ಅಭಿಪ್ರಾಯ / ಸಲಹೆಗಳು

Crime Reported in: Traffic North Police Station

ಪಿರ್ಯಾದಿದಾರರಾದ ರಕ್ಷಿತ್ ಎಸ್ (26) ರವರು ದಿನಾಂಕ: 26-06-2022 ರಂದು ಅವರ ಬಾಬ್ತು KL-14-AB-5669 ನಂಬ್ರದ ಮೋಟಾರ್ ಸೈಕಲಿನಲ್ಲಿ ಅಗತ್ಯ ಕೆಲಸದ ನಿಮಿತ್ತ ಉಡುಪಿಗೆ ಹೋಗಿ ವಾಪಾಸು ಮಂಗಳೂರಿನ ತನ್ನ ರೂಂ ಕಡೆ ಬರುತ್ತಾ ರಾತ್ರಿ ಸಮಯ ಸುಮಾರು 11:30 ಗಂಟೆಗೆ ಕೊಂಚಾಡಿ ಜಂಕ್ಷನಿನ ಮೆಡ್ ಪ್ಲಸ್ ಮೆಡಿಕಲ್ ಸಮೀಪ ಸಮೀಪಿಸುತ್ತಿದ್ದಂತೆ ಕುಂಟಿಕಾನ ಕಡೆಯಿಂದ ಕಾವೂರು ಕಡೆಗೆ KA-19-MM-2825 ನಂಬ್ರದ ಕಾರನ್ನು ಅದರ ಚಾಲಕಿಯಾದ ಸವಿತಾ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ಕಾಂಕ್ರೀಟ್ ರಸ್ತೆಗೆ ಎಸೆಯಲ್ಪಟ್ಟು ಬಿದ್ದು ಪಿರ್ಯಾದಿದಾರರ ಬಲಕಾಲಿನ ಕೋಲು ಕಾಲಿನಲ್ಲಿ ಮೂಳೆ ಮುರಿತದ ಗಂಭೀರ ಸ್ವರೂಪದ ಚರ್ಮ ಹರಿದ ರೀತಿಯ ರಕ್ತಗಾಯವಾಗಿದ್ದು ಅಲ್ಲದೇ ಬಲಕಣ್ಣಿನ ಹುಬ್ಬಿನಲ್ಲಿ ಹಾಗೂ ಕೆಳತುಟಿಯ ಬಲಬದಿ ಚರ್ಮ ಹರಿದಿದ್ದು, ಬಲಕಣ್ಣಿನ ಕೆಳಬಾಗ ಕೆನ್ನೆಯಲ್ಲಿ ತರಚಿದ ರೀತಿಯಲ್ಲಿ ಗಾಯವಾಗಿ ಚಿಕಿತ್ಸೆ ಬಗ್ಗೆ ತೇಜಸ್ವಿನಿ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ  ಎಂಬಿತ್ಯಾದಿ.

Crime Reported in Moodabidre PS

 ದಿನಾಂಕ: 26-06-2022 ರಂದು ಬೆಳಿಗ್ಗೆ 08-50 ಗಂಟೆಗೆ ಮೂಡಬಿದ್ರೆ ತಾಲೂಕು ಪ್ರಾಂತ್ಯ ಗ್ರಾಮದ ಕೋಟೆಬಾಗಿಲು ಎಂಬ ನಿರ್ಜನ ಪ್ರದೇಶದಲ್ಲಿ ಒಬ್ಬ ಯುವಕ ಗಾಂಜಾ ಸೇವನೆ ಮಾಡುತ್ತಿದ್ದಾರೆ ಎಂಬುದಾಗಿ ಮಾಹಿತಿ ಬಂದ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ಮಾಡಿದಾಗ ಮಹಮ್ಮದ್ ಸಾಧಿಕ್, ಪ್ರಾಯ:24 ವರ್ಷ, ವಾಸ: ಕೋಟೆಬಾಗಿಲು ಮನೆ, ಪ್ರಾಂತ್ಯ ಗ್ರಾಮ, ಮೂಡುಬಿದ್ರೆ ತಾಲೂಕು ಎಂಬವರನ್ನು ದಿನಾಂಕ: 26-06-2022 ರಂದು 09-00 ಗಂಟೆಯ ಸಮಯಕ್ಕೆ ವಶಕ್ಕೆ ಪಡೆದಲ್ಲಿ ಇವನು ಯಾವುದೋ ಅಮಲು ಪದಾರ್ಥ ಸೇವಿಸಿದ ರೀತಿಯಲ್ಲಿ ಕಂಡು ಬಂದುದರಿಂದ ಇವರನ್ನು ವೈದ್ಯಾಧಿಕಾರಿಯವರು, ಎ. ಜೆ ಆಸ್ಪತ್ರೆ ಕುಂಟಿಕಾನ, ಮಂಗಳೂರು ತಾಲೂಕು ಇಲ್ಲಿ ತಪಾಸಣೆಗೊಳಪಡಿಸಿದಾಗ ಈತನು ಗಾಂಜಾ ಸೇವಿಸಿರುವ ಬಗ್ಗೆ ದೃಡಪಟ್ಟಿದ್ದರಿಂದ ಈತನ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿದೆ  ಎಂಬಿತ್ಯಾದಿ.

Crime Reported in Mangalore East Traffic PS                        

ಪಿರ್ಯಾದಿದಾರರಾದ ಮಹಮ್ಮದ್ ಹನೀಫ್ ರವರು ದಿನಾಂಕ 27.06.2022 ರಂದು ಬೆಳಿಗ್ಗೆ  ತನ್ನ ಬಾಬ್ತು ಸ್ಕೂಟರ್ ನಂಬ್ರ KA-19-EY-4287ನೇದರಲ್ಲಿ ತನ್ನ ಹೆಂಡತಿ ಮರಿಯಮ್ಮ(47)ರವರನ್ನು ಹಿಂಬದಿ ಸವಾರಿಣಿಯಾಗಿ ಕುಳ್ಳಿರಿಸಿಕೊಂಡು ವಿಟ್ಲ ಕಡೆಗೆ ಹೋಗಲು ಕೆ.ಪಿ.ಟಿ ಜಂಕ್ಷನ್ ಸಮೀಪ ಪೆಟ್ರೋಲ್ ಪಂಪಿನಲ್ಲಿ  ಸ್ಕೂಟರಿಗೆ ಪೆಟ್ರೋಲ್ ಹಾಕಿಸಿ ಅಲ್ಲಿಂದ ನಂತೂರು ಕಡೆಗೆ ಹೋಗಲು ರಾಷ್ಟ್ರೀಯ ಹೆದ್ದಾರಿ 66ನೇದಕ್ಕೆ ತಲುಪುತ್ತಿದ್ದಂತೆ ಮಧ್ಯಾಹ್ನ ಸಮಯ ಸುಮಾರು 1:00 ಗಂಟೆಗೆ ಅದೇ ರಸ್ತೆಯಲ್ಲಿ ವಾಹನಗಳು ಸಾಗುವ ವಿರುದ್ದ ದಿಕ್ಕಿನಲ್ಲಿ KA-18-V-8627ನೇ ಮೋಟಾರು ಸಕಲನ್ನು ಅದರ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕರ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿಗೆ ಢಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹಸವಾರಿಣಿ ಮರಿಯಮ್ಮ(47) ರವರು ರಾ.ಹೆ 66ನೇ ಡಾಮಾರು ರಸ್ತೆಗೆ ಬಿದ್ದಿದ್ದು ಅದೇ ವೇಳೆ ಕೆಪಿಟಿ ಜಂಕ್ಷನ್ ಕಡೆಯಿಂದ ನಂತೂರು ಕಡೆಗೆ KA-05-AK-7677ನೇ ಲಾರಿಯನ್ನು ಚಲಾಯಿಸಿಕೊಂಡು ಬರುತ್ತಿದ್ದ ಅದರ ಚಾಲಕ ನಿಯಂತ್ರಿಸದೇ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿಯಾಗಿ ಚಲಾಯಿಸಿದ ಪರಿಣಾಮ  ಸದ್ರಿ ಲಾರಿಯ ಎಡ ಮುಂಭಾಗದ ಚಕ್ರವು ಪಿರ್ಯಾದಿದಾರರ ಹೆಂಡತಿ ಮರಿಯಮ್ಮ(47) ರವರ ಬಲ ಕೈಮೇಲೆ ಹರಿದು ಹೋಗಿ ಬಲಕೈಯ ಮುಂಗೈ ಚಕ್ರದ ಅಡಿಯಲ್ಲಿ ಸಿಲುಕಿ ನಜ್ಜುಗುಜ್ಜಾಗಿ ರಕ್ತ ಗಾಯವಾಗಿದ್ದು, ಬೆರಳುಗಳು ಪೂರ್ತಿಯಾಗಿ ಹುಡಿಯಾಗಿರುತ್ತದೆ. ಸದ್ರಿಯವರನ್ನು ಚಿಕಿತ್ಸೆ ಬಗ್ಗೆ ಎ.ಜೆ ಆಸ್ಪತ್ರೆಗೆ ಸಾಗಿಸಿ ಒಳರೋಗಿಯಾಗಿ ದಾಖಲಿಸಲಾಗಿದ್ದು, ಅಪಘಾತ ಪಡಿಸಿದ ಬೈಕ್ ಸವಾರ ಹಾಗೂ ಲಾರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 27-06-2022 07:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080