ಅಭಿಪ್ರಾಯ / ಸಲಹೆಗಳು

Crime Reported in Kankanady Town PS

ಪಿರ್ಯಾದು Mohammad Sab Jangi ದಾರರು ಬಾಗಲಕೋಟೆ ಜಿಲ್ಲೆಯವರಾಗಿದ್ದು ಸುಮಾರು 17 ವರ್ಷಗಳಿಂದ ಮಂಗಳೂರಿನ ಹಲವು ಗೋಡಾನ್ ಗಳಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿರುವುದಾಗಿದೆ. ಎಂದಿನಂತೆ ದಿನಾಂಕ 22-03-2022 ರಂದು  ಬೆಳಗ್ಗೆ 8:30 ಗಂಟೆಗೆ ಕಣ್ಣೂರು ಮಸೀದಿಯ ಬಳಿ ಇರುವ ಎಸಿಸಿ ಸಿಮೆಂಟ್ ಗೋಡಾನ್ ಬಳಿ ಸಿಮೆಂಟ್ ಲೋಡಿಂಗ್ ಮಾಡುತ್ತಿರುವ ಸಮಯ ಸುಮಾರು 9:00 ಗಂಟೆಗೆ ಪಿರ್ಯಾದುದಾರರು ಗೋಡಾನ್ ನ ಎದುರುಗಡೆಯ ಮುಖ್ಯ ಬಾಗಿಲಿನ ಬಳಿ ನಿಂತುಕೊಂಡಿದ್ದ ಸಮಯ ಲಾರಿಯೊಂದು ಗೋಡಾನ್ ನ ಕಂಪೌಂಡ್ ಒಳಗಡೆ ಬರುತ್ತೀರುವುದನ್ನು ಕಂಡ ಪಿರ್ಯಾದುದಾರರು ಪಕ್ಕಕ್ಕೆ ಹೋಗಿ ಲಾರಿಯ ಎಡಬದಿಯ  ಬಾಗಿಲನ್ನು ತೆರೆಯುತ್ತಿದ್ದಂತೆ ಲಾರಿಯ ಚಾಲಕನು ಒಮ್ಮಿಲೇ ತನ್ನ ಲಾರಿಯನ್ನು ಎಡಕ್ಕೆ ಚಲಾಯಿಸುತ್ತಿದ್ದಂತೆ ಲಾರಿಯು ಪಿರ್ಯಾದುದಾರರ ಬಲಕಾಲಿನ ಪಾದದ ಹಿಂಬದಿ ಮತ್ತು ಪಾದದ ಮೇಲೆ ಲಾರಿಯು ಚಲಾಯಿಸಿದಾಗ ಪಿರ್ಯಾದುದಾರರು ಜೋರಾಗಿ ಬೊಬ್ಬೆ ಹೊಡೆದಿದ್ದು ಆ ವೇಳೆ ಇತರ ಕಾರ್ಮಿಕರು ಪಿರ್ಯಾದುದಾರರನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ ನಗರದ ಹೈಲ್ಯಾಂಡ್ ಆಸ್ಪತ್ರಗೆ ಸೇರಿಸಿದ್ದು ಅಜಾಗರುಕತೆಯಿಂದ ಲಾರಿಯನ್ನು ಚಾಲನೆ ಮಾಡಿ ಪಿರ್ಯಾದುದಾರರ ಬಲಕಾಲಿನ ಪಾದಕ್ಕೆ ಮತ್ತು ಮಣಿಗಂಟಿನ ಬಳಿ ತೀವ್ರ ತರಹದ ರಕ್ತ ಗಾಯವನ್ನುಂಟು ಮಾಡಿದ KA-19-C-2504 ಲಾರಿ ಚಾಲಕನಾದ ತಸ್ಸೀರ್ ನ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ಎಂಬಿತ್ಯಾದಿ.

 

Crime Reported in Traffic North Police Station       

ನಿನ್ನೆ ದಿನಾಂಕ: 22-03-2022 ರಂದು ಪಿರ್ಯಾದಿ R Subramani ದಾರರ ಹೆಂಡತಿ ಭಾನುಮತಿ ರವರು ಹೊಸಬೆಟ್ಟು ಆಚಾರ್ಯ ಕಾಲೋನಿಯಿಂದ ಹೊಸಬೆಟ್ಟುವಿಗೆ  ಸಾಮಾಗ್ರಿ ತರಲು ಬಂದವರು ವಾಪಸ್ಸು ಮನೆಕಡೆ ಬರಲು ಹೊಸಬೆಟ್ಟು ಜಂಕ್ಷನ್ ಬಳಿ ನಿಂತ್ತಿದ್ದ  ಸಮಯ ಸಂಜೆ ಸುಮಾರು 6;00 ಗಂಟೆಗೆ ಸುರತ್ಕಲ್ ಕಡೆಯಿಂದ KA-20-MH-7424 ನಂಬ್ರದ ಕಾರನ್ನು ಅದರ ಚಾಲಕನು ದುಡುಕುತನದಿಂದ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಹೊಸಬೆಟ್ಟು ಜಂಕ್ಷನ್ ನಲ್ಲಿ ಒಮ್ಮೆಲೆ ಬಲಕ್ಕೆ ತಿರುಗಿಸಿ ರಸ್ತೆಯ ಬದಿಯಲ್ಲಿ ನಿಂತ್ತಿದ್ದ ಭಾನುಮತಿರವರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರು ರಸ್ತೆಗೆ ಬಿದ್ದು ಅವರ ಎಡ ತೋಡೆಯ ಬಳಿ ಮೂಳೆಮುರಿತ ಗಂಭಿರ ಸ್ವರೂಪದ ಗಾಯವಾಗಿ ಸುರತ್ಕಲ್ ನ ಪದ್ಮಾವತಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ  ದೇರಳಕಟ್ಟೆ K.S ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 23-03-2022 08:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080