ಅಭಿಪ್ರಾಯ / ಸಲಹೆಗಳು

Crime Reported in CEN Crime PS

ದಿನಾಂಕ: 14/04/2021 ರಂದು ಪಿರ್ಯಾದಿದಾರರ ದೂರವಾಣಿ ನೇಯದಕ್ಕೆ ಅಪರಿಚಿತ ವ್ಯಕ್ತಿಯು : +639518037516 ನೇ ನಂಬ್ರದಿಂದ ವಾಟ್ಸ್ ಮೂಲಕ ಒಂದು ಸಂದೇಶ ಬಂದಿದ್ದು ಸದ್ರಿ ಸಂದೇಶದಲ್ಲಿ amazer2.com ಸೈಟ್ ನಲ್ಲಿ ನೊಂದಣಿ ಮಾಡಿ ಆನ್ ಲೈನ್ ಮೂಲಕ ಹಣ ಸಂಪಾದನೆ ಮಾಡುವ ಬಗ್ಗೆ ಇದ್ದು ಅದನ್ನು ನಂಬಿದ ಪಿರ್ಯಾದಿದಾರರು ಸದ್ರಿ ಸೈಟ್ ನಲ್ಲಿ ತನ್ನ ಖಾತೆಯನ್ನು ತೆರೆದು  ತನ್ನ ಬಾಬ್ತು ಕೆನರಾ ಬ್ಯಾಂಕ್ ಖಾತೆ ಸಂಖ್ಯೆ ರಿಂದ ಪ್ರಥಮವಾಗಿ ರೂ 200 ಗಳನ್ನು ಅವರು ಕಳುಹಿಸಿದ ಐಸಿಐಸಿಐ ಬ್ಯಾಂಕ್ ಖಾತೆ ಸಂಖ್ಯೆ: 238601501594 ನೇಯದಕ್ಕೆ ಪಾವತಿಸಿದ್ದು ಅದಕ್ಕೆ ಸಂಬಂದಿಸಿದಂತೆ ಸದ್ರಿ ವೆಬ್ ಸೈಟ್ ದಾರರು ಪಿರ್ಯಾದಿದಾರರಿಗೆ ಬೋನಸ್ ನೀಡುವುದಾಗಿ ತಿಳಿಸಿ ಹೆಚ್ಚಿನ ಹಣವನ್ನು ಪಾವತಿಸುವಂತೆ ತಿಳಿಸಿದ್ದು ಅದರಂತೆ ಸದ್ರಿ ಅಪರಿಚಿತ ವ್ಯಕ್ತಿಯು ಕಳುಹಿಸಿಕೊಟ್ಟ ಬ್ಯಾಂಕ್ ಖಾತೆ ಸಂಖ್ಯೆಗಳಾದ  ICICI A/C 238601501594 ರೂ 2,132/-,ICICI A/C238601501591 ರೂ 3,385/-, IDFC A/C  10067037905 ರೂ 13,415/-, 7656986801@paytm ರೂ 10,000/-, ICICI A/C 699001520795 ರೂ 30,000/- ICICI A/C 238601501579 ರೂ 40,000/- ಒಟ್ಟು ರೂ 1,31,481/-  ಗಳನ್ನು ಪಿರ್ಯಾದಿದಾರರು ಹಂತ ಹಂತವಾಗಿ ದಿನಾಂಕ: 14/04/2021 ರಿಂದ 25/04/2021 ರ ಮಧ್ಯಾವಧಿಯಲ್ಲಿ ಪಾವತಿಸಿದ್ದು ನಂತರ ಸದ್ರಿ ಅಪರಿಚಿತ ವ್ಯಕ್ತಿಯು ಪಿರ್ಯಾದಿದಾರರಿಗೆ ಅವರು ಪಾವತಿಸಿದ ಹಣಕ್ಕೆ ಯಾವುದೇ ಬೋನಸ್ ನ್ನು  ನೀಡದೆ ಹಾಗೂ ಪಾವತಿಸಿದ ಹಣವನ್ನು ವಾಪಾಸ್ಸು ನೀಡದೇ ಮೋಸ ಮಾಡಿರುತ್ತಾರೆ ಎಂಬಿತ್ಯಾದಿ

2) ಪಿರ್ಯಾದಿದಾರರು ವಿಶ್ವಕರ್ಮ ಸಹಕಾರ ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕರಾಗಿದ್ದು, ಪಿರ್ಯಾದಿದಾರರ ಬ್ಯಾಂಕಿನ ಎಟಿಎಂ ಮೆಷಿನ್ ಬ್ಯಾಂಕಿನ ಕಟ್ಟಡದಲ್ಲಿದ್ದು, ಕಾರ್ ಸ್ಟ್ರೀಟ್ , ಮಂಗಳೂರುನಲ್ಲಿರುತ್ತದೆ.  ಈ ಎಟಿಎಂ ಮೆಷಿನ್ ನಿಂದ ಅಪರಿಚಿತ ವ್ಯಕ್ತಿಯು ದಿನಾಂಕ 24.10.2021 ರಂದು ಬೆಳಿಗ್ಗೆ 04.40 ರ ಸುಮಾರಿಗೆ ಇಂಡಿಯನ್ ಬ್ಯಾಂಕ್ ಗ್ರಾಹಕನ ಡುಪ್ಲಿಕೇಟ್ ಎಟಿಎಂ ಕಾರ್ಡ್  ಬಳಸಿ ನಮ್ಮ ಎಟಿಎಂ ಮೆಷಿನ್ ನಿಂದ ರೂ.27,000/-  ಹಾಗೂ ಸದರಿ ವ್ಯಕ್ತಿ ಅದೇ ದಿನ ಬೆಳಿಗ್ಗೆ 11.00 ಗಂಟೆಗೆ ಫೆಡರಲ್ ಬ್ಯಾಂಕ್ ಗ್ರಾಹಕನ ಡುಪ್ಲಿಕೇಟ್ ಎಟಿಎಂ ಕಾರ್ಡ್ ಬಳಸಿ ರೂ.9,800/- ಪಡೆದಿರುತ್ತಾನೆ.  ಸದರಿ ವ್ಯಕ್ತಿ ಅದೇ ದಿನ ಸಂಜೆ 7.30 ಕ್ಕೆ ಕರೂರು ವೈಶ್ಯ ಬ್ಯಾಂಕ್ ಗ್ರಾಹಕನ ಡುಪ್ಲಿಕೇಟ್ ಎಟಿಎಂ ಕಾರ್ಡ್ ಬಳಸಿ ರೂ.30,000/- ಪಡೆದಿರುತ್ತಾನೆ.  ಸದರಿ ವ್ಯಕ್ತಿ ಮರು ದಿನ ದಿನಾಂಕ 25.10.2021 ರಂದು ಕರೂರು ವೈಶ್ಯ ಬ್ಯಾಂಕ್ ಗ್ರಾಹಕನ ಡುಪ್ಲಿಕೇಟ್ ಎಟಿಎಂ ಕಾರ್ಡ್  ಬಳಸಿ ರೂ.20,000/- ಪಡೆದಿರುತ್ತಾನೆ. ಈ ಬಗ್ಗೆ ಪಿರ್ಯಾದಿದಾರರ ಬ್ಯಾಂಕಿಗೆ,  ನ್ಯಾಶನಲ್ ಪೇಮೆಂಟ್ಸ್ ಕಾರ್ಪೋರೇಷನ್  ಆಫ್ ಇಂಡಿಯಾ NPCIದಿಂದ ಪೋರ್ಟಲ್ ಮೂಲಕ ಮಾಹಿತಿ ಬಂದಿದ್ದು, ಈ ಮೇಲಿನ ಎಟಿಎಂ Transaction, Fraudulent Transaction ಎಂದು ಮಾಹಿತಿಯನ್ನು ನೀಡಿದ್ದು, ಪರಿಶೀಲಿಸಿದಾಗ, NPCI ಯವರು ನಮ್ಮ ಸಂಸ್ಥೆಯಿಂದ ದಿನಾಂಕ 01-11-2021 ರಂದು Charge back from Indian bank ಎಂದು ರೂಪಾಯಿ 27,000/-, ದಿನಾಂಕ 08-11-2021 ರಂದು Charge back from karur Vysya bank ಎಂದು ರೂಪಾಯಿ 50,000/- ಮತ್ತು ದಿನಾಂಕ 11-11-2021 ರಂದು Charge back from Federal bank ಎಂದು ರೂಪಾಯಿ 9,800/- ಎಂದು ಹೀಗೆ ಒಟ್ಟು ರೂ.86,800/- ಹಣವನ್ನು ವಿಶ್ವಕರ್ಮ ಸಹಕಾರ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಿರುತ್ತಾರೆ. ದಿನಾಂಕ 20.11.2021ರ ಬೆಳಿಗ್ಗೆ 5.00 ಗಂಟೆಗೆ ಅಪರಿಚಿತ ವ್ಯಕ್ತಿ ಬಂದು ಪಿರ್ಯಾದಿದಾರರ ಎಟಿಎಂ ಮೆಷಿನ್ ನಿಂದ ಡುಪ್ಲಿಕೇಟ್ ಕಾರ್ಡ್  ಬಳಸಿ ರೂ.1,02,000/- ಹಣವನ್ನು ವಿತ್ ಡ್ರಾ  ಮಾಡಿ ಹೋಗುವ ಸಂದರ್ಬದಲ್ಲಿ ಪಿರ್ಯಾದಿದಾರರ ಬ್ಯಾಂಕಿನ ವಾಚ್ ಮೆನ್  ಶ್ರೀ ಅಮೈನ್ ರವರು, ಬಂದಿರುವಂತಹ ಅಪರಿಚಿತ ವ್ಯಕ್ತಿಯ ವರ್ತನೆಯು ಸರಿಯಾಗಿ ಇಲ್ಲದೇ ಇರುವುದರಿಂದ ಅವನ ಬಳಿ ವಿಚಾರಿಸಲು ಪ್ರಯತ್ನ ಪಟ್ಟಾಗ ತಪ್ಪಿಸಿಕೊಂಡು ಓಡಿಹೋಗಿರುತ್ತಾನೆ. ಈ ಕೃತ್ಯದಿಂದಾಗಿ ಪಿರ್ಯಾದಿದಾರರ ಬ್ಯಾಂಕಿಗೆ ರೂ.1,02,000/- ನಷ್ಟವಾಗಿರುತ್ತದೆ. ಯಾರೋ ಅಪರಿಚಿತ  ವ್ಯಕ್ತಿಗಳು ದಿನಾಂಕ 24-10-2021, 25-10-2021 ಮತ್ತು 20-11-2021 ರಂದು  ಎಟಿಎಂ ಕಾರ್ಡನ್ನು ಡುಪ್ಲಿಕೇಟ್ ಮಾಡಿ ಪಿರ್ಯಾದಿದಾರರ ಬ್ಯಾಂಕಿನ ಎಟಿಎಂ ಮಿಷನ್ ನಿಂದ ತನಗೆ ಸಂಬಂಧಪಡದ ಹಣವನ್ನು ವಿತ್ ಡ್ರಾ ಮಾಡಿ ಪಿರ್ಯಾದಿದಾರರ ಬ್ಯಾಂಕಿಗೆ ನಷ್ಟ, ವಂಚನೆ ಮಾಡಿರುತ್ತಾರೆ, ಎಂಬಿತ್ಯಾದಿ.

 

Crime Reported in Mangalore East PS

ಮಂಗಳೂರು ಪೂರ್ವ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ಸವಿತೃ ತೇಜ ಪಿ.ಡಿ   ರವರು ದಿನಾಂಕ: 23-11-2021 ರಂದು ರಾತ್ರಿ  ರೌಂಡ್ಸ್ ಕರ್ತವ್ಯದ ಬಗ್ಗೆ ಠಾಣಾ ಇಲಾಖಾ   ವಾಹನದಲ್ಲಿ ಠಾಣಾ ಹೆಚ್ ಸಿ ಲೋಕೇಶ್ ಹಾಗೂ ಹೆಚ್ ಸಿ- ದೇವಿ ಪ್ರಸಾದ್  ರವರ ಜೊತೆ ರಾತ್ರಿ ವೇಳೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ದಿನಾಂಕ: 24-11-2021 ರಂದು  ಬೆಳಗ್ಗಿನ ಜಾವ ಸುಮಾರು 2.45 ಗಂಟೆ ವೇಳೆಗೆ ಮಂಗಳೂರು ನಗರದ   ಲೋವರ್ ಬೆಂದೂರ್ ವೆಲ್ 3 ನೇಅಡ್ಡ ರಸ್ತೆ   ಬಳಿ  ತನ್ನ  ಇರುವಿಕೆಯನ್ನು ಮರೆಮಾಚಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದನ್ನು ಕಂಡು ಸಂಶಯಗೊಂಡು ಟಾರ್ಚ್ ಬೆಳಕಿನ ಸಹಾಯದಿಂದ ಅವರ ಹತ್ತಿರ ಹೋಗುವಷ್ಟ ರಲ್ಲಿ ಓಡಿ ಹೋಗಲು ಪ್ರಯತ್ನಿಸಿದವರನ್ನು ಸಿಬ್ಬಂದಿಯವರು ಹಿಡಿದು ವಿಚಾರಿಸಿದಾಗ ಅವರ  ಹೆಸರು ಕುಮಾರ್, ಪ್ರಾಯ:45 ವರ್ಷ,ವಾಸ: ಚೆರೆ ವಿಲಾ ಪುತ್ತನ್ ವೀಡ್, ಕೊಟ್ಟಾರಿ ಕರೆ ತಾಲೂಕು, ಕೊಲ್ಲಂ ಜಿಲ್ಲೆಕೇರಳ ರಾಜ್ಯ ಎಂದು ತಿಳಿಸಿದ್ದು, ಇವರು ಅಪರ ವೇಳೆಯಲ್ಲಿ ಮೇಲಿನ ಸ್ಥಳದಲ್ಲಿ ಇದ್ದ ಬಗ್ಗೆ ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡದೇ ಇದ್ದುದ್ದರಿಂದ ಇವನು ಯಾವುದೋ ಬೇವಾರಂಟು ತಕ್ಷೀರನ್ನು ನಡೆಸುವ ಉದ್ದೇಶದಿಂದ ಸದ್ರಿ ಸ್ಥಳದಲ್ಲಿ ರಾತ್ರಿ ವೇಳೆ ಹೊಂಚು ಹಾಕುತ್ತಿರುವುದಾಗಿ ಇವನ ವರ್ತನೆಯಿಂದ ಬಲವಾದ ಸಂಶಯ ಬಂದಿದ್ದು, ಇವನನ್ನು ವಶಕ್ಕೆ ಪಡೆದು ಇವರ ವಿರುದ್ದ  ಕಲಂ 96 ಕೆ.ಪಿ ಕಾಯ್ದೆಯಂತೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

 

 

ಇತ್ತೀಚಿನ ನವೀಕರಣ​ : 24-11-2021 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080