ಅಭಿಪ್ರಾಯ / ಸಲಹೆಗಳು

Crime Reported in Traffic South Police Station      

ದಿನಾಂಕ   03-01-2022 ರಂದು  ಪಿರ್ಯಾದಿ SHILPA SHRI ದಾರು ಅವರ ಗಂಡನೊಂದಿಗೆ  ಕಾರಿನಲ್ಲಿ  ಉಳ್ಳಾಲ ತೊಕ್ಕೊಟ್ಟು ಓವರ್   ಬ್ರೀಡ್ಜ್  ಎಂಬಲ್ಲಿ ಗೆ   ಬಂದು   ಕಾರಿನಿಂದ  ಇಳಿದು   ತಲಪಾಡಿ  ಕಡೆಯಿಂದ   ಮಂಗಳೂರು   ಕಡೆಗೆ   ಹಾದು   ಹೋಗಿರುವ   ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯ   ಬದಿಯಲ್ಲಿ   ನಿಂತುಕೊಂಡಿರುವ  ಸಮಯ   ಸುಮಾರು   19:15 ಗಂಟೆಗೆ   ತಲಪಾಡಿ   ಕಡೆಯಿಂದ   ಮಂಗಳೂರು  ಕಡೆಗೆ   ಹಾದು ಹೋಗಿರುವ   ರಸ್ತೆಯಲ್ಲಿ    ನೊಂದಣಿ    ಸಂಖ್ಯೆ     KL-40-S-6886 ನೇ ಕಾರನ್ನು  ಅದರ  ಚಾಲಕ  ಅರುಣ್  ವರ್ಗೀಸ್ ಎಂಬಾತನು   ದುಡುಕುತನ ಹಾಗೂ  ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ಬಂದು   ಪಿರ್ಯಾದಿದಾರರಿಗೆ  ಡಿಕ್ಕಿ   ಹೊಡೆದ  ಪರಿಣಾಮ    ಅವರು ಡಾಮಾರು ರಸ್ತೆಗೆ   ಬಿದ್ದು  ಅವರ   ಎಡ ಕೈಗೆ   ಮೂಳೆ   ಮುರಿತದ   ಗಂಭೀರ   ಸ್ವರೂಪದ ಗುದ್ದಿದ ರಕ್ತ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ   ಕೂಡಲೇ ಅಲ್ಲೆ ಇದ್ದ   ಪಿರ್ಯಾದಿದಾರರ ಗಂಡ ಹಾಗೂ   ಅಪಘಾತ  ಪಡಿಸಿದ   ಕಾರಿನ   ಚಾಲಕ   ಕಾರಿನಲ್ಲಿ ಮಂಗಳೂರಿನ  ಅಥೇನ ಅಸ್ಪತ್ರೆಗೆ  ಕರೆದುಕೊಂಡು ಬಂದು ದಾಖಲಿಸಿರುತ್ತಾರೆ ಎಂಬಿತ್ಯಾದಿ

Crime Reported in Surathkal PS

 ಪಿರ್ಯಾದಿ SMT ASHRINAದಾರರು ಸುಮಾರು 7 ವರ್ಷದ ಹಿಂದೆ ಆರೋಪಿ ಅಬ್ದುಲ್ ಖಾದರ್ ಇಸ್ಮಾಯಿಲ್ ಎಂಬವನನ್ನು ಮದುವೆಯಾಗಿದ್ದು ಮೂರು ಹೆಣ್ಣು ಮಕ್ಕಳು ಇರುತ್ತಾರೆ.  ಮದುವೆಯ ಸಮಯ ಪಿರ್ಯಾದಿದಾರರ ತಂದೆ ತಾಯಿಯವರು ವರದಕ್ಷಿಣೆಯಾಗಿ  50 ಪವನ್  ಚಿನ್ನದ ಒಡವೆಗಳನ್ನು ಹಾಕಿರುತ್ತಾರೆ.  ಸದ್ರಿ ಚಿನ್ನದ ಒಡವೆಗಳನ್ನು ಆರೋಪಿ ಅಬ್ದುಲ್ ಖಾದರ್ ಇಸ್ಮಾಯಿಲ್ ಬ್ಯಾಂಕಿನಲ್ಲಿ ಅಡಮಾನ ಇರಿಸಿದ್ದು  ಸದ್ರಿ ಚಿನ್ನದ ಒಡವೆಗಳ ಬಗ್ಗೆ ಪಿರ್ಯಾದಿದಾರರು ಮಾವ ಜಮಾಲ್ ಎಂಬವರಿಂದ 2 ಲಕ್ಷ 60 ಸಾವಿರ ಹಣವನ್ನು ಸಾಲ ಪಡೆದುಕೊಂಡು ಚಿನ್ನದ ಒಡವೆಗಳ ಅಡಮಾನ ಇರಿಸಿದ ಬಗ್ಗೆ ಬಡ್ಡಿ ಹಣವನ್ನು ಸಂದಾಯ ಮಾಡಿರುತ್ತಾರೆ.  ದಿನಾಂಕ: 04-01-2022 ರಂದು ಸಂಜೆ ಸುಮಾರು 5 ಗಂಟೆಯ ವೇಳೆಗೆ ಪಿರ್ಯಾಧಿದಾರರ ಗಂಡ  ಆರೋಪಿಯು ಮನೆಗೆ ಬಂದು ಅತನ ತಂದೆ ತಾಯಿಯ ಎದುರಿನಲ್ಲಿಯೇ ಪಿರ್ಯಾದಿದಾರರ ಅಣ್ಣನಿಂದ  ಅಥವಾ ಸಂಬಂಧಿಕರಿಂದ ಹಣವನ್ನು ತಂದು ಕೊಡುವಂತೆ ಕೇಳಿದಾಗ ಪಿರ್ಯಾದಿದಾರರು ತನ್ನಿಂದ ಹಣವನ್ನು ತಂದು ಕೊಡಲು ಸಾದ್ಯವಿಲ್ಲವೆಂದು ತಿಳಿಸಿದ್ದಕ್ಕೆ ಆರೋಪಿಯು ಸಿಟ್ಟಿನಿಂದ  ನೀನು ಮದುವೆಯ ಸಮಯ ಚಿನ್ನದ ಒಡವೆಗಳನ್ನು ಹೊರತು ಪಡಿಸಿ ವರದಕ್ಷಿಣೆ ಹಣವನ್ನು ಕೊಟ್ಟಿರುವುದಿಲ್ಲ ಎಂದು ಹೇಳಿ  ಬೇವರ್ಸಿ  ಎಂಬುದಾಗಿ ಅವಾಚ್ಯ ಶಬ್ದಗಳಿಂದ  ಬೈದು   ಕೈಯಿಂದ ಎಡ ಕೆನ್ನೆಗೆ ಹೊಡೆದು ತಲೆಯನ್ನು ಗೋಡೆಗೆ ಗುದ್ದಿ  ನಿನ್ನನು ಜೀವಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ನೀಡಿದ್ದಾಗಿರುತ್ತದೆ. ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 07-01-2022 07:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080