ಅಭಿಪ್ರಾಯ / ಸಲಹೆಗಳು

Crime Reported in : Mangalore West Traffic PS   

ಪಿರ್ಯಾದು ABDUL HAMEED ದಾರರಿಗೆ ಬಂದ ಮಾಹಿತಿಯಂತೆ ದಿನಾಂಕ:12-02-2022ರಂದು 19:00 ಗಂಟೆಯ ವೇಳೆಗೆ ಮಂಗಳೂರು ಹಳೇ ಬಂದರು ಗೇಟಿನ ಬಳಿ ರಸ್ತೆ ಅಪಘಾತವಾಗಿದ್ದು, ಈ ಅಪಘಾತಕ್ಕೆ ಕೆಎ:19:ಎಚ್ ಡಿ:3343ನೇ ದ್ವಿಚಕ್ರ ವಾಹನ ಸವಾರ ಹ್ಯಾರಿಸ್ ಎಂಬವರು ಸಹ ಸವಾರನಾಗಿ ಸರ್ಫ್ರಾಜ್ ಎಂಬವರನ್ನು ಕುಳ್ಳಿರಿಸಿಕೊಂಡು  ಮಂಗಳೂರು ಮೀನಿನ ಧಕ್ಕೆ ಕಡೆಯಿಂದ ಹಳೇ ಬಂದರು ಕಡೆಗೆ ಸಾಗುವ ಸಾರ್ವಜನಿಕ ರಸ್ತೆಯಲ್ಲಿ ನಿರ್ಲ ಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದುದಾರರಿಗೆ ನೋಡಿ ಪರಿಚಯವಿರುವ ವೃದ್ಧ ಬಿಕ್ಷುಕನಿಗೆ ಡಿಕ್ಕಿ ಪಡಿಸಿರುವುದೇ ಕಾರಣವಾಗಿದ್ದು, ಈ ಘಟನೆಯ ಪರಿಣಾಮ ವೃದ್ಧ ಬಿಕ್ಷುಕನ ತಲೆಗೆ ತೀವ್ರ ತರಹದ ಗಾಯವಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವೃದ್ಧ ಬಿಕ್ಷುಕ ಚಿಕಿತ್ಸೆಗೆ ಸ್ಪಂಧಿಸದೇ ಮೃತಪಟ್ಟಿರುವುದಾಗಿದೆ. ಅಲ್ಲದೇ ಈ ಘಟನೆಯಲ್ಲಿ ಸಹ ಸವಾರ ಸರ್ಫ್ರಾಜ್ ಎಂಬವರ ಎಡಭುಜಕ್ಕೆ ಗುದ್ದಿದ ಮತ್ತು ತರಚಿದ ನಮೂನೆಯ ಗಾಯವಾಗಿರುವುದಾಗಿದೆ ಎಂಬಿತ್ಯಾದಿ.

 

Crime Reported in Mangalore East PS        

ಪಿರ್ಯಾದಿ Manukumar ರವರು ಕೊಡಗು ಜಿಲ್ಲೆಯ ಸೋಮವಾರಪೇಟೆ ವಾಸಿಯಾಗಿದ್ದು,ಪಿರ್ಯಾದಿದಾರರ ತಂಗಿ ಕುಮಾರಿ ಮೇಘಶ್ರೀ (20) ರವರು ಮಂಗಳೂರಿನ ಖಾಸಗೀ ಕಾಲೇಜಿನಲ್ಲಿ ಬಿ.ಎಸ್.ಸಿ ನರ್ಸಿಂಗ್ ಕೋರ್ಸ್ ಮಾಡುತ್ತಿದ್ದು,ಮಂಗಳೂರು ನಗರದ ಕಂಕನಾಡಿ ಬೈಪಾಸ್ ರಸ್ತೆಯಲ್ಲಿರುವ ಲೇಡೀಜ್ ಹಾಸ್ಟೇಲ್ ನಲ್ಲಿ ತಂಗುತ್ತಿದ್ದವರು ದಿನಾಂಕ:11.02.2022 ರಂದು ಬೆಳಿಗ್ಗಿನ ಜಾವ 6.50 ಗಂಟೆ ಸಮಯಕ್ಕೆ ಹಾಸ್ಟೇಲ್ ನಿಂದ ಹೊರಗೆ ಹೋದವರು ಕಾಲೇಜಿಗೂ ಹೋಗದೆ  ವಾಪಸ್ಸು ಹಾಸ್ಟೇಲ್ ಗೂ ಬಾರದೆ ,ಮನೆಗೂ ಹೋಗದೆ  ಕಾಣೆಯಾಗಿದ್ದು ಪಿರ್ಯಾದಿದಾರರು ಆಕೆಯ ಸ್ನೇಹಿತರಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದ್ದಲ್ಲಿ ಈ ವರೆಗೂ ಯಾವುದೇ ಮಾಹಿತಿ ದೊರೆಯದೆ ಇದ್ದುದರಿಂದ ಈ ದಿನ ಕಾಣೆಯಾದ ತನ್ನ ತಂಗಿಯನ್ನು ಪತ್ತೆ ಮಾಡಿಕೊಡಬೇಕು ಎಂಬಿತ್ಯಾದಿಯಾಗಿರುತ್ತದೆ.

ಚಹರೆ:

ಹೆಸರು:ಮೇಘಶ್ರೀ ಹೆಚ್.ಸಿ

ಪ್ರಾಯ :20 ವರ್ಷ

ಜಾತಿ: ಗೌಡ

ಮೈ ಬಣ್ಣ:ಬಿಳಿ ಮೈಬಣ್ಣ ಸಾಧಾರಣ ಶರೀರ

ಎತ್ತರ :4’4 ಅಡಿ

ಭಾಷೆ:ತುಳು,ಕನ್ನಡ,ಇಂಗ್ಲೀಷ್,ಮಲಿಯಾಳಿ,

ಬಟ್ಟೆ:ಕಪ್ಪು ಮತ್ತು ಬಿಳಿಬಣ್ಣದಲ್ಲಿ ಅಡಗೆರೆಗಳು ಇರುವ  ಉದ್ದನೆಯ ಪ್ರಾಕ್,

 

Crime Reported in Mangalore North PS                                   

ಪಿರ್ಯಾದಿ GURAPPA KANTHI ದಾರರು ಸಿಬ್ಬಂದಿಯೊಂದಿಗೆ ದಿನಾಂಕ 13.02.2022 ರಂದು ಬೆಳಗ್ಗೆ 09:00 ಗಂಟೆಯಿಂದ ರೌಂಡ್ಸ್ ಕರ್ತವ್ಯದಲ್ಲಿರುವಾಗ 10.00 ಗಂಟೆ ಸಮಯಕ್ಕೆ ಮಂಗಳೂರು ನಗರದ ಸೆಂಟ್ರಲ್ ಮಾರ್ಕೆಟ್  ಬಳಿ ಓರ್ವ ವ್ಯಕ್ತಿ ಯಾವುದೋ ಅಮಲು ಪದಾರ್ಥ ಸೇವಿಸಿ ತೂರಾಡುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದು, ಅವನನ್ನು ನಿಲ್ಲಿಸಿ ಅವನ ಹೆಸರು ವಿಳಾಸ ಕೇಳಲಾಗಿ ಇಬ್ರಾಹಿಂ ಬಾತೀಶ್ (20) ವಾಸ: ರೆಂಜಾಡಿ, ಕಲ್ಪಾದಿ, ಕೋಣಾಜೆ ಗ್ರಾಮ, ದೇರಳಕಟ್ಟೆ ಮಂಗಳೂರು ಎಂದು ತಿಳಿಸಿರುತ್ತಾನೆ. ವಿಚಾರಿಸಲಾಗಿ  ಅಮಲು ಪದಾರ್ಥವಾದ ಗಾಂಜಾ ಸೇದಿರುವುದಾಗಿ ತಿಳಿಸಿರುತ್ತಾನೆ. ಈತನನ್ನು ಎ.ಜೆ ಆಸ್ಪತ್ರೆ  ಕುಂಟಿಕಾನ, ಮಂಗಳೂರು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಸಾಣೆಗೆ ಒಳಪಡಿಸಿ ವೈದ್ಯರು ನೀಡಿದ ವರದಿಯನ್ನು ಪರಿಶೀಲಿಸಿ ನೋಡಲಾಗಿ ಇಬ್ರಾಹಿಂ ಬಾತೀಶ್ (20) ಎಂಬಾತನು ಅಮಲು ಪದಾರ್ಥವಾದ ಗಾಂಜಾ ಸೇವನೆ ಮಾಡಿರುವುದು ವೈದ್ಯಕೀಯ ವರದಿಯಿಂದ ದೃಡಪಟ್ಟಿರುವುದರಿಂದ ಆತನ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

 

Crime Reported in CEN Crime PS

ದಿನಾಂಕ 14-02-2022 ರಂದು ಪಿ.ಎಸ್.ಐ ಲತಾ ರವರು  ಠಾಣೆಯಲ್ಲಿರುವಾಗ 11-00 ಗಂಟೆಗೆ ಠಾಣಾ ಹೆಚ್ ಸಿ ದೂರವಾಣಿ ಕರೆ ಮಾಡಿ ಮಂಗಳೂರು ನಗರದ ಕೊಡಿಕಲ್ ಸರಕಾರಿ ಶಾಲೆಯ ಬಳಿ ಸಾರ್ವಜನಿಕ ರಸ್ತೆಯಲ್ಲಿ ಯಾವನೋ ಒಬ್ಬ ಯುವಕ ಅಮಲು ಪದಾರ್ಥ ಸೇವಿಸಿ ನಶೆಯಲ್ಲಿ ರಸ್ತೆಯಲ್ಲಿ ಓಡಾಡುತ್ತಿರುವ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾನೆ ಎಂಬುವುದಾಗಿ ಬಾತ್ಮಿದಾರರಿಂದ ಮಾಹಿತಿ ಬಂದಿರುತ್ತದೆ ಎಂಬುವುದಾಗಿ ತಿಳಿಸಿದಂತೆ ಸ್ಥಳಕ್ಕೆ ತೆರಳಿ ಆಪಾದಿತ ವರ್ಶೀತ್ (21) ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ವೈದ್ಯರು ಆಪಾದಿತನು ಗಾಂಜಾ ಸೇವನೆ ಮಾಡಿರುವ ಬಗ್ಗೆ ನೀಡಿದ ದೃಡ ಪತ್ರದ ಆಧಾರದಲ್ಲಿ ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 14-02-2022 07:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080