ಅಭಿಪ್ರಾಯ / ಸಲಹೆಗಳು

Crime Reported in Traffic North PS

ದಿನಾಂಕ 24-09-2021 ರಂದು ಪಿರ್ಯಾದಿ Smt Sujatha ರವರು ಹಾಗೂ ಆಕೆಯ ಗೆಳತಿ ಶ್ರೀಮತಿ. ಲಲಿತಾ (48) ಎಂಬವರು ಎಂದಿನಂತೆ ಕೆಲಸದ ಬಗ್ಗೆ ಹೋಗುತ್ತಾ ಸುರತ್ಕಲ್ ಬಸ್ ಸ್ಟಾಪ್ ನಿಂದ ತಾವುಗಳು ಕೆಲಸ ಮಾಡುವ ಸುರತ್ಕಲಿನ ಅಭಿಶ್ ಸೂಪರ್ ಮಾರ್ಕೆಟ್ ಕಟ್ಟಡದ ಕಡೆಗೆ ನಡೆದುಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 08:15 ಗಂಟೆಗೆ KA-19-MF-9108 ನಂಬ್ರದ ಕಾರನ್ನು ಅದರ ಚಾಲಕಿಯಾದ ಶ್ರೀಮತಿ. ಸರಾಯು ಶೆಟ್ಟಿ ಎಂಬಾಕೆಯು ಕೃಷ್ಣಾಪುರ ಕಡೆಯಿಂದ ಚಲಾಯಿಸಿಕೊಂಡು ಬಂದು ಸುರತ್ಕಲ್ ಜಂಕ್ಷನ್ ನಲ್ಲಿ ನಿರ್ಲಕ್ಷ್ಯತನದಿಂದ ಮಂಗಳೂರು ಕಡೆಯಿಂದ ಮುಲ್ಕಿ ಕಡೆಗೆ ಹಾದು ಹೋಗುವ NH-66ನೇ ಡಾಮಾರು ರಸ್ತೆಗೆ ಮುನ್ನುಗ್ಗಿಸಿದ್ದು, ಇದೇ ವೇಳೆ KA-20-D-5353 ನಂಬ್ರದ ಹಳದಿ ಬಣ್ಣದ ಬಸ್ಸನ್ನು ಅದರ ಚಾಲಕನಾದ ಸಂತೋಷ್ ಕುಮಾರ್ ಎಂಬಾತನು ಮಂಗಳೂರು ಕಡೆಯಿಂದ ಮುಲ್ಕಿ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕಾರು ಹಾಗೂ ಬಸ್ಸು ಪರಸ್ಪರ ಡಿಕ್ಕಿಯಾಗಿ ಬಸ್ಸು ರಸ್ತೆಯ ಎಡ ಬದಿಗೆ ಚಲಿಸಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಿಗೆ ಹಾಗೂ ಶ್ರೀಮತಿ. ಲಲಿತಾ ರವರಿಗೆ ಡಿಕ್ಕಿಪಡಿಸಿ ಬಸ್ಸು ಇನ್ನೂ  ಮುಂದಕ್ಕೆ ಚಲಿಸಿ ರಸ್ತೆಯ ಎಡ ಬದಿಯಲ್ಲಿ ಪಾರ್ಕ್ ಮಾಡಿ ನಿಲ್ಲಿಸಿದ್ದ ಹಾಲೇಶ್ ಎಂಬವರು ಚಾಲಕರಾಗಿದ್ದ KA-27-C-1071 ನಂಬ್ರದ ಚಿಕ್ಕ ಗೂಡ್ಸ್ ಟೆಂಪೊದ ಹಿಂಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಗೂಡ್ಸ್ ಟೆಂಪೊವು ಮುಂದಕ್ಕೆ ಮುಗ್ಗರಿಸಿದಂತಾಗಿ ಟೆಂಪೊದ ಎದುರಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿಶ್ವನಾಥ ಎಂಬವರಿಗೆ ಡಿಕ್ಕಿಯಾಗಿ ಗೂಡ್ಸ್ ಟೆಂಪೊವು ಮುಚ್ಚಲ್ಪಟ್ಟಿದ್ದ ವೈನ್ಸ್ & ಸ್ಪಿರಿಟ್ ಎಂಬ ಅಂಗಡಿಯ ಶಟರ್ ಬಾಗಿಲಿಗೆ ಡಿಕ್ಕಿಯಾಗಿ ನಿಂತಿದ್ದು ಗೂಡ್ಸ್ ಟೆಂಪೊದ ಚಾಲಕ ಹಾಲೇಶ್ ಹಾಗೂ ಟೆಂಪೊದಲ್ಲಿದ್ದ ಸಚಿನ್ ಎಂಬಾತನಿಗೆ ಕೂಡಾ ಅಲ್ಲಲ್ಲಿ ಗುದ್ದಿದ ಹಾಗೂ ತರಚಿದ ರೀತಿಯ ಗಾಯವಾಗಿದ್ದು, ಮತ್ತೊಬ್ಬ ಪಾದಾಚಾರಿ ವಿಶ್ವನಾಥ ಎಂಬವರಿಗೆ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಹೊಟ್ಟೆಗೆ ಮತ್ತು ಎದೆಗೆ ಗುದ್ದಿದ ರೀತಿಯ ಗಾಯವಾಗಿರುತ್ತದೆ, ಪಿರ್ಯಾದಿದಾರರಿಗೆ ಎದೆಗೆ ಹಾಗೂ ಎಡಕೈ ಕೋಲು ಭಾಗಕ್ಕೆ ಗುದ್ದಿದ ರೀತಿಯ ಗಾಯವಾಗಿದ್ದು, ಲಲಿತಾ ರವರಿಗೆ ಬಲ ಕೈ ರಿಸ್ಟ್ ಬಳಿ ಚರ್ಮ ಹರಿದ ರಕ್ತ ಗಾಯ ಹಾಗೂ ಎಡಕೈ ತೊಳಿನ ಹಿಂಭಾಗ ಗುದ್ದಿದ ರೀತಿಯ ಗಾಯವಾಗಿರುತ್ತದೆ. ಅಲ್ಲದೇ ಅಪಘಾತಕ್ಕೊಳಪಟ್ಟ ಮೂರೂ ವಾಹನಗಳು ಜಖಂಗೊಂಡಿದ್ದು ವೈನ್ಸ್ & ಸ್ಪಿರಿಟ್ ಅಂಗಡಿ ಕೂಡಾ ಜಖಂಗೊಂಡಿರುತ್ತದೆ ಎಂಬಿತ್ಯಾದಿ.

 

2) ದಿನಾಂಕ:23-09-2021 ರಂದು ಪಿರ್ಯದಿ ನಾಗೇಶ್ ರವರ ತಂಗಿಯ ಗಂಡನಾದ ಪುರಂದರರವರು ತಮ್ಮ ಬಾಬ್ತು KA-19-EW-4861  ನಂಬ್ರದ ಮೋಟಾರ್ ಸೈಕಲಿನಲ್ಲಿ ಸುರತ್ಕಲ್ ಕಡೆಯಿಂದ ಕೂಳೂರು ಕಡೆಗೆ ಹೋಗುತ್ತಾ ಸಮಯ 07-30 ಗಂಟೆಗೆ KIOCL ಜಂಕ್ಷನ್ ಸಮೀಪ ಕೂಳೂರು ನದಿಯ ಬ್ರಿಡ್ಜ್ ಬಳಿ ಇರುವ ರಸ್ತೆಯ ಹಂಪ್ಸ್ ನಲ್ಲಿ ನಿಧಾನವಗಿ ಹೋಗುತ್ತಿದ್ದಂತೆ ಅವರ ಹಿಂದಿನಿಂದ ಅಂದರೆ ಪಣಂಬೂರು ಕಡೆಯಿಂದ ಕೂಳೂರು ಕಡೆಗೆ KA-19-HC-2383 ನಂಬ್ರದ ಸ್ಕೂಟರನ್ನು ಅದರ ಸವಾರ ABDUL RAHIM ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಪುರಂದರರವರು ತಮ್ಮ ಮೋಟಾರ್ ಸೈಕಲಿನ ಹತೋಟಿ ತಪ್ಪಿ ಮೋಟಾರ್ ಸೈಕಲ್ ಸಮೇತ ಡಾಮರು ರಸ್ತೆಗೆ ಬಿದ್ದು ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕಿತ್ಸೆ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.

 

Crime Reported in Traffic South PS

ಪಿರ್ಯಾದಿ ಜಯಶ್ರೀ ರವರು ಸುಮಾರು 04 ವರ್ಷಗಳಿಂದ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಗೃಹ ರಕ್ಷಕ ದಳ ಸಿಬ್ಬಂದಿಯಾಗಿ ಕೆಲಸ ಮಾಡಿಕೊಂಡಿದ್ದು ನಿನ್ನೆ ದಿನ ದಿನಾಂಕ 23-09-2021 ರಂದು ಜಯಶ್ರೀ ಯವರಿಗೆ  ಎರಡನೇ ಪಾಳಿಯ ಸಂಚಾರ ನಿಯಂತ್ರಣ ಕರ್ತವ್ಯಕ್ಕೆ ತೊಕ್ಕೊಟ್ಟು ಕಾಫಿಕಾಡ್  ಪಾಯಿಂಟ್ ಗೆ ನೇಮಿಸಿದ್ದು  ಅದರಂತೆ ಅವರು ಮಧ್ಯಾಹ್ನ 2.00 ಗಂಟೆಯಿಂದ ಸಮವಸ್ತ್ರದಲ್ಲಿ ಕಾಫಿಕಾಡ್ ಹತ್ತಿರ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದು, ಅದರ ಜೊತೆಗೆ ಮೇಲಾಧಿಕಾರಿಗಳ ಆದೇಶದಂತೆ ಸಂಚಾರ ನಿಯಮ ಉಲ್ಲಂಘಿಸಿ ವಾಹನ ಸವಾರಿ ಮಾಡುವವರ ಪೋಟೋವನ್ನು ತೆಗೆದು FTVR ದಾಖಲಿಸುವಂತೆ ಸೂಚಿಸಿದ ಮೇರೆಗೆ ಸಂಚಾರ ನಿಯಮ ಉಲ್ಲಂಘಿಸುವವರ ಪೋಟೋವನ್ನು ತೆಗೆಯುತ್ತಿರುವಾಗ. ಮಧ್ಯಾಹ್ನ ಸಮಯ ಸುಮಾರು 03.17 ಗಂಟೆಗೆ ಅವರು ಸಂಚಾರ ನಿಯಂತ್ರಣ ಕರ್ತವ್ಯದಲ್ಲಿರುವಾಗ ರಾ.ಹೆ-66 ರ ಏಕಮುಖ ರಸ್ತೆಗೆ ವಿರುದ್ದವಾಗಿ ಅಂದರೆ ಉಳ್ಳಾಲ ಕಡೆಯಿಂದ ಕಾಫಿಕಾಡ್ ಗೆ ಸ್ಕೂಟರ್ ವೊಂದರಲ್ಲಿ ಅದರ ಸವಾರ ಸಹ ಸವಾರನನ್ನು ಕುಳ್ಳಿರಿಸಿಕೊಂಡು ಇಬ್ಬರು ಹೆಲ್ಮೇಟ್ ಹಾಕದೇ ಹಾಗೂ ಸ್ಕೂಟರಿನ ಸಹ ಸವಾರ ಸ್ಕೂಟರಿನ ಹಿಂಬದಿಗೆ ಮುಖ ಮಾಡಿ ಕುಳಿತುಕೊಂಡು ಸ್ಕೂಟರ್ ಸವಾರಿ ಮಾಡುತ್ತಾ ಜಯಶ್ರೀ ಯವರ ಹತ್ತಿರ ಬರುತ್ತಿದ್ದಂತೆ  ಜಯಶ್ರೀ ರವರು ಅವರ ಪೋಟೋವನ್ನು ತೆಗೆಯಲು ಮುಂದಾದಾಗ ಅದರ ಸಹ ಸವಾರ ಸ್ಕೂಟರಿನ ನಂಬ್ರವನ್ನು ಮರೆ ಮಾಚುವ ಉದ್ದೇಶದಿಂದ ನಂಬ್ರ ಪ್ಲೇಟಿಗೆ ಎರಡು ಕಾಲುಗಳನ್ನು ಹಾಕಿ ನಂಬ್ರ ಪ್ಲೇಟ್ ನ್ನು ಮುಚ್ಚಿರುತ್ತಾನೆ. ಆದರೂ ಜಯಶ್ರೀ ರವರು ಅವರ ಪೋಟೋವನ್ನು ಅವರ ಮೊಬೈಲ್ ನಲ್ಲಿ ಸೆರೆ ಹಿಡಿದಿರುತ್ತಾರೆ ನಂತರ ಅವರಿಬ್ಬರು ಜಯಶ್ರೀ ಯವರ ಹತ್ತಿರ ಬರುತ್ತಿದ್ದಂತೆ ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದ ಅವರಿಗೆ ಉದ್ದೇಶಿಸಿ ಅವಾಚ್ಯ ಶಬ್ಧವಾದ ಬೇವರ್ಸಿ ಎಂಬುದಾಗಿ ನಿಂದಿಸಿ ಕೆಟ್ಟದಾಗಿ ಕೈ ಸನ್ನೆ ಮಾಡುತ್ತಾ ಸಾರ್ವಜನಿಕ ರಸ್ತೆಯಲ್ಲಿ ಅಡ್ಡಾ ದಿಡ್ಡಿಯಾಗಿ ಸ್ಕೂಟರ್ ನ್ನು ಸವಾರಿ ಮಾಡಿಕೊಂಡು ಹೋಗಿರುತ್ತಾರೆ. ನಂತರ ಜಯಶ್ರೀ ರವರು ತೆಗೆದ ಪೋಟೋದಲ್ಲಿ ಸ್ಕೂಟರಿನ ಮುಂಬದಿ ನಂಬ್ರ ಬಂದಿದ್ದು ಅದರ ನಂಬ್ರ ನೋಡಲಾಗಿ  KA-19- HE-8621 ಆಗಿರುತ್ತದೆ. ಎಂಬಿತ್ಯಾದಿ.

Crime Reported in Mangalore East PS

ಪಿರ್ಯಾದಿ Zayaan Rishad  ದಿನಾಂಕ 23-09-2021 ರಂದು ತನ್ನ ಗೆಳೆಯರೊಂದಿಗೆ ಸಂಜೆ 7.00 ಗಂಟೆ ಸಮಯಕ್ಕೆ ಬಲ್ಮಠ ಆರ್ಯ ಸಮಾಜ ರಸ್ತೆಯಲ್ಲಿರುವ ಮ್ಯಾಂಗೋ ಗ್ರೋವ್ ಹೋಟೆಲ್ ಗೆ ಹೋಗಿ ಟೇಬಲ್ ನಲ್ಲಿ ಕುಳಿತುಕೊಂಡು ಪಕ್ಕದ ಇನ್ನೋಂದು ಟೇಬಲ್ ನ ಒಂದು ಚೆಯರನ್ನು ಅ ಟೇಬಲ್ ನ ಬಳಿ ಕುಳಿತ್ತಿದ ಅಫಾಮ್,ಅಭೀಷ್ ,ಅಲೂಫ್ ಮತ್ತು ರಶೀಮ್ ರವರಲ್ಲಿ  ಕೇಳಿ ತೆಗೆದು ಕೊಂಡಾಗ ಪರಸ್ಪರ ಮಾತಿಗೆ ಮಾತಾಗಿ ಹೋಟೆಲ್ ನಿಂದ ಹೊರಬಂದು ದೂಡಾಟ ನಡೆಸಿ,  ಬಳಿಕ ಮಾತನಾಡಿ ಸರಿ ಮಾಡುವಾ ಎಂದು ಬಲ್ಮಠ ಮೈದಾನ ಬಳಿಗೆ ಪಿರ್ಯಾದಿದಾರರನ್ನು ಕರೆಸಿಕೊಂಡು ಸಂಜೆ 7.30 ಗಂಟೆ ಸಮಯಕ್ಕೆ ಪಿರ್ಯಾದಿದಾರರನ್ನು ಹಾಗೂ ಅವರ ಗೆಳೆಯ ನಾಯಿಲ್ ನನ್ನು ತಡೆದು ಅವಾಚ್ಯ ಶಬ್ದಗಳಿಂದ  ಬೈದು ರಶೀಮ್ ನು ಪಿರ್ಯಾದಿದಾರರ ತಲೆಯ ಹಿಂಬದಿಗೆ ಆತನ ಕೈಯಲ್ಲಿರುವ ಕಡಗದಿಂದ ಹೊಡೆದು ರಕ್ತ ಗಾಯ ಗೊಳಿಸಿದ್ದು ಇದೇ ಸಮಯ ಅಭೀಷ್ ನು ಆತನ ಕೈಯಲ್ಲಿದ್ದ ಚೂರಿನಿಂದ  ಪಿರ್ಯಾದಿದಾದದ ಬಲ ಕೈ ಮೊಣಗಂಟನ  ಬಳಿಯ ತಟ್ಟಿಗೆ ಹಾಗೂ ರಟ್ಟೆಗೆ ಹಲ್ಲೆ ಮಾಡಿ ರಕ್ತ ಗಾಯಗೊಳಿಸಿರುತ್ತಾರೆ. ಅಫಾಮ್ ಮತ್ತು ಅಮರ್ ಪಿರ್ಯಾದಿದಾರಿಗೆ ಮತ್ತು ನಾಯಿಲ್ ನಿಗೆ ಕೈಯಿಂದ  ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುತ್ತಾರೆ. ಪಿರ್ಯಾದಿದಾರರು ಯೂನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬಿತ್ಯಾದಿ.

Crime Reported in Mangalore North PS

ಪಿರ್ಯಾದಿ MAHAMMED ALTHAF ರವರು  ದಿನಾಂಕ 23.09.2021 ರಂದು ಸಂಜೆಯ ಅಝಾನ್ (ಬಾಂಗ್) 6.40 ಸಮಯಕ್ಕೆ  ಮನೆಯಿಂದ ಹೊರಟು ಹಾಲು ಕೊಂಡು ಹೋಗಲು ಕುದ್ರೋಳಿ ಜಂಕ್ಷನ್ ಗೆ ಬಂದಿದ್ದು, ಪಿರ್ಯಾದಿದಾರರ ಪರಿಚಯಸ್ಥರಾದ ಅನೀಶ್ ಹಾಗೂ ಫಹಾದ್ ಇತರೆ ಐದಾರು ಜನರೊಂದಿಗೆ ಅಲ್ಲಿ ನಿಂತಿದ್ದು ಅನೀಶ್ ಹಾಗೂ ಫಹಾದ್ ರವರು ಪಿರ್ಯಾದಿದಾರರನ್ನು ಕರೆದು ವಿನಾಕಾರಣ ನನಗೆ ಅವಾಚ್ಯ ಶಬ್ದಗಳಿಂದ ನಾಯಿಂಡೆ ಮೊನೆ ನೀನು ಬಾರಿ ದೊಡ್ಡ ಜನವ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೈದು ಅಲ್ಲಿಯೇ ಪಕ್ಕದಲ್ಲಿದ್ದ ರಸ್ತೆ ದುರಸ್ಥಿಗಾಗಿ ತಂದಿದ್ದ ಸಿಮೆಂಟ್ ಇಂಟರ್ ಲಾಕ್ ನಿಂದ ಬಲ ಬದಿಯ ಪಕ್ಕೆಲುಬು ಹಾಗೂ ಬಲಗೈಯ ಬೆರಳುಗಳಿಗೆ ಹೊಡೆದಿದ್ದು, ಈ ಬಗ್ಗೆ ಪೊಲೀಸ್ ರಿಗೆ ದೂರು ನೀಡಿದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾರೆ. ಅದ್ದರಿಂದ ಪಿರ್ಯಾದಿದಾರರ ಮೇಲೆ ವಿನಾಕಾರಣ ಸಿಮೆಂಟ್ ಇಂಟರ್ ಲಾಕ್ ನಿಂದ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ ಅನೀಶ್ ಮತ್ತು ಫಹಾದ್ ರವರ ಜೊತೆಯಲ್ಲಿದ್ದ ಇನ್ನಿತರರ ವಿರುದ್ಧ ಸೂಕ್ತ  ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

 

Crime Reported in Surathkal PS  

ಪಿರ್ಯಾದಿರವರು ನಿನ್ನೆ ದಿನ ದಿನಾಂಕ 22-09-2021  ರಂದು ಕಾಟಿಪಳ್ಳ ಗ್ರಾಮದ ಕೃಷ್ಣಾಪುರ 5ನೇಯ ಬ್ಲಾಕಿನಲ್ಲಿರುವ ತನ್ನ ಗಂಡನ ಬಾಬ್ತು ಲೈವ್ ಜಿಲೇಬಿ ಎಂಬ ಹೆಸರಿನ ಬೇಕರಿಯ ತಿಂಡಿ ತಯಾರಿಸುವ ರೂಮಿನಲ್ಲಿದ್ದ ಸಮಯ ಸುಮಾರು ಮಧ್ಯಾಹ್ನ 03-45 ಗಂಟೆಗೆ ಈ ಹಿಂದೆ ಬೇಕರಿಗೆ ಬರುತ್ತಿದ್ದ ಮೊಹಮ್ಮದ್ ಮುಜಾಮಿಲ್ ಎಂಬವರು ಸದ್ರಿ ಕೋಣೆಯೊಳಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರ ಮಾನ ಹಾನಿ ಮಾಡುವ ಉದ್ದೇಶದಿಂದ ಅವರ ಮುಖವನ್ನು ಸವರಿದ್ದು ಆ ಸಮಯ ಪಿರ್ಯಾದಿದಾರರು ಆತನ ಕೈಯನ್ನು ದೂಡಿದಾಗ ಆತನು ಪಿರ್ಯಾದಿದಾರರ ಬಲಗೈಯ ಭುಜದ ಬಳಿ ಕೈ ಹಾಕಿ ಗಟ್ಟಿಯಾಗಿ ಹಿಡಿದಿದ್ದು ಆತನಿಂದ ಪಿರ್ಯಾದಿದಾರರು ತಪ್ಪಿಸಿಕೊಂಡು ಹೊರಗಡೆ ಬಂದಾಗ ಅಲ್ಲಿಗೆ ಸದ್ರಿ ಅಂಗಡಿಯ ಕೆಲಸಗಾರರಾದ ಅಮೃತ, ತೇಜಸ್ವಿನಿ ರವರು ಹತ್ತಿರ ಬರುವುದನ್ನು ಕಂಡು ಆರೋಪಿಯು ಆತನ ಬಾಬ್ತು KA-21-N-2715 ನೇ ನೊಂದಣಿ ಸಂಖ್ಯೆಯ ವಾಹನದಲ್ಲಿ ಪರಾರಿಯಾಗಿರುವುದಾಗಿ ಎಂಬಿತ್ಯಾದಿಯಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 24-09-2021 05:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080