ಅಭಿಪ್ರಾಯ / ಸಲಹೆಗಳು

Crime Reported in Mangalore East Traffic PS                                                        

 

ದಿನಾಂಕ:24-10-2021 ರಂದು  ಪಿರ್ಯಾದಿದಾರರಾದ ಶ್ರೀಮತಿ ಶಶಿಕಲಾ(37) ರವರು ತನ್ನ ಬಾಬ್ತು KA-19-EK-7851 ನಂಬ್ರದ ಸ್ಕೂಟರಿನಲ್ಲಿ  ಮಗಳು ಸಾಂಶಿ(6) ಮತ್ತು ಪಿರ್ಯಾದಿದಾರರ ಗಂಡ ಸುಧೀರ್ ರವರನ್ನು ಹಿಂಬದಿ ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಡಿ-ಮಾರ್ಟ್ ಕಡೆಗೆ ಹೊರಟು ಸಮಯ ಸುಮಾರು 19.20 ಗಂಟೆಗೆ ಕುಲಶೇಖರ-ಕೈಕಂಬ ಪ್ಲೈ ಓವರ್ ಬಳಿ ರಾಷ್ಟ್ರೀಯ ಹೆದ್ದಾರಿ 73 ರಲ್ಲಿರುವ ಎಸ್.ಸಿ.ಎಸ್ ಪೆಟ್ರೋಲ್ ಪಂಪ್ ಬಳಿ ಮುಂಭಾಗದ ಬಳಿ ತಲುಪುತ್ತಿದ್ದಂತೆ ಪೆಟ್ರೋಲ್  ಪಂಪ್ ಒಳಗಡೆಯಿಂದ ಧನುಶ್  ಎಂಬಾತನು  KA-19-L-5870  ನಂಬ್ರದ ಮೋಟಾರ್ ಸೈಕಲನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಒಮ್ಮೇಲೆ ರಾಷ್ಟ್ರೀಯ ಹೆದ್ದಾರಿ 73 ಗೆ ಮುನ್ನುಗಿಸಿ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಸ್ಕೂಟರಿನ ಎಡಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ  ರಸ್ತೆಗೆ ಬಿದ್ದು ಹಿಂಬದಿಯ ಸಹಸವಾರರ ಸುಧೀರ ರವರ ಬಲಕೈಗೆ ಮೂಳೆ ಮುರಿತ ಗಂಭೀರ ಗಾಯವಾಗಿದ್ದು, ಜ್ಯೋತಿ ಡಯಾಗ್ನಸಿಸ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಮತ್ತು  ಮಗಳು ಸಾಂಶಿ(6) ಗೆ  ಹಣೆಯ ಎಡಭಾಗಕ್ಕೆ ಚರ್ಮ ಹರಿದ ಗಾಯವಾಗಿದ್ದು, ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುವುದಾಗಿದೆ.ಅಪಘಾತ ಪಡಿಸಿದ ಮೋಟಾರ್ ಸೈಕಲಿನ ಸವಾರ ಧನುಶ್ ನು ಚಿಕಿತ್ಸೆ ಖರ್ಚನ್ನು ಭರಿಸುವುದಾಗಿ ತಿಳಿಸಿ ನಂತರ ನಿರಾಕರಿಸಿದ್ದರಿಂದ ಈ ದಿನ ಠಾಣೆಗೆ ಬಂದು ತಡವಾಗಿ ದೂರು ನೀಡಿರುವುದಾಗಿದೆ.

 

Crime Reported in Traffic South PS

ಪಿರ್ಯಾದಿ SMT ANITA ದಾರರ ಗಂಡನಾದ ರಬೀಂದ್ರನಾಥ ಕಿಣಿರವರು ಅವರ ಸ್ಕೂಟರ್ ನಂಬ್ರ KA-19-HB-6393 ನೇದನ್ನು ಸವಾರಿ ಮಾಡಿಕೊಂಡು ಮಂಗಳೂರಿನಿಂದ ತಲಪಾಡಿಯಲ್ಲಿರುವ ಅವರ ತೋಟಕ್ಕೆ ಹೋಗಿ ಕರಿಬೇವು ಸೊಪ್ಪು ತೆಗೆದುಕೊಂಡು ವಾಪಸ್ಸು ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ರಾ.ಹೆ.66 ರಲ್ಲಿ ಬರುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 10-45 ಗಂಟೆಗೆ ತೊಕ್ಕೊಟ್ಟು ಪ್ಲೈ ಓವರ್ ಮೇಲೆ ತಲುಪಿದಾಗ ಸ್ಕೂಟರ್ ನಲ್ಲಿದ್ದ ಕರಿಬೇವು ಸೋಪ್ಪು ಸ್ಕೂಟರ್ ನಿಂದ ಜ್ಯಾರಿ ರಸ್ತೆಯಲ್ಲಿ ಬಿದ್ದಾಗ ಆ ಸಮಯ  ರಬೀಂದ್ರನಾಥ ರವರು ಸ್ಕೂಟರ್ ನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಸ್ಕೂಟರ್ ನಿಂದ ಕೆಳಗಿಳಿದು ರಸ್ತೆಯಲ್ಲಿ ಬಿದ್ದಿದ್ದ ಕರಿಬೇವು ಸೊಪ್ಪುನ್ನು ಎತ್ತಿಕೊಳ್ಳುತ್ತಿರುವಾಗ ಕೋಟೆಕಾರು ಕಡೆಯಿಂದ ಪಂಪುವೆಲ್ ಕಡೆಗ ಹೋಗುತ್ತಿದ್ದ ಬೈಕ್ ನಂಬ್ರ KA-19-HB-4965 ನೇದನ್ನು ಅದರ ಸವಾರ ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ರಬೀಂದ್ರನಾಥ ರವರಿಗೆ ಬೈಕ್ ನ್ನು ಡಿಕ್ಕಿಪಡಿಸಿದ ಪರಿಣಾಮ ರಭೀಂದ್ರನಾಥರವರು  ಡಾಮಾರು ರಸ್ತೆಗೆ ಬಿದ್ದು ಅವರ ಮುಖಕ್ಕೆ ಹಾಗೂ ಎದೆಗೆ ಗುದ್ದಿದ ಗಂಭೀರ ಸ್ವರೂಪದ ಗಾಯವಾಗಿದ್ದವರನ್ನು ಅಲ್ಲಿ ಸೇರಿದ ಸಾರ್ವಜನಿಕರು ಹಾಗೂ ಡಿಕ್ಕಿಪಡಿಸಿದ ಬೈಕ್ ಸವಾರ ಸೇರಿ ಕಾರೊಂದರಲ್ಲಿ ಚಿಕಿತ್ಸೆ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು, ವೈದ್ಯರು ಪರಿಕ್ಷೀಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 11-12-2021 03:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080