ಅಭಿಪ್ರಾಯ / ಸಲಹೆಗಳು

Crime Reported in Traffic South Police Station :

ಈ ಪ್ರಕರಣದ ಸಾರಾಂಶವೆನೆಂದರೆ ಈ ದಿನ ದಿನಾಂಕ:24-12-2021 ರಂದು ಪಿರ್ಯಾದಿದಾರರು ಮೋಟಾರ್ ಸೈಕಲ್ ನಂಬ್ರ: KL-79—6816 ನೇದನ್ನು ಬಿಜೈ ಕಡೆಯಿಂದ ಸವಾರಿ ಮಾಡಿಕೊಂಡು  ತೊಕ್ಕೊಟ್ಟು ಮಾರ್ಗವಾಗಿ ತಲಪಾಡಿ ಕಡೆಗೆ  ಹೋಗುತ್ತಿರುವಾಗ  ಸಮಯ ಸುಮಾರು  ಬೆಳಿಗ್ಗೆ 8-25 ಗಂಟೆಗೆ ರಾ.ಹೆ-66 ರ ಕಾಫಿಕಾಡು ಜಂಕ್ಷನ್ ಬಳಿ ತಲುಪುತ್ತಿದಂತೆ ಕುಂಪಲ ಕಡೆಯಿಂದ ಏಕಮುಖ ರಸ್ತೆಯ ವಿರುದ್ದ ದಿಕ್ಕಿನಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ  ಆಟೋರಿಕ್ಷಾ  ನಂಬ್ರ KA-19-D-4870 ನೇದರ ಚಾಲಕ  ವಿಶ್ವನಾಥ್ ಪೂಜಾರಿ ಎಂಬಾತನು ಓಮ್ಮೇಲೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಆಟೋರಿಕ್ಷಾ ವನ್ನು ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬೈಕಿನ ಎದುರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಾರರು ಬೈಕ್ ಸಮೇತ ಡಾಮಾರು ರಸ್ತೆಗೆ ಬಿದ್ದು ಅವರ ಎಡ ಗೈ ಮಣಿಗಂಟಿಗೆ ಮೂಳೆ ಮುರಿತದ ಗಾಯ ಹಾಗೂ ಎಡಗಾಲಿನ ಮೊಣಕಾಲಿಗೆ ತರಚಿದ ರಕ್ತ ಗಾಯವಾಗಿದ್ದು  ಕೂಡಲೇ ಅಲ್ಲಿ ಸೇರಿದ ಸಾರ್ವಜನಿಕರು ಅವರನ್ನು  ಚಿಕಿತ್ಸೆ ಬಗ್ಗೆ ತೊಕ್ಕೊಟ್ಟು ನೇತಾಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಈ ಅಪಘಾತದಿಂದ ರಿಕ್ಷಾ ಚಾಲಕನಿಗೂ ಹಾಗೂ ಆಟೋರಿಕ್ಷಾ ದಲ್ಲಿದ್ದ ಮಹಿಳಾ ಪ್ರಯಾಣಿಕಳಿಗೂ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ.ಎಂಬಿತ್ಯಾದಿ,

 

Crime Reported in Traffic South Police Station

ಈ ಪ್ರಕರಣದಸಾರಾಂಶವೆನೆಂದರೆ  ದಿನಾಂಕ;23.12.2021ರಂದು ಪಿರ್ಯಾದಿದಾರರಾದ  ಮಹಮ್ಮದ್ ಹರ್ಪಾಜ್ (25) ರವರ ತಮ್ಮ  ಇಬ್ರಾಹಿಂ  ಅಸ್ವಾಸ್ ರವರು   ಸ್ಕೂಟರ್ ನಂಬ್ರ :KL-14-Y-9252  ನೇದರಲ್ಲಿ  ಸವಾರನಾಗಿ  ಅನಸ್ ಎಂಬುವವರನ್ನು ಸಹಸವಾರ ನಾಗಿ ಕುಳ್ಳಿರಿಸಿಕೊಂಡು  ತಲಪಾಡಿ ಕಡೆಯಿಂದ  ತೊಕ್ಕಟ್ಟು ಕಡೆಗೆ  ರಾ ಹೆ 66 ರಲ್ಲಿ ಸವಾರಿಮಾಡಿಕೊಂಡು ಬರುತ್ತಾ ಸಂಜೆ ಸಮಯ ಸುಮಾರು 7:30 ಗಂಟೆಗೆ ತೊಕ್ಕಟ್ಟು ಕಾಪಿಕಾಡ್ ಎಂಬಲ್ಲಿಗೆ ತಲುಪುತ್ತಿದಂತೆ ಅವರು ಬರುತ್ತಿದ್ದ ಏಕಮುಖ ರಸ್ತೆ ಗೆ ವಿರುದ್ದ ವಾಗಿ KA-19-HA-6716 ನಂಬ್ರದ ಸ್ಕೂಟರ್ ನ್ನು ಅದರ ಸವಾರ ನಿಖಿಲ್ ಎಂಬವನು  ಸಹ ಸವಾರನಾಗಿ ಸುಬ್ರಮಣ್ಯ ರವರನ್ನು ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷ್ಯತನ ದಿಂದ ಸವಾರಿಮಾಡಿಕೊಂಡು ಬಂದು ಪಿರ್ಯಾದಿದಾರರ ತಮ್ಮ ಸವಾರಿ  ಮಾಡುತ್ತಿದ್ದ ಸ್ಕೂಟರ್ ಗೆ  ಡಿಕ್ಕಿ ಹೊಡೆದ ಪರಿಣಾಮ ಎರಡು ಸ್ಕೂಟರ್ ನ ಸವಾರರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು  ಪಿರ್ಯಾದಿದಾರರ ತಮ್ಮ ಇಬ್ರಾಹಿಂ ಅಸ್ವಾಸ್ ತಲೆಗೆ  ಮತ್ತು ಮುಖಕ್ಕೆ ಗುದ್ದಿದ ರೀತಿಯ  ತೀವ್ರಸ್ವರೂಪದ  ರಕ್ತಗಾಯ ವಾಗಿದ್ದು ಗಾಯಳುವನ್ನು ಅಲ್ಲಿ ಸೇರಿದ ಸಾರ್ವಜನಿಕರು ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಯೆನಪೋಯ  ಆಸ್ಪತ್ರೆಗೆ  ದಾಖಲಿಸಿರುತ್ತಾರೆ  ಪಿರ್ಯಾದಿದಾರರ ತಮ್ಮನೊಡನೆ ಇದ್ದ ಸಹಸವಾರನಾದ ಅನಸ್ ನಿಗೆ   ಚಿಕ್ಕಪುಟ್ಟ  ಗಾಯವಾಗಿರುತ್ತವೆ  ಪಿರ್ಯಾದಿದಾರರು ತನ್ನ ತಮ್ಮ ನನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ  ಹಾಗೂ ಅಪಘಾತಪಡಿಸಿದ ಸ್ಕೂಟರ್ ಸವಾರ ಮತ್ತು ಸಹಸವಾರ   ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ ಎಸ್ ಹೆಗ್ಡೆ  ಆಸ್ಪತ್ರೆಗೆ ದಾಖಲಾಗಿರುತ್ತಾರೆ  ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 24-12-2021 07:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080