ಅಭಿಪ್ರಾಯ / ಸಲಹೆಗಳು

Crime Reported in Konaje PS

1) ದಿನಾಂಕ 17-01-2022 ರಂದು ಪಿರ್ಯಾದಿ Sharanappa Bhandari ದಾರರು  ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಂಜೆ ಸುಮಾರು 11-00 ಗಂಟೆಗೆ  ಬಂಟ್ವಾಳ ತಾಲೂಕು  ನರಿಂಗಾನ ಗ್ರಾಮದ ಕೆದಂಬಾಡಿ ಸೈಟ್  ರಸ್ತೆ ಬದಿಯಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆರೋಪಿತನು ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಸಿಬ್ಬಂದಿಯವರ ಸಹಾಯದಿಂದ ಆರೋಪಿಯನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿ ಗಾಂಜಾ ಎಂಬ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂಬಿತ್ಯಾದಿ.

2) ದಿನಾಂಕ 17-01-2022 ರಂದು ಪಿರ್ಯಾದಿ Sharanappa Bhandari ದಾರರು  ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಂಜೆ ಸುಮಾರು 12-30 ಗಂಟೆಗೆ  ಬಂಟ್ವಾಳ ತಾಲೂಕು  ನರಿಂಗಾನ ಗ್ರಾಮದ ಕಲ್ಲರಕೋಡಿ  ರಸ್ತೆ ಬದಿಯಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆರೋಪಿತನು ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಸಿಬ್ಬಂದಿಯವರ ಸಹಾಯದಿಂದ ಆರೋಪಿಯನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂಬಿತ್ಯಾದಿ.

Crime Reported in Traffic South Police Station

ದಿನಾಂಕ   16-01-2022 ರಂದು ಪಿರ್ಯಾದಿ NAVEEN KUMAR ದಾರು  ಮೋಟಾರ್  ಸೈಕಲ್   ನಂಬರ್  KA-19-ER-3157  ನೇದರಲ್ಲಿ  ಸವಾರರಾಗಿಯೂ ಮತ್ತು ಅವರ  ಸಂಬಂಧಿಯಾದ  ರಮೇಶ್ ಮತ್ತು ಮಗು ಕೀರ್ತನ್ ರವರನ್ನು  ಸಹಸವಾರರನ್ನಾಗಿ  ಕುಳ್ಳಿರಿಸಿಕೊಂಡು  ಅವರ ಮನೆಯಾದ ಬಜಾಲ್  ಪಾಂಡೆಲ್  ಗುಡ್ಡೆ ಕಡೆಯಿಂದ  ಪಡೀಲ್  ಕಡೆಗೆ  ಮೋಟಾರ್  ಸೈಕಲ್ ನ್ನು  ಸವಾರಿ ಮಾಡಿಕೊಂಢು   ಹೋಗುತ್ತಿರುವ ಸಮಯ ಸುಮಾರು   17:20 ಗಂಟೆಗೆ  ಕರ್ಮಾರ್  ಪಳ್ಳಕೆರೆ  ಎಂಬಲ್ಲಿಗೆ ತಲುಪುತಿದ್ದಂತೆ ಪಡೀಲ್  ಕಡೆಯಿಂದ  ನೊಂದಣಿ ಸಂಖ್ಯೆ   KA-02-MK-6692  ನೇ ಕಾರನ್ನು  ಅದರ   ಚಾಲಕ ಅಜ್ಮಲ್  ಎಂಬಾತನು  ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರು  ಸವಾರಿ  ಮಾಡುತ್ತಿದ್ದ ಮೋಟಾರ್   ಸೈಕಲ್ ಗೆ  ಡಿಕ್ಕಿ ಪಡಿಸಿದ  ಪರಿಣಾಮ ಪಿರ್ಯಾದಿದಾರರು ಮತ್ತು  ಸಹಸವಾರರಿಬ್ಬರು   ಮೋಟಾರ್   ಸೈಕಲ್   ಸಮೇತ  ಡಾಮಾರು   ರಸ್ತೆಗೆ ಬಿದ್ದರು .ಈ ಅಪಘಾತದಿಂದ  ಪಿರ್ಯಾದಿದಾರ ತಲೆಗೆ  ಮತ್ತು ಕಾಲುಗಳಿಗೆ ಗುದ್ದಿದ ರೀತಿಯ ಗಾಯ ಮತ್ತು  ಕೀರ್ತನ್  ಗೆ ಹೊಟ್ಟೆ ಕೈ ಕಾಲುಗಳಿಗೆ ತರಚಿದ ರೀತಿಯ  ಗಾಯ   ಹಾಗೂ   ರಮೇಶ್ ರವರಿಗೆ  ಎಡಕಾಲಿನ  ತೊಡೆಗೆ  ಗುದ್ದಿದ  ರೀತಿಯ  ಗಂಭೀರ ಸ್ವರೂಪದ  ಗಾಯವಾಗಿದ್ದು ಕೂಡಲೇ  ಗಾಯಾಳುಗಳನ್ನು   ಚಿಕಿತ್ಸೆ  ಬಗ್ಗೆ  ಅಲ್ಲಿ ಸೇರಿದ ಸಾರ್ವಜನಿಕರು  ಆಟೋರಿಕ್ಷಾವೊಂದರಲ್ಲಿ   ಕಂಕನಾಡಿ   ಫಾದರ್  ಮುಲ್ಲರ್  ಆಸ್ಪತ್ರೆಗೆ ಕಡೆದುಕೊಂಡು   ಹೋಗಿ  ದಾಖಲು ಮಾಡಿರುತ್ತಾರೆ  ಎಂಬಿತ್ಯಾದಿ .

           

ಇತ್ತೀಚಿನ ನವೀಕರಣ​ : 17-01-2022 06:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080