ಅಭಿಪ್ರಾಯ / ಸಲಹೆಗಳು

Crime Reported in Mangalore East Traffic PS                              

ಪಿರ್ಯಾದಿದಾರರಾದ ಪೂಜಾ ಯು ಶೆಟ್ಟಿರವರು ದಿನಾಂಕ: 28-09-2021 ರಂದು ಮಧ್ಯಾಹ್ನ 12:00 ಗಂಟೆ ಸುಮಾರಿಗೆ ತನ್ನ ಬಾಬ್ತು KA-19-HE-0816 ನೇ ದರಲ್ಲಿ ಹಿಂಬದಿ ಸವಾರನಾಗಿ ಜೀವನ್ ಮಹೇಶ್ ಡಿಸೋಜಾರವರನ್ನು ಕುಳ್ಳಿರಿಸಿ ಮತ್ತು ಮಾನಸ್ ರಾಮ್ ನಾಥ್ ಉಗಲೆ ರವರು ತನ್ನ ಬಾಬ್ತು MH-12-CW-2744 ಮೋಟಾರು ಸೈಕಲಿನಲ್ಲಿ ಎ.ಜೆ ಆಸ್ಪತ್ರೆಯಿಂದ ತಮ್ಮ ತಮ್ಮ ವಾಹನದಲ್ಲಿ ಹೊರಟು ಬಲ್ಮಠ ಕಡೆಗೆ ಹೋಗುವರೇ NH 66 ರಲ್ಲಿ ನಂತೂರು ಮಾರ್ಗವಾಗಿ ಪಂಪ್ ವೆಲ್ ಕಡೆಗೆ ಸಾಗುತ್ತಾ ಮಧ್ಯಾಹ್ನ 12:20 ಗಂಟೆಗೆ “ಸಂದೇಶ” ದ ಎದುರಿನ ರಸ್ತೆಗೆ ಬಂದು ತಲುಪಿದಾಗ ಪಿರ್ಯಾದಿದಾರರ ಮುಂದುಗಡೆಯಿಂದ ಮಾನಸ್ ರಾಮ್ ನಾಥ್ ಉಗಲೆರವರು  MH-12-CW-2744 ಮೋಟಾರು ಸೈಕಲನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅದೇ ರಸ್ತೆಯಲ್ಲಿ KA-19-AC-1395 ನಂಬ್ರದ ಫಿಶ್ ಕಂಟೇನರ್ ಲಾರಿಯನ್ನು ಅದರ ಚಾಲಕ ಮೊಹಮ್ಮದ್ ಜಾಫರ್  ಸಾಬ್  ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ  ರೀತಿಯಲ್ಲಿ ಬಲಗಡೆಯಿಂದ ಓವರ್ ಟೇಕ್ ಮಾಡಲು ಹೋಗಿ ಮೋಟಾರು ಸೈಕಲಿನ ಬಲ ಭಾಗದ ಹ್ಯಾಂಡಲಿಗೆ ತಾಗಿದ  ಪರಿಣಾಮ ಮೋಟಾರು ಸೈಕಲ್ ಸಮೇತ  ಮಾನಸ್ ರಾಮ್ ನಾಥ್ ಉಗಲೆರವರು ರಾಷ್ಟ್ರೀಯ ಹೆದ್ದಾರಿ 66 ರ ಡಾಮಾರು ರಸ್ತೆಗೆ ಬಲ ಬದಿಗೆ ಬಿದ್ದಾಗ, ಢಿಕ್ಕಿ ಪಡಿಸಿದ ಲಾರಿಯ ಎಡಭಾಗದ ಹಿಂಭಾಗದ ಚಕ್ರಕ್ಕೆ ಸಿಲುಕಿ ಚಕ್ರವು ಸದ್ರಿಯವರ ತಲೆಯ ಮೇಲೆ ಹರಿದು ಹೋಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ ಎಂಬಿತ್ಯಾದಿ.

 

Crime Reported in Traffic South PS

ಪಿರ್ಯಾದಿ CHANDRAHASA BANGERA ದಾರರು ದಿನಾಂಕ :28-09-2021 ರಂದು  ಅಸೈಗೋಳಿ ತಿಪ್ಲೆಪದವು ಸಮೃಧ್ದಿ ಫರ್ನಿಚರ್ ಅಂಗಡಿಗೆ ಹೋಗಿ ಅಲ್ಲಿಂದ ವಾಪಾಸ್  ಅವರ ಮನೆಯ ಪಾವೂರು ಕಡೆಗೆ ಸ್ಕೂಟರ್ ನಂಬ್ರ  KA-19-EN-1630 ನೇದನ್ನು ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ಸುಮಾರು ಬೆಳಿಗ್ಗೆ 11-15 ಗಂಟೆಗೆ ಪಜೀರ್ ಬಸ್ ಸ್ಟಾಪ್ ಬಳಿ  ತಲುಪುತ್ತಿದ್ದಂತೆ ಗ್ರಾಮಚಾವಡಿ ಕಡೆಯಿಂದ ಬರುತ್ತಿದ್ದ ಸ್ಕೂಟರ್ ನಂಬ್ರ KA-19-HE-7631 ನೇದರ ಸವಾರಮೊಹಮ್ಮದ್ ರಫೀಕ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸ್ಕೂಟರ್ ನ್ನು ಸವಾರಿ ಮಾಡಿಕೊಂಡು ಬಂದು  ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಪಡಿಸಿದ ಪರಿಣಾಮ  ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಅವರ ಬೆನ್ನಿನ ಬಲ ಬದಿಗೆ ಮೂಳೆ ಮುರಿತದ ಗಾಯ ಹಾಗೂ ಎದೆಗೆ ಗುದ್ದಿದ ರೀತಿಯ  ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರು ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಆಟೋರಿಕ್ಷಾ ವೊಂದರಲ್ಲಿ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ. ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 28-09-2021 08:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080