ಅಭಿಪ್ರಾಯ / ಸಲಹೆಗಳು

Crime Reported in : Konaje PS

ದಿನಾಂಕ 25-02-2022 ರಂದು ಪಿರ್ಯಾದಿ Sharanappa Bhandari ದಾರರು  ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ ಸುಮಾರು 15-00 ಗಂಟೆಗೆ  ಬಂಟ್ವಾಳ ತಾಲೂಕು  ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್ ಎಂಬಲ್ಲಿ  ರಸ್ತೆ ಬದಿಯಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆರೋಪಿತನು ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಸಿಬ್ಬಂದಿಯವರ ಸಹಾಯದಿಂದ ಆರೋಪಿಯನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂಬಿತ್ಯಾದಿ.

 

Crime Reported in : Urva PS

ಫಿರ್ಯಾಧುದಾರರಾದ ಮಾರುತಿ ರಿಟ್ಜ್ ಕಾರಿನ ಮಾಲಕರಾಗಿರುತ್ತಾರೆ. ತಮ್ಮ ಹಣ ಕಾಸಿನ ತೊಂದರೆಯಿಂದಾಗಿ ಅವರು ತಮ್ಮ ಕಾರನ್ನು OLX ವೆಬ್ ಸೈಟ್ ಮುಖಾಂತರ ಮಾರಾಟ ಮಾಡಲು ದಿನಾಂಕ 18-11-2020 ರಂದು ಜಾಹಿರಾತನ್ನು ನೀಡಿದ್ದು, ಅಂತೆಯೇ ಫಿರ್ಯಾಧುದಾರರಿಗೆ ದಿನಾಂಕ 19-11-2020 ರಂದು ಆರೋಪಿ 1 ನೇ ಮುನೀರ್ ಅಹ್ಮದ್ ನವರು ಮೊಬೈಲ್  ನಂ. 7338219149 ನೇಯದರಿಂದ ಪಿರ್ಯಾಧುದಾರರಿಗೆ ಕರೆ ಮಾಡಿ, ತಾನು ಕಾರನ್ನು ಖರೀದಿಸಲು ಇಚ್ಚಿಸಿರುವುದಾಗಿ ತಿಳಿಸಿದ್ದು,  ಅದೇ ದಿನ ಉರ್ವ ಶ್ರೀ ಮಾರಿಗುಡಿ ಬಳಿ ಕಾರನ್ನು ನೋಡಲು  ಪಿರ್ಯಾಧುದಾರರನ್ನು ಭೇಟಿ ಮಾಡಿರುತ್ತಾರೆ. ನಂತರ ದಿನಾಂಕ 22-11-2020 ರಂದು ಪಿರ್ಯಾಧುದಾರರ ಕಾರನ್ನು ರೂ. 2,50,000/- ಕ್ಕೆ ಖರೀದಿಸುವುದಾಗಿ ತಿಳಿಸಿರುತ್ತಾರೆ.  ಅಂತೆಯೇ ಪಿರ್ಯಾಧುದಾರರು ಕಾರಿನ ನೋಂದಣಿ ಮಾಲಕತ್ವದ ಬದಲಾವಣೆಯ ಬಗ್ಗೆ ಫಾರಂ ನಂ. 29 ಮತ್ತು 30 ಕ್ಕೆ ಸಹಿ ಮಾಡಿ, ಕಾರನ್ನು ಆರೋಪಿ 1ನೇ ಯವರಿಗೆ ಮಾರಾಟ ಮಾಡಿದ್ದು, ಆರೋಪಿ 1ನೇ ಯವರು ರೂ. 2,50,000/- ಮೊಬಲಗಿನ ಕಾರ್ಪೋರೇಷನ್ ಬ್ಯಾಂಕ್ ನ ಚೆಕ್ ನಂಬ್ರ. 561970 ನೇಯದನ್ನು ಪಿರ್ಯಾಧುದಾರರಿಗೆ ನೀಡಿರುತ್ತಾರೆ. ಆರೋಪಿ 1ನೇ ರವರ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ನಗದು ಹಣದ ಇಲ್ಲದ ಕಾರಣ ಸದ್ರಿ ಚೆಕ್ ವಾಪಾಸಾಗಿರುತ್ತದೆ. ನಂತರ ಪಿರ್ಯಾಧುದಾರರು 1ನೇ ಆರೋಪಿತನನ್ನು ಸಾಕಷ್ಟು ಬಾರಿ ಸಂಪರ್ಕಿಸಲು ಪ್ರಯತ್ನ ಪಟ್ಟರೂ ಆರೋಪಿಯು ಪಿರ್ಯಾಧುದಾರರ ಕರೆಗಳನ್ನು ಸ್ವೀಕರಿಸದೇ ಇದ್ದು, ನಂತರದ ದಿನಗಳಲ್ಲಿ ಸದ್ರಿ ಕಾರನ್ನು ಆರೋಪಿ 1ನೇ ಯವರು ಆರೋಪಿ 2ನೇ ಯವರಿಗೆ ಮಾರಾಟ ಮಾಡಿರುವುದು ತಿಳಿದು ಬಂದಿರುತ್ತದೆ. ಆದುದರಿಂದ ಆರೋಪಿತರುಗಳು ಪಿರ್ಯಾಧುದಾರರ ಕಾರನ್ನು ಹಿಂತಿರುಗಿಸದೆ ಹಾಗೂ ಸದ್ರಿ ಕಾರಿನ ಮಾರಾಟದ ಹಣವನ್ನೂ ನೀಡದೆ ಪಿರ್ಯಾಧುದಾರರಿಗೆ ಮೋಸ ಮಾಡುವ ಉದ್ದೇಶದಿಂದ ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿರುತ್ತಾರೆ ಎಂಬಿತ್ಯಾದಿ.

 

Crime Reported in : Traffic North PS

ಪಿರ್ಯಾದಿ Smt Premalatha Rajesh Karkera ರವರ ಗಂಡ ರಾಜೇಶ್ ಕದ್ರಿ (43 ವರ್ಷ) ಎಂಬವರು ದಿನಾಂಕ 25-02-2022 ರಂದು ತನ್ನ ಕಛೇರಿಯ ಕೆಲಸದ ನಿಮಿತ್ತ ತನ್ನ ಬಾಬ್ತು KA-19-HA-7588 ನಂಬ್ರದ ಡಿಯೋ ಸ್ಕೂಟರಿನಲ್ಲಿ ಪಣಂಬೂರು ಬ್ಯಾಂಕ್ ಆಫ್ ಬರೋಡಕ್ಕೆ ಹೋಗಿ ಅದೇ ಸ್ಕೂಟರಿನಲ್ಲಿ ವಾಪಸು ಮಂಗಳೂರು ಕಡೆಗೆ ಬರುತ್ತಾ ಬೆಳಿಗ್ಗೆ ಸಮಯ ಸುಮಾರು 11:15 ಗಂಟೆಗೆ ಬೈಕಂಪಾಡಿ ಜಂಕ್ಷನಿನ APMC ದ್ವಾರದ ಎದುರಿನಲ್ಲಿ ಬರುತ್ತಿದ್ದಂತೆ ದ್ವಾರದ ಎಡಬದಿಯಲ್ಲಿರುವ ಸರ್ವೀಸ್ ಡಾಮಾರು ರಸ್ತೆ ಕಡೆಯಿಂದ KA-19-MA-6431 ನಂಬ್ರದ ಬಿಳಿ ಬಣ್ಣದ ಸ್ವಿಪ್ಟ್ ಕಾರನ್ನು ಅದರ ಚಾಲಕನಾದ ಖಲೀಲ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ  NH 66ನೇ ಡಾಮಾರು ರಸ್ತೆಗೆ ಮುನ್ನುಗ್ಗಿಸಿ ರಾಜೇಶ್ ಕದ್ರಿ ರವರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ರಾಜೇಶ್ ಕದ್ರಿ ರವರ ತಲೆಗೆ ಗಂಭೀರ ಸ್ವರೂಪದ ರಕ್ತಗಾಯವಾಗಿ, ಬಲ ಕಾಲಿ ಮೊಣಗಂಟಿನ ಬಳಿ, ಬಲಕಾಲಿ ಹೆಬ್ಬೆರಳಿನ ಬುಡಕ್ಕೆ, ಎಡಕಾಲಿನ ಮೊಣಗಂಟಿಗೆ ಮತ್ತು ಕೋಲು ಕಾಲಿಗೆ ಅಲ್ಲಲ್ಲಿ ತರಚಿದ ರೀತಿಯ ಗಾಯವಾಗಿದ್ದು, ಸೊಂಟಕ್ಕೆ ಗುದ್ದಿದ ರೀತಿಯ ಒಳಗಾಯವಾಗಿ ಚಿಕಿತ್ಸೆ ಬಗ್ಗೆ ಮಂಗಳೂರಿನ AJ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿಯೂ, ಅಪಘಾತ ಪಡಿಸಿದ ಕಾರಿನ ಚಾಲಕನು ಅಪಘಾತ ಪಡಿಸಿದ ಬಳಿಕ ಅಪಘಾತ ಸ್ಥಳದಿಂದ ಕಾರಿನೊಂದಿಗೆ ಪರಾರಿಯಾಗಿರುತ್ತಾನೆ ಎಂಬುವುದಾಗಿ ಪಿರ್ಯಾದಿ ಸಾರಾಂಶ.

Crime Reported in : Mangalore East PS

ಪಿರ್ಯಾದಿ Bilal Raif ದಾರರು ತನ್ನ ಬಾಬ್ತು  ಡಸ್ಟರ್ ಕಾರಿನಲ್ಲಿ ತನ್ನ ಗೆಳೆಯ ಶಾಹೀನ್ ರವರೊಂದಿಗೆ ದಿನಾಂಕ:25-02-2022 ರಂದು  ಕೆಲಸ ನಿಮಿತ್ತ ಹಂಪನ ಕಟ್ಟೆಯಿಂದ ಬಲ್ಮಠ ಕಡೆಗೆ ಹೋಗುತ್ತಿರುವ ಸಮಯ ಸುಮಾರು ಮಧ್ಯಾಹ್ನ 12-00 ಗಂಟೆಗೆ ಆಟೋ ರಿಕ್ಷಾದ ಚಾಲಕನು ಸಡನ್ ಆಗಿ ಬಲ ಭಾಗಕ್ಕೆ ಅಂದರೆ ಮಿಲಾಗ್ರಿಸ್ ಕಡೆಗೆ ಚಲಾಯಿಸಿದಾಗ ಪಿರ್ಯಾದಿದಾರರು ಎಲ್ಲಿಗೆ ರಾಂಗ್ ಸೈಡ್ ನಲ್ಲಿ ಬರುವುದು ಎಂದು ಪ್ರಶ್ನಿಸಿದಾಗ ಆಟೋ ಚಾಲಕನು ತುಳು ಭಾಷೆಯಲ್ಲಿ ಪೋಯಾ ನಾಯಿ ಬೇವರ್ಸಿ ನಿನ್ನ ಅಮ್ಮೆರಡ ಪನ್ನು ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಆಟೋವನ್ನು ಬಾವುಟ ಗುಡ್ಡೆ ಕಡೆಗೆ ಚಲಾಯಿಸಿಕೊಂಡು ಹೋದಾಗ ಪಿರ್ಯಾದಿದಾರರು ಆಟೋವನ್ನು ಹಿಂಬಾಲಿಸಿಕೊಂಡು ಹೋದಾಗ ಆಟೋ ಚಾಲಕನು ಬಲ್ಮಠ ಜ್ಯೂಸ್ ಜಂಕ್ಷನ್ ಬಳಿಯಿರುವ ಆಟೋ ರಿಕ್ಷಾ ನಿಲ್ದಾಣದ ಬಳಿ ನಿಲ್ಲಿಸಿ ಆಟೋದಿಂದ ಕೆಳಗಿಳಿದು ಪಿರ್ಯಾದಿದಾರರ ಕಾರನ್ನು ತಡೆದು ನಿಲ್ಲಿಸಿದಾಗ ಪಿರ್ಯಾದಿದಾರರು ಮತ್ತು ಶಾಹಿನ್ ಎಂಬವರು ಕಾರಿನಿಂದ ಇಳಿದಾಗ ಆಟೋ ಚಾಲಕನು ಅಲ್ಲಿದ್ದ ಆಟೋ ರಿಕ್ಷಾ ಚಾಲಕರೊಂದಿಗೆ ಸೇರಿಕೊಂಡು ಒಮ್ಮೆಲೆ ಬೇವರ್ಸಿಗಳೇ ನಿಮಗೆ ಕಾರು ಸರಿಯಾಗಿ ಚಲಾಯಿಸಲಾವುದಿಲ್ಲವೆಂದು ಹೇಳಿ ನನ್ನ ಅಂಗಿಯ ಕಾಲರ್ ಹಿಡಿದು ಕೈಯಿಂದ ಕೆನ್ನೆಗೆ ಹೊಡೆದು ಕಾಲಿನಿಂದ ನನ್ನ ಎಡಕಾಲಿನ ತೊಡೆ ಬಾಗಕ್ಕೆ ತುಳಿದು ಎಡಕೈಬೆರಳಿನ ಮದ್ಯ ಬೆರಳಿಗೆ ಕಚ್ಚಿರುತ್ತಾನೆ. ಪಿರ್ಯಾದಿದಾರರೊಂದಿಗೆ ಇದ್ದ ಶಾಹಿನ್ ರವರಿಗೆ ಕೂಡ ಕುತ್ತಿಗೆ ಮತ್ತು ಕೆನ್ನೆಗೆ ಕೈಯಿಂದ ಹೊಡೆದಿರುತ್ತಾರೆ. ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 25-02-2022 07:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080