದಾರರು ಅವರ ಕಾರಿನಲ್ಲಿ ಚಿಕಿತ್ಸೆ ಬಗ್ಗೆ ಹೈಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ ಮತ್ತೊಬ್ಬ ಗಾಯಾಳು ಇಬ್ರಾಹಿಂ ಸಾಜಿತ್ ಎಂಬುವರನ್ನು ಅಂಬುಲೆನ್ಸ್ ವೊಂದರಲ್ಲಿ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಅಪಘಾತ ಸ್ಥಳದಲ್ಲಿದ್ದ ಸಾರ್ವಜನಿಕರಲ್ಲಿ ವಿಚಾರಿಸಲಾಗಿ ಕಾರು ನಂಬ್ರ: KL-14-U-9144 ನೇದರ ಚಾಲಕ ಇಬ್ರಾಹೀಂ ಸಾಜಿತ್ ನು ಮಂಗಳೂರು ಕಡೆಯಿಂದ ಫರಂಗೀಪೇಟೆ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಫರಂಗೀಪೇಟೆ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಲಾರಿ ನಂಬ್ರ:KA-04-AC-5818 ನೇದಕ್ಕೆ ಡಿಕ್ಕಿ ಹೊಡೆದಿರುತ್ತಾನೆ ಎಂಬಿತ್ಯಾದಿ.

Crime Reported in Moodabidre PS

ಪಿರ್ಯಾದಿದಾರರು G,T,L Infrastructure Limited  ಕಂಪನಿಯಲ್ಲಿ Acquistion officer  ಆಗಿ ಕೆಲಸ ನಿರ್ವಹಿಸುತ್ತಿದ್ದು,  G,T,L Infrastructure Limited  ಕಂಪನಿಯವರು ಪ್ರಭಾಶ್ಚಂದ್ರ ಜೈನ್‌ರವರಿಗೆ ಸೇರಿದ ಪ್ರಭಾತ್ ಬಿಲ್ಡಿಂಗ್ ವಿಜಯನಗರ ಮೂಡಬಿದ್ರೆಯಲ್ಲಿ G,T,L Infrastructure Limited  ಕಂಪನಿಯವರು 2009 ನೇ ಇಸವಿಯಲ್ಲಿ ಮೊಬೈಲ್ ಟವರ್ ನ್ನು  ಸ್ಥಾಪಿಸಿದ್ದು, ಕಂಪನಿಯವರು ಕೋವಿಡ್-19 ನ ಲಾಕ್ಡೌನ್  ಸಮಯ ಸರ್ಕಾರದ ಆದೇಶದಂತೆ ಸದ್ರಿ ಮೊಬೈಲ್ ಟವರನ್ನು ಆಗಾಗ ಬಂದು ಪರೀಶಿಲಿಸದೇಯಿದ್ದು ನಂತರ ಟವರ್ ನಿರ್ವಹಣೆಗಾಗಿ ಮೇ 2021 ನೇ ತಿಂಗಳಲ್ಲಿ ಮೊಬೈಲ್ ಟವರ್ ನ್ನು ಚೆಕ್ ಮಾಡಲು ಬಂದು ನೋಡಿದಾಗ ಯಾರೋ ಕಳ್ಳರು ಮೊಬೈಲ್ ಟವರ್ ಮತ್ತು ಟವರ್‌ಗೆ ಸಂಬಂಧಿಸಿದ ಶೆಲ್ಟರ್, ಡೀಸೆಲ್ ಜನೆರೇಟರ್, ಬ್ಯಾಟರಿ ಬ್ಯಾಂಕ್ ವಸ್ತುಗಳನ್ನು ಕಳ್ಳತನ ಮಾಡಿರುತ್ತಾರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 05-05-2022 06:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080