ಅಭಿಪ್ರಾಯ / ಸಲಹೆಗಳು

Crime Reported in Mulki PS          

ಪಿರ್ಯಾದಿ Dolphi Wilfred Miranda ದಾರರ ತೋಟದ ಮರದಿಂದ ತೆಗೆದ ಸಿಪ್ಪೆ ಸುಲಿಯದ ಅಡಿಕೆಗಳನ್ನು ಪಿರ್ಯಾದಿದಾರರ ಮನೆಯ ಅಂಗಳದಲ್ಲಿ ಒಣಗಲು ಹಾಕುತ್ತಿದ್ದು, ದಿನಾಂಕ 18.03.2022 ರಂದು 22.30 ಗಂಟೆಯಿಂದ ದಿನಾಂಕ 19.03.2022 ರಂದು ಬೆಳಿಗ್ಗೆ 06.00 ಗಂಟೆಯ ಮದ್ಯಾವಧಿಯಲ್ಲಿ ಸುಮಾರು 1 ಕ್ವೀಂಟಾಲ್ ಅಂದಾಜು ಸುಮಾರು 50000/- ರೂಪಾಯಿ ಮೌಲ್ಯದ ಒಣ ಅಡಿಕೆಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ, ಎಂಬಿತ್ಯಾದಿ.

Crime Reported in Mangalore East Traffic PS                                                   

 ದಿನಾಂಕ:31-03-2022 ರಂದು ಪ್ರಕರಣದ ಪಿರ್ಯಾದಿದಾರರಾದ ಸುರೇಶ್ ರವರು  ತನ್ನ ಸಂಬಂಧಿ ಹರೀಶ್ ಕುಮಾರ ಜೆ ರವರ ಬಾಬ್ತು KA-41-Z-5595 ನಂಬ್ರದ ಕಾರಿನಲ್ಲಿ ತನ್ನ ಪತ್ನಿಯೊಂದಿಗೆ ತಣ್ಣೀರು ಬಾವಿಗೆ ಹೋಗಿ ವಾಪಾಸು ಮನೆಯ ಕಡೆಗೆ ಬರುತ್ತಾ ಕುಂಟಿಕಾನ ಕಡೆಯಿಂದ ನಂತೂರು ಕಡೆಗೆ ಹಾದು  ಹೋಗಿರುವ  ರಾಷ್ಟ್ರೀಯ ಹೆದ್ದಾರಿ  66 ನೇ ಡಾಮಾರು ರಸ್ತೆಯಲ್ಲಿ ಕೆಪಿಟಿ ಜಂಕ್ಷನ್ ಬಳಿಗೆ ಬಂದು ತಲುಪುತ್ತಿದ್ದಂತೆ ಸಮಯ ಸುಮಾರು ಬೆಳಿಗ್ಗೆ 9:30 ಗಂಟೆಗೆ ಕುಂಟಿಕಾನ ಕಡೆಯಿಂದ ಬರುವ ವಾಹನಗಳಿಗೆ ನಿಲ್ಲುವಂತೆ ಸೂಚನೆ ಸಿಕ್ಕಿದ್ದು ಪಿರ್ಯಾದಿದಾರರೂ ಕೂಡ ಅವರು ಚಲಾಯಿಸಿಕೊಂಡಿದ್ದ ಕಾರನ್ನು ನಿಲ್ಲಿಸಿದ್ದು, ಅವರ ಕಾರಿನ ಪಕ್ಕ ಬಲಭಾಗದಲ್ಲಿ ಟ್ಯಾಂಕರ್ ಲಾರಿ ಬಂದು ನಿಂತಿದ್ದು, ನಂತರ ವಾಹನಗಳಿಗೆ ಮುಂದಕ್ಕೆ ಹೋಗಲು ಸೂಚನೆ ದೊರತಂತೆ ಎಲ್ಲಾ ವಾಹನಗಳು ಚಲಿಸಲು ಪ್ರಾರಂಭಿಸಿದ ವೇಳೆ ಪಿರ್ಯಾದಿದಾರರ ಕಾರಿನ ಬಲಭಾಗದಲ್ಲಿ ನಿಂತಿದ್ದ KA-01-AM-1199 ನೋಂದಣಿ ನಂಬ್ರದ LPG ಟ್ಯಾಂಕರ್ ನ್ನು ಅದರ ಚಾಲಕ ಪ್ರತಾಪ್ ಸಿಂಗ್ ಎಂಬಾತನು ಒಮ್ಮೇಲೇ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಎಡಕ್ಕೆ ಚಲಾಯಿಸಿ ಪಿರ್ಯಾದಿದಾರರ ಕಾರಿನ ಬಲ ಭಾಗಕ್ಕೆ ಢಿಕ್ಕಿ ಪಡಿಸಿದ್ದು, ಢಿಕ್ಕಿಯ ಪರಿಣಾಮ ಪಿರ್ಯಾದಿದಾರರ ಕಾರಿನ ಬಲ ಹಿಂಭಾಗ ಮತ್ತು ಬಲ ಭಾಗದ ಎರಡೂ ಡೋರ್ ಗಳೂ ಜಖಂಗೊಂಡಿರುತ್ತವೆ. ಈ ಬಗ್ಗೆ  ಅಪಘಾತ ಪಡಿಸಿದ LPG ಟ್ಯಾಂಕರ್  ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ಕೋರಿಕೆ ಎಂಬಿತ್ಯಾದಿ.

 

Crime Reported in Traffic South Police Station       

ದಿನಾಂಕ 30-03-2022 ರಂದು ಪಿರ್ಯಾದಿ NIJAAM ದಾರರು ಅವರ ಕಾರು ನಂಬರ್ KA-19-MK-8875 ನೇದರಲ್ಲಿ ದೇರಳಕಟ್ಟೆ ಕಡೆಯಿಂದ ಮಂಜನಾಡಿ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು 22:30 ಗಂಟೆಗೆ ನಾಟಿಕಾಲ್ ಕ್ರಾಸ್ ಬಳಿ ತಲುಪಿದಾಗ ಕಾರು ನಂಬರ್ KA-19-MF-9125 ನೇದರ ಚಾಲಕ ಅಪಘಾತ ಪಡಿಸಿ ರಸ್ತೆ ಬದಿಯಲ್ಲಿ ತಲೆಗೆ ಗಂಬೀರವಾಗಿ ಗಾಯಗೊಂಡು ಬಿದ್ದಿದ್ದ ವ್ಯಕ್ತಿಯನ್ನು ಪಿರ್ಯಾದಿದಾರರು ಅವರ ಕಾರಿನಲ್ಲಿ ಸಾರ್ವಜನಿಕ ಸಹಾಯದೊಂದಿಗೆ ಕಣಚೂರು  ಆಸ್ವತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿಲಾಗಿ ಗಾಯಳುವನ್ನು ಪರೀಕ್ಷಿಸಿದ ವೈದ್ಯರು ಗಾಯಳು ವ್ಯಕ್ತಿಯು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ ಇದರ ಬಗ್ಗೆ  ಅಲ್ಲಿಯ ಸಾರ್ವಜನಿಕರಲ್ಲಿ ವಿಚಾರಿಸಲಾಗಿ  KA-19-MF-9125 ನೇದರ ಕಾರು ಚಾಲಕ ಮೊಹಮ್ಮದ್ ಹಫೀಜ್ ರವರು ಅತಿವೇಗ ಹಾಗೂ ಹಾಗೂ ನಿರ್ಲಕ್ಷತನದಿಂದ ಕಾರನ್ನು ಚಲಾಯಿಸಿಕೊಂಡು ಹೋಗಿ ರಸ್ತೆಯ ಬದಿಯಲ್ಲಿ ನಿಂತಿದ್ದ ಹಜೀಬುಲ್ಲ್ ಹಕ್ಟ್  ಎಂಬುವರಿಗೆ ಡಿಕ್ಕಿ  ಪಡಿಸಿರುವುದಾಗಿ ತಿಳಿದುಬಂದಿರುತ್ತಾದೆ ಈ ಅಪಘಾತಕ್ಕೆ ಕಾರಣರಾದ ಕಾರು ನಂಬರ್ KA-19-MF-9125 ನೇದರ ಚಾಲಕ ಹಫೀಜ್ ರವರ ಮೇಲೆ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ಎಂಬಿತ್ಯಾದಿ.

 

Crime Reported in Bajpe PS  

“ಪಿರ್ಯಾದಿ Smt Vanitha ದಾರರ ಗಂಡ ಸುಬ್ರಾಯ ಶೆಟ್ಟಿಗಾರ್, ಪ್ರಾಯ 63 ವರ್ಷ, ರವರು ದಿನಾಂಕ: 30-03-2022 ರಂದು ಮಧ್ಯಾಹ್ನ 12.15 ಗಂಟೆಗೆ ಮಂಗಳೂರು ತಾಲೂಕು ಮೂಳೂರು ಗ್ರಾಮದ ಗುರುಪುರದಲ್ಲಿ ಬಸ್ಸಿನಿಂದ ಇಳಿದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅವರ ಹಿಂದಿನಿಂದ ಅಂದರೆ ಪೊಳಲಿ ದ್ವಾರದ ಕಡೆಯಿಂದ ಗುರುಪುರ ಕಡೆಗೆ ಈಚರ್ ಲಾರಿ ನಂಬ್ರ ಕೆಎ 19 ಎಸಿ 7134 ನೇದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಗಂಡ ಸುಬ್ರಾಯ ಶೆಟ್ಟಿಗಾರ್ ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರು ರಸ್ತೆಗೆ ಬಿದ್ದು ತೀವ್ರ ತರದ ಗಾಯಗಳಾಗಿದ್ದು,  ಚಿಕಿತ್ಸೆ ಬಗ್ಗೆ  ಮಂಗಳೂರು ಎ.ಜೆ  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ” ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 31-03-2022 06:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080