Feedback / Suggestions

Crime Reported in CEN Crime PS

ಪಿರ್ಯಾದಿದಾರರ  ಮೊಬೈಲ್ ನಂಬ್ರ  ನೇಯದಕ್ಕೆ ದಿನಾಂಕ:21-08-2021 ರಂದು  8107972926, 8017974074, ನೇ ನಂಬ್ರದಿಂದ ಅಪರಿಚಿತ ವ್ಯಕ್ತಿಯು ಕರೆ ಮಾಡಿ  ತನ್ನ ಹೆಸರು ಅಭಿಷೇಕ್  ಚೌಧರಿ ಎಂಬುದಾಗಿಯೂ ತಾನು NYKAA ಕಂಪನಿಯ ಪ್ರತಿನಿಧಿಯಾಗಿರುವುದಾಗಿ ತಿಳಿಸಿ ಪಿರ್ಯಾದಿಗೆ   NYKAA ಕಂಪೆನಿಯಿಂದ   LAPTOPS, AC, TV, MOBILE & DSLR ಗಳು ಉಡುಗೊರೆಯಾಗಿ ಒದಗಿಸುವುದಾಗಿ ತಿಳಿರುತ್ತಾರೆ.  ಪಿರ್ಯಾದಿದಾರರು ಈ ಹಿಂದೆ NYKAA  ಕಂಪನಿಯ ವೆಬ್ ಸೈಟ್ ನಿಂದ ವಸ್ತುಗಳನ್ನು ಖರೀದಿಸಿದ್ದು ಪಿರ್ಯಾದಿದಾರರ ಮೊಬೈಲ್ ನಂಬ್ರ ಸದ್ರಿ ವೆಬ್ ಸೈಟ್ ನಿಂದ ಸದ್ರಿ ವ್ಯಕ್ತಿಗೆ ಲಭಿಸಿರುವುದಾಗಿ ನಂಬಿಕೊಂಡು,ದೂರವಾಣಿ ಕರೆಯಲ್ಲಿ ಅಪರಿಚಿತ ವ್ಯಕ್ತಿ ತಿಳಿಸಿದಂತೆ ಉಡುಗೊರೆ ಪಡೆಯುವ ಬಗ್ಗೆ ರೂ 10,098/-ಗಳನ್ನು ಅವರು ಕಳುಹಿಸಿದ ಖಾತೆ ನಂಬ್ರ 3307120010000165 IFSC UJVN0003307  ನೇ ಯದಕ್ಕೆ  ಪಿರ್ಯಾದಿದಾರರ AXIS  ಬ್ಯಾಂಕ್ ಖಾತೆ ಯಿಂದ ಮುಂಗಡವಾಗಿ ಪಾವತಿಸಿರುತ್ತಾರೆ. ಸದ್ರಿ ವ್ಯಕ್ತಿಯು ಉಡುಗೊರೆ ದೊರೆಯುವ ವಸ್ತುಗಳಿಗೆ ವಾರೆಂಟಿ ಬಗ್ಗೆ ರೂ 11,200/-  ಪಾವತಿಸುವಂತೆ ತಿಳಿಸಿರುತ್ತಾರೆ  ಈ ಬಗ್ಗೆ ಪಿರ್ಯಾದಿದಾರರು ತನಗೆ ಉಡುಗೊರೆ ಬೇಡವೆಂದು ತಿಳಿಸಿ ತಾನು ಪಾವತಿಸಿರುವ ಮುಂಗಡ ಹಣವನ್ನು ಮರುಪಾವತಿ ಮಾಡುವಂತೆ ಕೇಳಿಕೊಂಡಿದ್ದು ಅದರಂತೆ  ಸದ್ರಿ ಅಪರಿಚಿತ ವ್ಯಕ್ತಿಯು ಪಿರ್ಯಾದಿದಾರರಿಗೆ ಹಣವನ್ನು ಮರುಪಾವತಿ ಮಾಡುವುದಾಗಿ ನಂಬಿಸಿ ಪುನಃ ಅವರ ಖಾತೆಯಿಂದ ಹಂತ ಹಂತವಾಗಿ ರೂ 10,098/- ಮತ್ತು 9,999/- ಗಳನ್ನು ಅಪರಿಚಿತ ವ್ಯಕ್ತಿಯ AXIS  ಬ್ಯಾಂಕ್  ಖಾತೆ ನೇ ಯದಕ್ಕೆ ಅನಧಿಕೃತವಾಗಿ ವರ್ಗಾಯಿಸಿರುತ್ತಾರೆ. ಅಪರಿಚಿತ ವ್ಯಕ್ತಿಯು ಪಿರ್ಯಾದಿದಾರರಿಗೆ ಉಡುಗೊರೆ ಒದಗಿಸುವುದಾಗಿ ನಂಬಿಸಿ ಒಟ್ಟು ರೂ 30,195/- ಗಳನ್ನು ಅವರ ಬ್ಯಾಂಕ್  ಖಾತೆಯಿಂದ ಅನಧಿಕೃತವಾಗಿ ವರ್ಗಾಯಿಸಿ ಮೋಸ ಮಾಡಿರುತ್ತಾರೆ ಎಂಬಿತ್ಯಾದಿ

Crime Reported in Urva PS

ಪಿರ್ಯಾದಿ Honnappa ದಾರರಿಗೆ ದಿನಾಂಕ 12-12-2021 ರಂದು ಮಧ್ಯಾಹ್ನ ಸಮಯ ಸುಮಾರು 01.30 ಗಂಟೆಯ ಹೊತ್ತಿಗೆ ಹಾಲಪ್ಪ ಮತ್ತು ಮುತ್ತಪ್ಪ ಎಂಬವರುಗಳು ಯಾವುದೋ ಪೂರ್ವ ದ್ವೇಷದ ಹಿನ್ನಲೇಯಲ್ಲಿ ಉರ್ವಾಸ್ಟೋರ್ ಎಸ್.ಆರ್ ಪ್ಯಾನ್ಸಿಯ ಬಳಿ ತಡೆದು ನಿಲ್ಲಿಸಿ “ ….ಮಗನೆ, ನಿನ್ನ …, ನಿಂದ್ ಏನು? ಏನು ನಿನ್ನ ತಿಂಡಿ?” ಎಂಬುದಾಗಿ ಬೈದು ಕೈಯಿಂದ ಎಡ ಕೆನ್ನಗೆ ಹೊಡೆದು ಎಸ್.ಆರ್ ಪ್ಯಾನ್ಸಿ ಅಂಗಡಿಯ ಕೆಳ ಅಂತಸ್ಥಿಗೆ ದೊಡಿಹಾಕಿರುತ್ತಾರೆ ದೊಡಿಹಾಕಿದ ಪರಿಣಾಮ ಪಿರ್ಯಾದಿಯ ಎಡಕಾಲಿನ ಮೊಣಗಂಟಿಗೆ ಗುದ್ದಿದ ಗಾಯವಾಗಿರುತ್ತದೆ ನಂತರ ಪಿರ್ಯಾದಿ ವೆನ್ ಲಾಕ್ ಆಸ್ಪತ್ರೆಗೆ ತೆರಳಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ ವೈದ್ಯಾಧಿಕಾರಿಯವರು ಮೊಣಕಾಲು ಗಂಟು ಮೊಳೆ ಮುರಿತವಾಗಿರುತ್ತದೆ ಎಂದು ತಿಳಿಸಿರುತ್ತಾರೆ ಎಂಬಿತ್ಯಾದಿ.

Crime Reported in Ullal PS

ಪಿರ್ಯಾದಿ Vincent  Dsouza ದಾರರ ಮಗ ವಿನಿಲ್ ನವೀನ್ ಡಿಸೋಜ (24) ರವರು ದಿನಾಂಕ  12/12/2021 ಸಂಜೆ 5-30 ಗಂಟೆಯ ಸಮಯಕ್ಕೆ ಅವರ ವಾಸದ ಮನೆಯಾದ ನಿತ್ಯಾಧರ ನಗರ ಬಬ್ಬುಕಟ್ಟೆ ಪೆರ್ಮನ್ನೂರು ಮಂಗಳೂರು ಇಲ್ಲಿಂದ ಮೊಬೈಲ್ ಫೋನನ್ನು ಮನೆಯಲ್ಲಿ ಬಿಟ್ಟು ಕ್ರಿಕೇಟ್ ಆಡುವುದಾಗಿ ಮನೆಯಲ್ಲಿ ಹೇಳಿ ಪಿರ್ಯಾದಿದಾರರ ಬಿಳಿ ಬಣ್ಣದ ಆ್ಯಕ್ಟೀವಾ ಹೋಂಡಾ ನಂಬ್ರ KA-19-EJ-8693 ನೇದನ್ನು ಚಲಾಯಿಸಿಕೊಂಡು ಹೋದವರು ಈ ತನಕ ಮನೆಗೆ ವಾಪಸ್ಸು ಬಂದಿರುವುದಿಲ್ಲ. ಎಂಬಿತ್ಯಾದಿ ಪಿರ್ಯಾದಿಯ ಸಾರಾಂಶ.

Crime Reported in Mangalore East PS

ಪಿರ್ಯಾದಿ Siddappa (50)ದಾರರು ಕೂಲಿ ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿದಾರರ ಮಗಳಾದ ಅಭೀಲಾಷ ಎಂಬವಳನ್ನು ಗೊಲ್ಲರ ಹಳ್ಳಿ ಕೆಂಚಗೀರಿ ಯಾನೆ ಕೆಂಚಪ್ಪನೆಗೆ ಮದುವೆ ಮಾಡಿಕೊಟ್ಟಿದ್ದು ಮಂಗಳೂರಿನ ಕುಲಶೇಖರ ಬಳಿ ಡಿಯೊ ಮೊಂತೆರೋ ಎಂಬವರ ಬಾಡಿಗೆ ಮನೆಯಲ್ಲಿ ವಾಸಮಾಡಿಕೊಂಡಿದ್ದು, 12-12-2021 ಬೆಳಿಗ್ಗೆ 9.00 ಗಂಟೆ ಸುಮಾರಿಗೆ ಮಗಳ ಗಂಡ ಕೆಂಚಗೀರಿ ಯಾನೆ ಕೆಂಚಪ್ಪ ಅಂಗಡಿಗೆ ಹೋಗಿ ಬರುವುದಾಗಿ ತನ್ನ ಎರಡು ವರ್ಷ ನಾಲ್ಕು ತಿಂಗಳ ಮಗನಾದ ಪುನೀತ್ ಎಂಬವನನ್ನು ಜೊತೆಗೆ ಕರೆದುಕೊಂಡು ಹೋಗಿದ್ದು, ಇಲ್ಲಿಯವರೆಗೊ ಮನೆಗೊ ಬಾರದೇ ಮತ್ತು ಊರಿಗೊ ಹೋಗದೇ ಕಾಣೆಯಾಗಿರುತ್ತಾರೆ. ಸದ್ರಿಯವರನ್ನು ಪರಿಸರದ ನೆರೆ ಕೆರೆಯವರಲ್ಲಿ ವಿಚಾರಿಸಿ ಹುಡುಕಾಟಕ್ಕೆ ಪ್ರಯತ್ನಿಸಲಾಗಿ ಇಲ್ಲಿಯವರೆಗೊ ಪತ್ತೆಯಾಗಿರುವುದಿಲ್ಲ ಆದ್ದರಿಂದ ನನ್ನ ಅಳಿಯ ಕೆಂಚಗೀರಿ ಯಾನೆ ಕೆಂಚಪ್ಪ ಹಾಗೂ ಆತನ ಮಗ ಪುನೀತ್ ನನ್ನು ಪತ್ತೆ ಮಾಡಿಕೊಡಬೇಕು ಎಂಬಿತ್ಯಾದಿ.

ಹೆಸರು : ಕೆಂಚಗೀರಿ ಯಾನೆ ಕೆಂಚಪ್ಪ

ಪ್ರಾಯ : 32 ವರ್ಷ

ಎತ್ತರ :5.0 ಅಡಿ

ಬಣ್ಣ : ಗೋದಿ ಮೈ ಬಣ್ಣ, ಸಪೂರ ಶರೀರ

ಭಾಷೆ : ಕನ್ನಡ

ಬಟ್ಟೆ : ಕಪ್ಪು ಬಣ್ಣದ ಪ್ಯಾಂಟ್, ಹಳದಿ  ಬಣ್ಣದ ಶರ್ಟ್

ವಿಧ್ಯಾಭ್ಯಾಸ- ಎಸ್.ಎಸ್.ಎಸ್.ಸಿ

2)   ಹೆಸರು : ಪುನೀತ್

ಪ್ರಾಯ : 02 ವರ್ಷ 04 ತಿಂಗಳು

ಎತ್ತರ :3.0 ಅಡಿ

ಬಣ್ಣ : ಗೋದಿ ಮೈ ಬಣ್ಣ, ಸಪೂರ ಶರೀರ, ಬಲಗೈ ಗೆ ಆರು ಬೆರಳು ಇರುತ್ತದೆ.

ಭಾಷೆ : ಕನ್ನಡ

ಬಟ್ಟೆ : ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕಪ್ಪು ಬಣ್ಣದ ಟಿಶರ್ಟ್

Crime Reported in Mulki PS

ದಿನಾಂಕ:12-12-2021 ರಂದು ಮೂಡಬಿದ್ರೆ ಭರತ್ ಎಂಬವರು ಅವರ 3 ಜನ ಕೆಲಸದವರಿಂದ ಪಿರ್ಯಾದಿದಾರರ ಮನೆಯಿಂದ ಸುಮಾರು 45 ಮೀಟರ್ ದೂರದಲ್ಲಿ ಇರುವ ಬಿಜಾಪುರ ಕಾಲನಿ ಎಂಬ ಜಾಗದಲ್ಲಿ ಬಂಡೆಕಲ್ಲುಗಳನ್ನು ಅಕ್ರಮವಾಗಿ ಬ್ಲಾಸ್ಟ್ ಮಾಡಿಸುವ ಕೆಲಸ ಮಾಡಿಸುತ್ತಿದ್ದು, ಇದರ ಪರಿಣಾಮವಾಗಿ ದಿನಾಂಕ 12-12-2021 ರಂದು ಸುಮಾರು 12:00 ಗಂಟೆಗೆ ಪಿರ್ಯಾದಿದಾರರಿಗೆ ಬ್ಲಾಸ್ಟ್ ಮಾಡುವ ಸ್ಥಳದಿಂದ ಜೋರಾಗಿ ಶಬ್ದ ಬಂದಿದ್ದು ಅಲ್ಲದೇ ಆ ಸ್ಥಳದಿಂದ ಬಂಡೆಕಲ್ಲಿನ ತುಂಡುಗಳು ರಭಸದಿಂದ ಅಲ್ಲಿಯೇ ಸುತ್ತಮುತ್ತಲ್ಲಿದ್ದ ಮನೆಗಳಿಗೆ ಬಿದ್ದಿರುತ್ತದೆ ಹಾಗೂ ಪಿರ್ಯಾದಿದಾರರ ಮನೆಗೆ ಹಾನಿಯುಂಟಾಗಿದ್ದು ಸುಮಾರು 30,000/- ನಷ್ಟ ಉಂಟಾಗಿರುತ್ತದೆ. ಆದುದರಿಂದ ಯಾವುದೇ ಪರವಾನಿಗೆ ಇಲ್ಲದೆ ಯಾವುದೋ ಸ್ಪೋಟಕವನ್ನು ಬಳಸಿ ಬಂಡೆಕಲ್ಲನ್ನು ಸ್ಪೋಟಗೊಳಿಸಿದ ಜಾಗದ ಮಾಲಕರು , ಮೂಡಬಿದ್ರೆಯ ಭರತ್ ಮತ್ತು ಅವರ ಮೂರು ಜನ ಕೆಲಸದವರಾದ ಹರೀಶ, ಸುರೇಶ ಮತ್ತು ಕಮರುದ್ದೀನ್ ಎಂಬವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಪಿರ್ಯಾದಿ ಯಾಗಿರುತ್ತದೆ ಎಂಬಿತ್ಯಾದಿ. 

Crime Reported in Kankanady Town PS

ಪಿರ್ಯಾದು Dominic Dsouza ದಾರರು ದಿನಾಂಕ 11-12-2021 ರಂದು ರಾತ್ರಿ  ತನ್ನ ಆಟೋರಿಕ್ಷಾ ನಂಬ್ರ ಕೆ.ಎ-19-ಎ.ಸಿ-0161 ನೇದರಲ್ಲಿ  ಪಂಪ್ ವೆಲ್ ನ  ವೈನ್ಸ್ ಎಂಡ್ ಸ್ಪಿರಿಟ್ ವೈನ್ಸ್ ಶಾಪ್ ನ ಎದುರುಗಡೆ ರಿಕ್ಷಾ ಪಾರ್ಕ್ ನಲ್ಲಿ ಬಾಡಿಗೆಗಾಗಿ ಕ್ಯೂನಲ್ಲಿ ಕಾಯುತ್ತಿದ್ದ ಸಮಯ ರಾತ್ರಿ 9:40 ಗಂಟೆಗೆ ಪಿರ್ಯಾದಿದಾರರ  ಪರಿಚಯದ ಯತೀನ್, ಡೋನಿ ಮತ್ತು ಭಾಸ್ಕರ ಎಂಬವರು ಕಾಣ ಸಿಕ್ಕಿದ್ದು, ಅವರ ಜೊತೆ ಮಾತನಾಡಿಕೊಂಡಿರುವ ಸಮಯ ರಾತ್ರಿ ಸುಮಾರು 10.00 ಗಂಟೆಗೆ ವೈನ್ಸ್ ಶಾಪ್ ನ  ಒಳಗಿನಿಂದ, ಪರಿಚಯದ  ಆಟೋರಿಕ್ಷಾ ಚಾಲಕರಾದ ಸುನಿಲ್ ಮತ್ತು ನಾಗರಾಜ್ ಎಂಬವರು, ಬಿಯರ್ ಬಾಟಲಿ ಹಿಡಿದುಕೊಂಡು ಪಿರ್ಯಾದಿದಾರರು ಇರುವಲ್ಲಿಗೆ  ಬಂದು, ಪಿರ್ಯಾದುದಾರರನ್ನು ತಡೆದು ನಿಲ್ಲಿಸಿ, ಅಟೋರಿಕ್ಷಾ ಪಾರ್ಕಿನ ಕ್ಯೂ ನ ವಿಚಾರವಾಗಿ ತಗಾದೆ ತೆಗೆದ ಸಮಯ ಮಾತಿಗೆ ಮಾತು ಬೆಳೆದಿದ್ದು, ಆಗ ಸುನಿಲನು ಕೈಯಿಂದ ಪಿರ್ಯಾದಿದಾರರ ಕೆನ್ನೆಗೆ ಹೊಡೆದಿದ್ದು, ಜೊತೆಯಲ್ಲಿದ್ದ ನಾಗರಾಜನು ಆತನ ಕೈಯಲ್ಲಿದ್ದ ಬಿಯರ್ ಬಾಟಲಿಯಿಂದ ಪಿರ್ಯಾದಿದಾರರ ಮುಖದ  ಎಡ ಭಾಗಕ್ಕೆ ಹೊಡೆಯಲು ಬಂದಾಗ, ಪಿರ್ಯಾದಿದಾರರು  ಬಿಯರ್ ಬಾಟಲಿನ  ಏಟಿನಿಂದ ತಪ್ಪಿಸಲು ಬಾಗಿದಾಗ, ಬಿಯರ್ ಬಾಟಲ್  ಎಡ ಕಣ್ಣಿನ ಹುಬ್ಬಿಗೆ ತಾಗಿರುತ್ತದೆ. ಈ ಘಟನೆಯಿಂದ ಪಿರ್ಯಾದಿದಾರರ ಎಡ ಕೆನ್ನೆಗೆ ಗುದ್ದಿದ ನೋವು ಹಾಗೂ ಎಡ ಕಣ್ಣಿನ ಹುಬ್ಬಿನ ಬಳಿ ರಕ್ತ  ಗಾಯವುಂಟಾಗಿರುತ್ತದೆ ಸ್ಥಳದಲ್ಲಿ ಜನರು ಸೇರುತ್ತಿದ್ದನ್ನು ನೋಡಿದ  ನಾಗರಾಜ ಹಾಗೂ ಸುನಿಲ್ ರವರು ಪಿರ್ಯಾದಿದಾರರನ್ನು ಉದ್ದೇಶಿಸಿ,  ಬ್ಯಾವರ್ಸಿ ರಂಡೆ ಮಗ ಎಂದು ಅವ್ಯಾಚ್ಯ ಶಬ್ದಗಳಿಂದ ಬೈದು, ಮುಂದಕ್ಕೆ ನೋಡಿಕೊಳ್ಳುತ್ತೇನೆಂದು  ಬೆದರಿಕೆ ಹಾಕಿ ಅಲ್ಲಿಂದ ಹೋಗಿರುತ್ತಾರೆ. ಪಿರ್ಯಾದಿದಾರರ ಮೇಲೆ ಹಲ್ಲೆ ಮಾಡಿದ ನಾಗರಾಜ ಹಾಗೂ ಸುನಿಲ್ ರವರ ಮೇಲೆ ಸೂಕ್ತ  ಕಾನೂನು  ಕ್ರಮ ಕೈಗೊಳ್ಳಬೇಕಾಗಿ ವಿನಂತಿ.

 

 

 

 

Last Updated: 13-12-2021 06:55 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080