ಅಭಿಪ್ರಾಯ / ಸಲಹೆಗಳು

Crime Reported in : Mangalore Rural PS

ಪಿರ್ಯಾದಿದಾರರಾದ ಪ್ರೇಮನಾಥರವರು ತನ್ನ ಪತ್ನಿ ಶ್ರೀಮತಿ. ದೀಕ್ಷಿತಾ ಮತ್ತು ಮಗಳು ವೈಷ್ಣವಿ ರವರೊಂದಿಗೆ ಮಂಗಳೂರು ತಾಲೂಕು, ತಿರುವೈಲ್ ಗ್ರಾಮದ ಪರಾರಿ ರಾಜ್ ಟೈಲ್ಸ್ ಬಳಿ ವಾಸವಾಗಿದ್ದು, ಅವರ ಪತ್ನಿ ಶ್ರೀಮತಿ. ದೀಕ್ಷಿತಾ (28 ವರ್ಷ) ಎಂಬವರು ಗಂಜಿಮಠದಲ್ಲಿರುವ ಬಿಗ್ ಬ್ಯಾಗ್ ಕಂಪೆನಿಯಲ್ಲಿ ಹೆಲ್ಪರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ: 21-02-2022 ರಂದು ಮದ್ಯಾಹ್ನ ಪಿರ್ಯಾದಿದಾರರಿಗೆ ಮತ್ತು ಅವರ ಪತ್ನಿಗೆ ಕೌಟುಂಬಿಕ ವಿಚಾರದಲ್ಲಿ ಮನಸ್ತಾಪವಾಗಿ “ಬಿಗ್ ಬ್ಯಾಗ್” ಕಂಪನಿಯ ಬಳಿ  ಪರಸ್ಪರ ಮಾತಾಡಿ ಅವರೊಳಗೆ ಗಲಾಟೆಯಾಗಿದ್ದು, ಈ ಸಮಯ ಕಂಪೆನಿಯ H,R, ರವರು ಮಾತನಾಡಿಸಿ ಸರಿಪಡಿಸಿರುತ್ತಾರೆ. ನಂತರ ಸಂಜೆ 6.00 ಗಂಟೆಗೆ ಪಿರ್ಯಾದಿದಾರರು ಅವರ ಪತ್ನಿ ದೀಕ್ಷೀತಾ ರವರೊಂದಿಗೆ ಮನೆಗೆ ಬಂದು, ಪತ್ನಿಯನ್ನು ಮನೆಯಲ್ಲಿ ಬಿಟ್ಟು ಹೊರಗೆ ಹೋದವರು ವಾಪಾಸು ರಾತ್ರಿ 9.30 ಗಂಟೆಗೆ ಮನೆಗೆ ಬಂದಾಗ ದಿಕ್ಷೀತಾ ರವರು ಹತ್ತಿರದಲ್ಲಿರುವ ಅವರ ತಾಯಿಯ ಮನೆಗೆ ಸ್ನಾನಕ್ಕೆಂದು ಹೋದವರು, ತಾಯಿ ಮನೆಯ ಹಿಂದಿನ ಬಾಗಿಲ ಮೂಲಕ ಎಲ್ಲಿಯೋ ಹೋದವಳು ಈ ವರೆಗೂ ವಾಪಾಸು ಬಾರದೇ ಇದ್ದು ಕಾಣೆಯಾಗಿರುತ್ತಾರೆ ಎಂಬಿತ್ಯಾದಿಯಾಗಿ ಪಿರ್ಯಾದಾರರು ನೀಡಿದ ಲಿಖಿತ ಪಿರ್ಯಾದಿಯ ಸಾರಾಂಶವಾಗಿದೆ.

ಕಾಣೆಯಾದವರ ವಿವರ

ಹೆಸರು:- ಶ್ರೀಮತಿ ದೀಕ್ಷಿತಾ

ಪ್ರಾಯ: 28 ವರ್ಷ 

4.10" ಅಡಿ ಎತ್ತರ,  ಬಿಳಿ ಮೈ ಬಣ್ಣ,

ನೀಲಿ ಪ್ಯಾಂಟ್, ನೀಲಿ ಟೀ ಶರ್ಟ್  ಧರಿಸಿರುತ್ತಾರೆ.

ಮಾತನಾಡುವ ಭಾಷೆ: ಕನ್ನಡ, ತುಳು

ವಿದ್ಯಾರ್ಹತೆ : ಪಿಯುಸಿ

 

Crime Reported in Konaje PS

ಪಿರ್ಯಾದಿ Smt Kairunnisa ದಾರರು ಬಂಟ್ವಾಳ ತಾಲೂಕು ಪಜೀರು ಗ್ರಾಮದ ಗ್ರಾಮಚಾವಡಿ ಎಂಬಲ್ಲಿ ತನ್ನ ಗಂಡ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದು, ಗಂಡ ಅಬ್ದುಲ್ ಬಶೀರ್ ಎಂಬವರು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕುಕ್ಕರ್ ನಿಂದ ಪಿರ್ಯಾದಿದಾರರ ತಲೆಗೆ ಹೊಡೆದಿರುತ್ತಾರೆ. ನಂತರ ಹೊಡೆತವನ್ನು ತಪ್ಪಿಸಿಕೊಳ್ಳಲು ಹೊರಗೆ ಹೋಗಲು ಮುಂದಾದಾಗ ನೆರೆಕೆರೆಯ ಹಮೀದ್ ಎಂಬವರು ಪಿರ್ಯಾದಿದಾರರನ್ನು ಅಡ್ಡಗಟ್ಟಿ, ಅವರ ಕೂದಲನ್ನು ಹಿಡಿದಿರುತ್ತಾರೆ. ಅದೇ ಸಮಯ ಹಮೀದ್ ರವರ ಹೆಂಡತಿ ರಮ್ಲತ್ ಎಂಬವರು ಪಿರ್ಯಾದಿದಾರರನ್ನು “ಎವಡೆ ಓಡುರೆ, ನಾ ಬುಡುಲೇ” ಎಂದು ನೈಟಿ ಹಿಡಿದು ಎಳೆದು ಬಶಿರ್ ರವರೊಂದಿಗೆ ಹೊಡೆಸಿದ್ದಲ್ಲದೇ , ಮನೆಯೊಳಗೆ ತಳ್ಳಿ ಹೊರಗಿಂದ ಚಿಲ್ಕ ಹಾಕಿರುತ್ತಾರೆ. ವಿಚಾರ ತಿಳಿದು ಪಿರ್ಯಾದಿದಾರರ ತಂದೆ ಮತ್ತು ಬಾವಾ ಸುಮಾರು 23.00 ಗಂಟೆಗೆ ಬಂದಾಗ ಪಿರ್ಯಾದಿಯ ಗಂಡನು ಕೋಪಗೊಂಡು ಬೈಕಿನ ಚೈನ್ ಸಾಕೆಟ್ ಕವರ್ ನಿಂದ ಪಿರ್ಯಾದಿದಾರರ ಬೆನ್ನಿಗೆ, ಕೈಗೆ ಹಾಗೂ ತಲೆಗೆ  ಹೊಡೆದಿರುತ್ತಾರೆ ಹಾಗೂ ಅವರ ತಂದೆ ಹಾಗೂ ಬಾವನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ. ಗಾಯಗೊಂಡ ಪಿರ್ಯಾದಿದಾರರು ಕಣಚೂರು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿರುತ್ತಾರೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 22-02-2022 07:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080