ಅಭಿಪ್ರಾಯ / ಸಲಹೆಗಳು

Crime Reported in Kankanady Town PS                         

ಪಿರ್ಯಾದಿದಾರರಾದ ಪಿಎಸ್ಐ ಕೃಷ್ಣ ಬಿ ರವರು ಠಾಣಾ ಸಿಬ್ಬಂದಿರವರ ಜೊತೆ ದಿನಾಂಕ  30-04-2022 ರಂದು ಇಲಾಖಾ ವಾಹನದಲ್ಲಿ ಠಾಣಾ ವ್ಯಾಪ್ತಿಯ ಕಣ್ಣೂರು ಬಳಿ ರೌಂಡ್ಸ್ ಕರ್ತವ್ಯದಲ್ಲಿರುವಾಗ  ಯುವಕನೋರ್ವ ಮಾದಕ ವಸ್ತು ಸೇವಿಸುತ್ತಿದ್ದಾನೆಂಬ ಮಾಹಿತಿ  ಮೇರೆಗೆ ಮಾಹಿತಿ ಬಂದ ಸ್ಥಳವಾದ ಕಣ್ಣೂರು ಬಸ್ಸುನಿಲ್ದಾಣದ ಬಳಿ ಸಮಯ ಸುಮಾರು 09.30 ಗಂಟೆಗೆ ಬಂದಾಗ ಸಾರ್ವಜನಿಕ ಸ್ಥಳದಲ್ಲಿ ಓರ್ವ ಯುವಕನೊರ್ವ  ಮಾದಕ ವಸ್ತು  ಸೇವನೆ ಮಾಡುತ್ತಿದ್ದುದ್ದನ್ನು ಕಂಡು  ಆತನನ್ನು ವಶಕ್ಕೆ ಪಡೆದು ವಿಚಾರಿಸಿದಲ್ಲಿ ಆತನು ತನ್ನ ಹೆಸರು  ಅಬೂಬಕ್ಕರ್ ಮಿಸ್ಬಾ ಇಸ್ಮಾಯಿಲ್ ಪ್ರಾಯ: 28, ತಂದೆ: ಇಸ್ಮಾಯಿಲ್, ವಾಸ: ವಳಚ್ಚಿಲ್ ಹೌಸ್, ಬದ್ರಿಯ ಮದರಸದ ಬಳಿ, ಅರ್ಕುಳ, ದ.ಕ ಜಿಲ್ಲೆ ಎಂಬುದಾಗಿ ತಿಳಿಸಿದನು. ವಿಚಾರಣೆ ನಡೆಸಿದಾಗ ಆರೋಪಿತನು ಗಾಂಜಾ ಎಂಬ ಮಾದಕ ವಸ್ತು ಸೇವಿಸಿರುವುದನ್ನು ಒಪ್ಪಿಕೊಂಡಿರುವ ಮೇರೆಗೆ ದೃಡೀಕರಿಸುವರೇ ವೈದ್ಯಾಧಿಕಾರಿಯವರು ಎ.ಜೆ ಆಸ್ಪತ್ರೆ ಕುಂಟಿಕಾನ ಮಂಗಳೂರು ಇವರ ಮುಂದೆ ಹಾಜರು ಪಡಿಸುವಂತೆ ಕೋರಿಕೆ ಪತ್ರದೊಂದಿಗೆ ಸಿಬ್ಬಂದಿಗಳೊಂದಿಗೆ ಕಳುಹಿಸಿಕೊಟ್ಟಲ್ಲಿ    ಅಬೂಬಕ್ಕರ್ ಮಿಸ್ಬಾ ಇಸ್ಮಾಯಿಲ್ ಎಂಬಾತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ವೈದ್ಯರು ಗಾಂಜಾ ಸೇವನೆ ಮಾಡಿರುವುದಾಗಿ ಧೃಢಿಕರಣ ಪತ್ರವನ್ನು ನೀಡಿರುವುದರಿಂದ ಆತನ ವಿರುದ್ದ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.

Crime Reported in Traffic South Police Station                                                        

ಪಿರ್ಯಾದಿ JAYEESHA K ದಾರರು ದಿನಾಂಕ: 28-04-2022 ರಂದು ಅವರ ಬಾಬ್ತು ಸ್ಕೂಟರ್ ನಂಬ್ರ:KA-19-HG-6194 ನೇದರಲ್ಲಿ ಪಿರ್ಯಾದಿದಾರರು ಸವಾರರಾಗಿಯೂ ಸಹ ಸವಾರರಾಗಿ ನವೀನ್ ಕುಮಾರ್ ರವರನ್ನು ಕುಳ್ಳಿರಿಸಿಕೊಂಡು ಮಂಗಳೂರು ಕಡೆಯಿಂದ ಅವರ ಮನೆ ಕಡೆಗೆ ಹೋಗುತ್ತಿರುವ ಸಮಯ ಸುಮಾರು ರಾತ್ರಿ 21-35 ಗಂಟೆಗೆ ಕಲ್ಲಾಪು ಗ್ಲೋಬಲ್ ಮಾರ್ಕೆಟ್ ಬಳಿ ತಲುಪುತ್ತಿದ್ದಂತೆ ಪಂಪ್ ವೇಲ್ ಕಡೆಯಿಂದ ಬರುತ್ತಿದ್ದ ಅಂದರೆ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರ್ ನ ಹಿಂದಿನಿಂದ  ಬರುತ್ತಿದ್ದ KA-28-AA-2125 ನೇದರ ಪಿಕ್ ಆಪ್  ವಾಹನ ಚಾಲಕನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಓಮ್ಮೇಲೆ ಎಡಬದಿಗೆ ಯಾವುದೇ ಸೂಚನೆ ನೀಡದೇ ಗ್ಲೋಬಲ್ ಮಾರ್ಕೆಟ್ ಕಡೆಗೆ ತಿರುಗಿಸಿದ ಪರಿಣಾಮ ಪಿಕ್ ಆಪ್ ನ ಮುಂಭಾಗದ ಗಾರ್ಡ್ ಸ್ಕೂಟರ್ ನಲ್ಲಿ ಸಹ ಸವಾರನಾದ ನವೀನ್ ಕುಮಾರ್ ರವರ ಬಲಕಾಲಿನ ತೋಳು ಭಾಗಕ್ಕೆ ಗುದ್ದಿದ್ದು ಇದ್ದರಿಂದ ನವೀನ್ ಕುಮಾರ್ ರವರ ಬಲಕಾಲು ಮೂಳೆ ಮುರಿತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ತೊಕ್ಕೊಟ್ಟು ಸಹರಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.ಎಂಬಿತ್ಯಾದಿ.

                    

ಇತ್ತೀಚಿನ ನವೀಕರಣ​ : 30-04-2022 02:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080