Feedback / Suggestions

Crime Reported in Bajpe PS

“ಫಿರ್ಯಾದಿ Abdul Raheem ದಾರರು ದಿನಾಂಕ 08.10.2021 ರಂದು ಸಂಜೆ ವೇಳಗೆ ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ-19ಇಜಿ-7778 ನೇಯದರಲ್ಲಿ ಮನೆಯಾದ ಗಂಜಿಮಠದಿಂದ ಕೈಕಂಬ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಂಜೆ ಸುಮಾರು 3:30 ಗಂಟೆಗೆ ಮಂಗಳೂರು ತಾಲೂಕು, ಬಡಗುಳಿಪಾಡಿ ಗ್ರಾಮದ, ಗಂಜಿಮಠ ಕ್ಲಾಸಿಕ್ ಬಾರ್ ಮುಂದುಗಡೆ ತಲುಪುತ್ತಿದ್ದಂತೆಯೇ ಎದುರಿನಿಂದ ಅಂದರೆ ಕೈಕಂಬ ಕಡೆಯಿಂದ ಆಟೋ ರಿಕ್ಷಾ ನಂಬ್ರ ಕೆಎ-19ಎಬಿ-2543 ನೇಯದನ್ನು ಅದರ ಚಾಲಕ ಆರೋಪಿ ಅಬ್ದುಲ್ ರೆಹೆಮಾನ್ ಎಂಬಾತನು ಯಾವುದೇ ಸೂಚನೆಯನ್ನು ನೀಡದೇ ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೇ ಆಟೋ ರಿಕ್ಷಾವನ್ನು ಬಲ ಕಡೆಗೆ ತಿರುಗಿಸಿ ಫಿರ್ಯಾದಿದಾರರ ಮೋಟಾರ ಸೈಕಲಿಗೆ ಢಿಕ್ಕಿ ಪಡಿಸಿದ ಪರಿಣಾಮ ಆಟೋ ರಿಕ್ಷಾದ ಮಧ್ಯದ ರಾಡ್ ಫಿರ್ಯಾದಿದಾರರ ಎಡ ಕೈಗೆ ತಾಗಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿರುತ್ತದೆ. ಗಾಯಾಳು ಫಿರ್ಯಾದಿದಾರರು ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವಿನಯ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ” ಎಂಬಿತ್ಯಾದಿ.

Crime Reported in Traffic North PS

ದಿನಾಂಕಃ-08-10-2021 ರಂದು ಪಿರ್ಯಾದಿ Smt. Kavitha ದಾರರು ಅವರ ಮನೆಯಾದ ಕೋಡಿಕಲ್ ನಿಂದ ಕಾಟಿಪಳ್ಳದಲ್ಲಿರುವ ಮನೆಕಡೆಗೆ ಅವರ ಗಂಡನ ಬಾಬ್ತು KA-19-EW-0585 ನಂಬ್ರದ ಸ್ಕೂಟರಿನಲ್ಲಿ ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 09:30 ಗಂಟೆಗೆ ಕೂಳೂರು ಬ್ರಿಡ್ಜ್ ದಾಟಿ ಸ್ವಲ್ಪ ಮುಂದೆ ಅಂದರೆ KIOCL ಜಂಕ್ಷನ್ ಬಳಿ ತಲುಪಿದಾಗ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಕೂಳೂರು ಜಂಕ್ಷನ್ ಕಡೆಯಿಂದ ಪಣಂಬೂರು ಕಡೆಗೆ KA-20-D-8394 ನಂಬ್ರದ ಬಸ್ಸನ್ನು ಅದರ ಚಾಲಕನಾದ ಸುಧೀರ್ ಎಂಬಾತನು ದುಡುಕುತನದಿಂದ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರನ್ನು ಬಲಬದಿಯಿಂದ ಓವರ್ ಟೇಕ್ ಮಾಡುವ ಭರದಲ್ಲಿ ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ NH-66ನೇ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರ ತಲೆಗೆ ಗಂಭೀರ ಸ್ವರೂಪದ ರಕ್ತ ಗಾಯವಾಗಿದ್ದು ಅಲ್ಲದೇ ಕೆನ್ನೆಯ ಎಡಬದಿ, ಬಲಬದಿ, ಹಣೆಗೆ ಎರಡೂ ಕೈ ಹಾಗೂ ಕಾಲುಗಳಿಗೆ ಅಲ್ಲಲ್ಲಿ ಗುದ್ದಿದ ಹಾಗೂ ತರಚಿದ ರೀತಿಯ ರಕ್ತಗಾಯವಾಗಿ AJ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

Crime Reported in Traffic South PS

ದಿನಾಂಕ:03-10-2021 ರಂದು ಪಿರ್ಯಾದಿದಾರರಾದ ಹಸನ್ ಶಾಫಿ [39 ವರ್ಷ] ರವರು ಕಣ್ಣೂರು ಮಸೀದಿ ಬಳಿ ಇರುವ ಬಸ್ಸ್ ಸ್ಟಾಪ್ ಹತ್ತಿರ ಅಡ್ಯಾರ್ ಕಡೆಯಿಂದ ಕಣ್ಣೂರು ಕಡೆಗೆ ಹಾದು ಹೋಗಿರುವ ರಾ.ಹೆ.73 ರ ರಸ್ತೆಯನ್ನು ದಾಟುತ್ತಿರುವಾಗ ಸಮಯ ಸುಮಾರು ಸಂಜೆ 07.20 ಗಂಟೆಗೆ ಅದೇ ರಸ್ತೆಯಲ್ಲಿ ಅಡ್ಯಾರ್ ಕಡೆಯಿಂದ ಕಣ್ಣೂರು ಕಡೆಗೆ ಆಟೋರಿಕ್ಷಾ ನಂಬ್ರ KA-19-AB-3082 ನೇದನ್ನು ಅದರ ಚಾಲಕ ಅಹಮ್ಮದ್ ಇರ್ಫಾನ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ರಸ್ತೆಗೆ ಬಿದ್ದು ಅವರಿಗೆ ಗಲ್ಲಕ್ಕೆ, ಬೆನ್ನಿನ ಬಲಬದಿಗೆ ಮತ್ತು ಎಡಗೈ ಮೊಣಗಂಟಿಗೆ ಗುದ್ದಿದ ರೀತಿಯ ಗಾಯವಾಗಿದ್ದು ನಂತರ ಪಿರ್ಯಾದಿದಾರರನ್ನು ಆಟೋರಿಕ್ಷಾ ಚಾಲಕ ಅಹಮ್ಮದ್ ಇರ್ಫಾನ್ ಹಾಗೂ ಅಲ್ಲಿ ಸೇರಿದ ಜನರು ಚಿಕಿತ್ಸೆ ಬಗ್ಗೆ ಅದೇ ಆಟೋರಿಕ್ಷಾದಲ್ಲಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು ಅಪಘಾತದ ದಿನ ಆಟೋರಿಕ್ಷಾದ ಚಾಲಕ ಅಹಮ್ಮದ್ ಇರ್ಫಾನ್ ಪಿರ್ಯಾದಿದಾರರ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದು ಈಗ ಚಿಕಿತ್ಸಾ ವೆಚ್ಚ ಜಾಸ್ತಿಯಾಗಿರುವುದರಿಂದ ಚಿಕಿತ್ಸಾ ವೆಚ್ಚ ಭರಿಸಲು ನಿರಾಕರಿಸಿರುವುದರಿಂದ ಪಿರ್ಯಾದಿದಾರರೂ ಈ ದಿನ ತಡವಾಗಿ ದೂರು ನೀಡುತ್ತಿರುವುದಾಗಿದೆ ಎಂಬಿತ್ಯಾದಿ.

Last Updated: 09-10-2021 05:04 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080