ಅಭಿಪ್ರಾಯ / ಸಲಹೆಗಳು

Crime Reported in : Traffic South Police Station       

ಫಿರ್ಯಾದಿದಾರರಾದ ಸುಗುಮಾರನ್ ಕೆ. ಪೊಲೀಸ್ ಉಪ ನಿರೀಕ್ಷಕರು, ಮಂಗಳೂರು ಸಂಚಾರಿ ದಕ್ಷಿಣ ಪೊಲೀಸ್ ಠಾಣೆ, ಜಪ್ಪಿನಮೊಗರು ರವರು ದಿನಾಂಕ: 01-12-2022 ರಂದು ರಾತ್ರಿ  ವಿಶೇಷವಾಹನ ತಪಾಸಣೆಯ ಕಾರ್ಯಾಚರಣೆ ಬಗ್ಗೆ ಇಲಾಖಾ ವಾಹನ ಹೈವೆ ಪೆಟ್ರೋಲ್-4 ರಲ್ಲಿ ಎ.ಹೆಚ್.ಸಿ. ಮಹೇಶ್ ರವರ ಚಾಲಕರಾಗಿಯೂ, ಸಿಬ್ಬಂದಿಯಾದ ಎ.ಎಸ್.ಐ. ಸಂತೋಷ್ ಪಡೀಲ್, ಸಿ.ಹೆಚ್.ಸಿ. ರಾಜೇಶ್, ಸಿಪಿಸಿ ಸುರೇಶ್ ಹಾಗೂ ಸಿಪಿಸಿ  ವೀರೇಶ್ ರವರೊಂದಿಗೆ ಠಾಣಾ ಸರಹದ್ದಿನ ಪಂಪ್ ವೆಲ್ ಚೆಕ್ ಪಾಯಿಂಟ್ ನಲ್ಲಿ ಸಮವಸ್ತ್ರದಲ್ಲಿ ವಾಹನ  ತಪಾಸಣೆ ಕರ್ತವ್ಯದಲ್ಲಿರುವಾಗ ಸಮಯ ಸುಮಾರು ರಾತ್ರಿ 9-45 ಗಂಟೆಗೆ ಕಂಕನಾಡಿ ಹಳೆಯ ರಸ್ತೆ ಕಡೆಯಿಂದ ಪಂಪ್ ವೆಲ್ ಕಡೆಗೆ ಆಟೋ ರಿಕ್ಷಾ ನಂಬರ್- KA-70-1935 ನೇದನ್ನು ಅದರ ಚಾಲಕನು ಅತಿವೇಗವಾಗಿ ಬರುತ್ತಿದ್ದುದನ್ನು ಗಮನಿಸಿ ಫಿರ್ಯಾದಿದಾರರು ಜೊತೆಗಿದ್ದ ಸಿಬ್ಬಂದಿಗಳಾದ ಎ.ಎಸ್.ಐ. ಸಂತೋಷ್ ಪಡೀಲ್, ಸಿ.ಹೆಚ್.ಸಿರಾಜೇಶ್, ಸಿಪಿಸಿ  ಸುರೇಶ್ ಹಾಗೂ ಸಿಪಿಸಿ  ವೀರೇಶ್ ರವರಲ್ಲಿ ನಿಲ್ಲಿಸುವಂತೆ ಸೂಚನೆ ನೀಡುವಂತೆ ತಿಳಿಸಿದ್ದು, ಸದ್ರಿ ಸಿಬ್ಬಂದಿಗಳು ಆಟೋ ರಿಕ್ಷಾವನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಸದ್ರಿ ಆಟೋರಿಕ್ಷಾವನ್ನು ಅದರ ಚಾಲಕನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಯದ್ವಾ ತದ್ವಾ ಚಲಾಯಿಸಿ ವಾಹನವನ್ನು ಒಮ್ಮೆಲೇ ಪೊಲೀಸರತ್ತ ನುಗ್ಗಿಸಿಕೊಂಡು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಇಲಾಖಾ ಹೈವೇ ಪೆಟ್ರೋಲ್ ವಾಹನಕ್ಕೆ ಡಿಕ್ಕಿಪಡಿಸುವ ರೀತಿಯಲ್ಲಿ ಚಲಾಯಿಸಿ ಬಿ.ಸಿ. ರೋಡ್ ಕಡೆಗೆ ಪರಾರಿಯಾಗಿರುತ್ತಾನೆ ಎಂಬಿತ್ಯಾದಿಯಾಗಿದೆ.

Mangalore East Traffic PS                

 ದಿನಾಂಕ:30-11-2022 ರಂದು ಪಿರ್ಯಾದಿದಾರರಾದ ಮೊಹಮ್ಮದ್ ಅಲಿ ರವರು ಪಾಂಡೇಶ್ವರದಲ್ಲಿರುವ ಸೈಟ್ ಗೆ ಹೋಗಲು ತನ್ನ ಬಾಬ್ತು KA-19-EX-9341 ನೋಂದಣಿ ನಂಬ್ರದ ಸ್ಕೂಟರನ್ನು ಸವಾರಿ ಮಾಡಿಕೊಂಡು ಎಮ್ಮೆಕೆರೆ ಮಾರ್ಗವಾಗಿ ಬಂದು ಬಲಗಡೆ ಅಡ್ಡ ರಸ್ತೆಗೆ ತಿರುಗಿ ಬೋಳಾರ ಕಡೆಗೆ ಬರುತ್ತ ಮಧ್ಯಾಹ್ನ ಸಮಯ ಸುಮಾರು 12:00 ಗಂಟೆಗೆ ಸುಭಾಷ್ ನಗರ 2 ನೇ ಅಡ್ಡ ರಸ್ತೆ ಬಳಿಯ ರಸ್ತೆಗೆ ಬಂದು ತಲುಪುತ್ತಿದ್ದಂತೆ ಪಿರ್ಯಾದಿದಾರರ ಎದುರಿನಿಂದ ಚಲಾಯಿಸುತ್ತಿದ್ದ ಕಾರೊಂದನ್ನು ಅದರ ಚಾಲಕ ನಿಧಾನಿಸಿದಾಗ ಪಿರ್ಯಾದಿದಾರರು ಕೂಡ  ತನ್ನ ಸ್ಕೂಟರನ್ನು ನಿಧಾನಿಸಿಕೊಂಡು ಚಲಾಯಿಸುತ್ತಿದ್ದಾಗ ಎಮ್ಮೆ ಕೆರೆ ಕ್ರಾಸ್ ರಸ್ತೆಯಿಂದ ಬೋಳಾರದ ಕಡೆಗೆ KA-19-AD-6562  ಗೂಡ್ಸ್ ಟೆಂಫೋ ಚಾಲಕ ಮೊಹಮ್ಮದ್ ಹುರೈಶ್ ರವರು ನಿರ್ಲಕ್ಷ್ಯತನ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟರಿನ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ವಾಹನ ಸಮೇತ ರಸ್ತೆಗೆ ಬಿದ್ದವರನ್ನು ಗೂಡ್ಸ್ ಟೆಂಪೋ ಚಾಲಕ ಸಾರ್ವಜನಿಕರೊಂದಿಗೆ ಹೈಲ್ಯಾಂಡ್ ಆಸ್ಪತ್ರೆಗೆ ಕರೆ ತಂದಿದ್ದು, ವೈದ್ಯರು ಗಾಯಾಳುವಿಗೆ ಎಡ ಭುಜಕ್ಕೆ ಮೂಳೆ ಮುರಿತದ ಗಂಭೀರ ಗಾಯವಾಗಿದ್ದು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ ಎಂಬಿತ್ಯಾದಿ.

                               

ಇತ್ತೀಚಿನ ನವೀಕರಣ​ : 02-12-2022 05:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080