ಅಭಿಪ್ರಾಯ / ಸಲಹೆಗಳು

Crime Reported in : Mangalore East Traffic PS                            

ಪಿರ್ಯಾದಿದಾರರಾದ DR MURALIDHAR PAI K ರವರು ದಿನಾಂಕ: 07/03/2022 ರಂದು ತಮ್ಮ ಕಾರು ನೊಂದಣಿ ಸಂಖ್ಯೆ: KA-19-MH-5025 ನೇಯದನ್ನು ಚಲಾಯಿಸಿಕೊಂಡು ಮಂಗಳೂರು ನಗರದ ಪಿ.ವಿ.ಎಸ್. ವೃತ್ತದ ಕಡೆಯಿಂದ ಬಂಟ್ಸ್ ಹಾಸ್ಟೇಲ್ ಕಡೆಗೆ ಹೋಗುವ  ಸಾರ್ವಜನಿಕ ರಸ್ತೆಯಲ್ಲಿ ಬರುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 09-15 ಗಂಟೆ ವೇಳೆಗೆ ಸದ್ರಿ ರಸ್ತೆಯ ಕೋರ್ಟ್ ಕ್ರಾಸ್ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಕಾರಿನ ಹಿಂದುಗಡೆಯಿಂದ ಚಲಾಯಿಸಿಕೊಂಡು ಬರುತ್ತಿದ್ದ ಕಾರು ನೊಂದಣಿ ಸಂಖ್ಯೆ; KA-19-ML-9872 ನೇಯದನ್ನು ಅದರ ಚಾಲಕನು ನಿರ್ಲಕ್ಷತನದಿಂದ ಅಪಾಯಕಾರಿ ಚಲಾಯಿಸಿಕೊಂಡು ಬರುತ್ತಾ ಬಲ ಬದಿಯಿಂದ ಓವರ್ ಟೇಕ್ ಮಾಡುವ ಭರದಲ್ಲಿ ಪಿರ್ಯಾದಿದಾರರ ಕಾರಿನ ಬಲ ಬದಿಗೆ ಡಿಕ್ಕಿಪಡಿಸಿರುತ್ತಾರೆ, ಈ ಡಿಕ್ಕಿಯ ಪರಿಣಾಮ ಪಿರ್ಯಾದಿದಾರರ ಕಾರಿನ ಬಲ ಬದಿಯ ಹಿಂಭಾಗದ ಚಕ್ರದ ಮೇಲೆ ಬಲ ಹಿಂಭಾಗದ ಡೋರ್ ಬಳಿಯಲ್ಲಿ, ಹಾಗೂ ಹಿಂಭಾಗದ ಬಂಪರ್ ನ ಬಲಗಡೆ ಕೆಳಭಾಗದಲ್ಲಿ ಜಖಂಗೊಂಡಿರುತ್ತದೆ,  ಆದುದರಿಂದ ಈ ಅಪಘಾತ ಪಡಿಸಿದ ಕಾರು ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

   

2) ದಿನಾಂಕ: 07-03-2022 ರಂದು ಎಂದಿನಂತೆ ಪಿರ್ಯಾದಿದಾರರಾದ ಶ್ರೀಮತಿ ಗೀತಾ (65) ರವರು ಮನೆಯಿಂದ ತಮ್ಮ ತರಕಾರಿ ಅಂಗಡಿಗೆ ಹೋಗಲು ಪಡೀಲ್ ಕಡೆಯಿಂದ ನಂತೂರು ಕಡೆಗೆ ಇರುವ ರಾಷ್ಟ್ರೀಯ ಹೆದ್ದಾರಿ 73 ನೇ ಡಾಮಾರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾ ಕುಲಶೇಖರ-ಕೈಕಂಬ ಜಂಕ್ಷನ್ ನಲ್ಲಿರುವ ಸೋಜಾ ಚಿಕನ್ ಸೆಂಟರ್ ಎದುರುಗಡೆ ರಸ್ತೆ ದಾಟಲು ನಿಂತಿದ್ದ ವೇಳೆ ಸಮಯ ಸುಮಾರು ಮಧ್ಯಾಹ್ನ 2:00 ಗಂಟೆಗೆ ಪಡೀಲ್ ಕಡೆಯಿಂದ ನಂತೂರು ಕಡೆಗೆ   KA-19-HC-2537 ನಂಬ್ರದ ಸ್ಕೂಟರ್  ಸವಾರಳು  ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರಿಗೆ ಢಿಕ್ಕಿ ಪಡಿಸಿದ್ದು, ಢಿಕ್ಕಿಯ ರಭಸಕ್ಕೆ `ಪಿರ್ಯಾದಿದಾರರು ಡಾಮಾರು ರಸ್ತೆಗೆ ಬಿದ್ದಿದ್ದು, ಅವರ ಎಡಕಾಲಿನ ಪಾದಕ್ಕೆ ಮೂಳೆ ಮುರಿತದ ಗಂಭೀರ ಗಾಯ ಹಾಗೂ ಎಡಕಾಲಿನ ಬೆರಳಿಗೆ ರಕ್ತಗಾಯ ಹಾಗೂ ಎಡ ಕಾಲಿನ ಮೊಣ ಗಂಟಿಗೆ ತರಚಿದ ಗಾಯ ಮತ್ತು ಎದೆಯ ಭಾಗಕ್ಕೆ ಗುದ್ದಿದ ಗಾಯ ಉಂಟಾಗಿದ್ದು ,ಅವರು ಚಿಕಿತ್ಸೆಯ ಬಗ್ಗೆ ವಿನಯಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಅಪಘಾತ ಪಡಿಸಿದ KA-19-HC-2537 ನಂಬ್ರದ ಸ್ಕೂಟರ್ ಸವಾರಳು ಸ್ಕೂಟರನ್ನು ನಿಲ್ಲಿಸದೇ ಪರಾರಿಯಾಗಿದ್ದು, ಸದ್ರಿ ಸ್ಕೂಟರ್ ಸವಾರಳ ಮೇಲೆ ಸೂಕ್ತ ಕಾನೂನು ಕ್ರಮ  ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

 

Crime Reported in Mangalore South PS                                                        

ದಿನಾಂಕ 26-02-2022 ರಂದು 14-30 ಗಂಟೆಯಿಂದ ದಿನಾಂಕ 28-02-2022 ರಂದು ಬೆಳಿಗ್ಗೆ 08-30 ಗಂಟೆಯ ಮದ್ಯಾವಧಿಯಲ್ಲಿ ಮಂಗಳೂರು ನಗರದ ದಕ್ಕೆಯಲ್ಲಿರುವ ಬಂದರ್ ಪೇರಿ ಪ್ಯಾಯಿಂಟ್ ಬಳಿಯ ಟಿಕೇಟ್ ಕೌಂಟರ್ ಎದುರುಗಡೆ ದ್ಚಿಚಕ್ರ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿ ಹ್ಯಾಂಡ್ ಲಾಕ್ ಮಾಡಿ ಇಟ್ಟಿದ್ದ ಪಿರ್ಯಾದಿದಾರರಾದ MOHAN KUMAR K ರವರ ಆರ್. ಸಿ. ಮಾಲಕತ್ವದ YAMAHA FZ16, 08/2016 ನೇ ಮೊಡಲ್ ನ KA19ET3462 ನೊಂದಣಿ ಸಂಖ್ಯೆಯ ME121C0M8G2036150 ಚೆಸಿಸ್ ನಂಬ್ರದ, 21CM036150 ಇಂಜಿನ್ ನಂಬ್ರದ, ಕಪ್ಪು ಬಣ್ಣದ, ಅಂದಾಜು ಮೌಲ್ಯ 42,000/- ರೂಪಾಯಿ ಬೆಲೆಬಾಳುವ ದ್ಚಿಚಕ್ರ ವಾಹನವನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಪಿರ್ಯಾದಿದಾರರು ಮತ್ತು ಅವರ ಸ್ನೇಹಿತರು ಮಂಗಳೂರು ನಗರ ಹಾಗೂ ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ದ್ಚಿಚಕ್ರ ವಾಹನ ಪತ್ತೆಯಾಗಿರುವುದಿಲ್ಲ.

Crime Reported in Traffic South Police Station    

ಪಿರ್ಯಾದಿದಾರರಾದ ಲೊಕೇಶ್ ರವರು ದಿನಾಂಕ 26-09-2021 ರಂದು ಮನೆಯಿಂದ  ಅವರ ಮೋಟಾರ್ ಸೈಕಲ್ ನಂಬ್ರ KA-19-ET-7924  ನೇದನ್ನು ಸವಾರಿ ಮಾಡಿಕೊಂಡು ಕೆಲಸದ ನಿಮಿತ್ತ ತೊಕ್ಕೊಟ್ಟು ಕಡೆಯಿಂದ ದೇರಳಕಟ್ಟೆಕಡೆಗೆ ಹೋಗಿ ಅಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ಸು ದೇರಳಕಟ್ಟೆಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಿರುವಾಗ ಸಮಯ ಸುಮಾರು ಮಧ್ಯಾಹ್ಣ  2-00 ಗಂಟೆಗೆ ಚೆಂಬುಗುಡ್ಡೆ ದೈವಸ್ಥಾನದ ಹತ್ತಿರ ತಲುಪಿದಾಗ ಎದುರಿನಿಂದ ಅಂದರೆ  ಕುತ್ತಾರ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂಬ್ರ KA-19-HA-5351 ನೇದನ್ನು ಅದರ ಸವಾರ ಮೊಹಮ್ಮದ್ ಜಾಸಿನ್ ಎಂಬಾತನು  ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ಮೈ ತರಚಿದ ಗಾಯ, ಕಾಲಿಗೆ  ಹಾಗೂ ತೊಡೆಗೆ ಗುದ್ದಿದ ಗಾಯ ಹಾಗೂ ಬಲಗಡೆಯ ಕೆಳತುಟಿಗೆ ರಕ್ತ ಗಾಯವಾಗಿದ್ದು ಕೂಡಲೇ ಚಿಕಿತ್ಸೆ ಬಗ್ಗೆ ದೇರಳಕಟ್ಟೆಯ ಯೆನೆಪೋಯಾ ಆಸ್ಪತ್ರೆಗೆ ಹೋಗಿ ದಾಖಲಾಗಿರುತ್ತಾರೆ.

Crime Reported in Ullal PS   

ಪಿರ್ಯಾದಿದಾರರಾದ Pradeep T R ರವರು ಉಳ್ಳಾಲ ಪೊಲೀಸ್ ಠಾಣಾ ಪೊಲೀಸ ಉಪ ನಿರೀಕ್ಷಕರಾಗಿದ್ದು ದಿನಾಂಕ 06-03-2022 ರಂದು ಸಾಯಂಕಾಲ ಇಲಾಖಾ ದಲ್ಲಿ ಠಾಣಾ ವ್ಯಾಪ್ತಿಯಲ್ಲಿ ಸಿಬ್ಬಂದಿಗಳ ಜೊತೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಕೆ ಸಿ ನಗರ ಫಲಾಹ ಶಾಲೆ. ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬ ಯಾವುದೋ ಮಾದಕ ವಸ್ತು ಸೇವನೆ ಮಾಡಿ ನಶೆಯಲ್ಲಿ  ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾನೆ ಎಂಬುದಾಗಿ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿಯಂತೆ ಸಂಜೆ 05-00 ಗಂಟೆಗೆ ಸದ್ರಿ ಸ್ಥಳಕ್ಕೆ ತಲುಪಿ ಸದ್ರಿ ವ್ಯಕ್ತಿಯನ್ನು ವಿಚಾರಿಸಲಾಗಿ ಮಹಮ್ಮದ್ ರಿಫಾದ್ ಎಮ್ @ಸಫರ್ (23) ಪಿಲಿಕುರು ತಲಪಾಡಿ ಗ್ರಾಮ ಎಂಬುದಾಗಿ ತಿಳಿಸಿದ್ದು ನಿಷೇದಿತ ಅಮಲು ಪದಾರ್ಥ ಗಾಂಜಾ ಸೇವಿಸಿರುವುದಾಗಿ ಒಪ್ಪಿಕೊಂಡಿದ್ದು. ವಶಕ್ಕೆ ಪಡೆದು ಬಳಿಕ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಸದ್ರಿ ವ್ಯಕ್ತಿಯು ನಿಷೇದಿತ ಅಮಲು ಪದಾರ್ಥ ಗಾಂಜಾ ಸೇವಿಸಿರುವುದಾಗಿ ವೈದ್ಯಾಧಿಕಾರಿಯವರು ದೃಡಪತ್ರ ನೀಡಿರುವ ಮೇರೆಗ ಪಾದಿತನ ಮೇಲೆ ಎನ್.ಡಿ.ಪಿ.ಎಸ್ ಕಾಯಿದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು  ಎಂಬಿತ್ಯಾದಿಯಾಗಿ ಪಿರ್ಯಾದಿಯ ಸಾರಾಂಶ.

ಇತ್ತೀಚಿನ ನವೀಕರಣ​ : 07-03-2022 08:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080