Feedback / Suggestions

Crime Reported in Ullal PS

ಪಿರ್ಯಾದಿ Pradeep T R ದಾರರು ದಿನಾಂಕ 06/05/2022 ರಂದು ಠಾಣಾ ಸರಹದ್ದಿನಲ್ಲಿ ಹಗಲು ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಉಳ್ಳಾಲ ತಾಲೂಕು ಉಳ್ಳಾಲ ಗ್ರಾಮದ ಕಡಪರ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬ ಯಾವುದೋ ಮಾಧಕ ವಸ್ತು ಸೇವನೆ ಮಾಡಿ ನಶೆಯಲ್ಲಿ ಇದ್ದು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದಿದ್ದು ಕೂಡಲೇ ಸಿಬ್ಬಂದಿರವರೊಂದಿಗೆ ಸ್ಥಳಕ್ಕೆ ಮಧ್ಯಾಹ್ನ 3-00 ಗಂಟೆಗೆ ತಲುಪಿದಾಗ ಕಡಪರ ಸಾರ್ವಜನಿಕ ರಸ್ತೆಯ ಬದಿ ಇರುವ ಮರವೊಂದರ ಕೆಳಗೆ ನಿಂತುಕೊಂಡಿದ್ದ ವ್ಯಕ್ತಿಯೊಬ್ಬ ಸ್ಥಳದಲ್ಲಿ ಅಮಲಿನಿಂದ ತೂರಾಡಿಕೊಂಡು ಇದ್ದು ಅವನ ಬಳಿಗೆ ಹೋಗಿ ವಿಚಾರಿಸಿದಾಗ ನಶೆಯ ಅಮಲಿನಲ್ಲಿ ಉತ್ತರಿಸುತ್ತಾ ಪದೇ ಪದೇ ವಿಚಾರಿಸಿದಾಗ ಸದ್ರಿ ವ್ಯಕ್ತಿಯು ನಿಷೇದಿತ ಅಮಲು ಪದಾರ್ಥ ಗಾಂಜಾವನ್ನು ಸೇವಿಸಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಸದ್ರಿ ವ್ಯಕ್ತಿಯ ಹೆಸರು ವಿಳಾಸ ಕೇಳಲಾಗಿ ಮೊಹಿನುದ್ದೀನ್ ನೌಶಾದ್ (29 ವರ್ಷ) ವಾಸ : ರಿಫಾಯ್ ನಗರ, ಮಂಜೇಶ್ವರ, ಕಾಸರಗೋಡು, ಕೇರಳ ರಾಜ್ಯ, ಎಂಬುದಾಗಿ ತಿಳಿಸಿರುತ್ತಾನೆ. ಸದ್ರಿ ವ್ಯಕ್ತಿಯು ಕಾನೂನು ಬಾಹಿರವಾದ ನಿಷೇದಿತ ಗಾಂಜಾ ಸೇವಿಸಿದ್ದು ಅವರು ಎಸಗಿದ ತಪ್ಪನ್ನು ಅವರಿಗೆ ತಿಳಿಯಪಡಿಸಿ ಅವರನ್ನು ವಶಕ್ಕೆ ಪಡೆದು ಸಿಬ್ಬಂದಿಯವರ ಮುಖೇನ ಸದ್ರಿ ವ್ಯಕ್ತಿಯನ್ನು ದೇರಳಕಟ್ಟೆಯ ಕೆ. ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರಲ್ಲಿ ಗಾಂಜಾ ಸೇವನೆ ಮಾಡಿರುವ ಬಗ್ಗೆ ಪರೀಕ್ಷಿಸಿದಾಗ ಆಸ್ಪತ್ರೆಯ ವೈದ್ಯಾಧಿಕಾರಿಯವರು ಸದ್ರಿ ವ್ಯಕ್ತಿಯು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ದೃಡಪತ್ರ ನೀಡಿರುತ್ತಾರೆ. ಆದುದರಿಂದ  ಕಾನೂನು ಬಾಹಿರವಾದ  ನಿಷೇದಿತ ಮಾಧಕ ವಸ್ತು ಗಾಂಜಾ ಸೇವನೆ ಮಾಡಿರುವ ಬಗ್ಗೆ ಸದ್ರಿ ವ್ಯಕ್ತಿಯ ವಿರುದ್ದ ಕಾನೂನು ರೀತಿಯ ಕ್ರಮಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

Crime Reported in Traffic South Police Station   

ದಿನಾಂಕ:06-05-2022 ರಂದು ಪಿರ್ಯಾದಿ SUPRIYA SADASHIVA SHETTY ದಾರರ ತಂದೆ ಸದಾಶಿವ ಶೆಟ್ಟಿ ರವರು ಮಂಗಳೂರು ಕಡೆಯಿಂದ ಕೋಟೆಕಾರ್ ಬೀರಿ ಕಡೆಗೆ ಸ್ಕೂಟರ್ ನಂಬ್ರ KA-09-EF-9380 ನೇದರಲ್ಲಿ ಸವಾರಿ ಮಾಡಿಕೊಂಡು ಅವರ ಪತ್ನಿ ಸುಗಂಧಿಯನ್ನು ಸ್ಕೂಟರ್ ನಲ್ಲಿ ಕರೆದು ಕೊಂಡು ಹೋಗಲು ಬರಿತ್ತಿರುವಾಗ ಸಮಯ ಸುಮಾರು ಸಂಜೆ 05:15 ಗಂಟೆಗೆ ಮಂಗಳೂರು ತಾಲ್ಲೂಕು ಕೋಟೆಕಾರ್ ಬೀರಿ ಜಂಕ್ಷನ್ ಬಳಿ MSIL ವೈನ್ ಶಾಪ್ ನ ಎದುರು ಸರ್ವಿಸ್ ಡಾಮಾರು ರಸ್ತೆ ತಲುಪುತ್ತಿದ್ದಂತೆ ಅವರ ಎದುರಿನಿಂದ  ಓಮಿನಿ ಕಾರ್ ನಂಬ್ರ KA-19-AA-0888 ನೇದನ್ನು ಅದರ ಚಾಲಕ ತೌಸಿಫ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸದಾಶಿವ ಶೆಟ್ಟಿರವರು ಸವಾರಿ ಮಾಡುತ್ತಿದ್ದ ಸ್ಕೂಟರಿನ ಎದುರಿಗೆ ಡಿಕ್ಕಿ ಪಡಿಸಿರುತ್ತಾರೆ ಈ ಅಪಘಾತದಿಂದ ಸದಾಶಿವ ಶೆಟ್ಟಿರವರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಅವರ ತಲೆಗೆ ಗುದ್ದಿದ ರಕ್ತಗಾಯ, ಬಲಕಾಲಿನ ಮೊಣಕಾಲಿಗೆ ತರಚಿದ ಗಾಯ,ಮುಖದ ಬಲಬದಿಗೆ ಗುದ್ದಿದ ರಕ್ತಗಾಯ, ಮತ್ತು ಎರಡೂ ಕಾಲು ಹೆಬ್ಬೆರಳಿನ ಬಳಿ ತರಚಿದ ಗಾಯವಾಗಿದ್ದು, ಅಲ್ಲಿ ಸೇರಿದ್ದ ಸಾರ್ವಜನಿಕರು ಚಿಕಿತ್ಸೆ ಬಗ್ಗೆ ವಾಹನವೊಂದರಲ್ಲಿ ದೇರಳಕಟ್ಟೆ ಯೆನೆಪೋಯಾ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುವುದಾಗಿದೆ.ಎಂಬಿತ್ಯಾದಿ.

 

Last Updated: 07-05-2022 03:43 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080