ಅಭಿಪ್ರಾಯ / ಸಲಹೆಗಳು

Crime Reported in Moodabidre PS

ಪಿರ್ಯಾದಿ SHIVASHANKAR PAI ದಾರರ ಚಿಕ್ಕಪ್ಪನ ಮಗನಾದ ಟಿ ಸದಾನಂದ ಪೈ ರವರು ದಿನಾಂಕ:15-03-2022 ರ 10.30 ಗಂಟೆಗೆ ಕೆಎ-19-ಈಜಿ-9871 ನೇ ಬೈಕ್‌ನಲ್ಲಿ ಮನೆಯಿಂದ ಮೂಡುಬಿದ್ರೆಯ ಕಡೆಗೆ ಬರುತ್ತಿರುವಾಗ ತೋಡಾರು ಮಸೀದಿ ಬಳಿ ತಲುಪುತ್ತಿದ್ದಂತೆ ಸಮಯ ಸುಮಾರು 10.55 ಗಂಟೆಗೆ ಎದುರಿನಿಂದ ಅಂದರೆ ಮೂಡಬಿದ್ರೆ ಕಡೆಯಿಂದ ಬಂದತಹ ಕೆಎ-20-ಜಡ್-9852 ನೇ ಕಾರಿನ ಚಾಲಕ ಅತೀ ವೇಗ ಹಾಗೂ ಅಜಾಗರುಕತೆಯಿಂದ  ಚಾಲಯಿಸಿಕೊಂಡು ಬಂದು  ಬೈಕ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಚಿಕ್ಕಪ್ಪನ ಮಗನಾದ ಟಿ ಸದಾನಂದ ಪೈ ರವರು ರಸ್ತೆಗೆ ಬಿದ್ದ ಪರಿಣಾಮ ತಲೆ, ಕೈ, ಕಾಲುಗಳಿಗೆ ಗಾಯಗಳಾಗಿ ಮತಿಬಾರದ ಸ್ಥತಿಯಲ್ಲಿರುತ್ತಾರೆ, ಅದ್ದರಿಂದ ಈ ಅಪಘಾತ ಸಂಬವಿಸಲು  ಕೆಎ-20-ಜಡ್-9852 ಕಾರಿನ ಚಾಲಕನ ಅತೀ ವೇಗ ಹಾಗೂ ಅಜಾಗರುಕತೆ ಕಾರಣವಾಗಿರುತ್ತದೆ ಎಂಬಿತ್ಯಾದಿ ಪಿರ್ಯಾದಿಯಾ ಸಾರಾಂಶವಾಗಿದೆ.

 

Crime Reported in Mangalore East Traffic PS

ದಿನಾಂಕ:14-03-2022 ರಂದು ಪಿರ್ಯಾದಿದಾರರಾದ  ಚೇತನ್ ರವರು ತಮ್ಮ  ಸ್ನೇಹಿತನನ್ನು  ಕೂಳೂರಿನಲ್ಲಿ ಬಿಟ್ಟು ವಾಪಾಸು ಮನೆಯ ಕಡೆಗೆ ಹೊರಟು ತಮ್ಮ ಬಾಬ್ತು ಸ್ಕೂಟರ ನಂಬ್ರ  KA-19-EV-2319  ನೇದನ್ನು ಸವಾರಿ ಮಾಡಿಕೊಂಡು  ಕೊಟ್ಟಾರ ಕಡೆಯಿಂದ ಕುಂಟಿಕಾನ ಕಡೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಡಾಮಾರು ರಸ್ತೆಯಲ್ಲಿ ಬರುತ್ತಾ ರಾತ್ರಿ ಸುಮಾರು 11.20 ಗಂಟೆಗೆ  ಕುಂಟಿಕಾನ ಎ.ಜೆ ಆಸ್ಪತ್ರೆಯ ಮುಖ್ಯ ಗೇಟಿನ ಎದುರುಗಡೆ ಬಂದು ತಲುಪುತ್ತಿದ್ದಂತೆ ಪಿರ್ಯಾದಿದಾರರ ಸ್ಕೂಟರಿನ ಎದುರಿನಿಂದ ಅಂದರೆ ಕೆ ಪಿ ಟಿ ಕಡೆಯಿಂದ ಕುಂಟಿಕಾನ ಕಡೆಗೆ ಹಾದು ಹೋಗಿರುವ ರಾ ಹೆ 66 ರ ಡಾಮಾರು ರಸ್ತೆಯಲ್ಲಿ   KA-19-EJ-3163 ನಂಬ್ರದ  ಮೋಟಾರ್  ಸೈಕಲನ್ನು ಅದರ ಸವಾರ ಮಹೇಶ್ ಮಿಲನ್ ಎಂಬಾತನು ತನ್ನ ಹಿಂಬದಿ ಸಹಸವಾರನೋರ್ವನನ್ನು ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ  ಅಪಾಯಕಾರಿಯಾಗುವ ರೀತಿಯಲ್ಲಿ ಸವಾರಿ ಮಾಡಿಕೊಂಡು ಬಂದು ಕೆಪಿಟಿ ಕಡೆಯಿಂದ ಕುಂಟಿಕಾನ ಕಡೆಗೆ ಹಾದು ಹೋಗಿರುವ ರಾ ಹೆ 66 ಡಾಮಾರು ರಸ್ತೆಯನ್ನು  ರಸ್ತೆ ಮಧ್ಯದ ಡಿವೈಡರ್ ಕಡೆಯಿಂದ ಸೂರ್ಯ ರಾಯಲ್ ರೆಸಿಡೆನ್ಸಿ ಹೋಟೆಲ್ ಕಡೆಗೆ ಕುಂಟಿಕಾನ  ಪ್ಲೈಓವರ್ ಪ್ರಾರಂಭವಾಗುವ ಸ್ಥಳದಲ್ಲಿ ರಸ್ತೆ ದಾಟುತ್ತಿದ್ದ ಪಾದಚಾರಿ ಭೋಲಾ ಎಂಬವರಿಗೆ ಡಿಕ್ಕಿ ಪಡಿಸಿದ್ದು, ಡಿಕ್ಕಿಯ ಪರಿಣಾಮ ಪಾದಚಾರಿ ಭೋಲಾ ರವರು ಡಾಮಾರು ರಸ್ತೆಗೆ ಬಿದ್ದು ಎಡಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಹಾಗೂ ಬಲ ಹುಬ್ಬಿನ ಬಳಿ ಚರ್ಮ ಹರಿದ ರಕ್ತಗಾಯವಾದವರನ್ನು ಚಿಕಿತ್ಸೆಯ ಬಗ್ಗೆ  ಹತ್ತಿರದ ಎ. ಜೆ ಆಸ್ಪತ್ರೆಗೆ ಸಾಗಿಸಲಾಗಿದ್ದು,ಗಾಯಾಳುವಿನ ವಾರಸುದಾರರು ಯಾರೂ ಮಂಗಳೂರಿನಲ್ಲಿ ಇಲ್ಲದೇ ಇರುವುದರಿಂದ ಗಾಯಾಳು ತಿಳಿಸಿದಂತೆ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿ, ಒಳರೋಗಿಯಾಗಿ ಚಿಕಿತ್ಸೆಯಲ್ಲಿ ಇರುವುದಾಗಿದೆ.  ಗಾಯಾಳುವಿನ ವಾರಸುದಾರರು ಯಾರೂ ಮಂಗಳೂರಿನಲ್ಲಿ ಇಲ್ಲದೇ ಇರುವ ವಿಷಯ ತಿಳಿದು ಪಿರ್ಯಾದಿದಾರರು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ. ಈ ಬಗ್ಗೆ  ಮೋಟಾರ್ ಸೈಕಲಿನ ಸವಾರ ಮಹೇಶ್ ಮಿಲನ್ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 16-03-2022 03:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080