ಅಭಿಪ್ರಾಯ / ಸಲಹೆಗಳು

Crime Reported in Mangalore East Traffic PS                                                        

ದಿನಾಂಕ: 19-11-2021 ರಂದು ರಾತ್ರಿ ಸುಮಾರು 11-45 ಗಂಟೆಗೆ ಪಿರ್ಯಾದಿದಾರರಾದ ಪ್ರಶಾಂತ್ ರವರು ರೂಮಿನಲ್ಲಿದ್ದ ಸಮಯ ಸ್ನೇಹಿತ ನಿತೇಶ್ ರವರು ಮೊಬೈಲ್ ಫೋನಿಗೆ ಕರೆ ಮಾಡಿ ತನ್ನ ಚಿಕ್ಕಪ್ಪನ ಮಗ ಶ್ರೀಜಿತ್ ಎಂಬವರಿಗೆ ಮಂಗಳೂರಿನ ಎ.ಜೆ ಆಸ್ಪತ್ರೆಯ ಬಳಿ ರಸ್ತೆ ಅಪಘಾತವಾಗಿದ್ದು ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು ಹೋಗಿ ನೋಡುವಂತೆ ತಿಳಿಸಿದಂತೆ ಪಿರ್ಯಾದಿದಾರರು ಎ.ಜೆ ಆಸ್ಪತ್ರೆಗೆ ಹೋಗಿದ್ದು, ಅಲ್ಲಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ ಅಟೋ ರಿಕ್ಷಾ ಚಾಲಕ ದಿನೇಶ್ ರವರಲ್ಲಿ ವಿಚಾರಿಸಿಕೊಂಡಲ್ಲಿ ದಿನಾಂಕ: 19-11-2021 ರಂದು ದಿನೇಶ್ ರವರು ತನ್ನ ಅಟೋ ರಿಕ್ಷಾವನ್ನು ಚಲಾಯಿಸಿಕೊಂಡು ಎ.ಜೆ ಆಸ್ಪತ್ರೆ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಬರುತ್ತಾ ಬಾರೇಬೈಲ್ ಕ್ರಾಸ್ ಬಳಿ ತಲುಪುತ್ತಿದ್ದಂತೆ ರಾತ್ರಿ ಸಮಯ ಸುಮಾರು 11-25 ಗಂಟೆಗೆ KL-14-V-0262 ನಂಬ್ರದ ಮೋಟಾರು ಸೈಕಲಿನಲ್ಲಿ ಅದರ ಸವಾರ  ಹಿಂಬದಿ ಸಹಸವಾರನನ್ನು ಕುಳ್ಳಿರಿಸಿಕೊಂಡು ಕೊಟ್ಟಾರ ಚೌಕಿ ಕಡೆಯಿಂದ ಕೆ.ಪಿ.ಟಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 66ನೇ ಡಾಮಾರು ರಸ್ತೆಯಲ್ಲಿ ಹೋಗುತ್ತಾ ಬಾರೇಬೈಲ್ ಕ್ರಾಸ್ ಬಳಿ ತೀವ್ರ ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತಿದ್ದರಿಂದ ನೀರಿರುವ ಸ್ಥಳದಲ್ಲಿ ಮೋಟಾರು ಸೈಕಲನ್ನು ನಿಧಾನಗೊಳಿಸಿದ ಸಮಯ ಅದೇ ರಸ್ತೆಯಲ್ಲಿ ಮೋಟಾರು ಸೈಕಲಿನ ಹಿಂಬದಿಯಿಂದ ಬರುತ್ತಿದ್ದ ಕಾರೊಂದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು  ಮೋಟಾರು ಸೈಕಲಿನ ಹಿಂಬದಿಗೆ ಢಿಕ್ಕಿಪಡಿಸಿದ ಪರಿಣಾಮ, ಮೋಟಾರು ಸೈಕಲಿನಲ್ಲಿದ್ದ ಸವಾರ ಮತ್ತು ಸಹಸವಾರ ಇಬ್ಬರೂ ಮೋಟಾರು ಸೈಕಲ್ ಸಮೇತ ರಾ.ಹೆ 66ನೇ ಡಾಮಾರು ರಸ್ತೆಗೆ  ಬಿದ್ದಿದ್ದು, ಅಪಘಾತಪಡಿಸಿದ ಕಾರು ಚಾಲಕ ಕಾರನ್ನು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದು, ಸಾರ್ವಜನಿಕರೋರ್ವರು ಅಪಘಾತಪಡಿಸಿದ ಕಾರನ್ನು ಬೆನ್ನಟ್ಟಿ ಕಾರಿನ ನೊಂದಣಿ ಸಂಖ್ಯೆಯನ್ನು ನೋಡಲಾಗಿ KA-36-D-0001 ನಂಬ್ರದ ಕಾರು ಆಗಿರುವುದಾಗಿ ತಿಳಿಸಿರುತ್ತಾರೆ. ಮೋಟಾರು ಸೈಕಲ್ ಸವಾರನ ಮುಖಕ್ಕೆ ಮತ್ತು ಬಲ ಭುಜಕ್ಕೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಹೆಸರು ಶ್ರೀಜಿತ್ ಎಂದು ತಿಳಿದು ಬಂದಿದ್ದು ಚಿಕಿತ್ಸೆಯಲ್ಲಿರುವುದಾಗಿ ಹಾಗೂ ಹಿಂಬದಿ ಸಹಸವಾರನ ಹೆಸರು ಹನಿ ಅಬ್ದುನ್ನಾಸರ್ ಎಂಬುದಾಗಿ ತಿಳಿದು ಬಂದಿದ್ದು ಆತನಿಗೆ ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿಮಧ್ಯೆ ಮೃತಪಟ್ಟಿದ್ದಾಗಿ ತಿಳಿಸಿದ್ದು, ಈ ಬಗ್ಗೆ ಅಪಘಾತಪಡಿಸಿದ ಕಾರು ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

Crime Reported in Traffic North PS

ದಿನಾಂಕ: 20-11-2021 ರಂದು ಬೆಳಿಗ್ಗೆ ಸಮಯ ಸುಮಾರು 08:15 ಗಂಟೆಗೆ ಪಿರ್ಯಾದಿ Basavaraj Hasekuri ದಾರರ ತಂದೆ ಅಯ್ಯಪ್ಪ 62 ವರ್ಷ ಎಂಬವರು ತಡಂಬೈಲ್ ನ ಸುಪ್ರಿಂ ಮಾಲ್ ಬಳಿ ಸುರತ್ಕಲ್ ಕಡೆಯಿಂದ ಮುಲ್ಕಿ ಕಡೆಗೆ ಹಾದು ಹೋಗುವ ರಾ ಹೆ 66 ನೇಯದನ್ನು ದಾಟಿ ಮುಲ್ಕಿಯಿಂದ ಸುರತ್ಕಲ್ ಕಡೆಗೆ ಹೋಗುವ ಹೆದ್ದಾರಿಯ ಅಂಚಿನ ಬಳಿ ಪ್ರಶಾಂತ್ ಎಂಟರ್ ಪ್ರೈಸಸ್ ಎದುರು ತಲುಪಿದಾಗ KA-19-EQ-3054 ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ಮೋಹನ್ ಎಂಬಾತನು ಸುರತ್ಕಲ್ ಕಡೆಯಿಂದ ಮುಲ್ಕಿ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಂದೆ ಅಯ್ಯಪ್ಪ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ರಸ್ತೆಗೆ ಬಿದ್ದು, ಅವರ ಎಡ ಕಾಲಿನ ಕೋಲು ಕಾಲಿನ ಬಳಿ ಮತ್ತು ಬಲ ಕಾಲಿನ ತೊಡೆಯ ಬಳಿ ಮೂಳೆ ಮುರಿತದ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದು, ಹಾಗೂ ಬಲ ಹಣೆ, ಬಲ ಕೈ ಮುಂಗೈಯಲ್ಲಿ ರಕ್ತ ಗಾಯವಾಗಿ ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ

Crime Reported in Traffic South PS

ದಿನಾಂಕ :20-11-2021 ರಂದು  ಪಿರ್ಯಾದಿ ISMAHIL K ದಾರರು ಕೆಲಸದ ನಿಮಿತ್ತ ಕಂಕನಾಡಿ ಗೆ ತೆರೆಳಲು ಅವರ ಬಾಬ್ತು ಬೈಕ್ ನಂಬ್ರ: KA-1-HF-4623 ನೇದನ್ನು ಅವರ ಮನೆಯಿಂದ ದೇರಳಕಟ್ಟೆ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವ ಸಮಯ ಸುಮಾರು ಬೆಳಿಗ್ಗೆ 7-30 ಗಂಟೆಗೆ ನಾಟೆಕಲ್ಲು ಜಂಕ್ಷನ್ ಕ್ಕಿಂತ ಸ್ವಲ್ಪ ಹಿಂದೆಯಿರುವ ಬಸ್ಸು ತಂಗುದಾಣ ಹತ್ತಿರ  ತಲುಪಿದಾಗ ಪಿರ್ಯಾದಿದಾರರ ಎದುರಿನಿಂದ ಅಂದರೆ ದೇರಳಕಟ್ಟೆ ಕಡೆಯಿಂದ ಮಂಜನಾಡಿ ಕಡೆಗೆ ಬರುತ್ತಿದ್ದ ಕಾರು ನಂಬ್ರ KA-19-MH-0712 ನೇದರ ಚಾಲಕಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಕಾರನ್ನು ಚಲಾಯಿಸಿಕೊಂಡು ಬಂದು  ಓಮ್ಮೇಲೆ ತಲಪಾಡಿಗೆ ಕಡೆಗೆ ಹೋಗಲು ಕಾರನ್ನು ಬಲಕ್ಕೆ ತಿರುಗಿಸಿ ನೇರವಾಗಿ ಬರುತ್ತಿದ್ದ ಪಿರ್ಯಾದಿದಾರರ ಬೈಕಿನ ಬಲಬದಿಗೆ ಕಾರನ್ನು  ಡಿಕ್ಕಿ ಪಡಿಸಿ ಅಪಘಾತ ಸ್ಥಳದಿಂದ ಕಾರು ಸಮೇತ ಪರಾರಿಯಾಗಿರುತ್ತಾಳೆ ಅಪಘಾತದ ಪರಿಣಾಮ  ಪಿರ್ಯದಿದಾರರು ಬೈಕ್ ಸಮೇತ ಡಾಮಾರು ರಸ್ತೆಗೆ ಬಿದ್ದು ಅವರ ಕೈ ಕಾಲುಗಳಿಗೆ ರಕ್ತಗಾಯ ಮತ್ತು ಬಲವಾದ ಗಾಯವಾಗಿದ್ದು ಅವರನ್ನುಅಲ್ಲಿ ಸೇರಿದ ಸಾರ್ಜನಿಕರು ಆಟೋರಿಕ್ಷಾವೊಂದರಲ್ಲಿ ಚಿಕಿತ್ಸೆ ಬಗ್ಗೆ ಕಣಚೂರು ಆಸ್ಪತ್ರೆಗೆ ಕರೆದುಕೊಂಡು ಬಂದು  ದಾಖಲಿಸಿದ್ದು ಅಲ್ಲಿನ ವೈದ್ಯರು ಅವರನ್ನು ಪರೀಕ್ಷಿಸಿ ಹೊರ ರೋಗಿಯಾಗಿ ಚಿಕಿತ್ಸೆ ನೀಡಿ ಕಳುಹಿಸಿರುತ್ತಾರೆ.ಎಂಬಿತ್ಯಾದಿ.

Crime Reported in Mangalore West Traffic PS              

ದಿನಾಂಕ 19-11-2021 ರಂದು ರಾತ್ರಿ ಸಮಯ ಸುಮಾರು 07.30 ಗಂಟೆಗೆ ಬಸ್ಸ ನಂಬ್ರ ಕೆಎ19ಡಿ9663 ರೂಟ್ ನಂಬ್ರ 45 (ಸಿ) ಆಶೆಲ್ ಎಂಬ ಹೆಸರಿನ ಬಸ್ಸಿನಲ್ಲಿ ಪಿರ್ಯಾದಿ GODSON BABU ZAKARIYA ರವರ ತಂದೆ BABU ZAKARIYA (62) ರವರು ಲಾಲ್ ಭಾಗ್ ನಿಂದ ಸುರತ್ಕಲ್ ಗೆ ಬರಲು ಲಾಲ್ ಭಾಗ್ ಬಸ್ಸ್ ನಿಲ್ದಾಣದಲ್ಲಿ ಬಸ್ಸು ಹತ್ತಿದಾಗ ಬಸ್ಸನ್ನು ಅದರ ಚಾಲಕ ರಾಜೇಶ ಎಂಬುವರು ಬಸ್ಸನ್ನು ನಿರ್ಲಕ್ಷತಣದಿಂದ ಒಮ್ಮಲೇ ಚಲಾಯಿಸಿದ ಪರಿಣಾಮ ನನ್ನ ತಂದೆಯವರು ಬಸ್ಸಿನಿಂದ ಕೆಳಗೆ ರಸ್ತೆಗೆ ಬಿದ್ದು ಗಾಯಗೊಂಡವರನ್ನು ಚಿಕಿತ್ಸೆಗೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ತಂದಿದ್ದು ನನ್ನ ತಂದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರುವುದಾಗಿದೆ. ಆದುದರಿಂದ ಬಸ್ಸ ಚಾಲಕ ರಾಜೇಶ ಎಂಬುವರ ಮೇಲೆ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

Crime Reported in Moodabidre PS

ದಿನಾಂಕ: 19-11-2021 ರಂದು ಮಧ್ಯಾಹ್ನ 1.40 ಗಂಟೆಗೆ ಠಾಣಾ ಸರಹದ್ದಿನ ಮೂಡಬಿದ್ರೆ ತಾಲೂಕಿನ ವಿದ್ಯಾಗಿರಿ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಯುವಕರು ಯಾವುದೋ ಮಾಧಕ ವಸ್ತುವನ್ನು ಸೇವನೆ ಮಾಡಿರುವಂತೆ ಇರುತ್ತಾರೆ ಎಂಬುದಾಗಿ ಖಚಿತ ಮಾಹಿತಿ ದೊರಕಿದಂತೆ ಪಿರ್ಯಾದಿದಾರರಾದ ಸುದೀಪ್ ಎಂ.ವಿ ರವರು ಸಿಬ್ಬಂದಿಗಳು ಹಾಗೂ ಪಂಚರ ಸಮಕ್ಷಮದಲ್ಲಿ ಮಧ್ಯಾಹ್ನ 1.55 ಗಂಟೆಗೆ ಖಚಿತ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿ ಮಾಧಕ ವಸ್ತುವನ್ನು ಸೇವನೆ ಮಾಡಿದ್ದನ್ನೆಲ್ಲಾ ಆರೋಪಿ ಅಂಕಿತ್ ಎ ಮತ್ತು ಚಂದನ್ ಎಂ.ಎಸ್ ಎಂಬವರನ್ನು ವಶಕ್ಕೆ ಪಡೆದುಕೊಂಡು ವೈಧ್ಯಕಿಯ ತಪಾಸಣೆಗೆ ಒಳಪಡಿಸಿದ್ದಲ್ಲಿ ಆರೋಪಿತರು ಮತ್ತು ಭರಿಸುವ ಮಾಧಕ ವಸ್ತು ಸೇವನೆ ಮಾಡಿದ ಬಗ್ಗೆ ವೈಧ್ಯರು ನೀಡಿದ ದೃಡಪತ್ರದಂತೆ ಪ್ರಕರಣವನ್ನು ದಾಖಲಿಸಿಕೊಂಡು ಕ್ರಮ ಜರುಗಿಸಿಕೊಂಡಿರುವುದಾಗಿದೆ

Crime Reported in Konaje PS       

ದಿನಾಂಕ 19-11-2021 ರಂದು ಪಿರ್ಯಾದಿ Mallikarjun Biradar ದಾರರು  ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಂಜೆ ಸುಮಾರು 17-00 ಗಂಟೆಗೆ ಮಂಗಳೂರು ತಾಲೂಕು  ಮಂಜನಾಡಿ ಗ್ರಾಮದ ನಾಟೆಕಲ್  ರಸ್ತೆ ಬದಿಯಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ Mahammad Thaha, Mahammad Shakeer ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆರೋಪಿಗಳು ಗಾಂಜಾ ಎಂಬ ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಸಿಬ್ಬಂದಿಯವರ ಸಹಾಯದಿಂದ ಆರೋಪಿಯನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿ ಗಾಂಜಾ ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂಬಿತ್ಯಾದಿ.

 

 

ಇತ್ತೀಚಿನ ನವೀಕರಣ​ : 20-11-2021 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080