ಅಭಿಪ್ರಾಯ / ಸಲಹೆಗಳು

Crime Reported in Mangalore North PS             

ಪಿರ್ಯಾದಿದಾರರಾದ ಕೆ .ನಾಮದೇವ ಶೆಣೈ ಎಂಬುವರ ಮಗನಾದ  ಅಶೋಕ ಶೆಣೈ ಅವರು ಬಂದರ್ ನ ಅಜೀಜುದ್ದಿನ್ ರಸ್ತೆಯಲ್ಲಿರುವ ಸ್ಕೂಲ್ ಬುಕ್  ಕಂಪನಿಯಲ್ಲಿ ಹೆಲ್ಪರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ ಪಿರ್ಯಾದಿದಾರರ ಮಗ ಅಶೋಕ ಶೆಣೈ ರವರು ಎಂದಿನಂತೆ ದಿನಾಂಕ 14.05.2022 ರಂದು ಬೆಳ್ಳಗ್ಗೆ 08.00 ಗಂಟೆಗೆ ಕೆಲಸಕ್ಕೆ ಹೋಗಿ ಬರುವುದಾಗಿ ತಿಳಿಸಿ ಸ್ಕೂಲ್ ಬುಕ್ ಆಫ್ ಕಂಪನಿಗೆ ಹೋಗಿದ್ದು 11.30 ಗಂಟೆ ಸುಮಾರಿಗೆ ಶಾಫ್ ನಲ್ಲಿ ಯಾರಿಗೂ ತಿಳಿಸದೇ ಹೊರಟು ಹೋಗಿರುತ್ತಾರೆ . ಕೆಲಸಕ್ಕೆಂದು ಹೋದ ಅಶೋಕ ಶೆಣೈ ರವರು ಈ ತನಕ ಮನೆಗೆ ಬಾರದೇ ಇದ್ದು ಬಸ್ ನಿಲ್ದಾಣ,ರೈಲ್ವೈ ನಿಲ್ದಾಣದಲ್ಲಿ ಹುಡುಕಾಡಿ ಮತ್ತು ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಈ ವರೆಗೂ ಪಿರ್ಯಾದಿದಾರರ ಮಗ ಪತ್ತೆಯಾಗಿರುವುದಿಲ್ಲ ಕಾಣೆಯಾದ ಪಿರ್ಯಾದಿದಾರರ ಮಗನನ್ನು ಪತ್ತೆ ಹಚ್ಚಬೇಕಾಗಿ ಎಂಬಿತ್ಯಾದಿ ಸಾರಾಂಶ.

ಕಾಣೆಯಾದ ಅಶೋಕ ಶೆಣೈ ಚಹರೆ ಗುರುತುಗಳು.

1) ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ,ಕಪ್ಪು ಬಿಳಿ ಮಿಶ್ರಿತ ತಲೆ ಕೂದಲು ನೆತ್ತಿಯ ಮೇಲೆ ಕೂದಲೂ ಇರುವುದಿಲ್ಲ

2) ಪ್ರಾಯ:43 ವರ್ಷ ,ಎತ್ತರ- 5 .10 ಅಡಿ

3) ಕನ್ನಡ, ತುಳು ,  ಹಿಂದಿ,ಕೊಂಕಣಿ ಮಾತಾಡುತ್ತಾನೆ 

04) ವಿದ್ಯಾಬ್ಯಾಸ: ಪಿ ಯು ಸಿ

 

Crime Reported in Traffic South Police Station           

ಪಿರ್ಯಾದಿ AKBAR ALI ABDULLA CHEMBUGUDDE ದಾರರು ದಿನಾಂಕ:15-05-2022 ರಂದು ಅವರ ಬಾಬ್ತು ಸ್ಕೂಟರ್ ನಂಬ್ರ KA-19-HC-1619 ನೇದರಲ್ಲಿ ಚೆಂಬುಗುಡ್ಡೆ ಕಡೆಯಿಂದ ಮದಕ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 03:20 ಗಂಟೆಗೆ ಮಂಗಳೂರು ತಾಲ್ಲೂಕು ಮುನ್ನೂರು ಗ್ರಾಮದ ಕುತ್ತಾರು ಮಜಲ್ ತೋಟ ಎಂಬಲ್ಲಿಗೆ ತಲುಪುತ್ತಿದ್ದಂತೆ ಅವರ ಎದುರಿನಿಂದ ಅಂದರೆ ಮದಕ ಕಡೆಯಿಂದ ಕುತ್ತಾರು ಕಡೆಗೆ ಬರುತ್ತಿದ್ದ ಮಹೇಂದ್ರ ಜೀತೋ ಟೆಂಪೋ ನಂಬ್ರ KA-19-AD-6718 ನೇದನ್ನು ಅದರ ಚಾಲಕ ಮೊಹಮ್ಮದ್ ರಿಯಾಜ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಆತನು ಚಲಾಯಿಸುತ್ತಿದ್ದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದಾಗ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ಹುಡುಗ  ಮೊಹಮ್ಮದ್  ರಾಜೀಕ್ ನು ಒಮ್ಮೆಲೆ ತಲೆ ಹೊರ ಹಾಕಿದಾಗ ಆತನ ತಲೆಯು ರಸ್ತೆ ಬದಿಯಲ್ಲಿದ್ದ ವಿಧ್ಯುತ್  ಕಂಬಕ್ಕೆ ಡಿಕ್ಕಿಯಾಗಿರುತ್ತದೆ, ಈ ಅಪಘಾತದಿಂದ    ಮೊಹಮ್ಮದ್  ರಾಜೀಕ್  ನ ತಲೆ ಗೆ ಗಂಬೀರ ಸ್ವರೂಪದ ರಕ್ತ ಗಾಯವಾಗಿರುತ್ತದೆ ಕೂಡಲೆ ಅಲ್ಲಿ ಸೇರಿದ್ದ ಸಾರ್ವಜನಿಕರು ಹಾಗೂ ಜೀತೋ ಟೆಂಪೋ  ಚಾಲಕ ಸೇರಿ ಅದೇ ವಾಹನದಲ್ಲಿ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಯೆನೆಪೋಯಾ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ, ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 16-05-2022 05:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080