ಅಭಿಪ್ರಾಯ / ಸಲಹೆಗಳು

Crime Reported in Kankanady Town PS  

ಪಿರ್ಯಾದು Lokesh Kumar ದಾರರ ಮೂಲತಃ ರಾಜಸ್ತಾನ ರಾಜ್ಯದವರಾಗಿದ್ದು ಪ್ರಸ್ತುತ ದಕ್ಷಿಣ ರೈಲ್ವೇ ಪಡೀಲ್, ಮಂಗಳೂರಿನಲ್ಲಿ ಸೀನಿಯರ್ ಸೆಕ್ಷನ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿದೆ. ಪಿರ್ಯಾದುದಾರರು ದಿನಾಂಕ 28-04-2021 ರಂದು ಸಂಜೆ 6.30 ರ ಸುಮಾರಿಗೆ  ಎಂದಿನಂತೆ ತಮ್ಮ KA19EQ0636 ನೇ ಬಜಾಜ್ ಸಿಟಿ-100 ಬೈಕ್ ನ್ನು ಕಂಕನಾಡಿ ರೈಲ್ವೇ ಜಂಕ್ಚನ್ ನ ಪಾರ್ಕಿಂಗ್  ಸ್ಥಳದಲ್ಲಿ ಇರಿಸಿ  ಕೆಲಸದ ನಿಮಿತ್ತ ತೆರಳಿದ್ದು ನಂತರ ಕೆಲಸ ಮುಗಿಸಿಕೊಂಡು ಪಾರ್ಕಿಂಗ್ ಮಾಡಿದ್ದ ಸ್ಥಳದಲ್ಲಿ ಬಂದು ನೋಡಿದಾಗ ಪಿರ್ಯಾದುದಾರರ ಬೈಕ್ ಇರಿಸಿದ್ದ ಸ್ಥಳದಲ್ಲಿ ಇಲ್ಲದೇ ಇದ್ದಾಗ ಸುತ್ತಮುತ್ತಲು ಹುಡುಕಾಡಲಾಗಿ ಸಿಕ್ಕಿರುವುದಿಲ್ಲ. ಪಿರ್ಯಾದುದಾರರು ಸದ್ರಿ ವಾಹನಕ್ಕಾಗಿ ಎಲ್ಲಾಕಡೆಯಲ್ಲೂ ಹುಡುಕಾಡಿದರೂ ಈವರೆಗೂ ಪತ್ತೆಯಾಗದೇ ಇದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಎಂಬಿತ್ಯಾದಿ.

ಸದ್ರಿ ಬೈಕ್ ನ ಮಾಹಿತಿ: KA19EQ0636 ನೇ ಬಜಾಜ್ ಸಿಟಿ-100 ಬೈಕ್,  ಚೇಸಿಸ್ ನಂಬ್ರ- MD2A18AZ7FWC05444, ಇಂಜಿನ್ ನಂಬ್ರ-DUZWFC77868. ಅಂದಾಜು ಮೌಲ್ಯ 15000/-

 

Crime Reported in Traffic North Police Station               

ದಿನಾಂಕ:10-05-2022 ರಂದು ಪಿರ್ಯಾದಿ Amruth Kini ದಾರರ ಅಣ್ಣನಾದ ಬಾಲಕೃಷ್ಣ ಕಿಣಿ (61) ಎಂಬವರು ಎಂದಿನಂತೆ ರಾತ್ರಿ ಊಟ ಮುಗಿಸಿ ಮನೆಯ ಎದುರಿನಲ್ಲಿರುವ ರಸ್ತೆಯಲ್ಲಿ ವಾಯು ವಿಹಾರದ ಬಗ್ಗೆ ಹೋಗಿದ್ದವರು ರಾತ್ರಿ ಸಮಯ ಸುಮಾರು 8:30 ಗಂಟೆಗೆ ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆ ಕಟ್ಟಡದ ಎದುರಿನಲ್ಲಿ ಹೋಗುತ್ತಿದ್ದಂತೆ ಕಟೀಲು ಕಡೆಯಿಂದ ಕಿನ್ನಿಗೋಳಿ ಕಡೆಗೆ ಹಾದು ಹೋಗುವ ಒಳರಸ್ತೆಯಲ್ಲಿ KA-19-MC-1633 ನಂಬ್ರದ ಕಾರನ್ನು ಅದರ ಚಾಲಕನಾದ MAHESHA KARKERA ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಬಾಲಕೃಷ್ಣ ಕಿಣಿ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಬಾಲಕೃಷ್ಣ ಕಿಣಿ ರವರ ತಲೆಯ ಎಡಬದಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಅಲ್ಲದೇ ಬಲ ಕೈ ಬೆರಳ ಬುಡದಲ್ಲಿ ಮತ್ತು ಬಲಕೈ ಮೊಣಗಂಟಿನಲ್ಲಿ ತರಚಿದ ಗಾಯವಾಗಿ ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯ SICU ವಿಭಾಗದಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

Crime Reported in Ullal PS

ದಿನಾಂಕ.5-5-2022 ರಂದು ಸಂಜೆ 5-00 ಗಂಟೆಗೆ ಸೋಮೇಶ್ವರ ಗ್ರಾಮದ ಉಚ್ಚಿಲ ಬಟ್ಟಪ್ಪಾಡಿ ಎಂಬಲ್ಲಿನ ನಿವಾಸಿ ಬೀಪಾತುಮ್ಮ ರವರ ಗಂಡ ಮಹಮ್ಮದ್ ಸಿದ್ಧಿಕ್ ನು ಸಂಜೆ 5-00 ಗಂಟೆಗೆ ಮನೆಯಿಂದ ಕಾಸರಗೋಡು ತಳಂಗರೆ ಹೊಟೇಲಿಗೆ ಹೋಗುತ್ತೇನೆ ಎಂದು ಹೇಳಿ ಹೋದವರು ದಿನಾಂಕ. 6-5-2022 ರಂದು ಸಂಜೆ ತಾನು ಕಾಸರಗೋಡಿನಲ್ಲಿ ಇದ್ದೇನೆ ಎಂದು ಹೇಳಿದವರು ರಾತ್ರಿ 10-00 ಗಂಟೆಗೆ ಮಹಮ್ಮದ್ ಸಿದ್ಧಿಕ್ ರವರು ಫಿರ್ಯಾದಿದಾರರಿಗೆ ಪೋನ್ ಮಾಡಿ ತಾನು ಹೊಟೇಲಿನ ಕೆಲಸಗಾರರ ಮನೆಯಾದ ಪಯ್ಯನೂರಿನಲ್ಲಿ ಇದ್ದೇನೆ ಎಂದು ಹೇಳಿರುತ್ತಾರೆ. ಇದಾದ ನಂತರ ಮಹಮ್ಮದ್ ಸಿದ್ಧಿಕ್ ರವರು ಫಿರ್ಯಾದಿದಾರರಿಗೆ ಪೋನ್ ಮಾಡದೇ ಇದ್ದುದನ್ನು ಕಂಡು ಫಿರ್ಯಾದಿದಾರರು ತನ್ನ ಗಂಡ ಮಹಮ್ಮದ್ ಸಿದ್ಧಿಕ್ ರವರಿಗೆ ಪೋನ್ ಮಾಡಿದಾಗ ಅದು ಸ್ವಿಚ್ಅಪ್ ಎಂದು ಬರುತ್ತಿದ್ದುದರಿಂದ ಫಿರ್ಯಾದಿದಾರರ ಅಳಿಯಂದಿರು ದಿನಾಂಕ. 9-5-2022 ರಂದು ಪಯ್ಯನೂರಿಗೆ ಹೋಗಿ ಮಹಮ್ಮದ್ ಸಿದ್ಧಿಕ್ ರವರ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಅಲ್ಲಿ ಪತ್ತೆಯಾಗದೇ ಇದ್ದುದರಿಂದ ನಂತರ ಕಾಸರಗೋಡಿನ ತಳಂಗರೆಗೆ ಹೊಟೇಲಿಗೆ ಹೋಗಿ ಮಹಮ್ಮದ್ ಸಿದ್ಧಿಕ್ ರವರ ಕುರಿತು ವಿಚಾರಿಸಿದಾಗ ಸದ್ರಿಯವರು ದಿನಾಂಕ. 6-5-2022 ರಂದು ಹೊಟೇಲಿಗೆ ಬಂದ ನಂತರ ಬಂದಿರುವುದಿಲ್ಲ ಎಂದು ಪರಿಸರದವರು ತಿಳಿಸಿರುವುದರಿಂದ ಫಿರ್ಯಾದಿದಾರರ ಗಂಡನ ಬಗ್ಗೆ ಸಂಬಂಧಿಕರ ಮನೆ, ಆಸುಪಾಸು ಹಾಗೂ ಹೆಚ್ಚಿನ ಕಡೆಗಳಲ್ಲಿ ಹುಡುಕಾಡಿ ಪತ್ತೆಯಾಗದೇ ಇದ್ದುದರಿಂದ ಕಾಣೆಯಾದವರನ್ನು ಪತ್ತೆ ಹಚ್ಚಿ ಕೊಡುವಂತೆ ದಿನಾಂಕ. 11-5-2022ರಂದು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

 

Crime Reported in Bajpe PS

 “ಪಿರ್ಯಾದು Sandeep ದಾರರು ದಿನಾಂಕ 10-05-2022 ರಂದು ದಡ್ಡಿ ಕಡೆಯಿಂದ ಧೂಮ ಚಡವು ಕಡೆಗೆ ತನ್ನ ಬಾಬ್ತ ಕೋಮಾಕಿ ಕೆ ಎ 19 ಹೆಚ್ ಹೆಚ್ 9322 ನೇಯ ಇಲೇಕ್ಟ್ರಿಕಲ್ ದ್ವಿಚಕ್ರ ವಾಹನದಲ್ಲಿ ತನ್ನ ಹೆಂಡತಿ ಶ್ರೀಮತಿ ಪವಿತ್ರಾ ರವರನ್ನು ಕುಳ್ಳರಿಸಿಕೊಂಡು ಬರುತ್ತಿರುವಾಗ ಮಂಗಳೂರು ತಾಲೂಕು ಬಡಗ ಎಡಪದವು ಗ್ರಾಮದ ದೇವಿ ಜನರಲ್ ಸ್ಟೋರ್ ನ ಪಶ್ಚಿಮ ಬದಿಯ ತೋಡಾರ ಗೆ ಹೋಗುವ ಒಳಗಿನ ರಸ್ತೆಯಲ್ಲಿ ಜೆ ಸಿ ಬಿ ನಂಬ್ರ ಕೆ ಎ 19 ಎಮ್ ಕೆ 1901 ನೇಯ  ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರ ಸ್ಕೂಟರ್ ಗೆ ಡಿಕ್ಕಿ ಹೋಡೆದ ಪರಿಣಾಮ ಜೆಸಿಬಿ ಯ ಬಕೇಟ್ ಪಿರ್ಯಾದುದಾರರ ಎಡಕೈ ಭುಜಕ್ಕೆ ತಾಗಿ ರಕ್ತ ಗಾಯವಾಗಿದ್ದು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಶ್ರೀಮತಿ ಪವಿತ್ರಾರವರಿಗೆ ಸೋಂಟಕ್ಕೆ,ಹೊಟ್ಟೆಗೆ,ಬೆನ್ನಿಗೆ ಗುದ್ದಿದ ಹಾಗೂ ತಲೆಗೆ ರಕ್ತ ಗಾಯವಾಗಿದ್ದು ಒಂದು ಆಟೋ ರಿಕ್ಷಾದಲ್ಲಿ ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು ಈ ಅಪಘಾತಕ್ಕೆ ಜೆ ಸಿ ಬಿ ಚಾಲಕನ ಅತೀ ವೇಗ ಹಾಗೂ ಅಜಾಗರುಕತೆಯೇ ಕಾರಣ ಎಂಬಿತ್ತ್ಯಾದಿ.

 

ಇತ್ತೀಚಿನ ನವೀಕರಣ​ : 11-05-2022 07:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080