Feedback / Suggestions

Crime Reported in Mulki PS

ದಿನಾಂಕ 12-04-2022 ರಂದು ಪಿರ್ಯಾದಿದಾರರಾದ ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಕುಸುಮಾಧರ ಕೆ ರವರು ಸಿಬ್ಬಂದಿಗಳೊಂದಿಗೆ ಖಾಸಗಿ ವಾಹನದಲ್ಲಿ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ 20:00 ಗಂಟೆಗೆ ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಶಿವಯೋಗೇಶ್ವರ ದೇವಸ್ಥಾನದ ಬಳಿ ಇರುವ ಸಾರ್ವಜನಿಕ ಬಾವಿ ಕಟ್ಟೆ ಬಳಿ ಒಬ್ಬ ವ್ಯಕ್ತಿ ಕುಳಿತುಕೊಂಡು ಹೊಗೆ ಬತ್ತಿ ಸೇದುತ್ತಿರುವುದು ಕಂಡುಬಂದಿದ್ದು, ಪಿರ್ಯಾದಿದಾರರು ವಾಹನವನ್ನು ನಿಲ್ಲಿಸಿ ಸಿಬ್ಬಂದಿಯವರೊಂದಿಗೆ ಆತನ ಬಳಿ ತೆರಳುತ್ತಿದ್ದಂತೆ ಆತನು ಪಿರ್ಯಾದಿದಾರರನ್ನು ಹಾಗೂ ಸಿಬ್ಬಂದಿಯವರನ್ನು ಕಂಡು ಆತನ ಕೈಯಲ್ಲಿದ್ದ ಹೊಗೆಬತ್ತಿಯನ್ನು ಬಾವಿಗೆ ಬಿಸಾಡಿದ್ದು, ಆತನ ಹೆಸರು ವಿಳಾಸ ಕೇಳಿದಾಗ ನಿಖಿಲ್, ಪ್ರಾಯ : 21 ವರ್ಷ,  ವಾಸ : ಲಿಂಗಪ್ಪಯ್ಯಕಾಡು ಶಾಲೆ ಬಳಿ, ಕೆ.ಎಸ್.ರಾವ್ ನಗರ, ಕಾರ್ನಾಡು ಗ್ರಾಮ, ಮಂಗಳೂರು ತಾಲೂಕು ಎಂಬುದಾಗಿ ತಿಳಿಸಿದ್ದು ಆತನ ವೈದ್ಯಕೀಯ ತಪಾಸಣೆ ನಡೆಸುವ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಯ ವೈದ್ಯಾಧಿಕಾರಿಯವ ಮುಂದೆ ಹಾಜರುಪಡಿಸಿದ್ದು ವೈದ್ಯರು ಗಾಂಜಾ ಸೇವನೆ ಮಾಡಿರುವುದಾಗಿ ಪರೀಕ್ಷಾ ವರದಿಯ ದೃಢಪತ್ರವನ್ನು ನೀಡಿದ್ದು, ಈ ಬಗ್ಗೆ ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ

  

Crime Reported in Traffic North PS

ದಿನಾಂಕ: 11-04-2022 ರಂದು ಪಿರ್ಯಾದಿದಾರರಾದ ಬಿ ಎಸ್ ಜಯರಾಮ್ (65) ರವರು ಎಂದಿನಂತೆ ತನ್ನ ಮಿಲ್ಕ್ ಪಾರ್ಲರನ್ನು ರಾತ್ರಿ 08:00 ಗಂಟೆಗೆ ಬಂದ್ ಮಾಡಿ ಮನೆ ಕಡೆಗೆ ನಡೆದುಕೊಂಡು ಹೋಗುತ್ತಾ ರಾತ್ರಿ ಸಮಯ ಸುಮಾರು 08:15 ಗಂಟೆಗೆ ಮುಲ್ಕಿ ಜಂಕ್ಷನ್ ಸಮೀಪದ ಟೋರಿಸ್ಟ್ ಕಾರ್ ಪಾರ್ಕಿಂಗ್ ನಿಲ್ಲಿಸುವ ಟ್ಯಾಕ್ಸಿ ಸ್ಟ್ಯಾಂಡ್ ಬಳಿ ಸಮೀಪಿಸುತ್ತಿದ್ದಂತೆ ರಾ.ಹೆ.66ರ ಮುಲ್ಕಿ ಜಂಕ್ಷನ್ ಕಡೆಯಿಂದ ಕೊಲ್ನಾಡು ಕಡೆಗೆ KA-19-EK-5000 ನೇ ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರನಾದ MOHAMMED ZAIRAN ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿಯಾದ ರೀತಿಯಲ್ಲಿ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು ರಸ್ತೆ ದಾಟುತ್ತಾ ರಸ್ತೆಯ ಇನ್ನೂಂದು ಬದಿಗೆ ತಲುಪುತ್ತಿದಾಗ ಮೋಟಾರ್ ಸೈಕಲ್ ಸವಾರನ್ನು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಮೋಟಾರ್ ಸೈಕಲ್ ಸವಾರನು ಕೂಡ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಎಡಕೈ ಭುಜಕ್ಕೆ, ತೋಳಿಗೆ ಹಾಗೂ ಅಂಗೈಗೆ ಅಲ್ಲಲ್ಲಿ ಗುದ್ದಿದ ಹಾಗೂ ತರಚಿದ ರೀತಿಯಲ್ಲಿ ಗಾಯ, ತಲೆಯ ಎಡಬದಿಗೆ ಚರ್ಮ ಹರಿದ ರೀತಿಯ ರಕ್ತಗಾಯ, ಸೊಂಟದ ಎಡಬದಿಗೆ ಗುದ್ದಿದ ಒಳಗಾಯವಾಗಿದ್ದು ಮತ್ತು ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರನಿಗೆ ಎದೆಗೆ ಗುದ್ದಿದ ರೀತಿಯ ಗಾಯವಾಗಿ ಚಿಕಿತ್ಸೆಯ ಬಗ್ಗೆ ಮುಲ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಸುರತ್ಕಲ್ ನ ಅಥರ್ವ ಆಸ್ಪತ್ರೆಯಲ್ಲಿ ಮೋಟಾರ್ ಸೈಕಲ್ ಸವಾರನು ಹೊರರೋಗಿಯಾಗಿ ಮತ್ತು ಪಿರ್ಯಾದಿದಾರರು ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

Last Updated: 13-04-2022 06:57 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080