ಅಭಿಪ್ರಾಯ / ಸಲಹೆಗಳು

Crime Reported in Konaje PS

ದಿನಾಂಕ 28.03.2022 ರಂದು ಸುಮಾರು 21.45 ಗಂಟೆಗೆ ಮಂಗಳೂರು ತಾಲೂಕು ಬೆಳ್ಮ ಗ್ರಾಮದ ಬದ್ಯಾರು ಮಸೀದಿ ಬಳಿ, ಅಪ್ನ ಬಜಾರ್ ಎಂಬ ಅಂಗಡಿಯ ಎದುರುಗಡೆ ರಸ್ತೆಯಲ್ಲಿ ಆರೋಪಿಗಳಾದ ಮುಸ್ತಾಫ, ಸುಹೈಲ್ ಹಾಗೂ ಇತರರು ಸೇರಿಕೊಂಡು ಪಿರ್ಯಾದಿದಾರರಾದ Ibrahim ರವರ ಮಗನಾದ ಅಶ್ರಫ್ ಎಂಬಾತನಿಗೆ ಹರಿತವಾದ ಆಯುಧದಿಂದ ಬಲ ಕೈಗೆ  ಗಂಭೀರ ಸ್ವರೂಪದ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ, ಕೊಲೆಗೆ ಯತ್ನಿಸಿದ್ದು, ಗಾಯಾಳು ಅಶ್ರಫ್ ನನ್ನು ಪಿರ್ಯಾದಿದಾರರು ಹಾಗೂ ರವೂಫ್ ಎಂಬವರು ಸೇರಿಕೊಂಡು ಚಿಕಿತ್ಸೆಯ ಬಗ್ಗೆ ಕಣಚೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಘಟನೆಗೆ ಕಾರಣವೇನೆಂದರೆ ಈ ಹಿಂದೆಯು ಕೂಡ ಗಾಯಾಳುವಿಗೂ ಮತ್ತು ಆರೋಪಿಗಳಿಗೂ ಗಲಾಟೆಯಾಗಿರುವುದು ಹಾಗೂ ಆರೋಪಿಗಳು ಗಾಯಾಳುವಿನ ಮನೆಯ ಬಳಿ ತಡ ರಾತ್ರಿ ತನಕ ಸುತ್ತಾಡುತ್ತಿರುವುದನ್ನು ಪ್ರಶ್ನಿಸಿರುವುದು ಆಗಿರುತ್ತದೆ ಎಂಬಿತ್ಯಾದಿ.

 

Crime Reported in Traffic North PS

ದಿನಾಂಕ: 29-03-2022 ರಂದು ಪಿರ್ಯಾದಿದಾರರಾದ ಕಿರಣ್ ರವರು ಅವರ ಮೋಟಾರ್ ಸೈಕಲ್ ನಲ್ಲಿ ಎಸ್ ಕೋಡಿ ಕಡೆಯಿಂದ  ಪಕ್ಷಿಕೆರೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ಪಿರ್ಯಾದಿದಾರರ ಎದುರಿನಿಂದ ಅವರ ಪರಿಚಯದ ಸುಜಿತ್ ಸುವರ್ಣ ರವರು ಅವರ ಬಾಬ್ತು KA-19-HJ-1274 ನೇ ನಂಬ್ರದ ಮೋಟಾರ್ ಸೈಕಲ್ ನಲ್ಲಿ ಎಸ್ ಕೋಡಿ ಮಾರ್ಗವಾಗಿ ಬೈಕಂಪಾಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 8:30 ಗಂಟೆಗೆ ಎಸ್ ಕೋಡಿ ಬಳಿ ರಾಮಣ್ಣ ಶೆಟ್ಟಿ ನಿಟ್ಟೆ ಮೆಮೋರಿಯಲ್ ಶಾಲೆ ಹತ್ತಿರ ತಲುಪುತ್ತಿದಾಗ ಹಳೆಯಂಗಡಿ ಕಡೆಯಿಂದ ಎಸ್ ಕೋಡಿ ಕಡೆಗೆ KA-15-5317 ನೇ ನಂಬ್ರದ ಪಿಕ್ ಅಪ್ ವಾಹನವನ್ನು ಅದರ ಚಾಲಕ ಶಾರುಖ್ ಎಂಬುವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಬಂದು ಸುಜಿತ್ ಸುವರ್ಣ ರವರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಸುಜಿತ್ ಸುವರ್ಣ ರವರು ಮೊಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಕುತ್ತಿಗೆ ಬಲ ಭಾಗ ಕಾಲರ್ ಬೋನು, ಪಕ್ಕೆಲಬು ಬಳಿ, ಬಲ ಕೈ ಹೆಬ್ಬೆರಳು ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಹಾಗೂ ಬಲಕಾಲಿನ ಮೊಣಗಂಟಿನ ಸುತ್ತ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

Crime Reported in Traffic South Police Station

ದಿನಾಂಕ: 28-03-2022 ರಂದು ಪಿರ್ಯಾದಿದಾರರಾದ ರಾಕೇಶ್ ರವರು ಅವರ ಬಾಬ್ತು ಸ್ಕೂಟರ್ ನಂಬ್ರ: KA-19-EN-2448 ನೇದನ್ನು ಕೆಲಸದ ನಿಮಿತ್ತ ಕದ್ರಿಯಿಂದ ಸಹ್ಯಾದ್ರಿಯ ಕಡೆಗೆ ಸವಾರಿ ಮಾಡಿಕೊಂಡು ಹೋಗಿ ಅಲ್ಲಿ ಕೆಲಸ ಮುಗಿಸಿಕೊಂಡು ವಾಪಾಸ್ಸು ಮಂಗಳೂರು ಕಡೆಗೆ ಬರಲು ಸಹ್ಯಾದ್ರಿಯ ಬಳಿ ಯುಟರ್ನ್ ತೆಗೆದುಕೊಂಡು ಎಡಬದಿಗೆ ಇಂಡಿಕೇಟರ್ ಹಾಕಿ ಎಡಬದಿಗೆ ಬರುತ್ತಿರುವ ಸಮಯ ಸುಮಾರು ಮದ್ಯಾಹ್ನ 15-15 ಗಂಟೆಗೆ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರ್ ನ ಹಿಂಬದಿಯಿಂದ ಅಂದರೆ ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ ಸ್ಕೂಟರ್ ನಂಬ್ರ: KA-21-Y-9696 ನೇದನ್ನು ಅದರ ಸವಾರ ಮೊಹಮ್ಮದ್ ಹಕೀಮ್ ಎಂಬಾತನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರ್ ನ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು  ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು, ಅವರ ಎಡ ಕೈ ಮೊಣಗಂಟೆಗೆ , ಸೊಂಟಕ್ಕೆ ಹಾಗೂ ಬೆನ್ನಿಗೆ ಗುದ್ದಿದ ರೀತಿಯ ಗಾಯವಾಗಿರುತ್ತದೆ. ಹಾಗೂ ಅಪಘಾತ ಪಡಿಸಿದ ಸ್ಕೂಟರ್ ಸವಾರನು ಸಹ ಡಾಮಾರು ರಸ್ತೆಗೆ ಬಿದ್ದು ಗಾಯಗೊಂಡವರನ್ನು ಅಲ್ಲಿ ಸೇರಿದ ಜನರು ಆಟೋರಿಕ್ಷಾವೊಂದರಲ್ಲಿ ಕಳುಹಿಸಿರುತ್ತಾರೆ. ಸದ್ರಿ ಅಪಘಾತದ ಕುರಿತು ರಾಜಿಯಲ್ಲಿ ಇತ್ಯರ್ಥಪಡಿಸುವುದಾಗಿ ಅಪಘಾತಪಡಿಸಿದ ಸ್ಕೂಟರ್ ಸವಾರರ ಕಡೆಯವರು ತಿಳಿಸಿದ್ದು, ಈವರೆಗೂ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದೇ ಇದ್ದುದರಿಂದ ದೂರು ನೀಡಲು ತಡವಾಗಿರುತ್ತದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 29-03-2022 07:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080