Feedback / Suggestions

Crime Reported in : Traffic South Police Station       

ಫಿರ್ಯಾದಿದಾರರಾದ ಸುಗುಮಾರನ್ ಕೆ. ಪೊಲೀಸ್ ಉಪ ನಿರೀಕ್ಷಕರು, ಮಂಗಳೂರು ಸಂಚಾರಿ ದಕ್ಷಿಣ ಪೊಲೀಸ್ ಠಾಣೆ, ಜಪ್ಪಿನಮೊಗರು ರವರು ದಿನಾಂಕ: 01-12-2022 ರಂದು ರಾತ್ರಿ  ವಿಶೇಷವಾಹನ ತಪಾಸಣೆಯ ಕಾರ್ಯಾಚರಣೆ ಬಗ್ಗೆ ಇಲಾಖಾ ವಾಹನ ಹೈವೆ ಪೆಟ್ರೋಲ್-4 ರಲ್ಲಿ ಎ.ಹೆಚ್.ಸಿ. ಮಹೇಶ್ ರವರ ಚಾಲಕರಾಗಿಯೂ, ಸಿಬ್ಬಂದಿಯಾದ ಎ.ಎಸ್.ಐ. ಸಂತೋಷ್ ಪಡೀಲ್, ಸಿ.ಹೆಚ್.ಸಿ. ರಾಜೇಶ್, ಸಿಪಿಸಿ ಸುರೇಶ್ ಹಾಗೂ ಸಿಪಿಸಿ  ವೀರೇಶ್ ರವರೊಂದಿಗೆ ಠಾಣಾ ಸರಹದ್ದಿನ ಪಂಪ್ ವೆಲ್ ಚೆಕ್ ಪಾಯಿಂಟ್ ನಲ್ಲಿ ಸಮವಸ್ತ್ರದಲ್ಲಿ ವಾಹನ  ತಪಾಸಣೆ ಕರ್ತವ್ಯದಲ್ಲಿರುವಾಗ ಸಮಯ ಸುಮಾರು ರಾತ್ರಿ 9-45 ಗಂಟೆಗೆ ಕಂಕನಾಡಿ ಹಳೆಯ ರಸ್ತೆ ಕಡೆಯಿಂದ ಪಂಪ್ ವೆಲ್ ಕಡೆಗೆ ಆಟೋ ರಿಕ್ಷಾ ನಂಬರ್- KA-70-1935 ನೇದನ್ನು ಅದರ ಚಾಲಕನು ಅತಿವೇಗವಾಗಿ ಬರುತ್ತಿದ್ದುದನ್ನು ಗಮನಿಸಿ ಫಿರ್ಯಾದಿದಾರರು ಜೊತೆಗಿದ್ದ ಸಿಬ್ಬಂದಿಗಳಾದ ಎ.ಎಸ್.ಐ. ಸಂತೋಷ್ ಪಡೀಲ್, ಸಿ.ಹೆಚ್.ಸಿರಾಜೇಶ್, ಸಿಪಿಸಿ  ಸುರೇಶ್ ಹಾಗೂ ಸಿಪಿಸಿ  ವೀರೇಶ್ ರವರಲ್ಲಿ ನಿಲ್ಲಿಸುವಂತೆ ಸೂಚನೆ ನೀಡುವಂತೆ ತಿಳಿಸಿದ್ದು, ಸದ್ರಿ ಸಿಬ್ಬಂದಿಗಳು ಆಟೋ ರಿಕ್ಷಾವನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಸದ್ರಿ ಆಟೋರಿಕ್ಷಾವನ್ನು ಅದರ ಚಾಲಕನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಯದ್ವಾ ತದ್ವಾ ಚಲಾಯಿಸಿ ವಾಹನವನ್ನು ಒಮ್ಮೆಲೇ ಪೊಲೀಸರತ್ತ ನುಗ್ಗಿಸಿಕೊಂಡು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಇಲಾಖಾ ಹೈವೇ ಪೆಟ್ರೋಲ್ ವಾಹನಕ್ಕೆ ಡಿಕ್ಕಿಪಡಿಸುವ ರೀತಿಯಲ್ಲಿ ಚಲಾಯಿಸಿ ಬಿ.ಸಿ. ರೋಡ್ ಕಡೆಗೆ ಪರಾರಿಯಾಗಿರುತ್ತಾನೆ ಎಂಬಿತ್ಯಾದಿಯಾಗಿದೆ.

Mangalore East Traffic PS                

 ದಿನಾಂಕ:30-11-2022 ರಂದು ಪಿರ್ಯಾದಿದಾರರಾದ ಮೊಹಮ್ಮದ್ ಅಲಿ ರವರು ಪಾಂಡೇಶ್ವರದಲ್ಲಿರುವ ಸೈಟ್ ಗೆ ಹೋಗಲು ತನ್ನ ಬಾಬ್ತು KA-19-EX-9341 ನೋಂದಣಿ ನಂಬ್ರದ ಸ್ಕೂಟರನ್ನು ಸವಾರಿ ಮಾಡಿಕೊಂಡು ಎಮ್ಮೆಕೆರೆ ಮಾರ್ಗವಾಗಿ ಬಂದು ಬಲಗಡೆ ಅಡ್ಡ ರಸ್ತೆಗೆ ತಿರುಗಿ ಬೋಳಾರ ಕಡೆಗೆ ಬರುತ್ತ ಮಧ್ಯಾಹ್ನ ಸಮಯ ಸುಮಾರು 12:00 ಗಂಟೆಗೆ ಸುಭಾಷ್ ನಗರ 2 ನೇ ಅಡ್ಡ ರಸ್ತೆ ಬಳಿಯ ರಸ್ತೆಗೆ ಬಂದು ತಲುಪುತ್ತಿದ್ದಂತೆ ಪಿರ್ಯಾದಿದಾರರ ಎದುರಿನಿಂದ ಚಲಾಯಿಸುತ್ತಿದ್ದ ಕಾರೊಂದನ್ನು ಅದರ ಚಾಲಕ ನಿಧಾನಿಸಿದಾಗ ಪಿರ್ಯಾದಿದಾರರು ಕೂಡ  ತನ್ನ ಸ್ಕೂಟರನ್ನು ನಿಧಾನಿಸಿಕೊಂಡು ಚಲಾಯಿಸುತ್ತಿದ್ದಾಗ ಎಮ್ಮೆ ಕೆರೆ ಕ್ರಾಸ್ ರಸ್ತೆಯಿಂದ ಬೋಳಾರದ ಕಡೆಗೆ KA-19-AD-6562  ಗೂಡ್ಸ್ ಟೆಂಫೋ ಚಾಲಕ ಮೊಹಮ್ಮದ್ ಹುರೈಶ್ ರವರು ನಿರ್ಲಕ್ಷ್ಯತನ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟರಿನ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ವಾಹನ ಸಮೇತ ರಸ್ತೆಗೆ ಬಿದ್ದವರನ್ನು ಗೂಡ್ಸ್ ಟೆಂಪೋ ಚಾಲಕ ಸಾರ್ವಜನಿಕರೊಂದಿಗೆ ಹೈಲ್ಯಾಂಡ್ ಆಸ್ಪತ್ರೆಗೆ ಕರೆ ತಂದಿದ್ದು, ವೈದ್ಯರು ಗಾಯಾಳುವಿಗೆ ಎಡ ಭುಜಕ್ಕೆ ಮೂಳೆ ಮುರಿತದ ಗಂಭೀರ ಗಾಯವಾಗಿದ್ದು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ ಎಂಬಿತ್ಯಾದಿ.

                               

Last Updated: 02-12-2022 05:10 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080