ಅಭಿಪ್ರಾಯ / ಸಲಹೆಗಳು

Crime Reported in : CEN Crime PS Mangaluru City

ಪಿರ್ಯಾದಿದಾರರು ಕಣ್ಣೂರು ಬೋರುಗುಡ್ಡೆ ವಾಸಿಯಾಗಿದ್ದು, 2020 ಜನವರಿ ಮೊದಲ ವಾರದಲ್ಲಿ ಪಿರ್ಯಾದಿದಾರರ ಪರಿಚಯದ ಮುಹಮ್ಮದ್ ಶಫದ್ ಸಿ.ಕೆ ಎಂಬವನಲ್ಲಿ ಮಾತನಾಡುವಾಗ ತಾನು, ಕ್ರಿಪ್ಟೋ ಕರೆನ್ಸಿ ವ್ಯವಹಾರದಲ್ಲಿ ಕೋಟ್ಯಾಂತರ ರೂಪಾಯಿ ಸಂಪಾದಿಸಿದ್ದು ಯಾರಾದರೂ ಒಳ್ಳೆಯ ಇನ್ವೆಸ್ಟರ್ ಇದ್ದರೆ ತಿಳಿಸಿ ಎಂದು ಹೇಳಿದ್ದು ಅದರಂತೆ ಜನವರಿ 2ನೇ ವಾರದಲ್ಲಿ ಮಂಗಳೂರಿಗೆ ಬಂದ ಪಿರ್ಯಾದಿದಾರರು ನವಭಾರತ್ ಸರ್ಕಲ್ ಪಕ್ಕದಲ್ಲಿರುವ ತಾಜ್ ಮಹಲ್ ಹೋಟೆಲ್ ನಲ್ಲಿ ಮಾತುಕತೆ ನಡೆಸಿದಾಗ ಮುಹಮ್ಮದ್ ಶಫದ್ ಸಿ.ಕೆ ರವರು ತಾನು ತಂದಿದ್ದ ಲ್ಯಾಪ್ ಟಾಪ್ ಮೂಲಕ ತಮ್ಮ ಕ್ರಿಪ್ಟೋ ಕರೆನ್ಸಿ ವ್ಯವಹಾರದ ಪ್ರೆಸೆಂಟೇಶನ್ ತೋರಿಸಿದ್ದು ಯಾವ ರೀತಿ ಲಾಭ ಗಳಿಸಬಹುದು ಎಂಬುದರ ಸಂಪೂರ್ಣ ವಿವರವನ್ನು ತೋರಿಸಿರುತ್ತಾರೆ. ಬಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ ಕ್ರಿಫ್ಟೋ ಕರೆನ್ಸಿಯ ಬಗ್ಗೆ ಎಪ್ರೂವಲ್ ಮಾಡಿರುತ್ತದೆ ಎಂದು ತನ್ನ ಲ್ಯಾಪ್ಟ್ಯಾಪ್ ಮೂಲಕ ತೋರಿಸಿರುತ್ತಾರೆ. ಬಳಿಕ ನನ್ನಲ್ಲಿ ಹಣ ಹೂಡಿಕೆ ಮಾಡಲು ಕೋರಿಕೊಂಡಿದ್ದು ತಿಂಗಳಿಗೆ 25% ಲಾಭಂಶ ನೀಡುವುದಾಗಿ ತಿಳಿಸಿದ್ದು ಇದರಿಂದ ಪ್ರೇರಿತನಾದ ಪಿರ್ಯಾದಿದಾರರು ಮುಂದಿನ ವಾರ ಒಂದು ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವುದಾಗಿ ತಿಳಿಸಿರುತ್ತಾರೆ. ನಂತರದ ದಿನಗಳಲ್ಲಿ ಆರೋಪಿಯು ಪಿರ್ಯಾದಿದಾರರನ್ನು ಸಂಪರ್ಕಿಸಿಕೊಂಡಾಗ ಜನವರಿ 3 ನೇವಾರದಲ್ಲಿ  ಪಿರ್ಯಾದಿದಾರರ ಮನೆಯಾದ ಮಂಗಳೂರಿನ ಕಣ್ಣೂರಿಗೆ ಆರೋಪಿ ಮುಹಮ್ಮದ್ ಶಫದ್ ಸಿ.ಕೆ ರವರ ತಮ್ಮನಾದ ಮುಹಮ್ಮದ್ ಅಫೀದ್ ಸಿ. ಕೆ ಸಮೇತ ಭೇಟಿ ನೀಡಿದ್ದು ಪಿರ್ಯಾದಿದಾರರು ಮತ್ತು ಅವರ ಸ್ನೇಹಿತರಿಂದ ಹೂಡಿಕೆಗಾಗಿ ಕೂಡಿಟ್ಟ 35 ಲಕ್ಷ ರೂಪಾಯಿ ನಗದನ್ನು ಆರೋಪಿತರಾದ ಮುಹಮ್ಮದ್ ಶಫದ್ ಸಿ.ಕೆ ಮತ್ತು ಮುಹಮ್ಮದ್ ಅಫೀದ್ ಸಿ. ಕೆ ರವರಿಗೆ ನೀಡಿರುತ್ತಾರೆ. ಇದಾದ ಒಂದು ತಿಂಗಳ ಬಳಿಕ ಸದ್ರಿ ಶಫದ್ ರವರು ವಾಟ್ಸಪ್ ಮೂಲಕ ಪಿರ್ಯಾದಿದಾರರಿಗೆ ಒಂದು ತಿಂಗಳ 8,75,000 ಲಾಭಂಶ ಬಂದಿರುವುದಾಗಿ ಅವರ ಕ್ರಿಫ್ಟೋ ಕರೆನ್ಸಿಯ ಅಕೌಂಟ್ ತೋರಿಸಿರುತ್ತಾರೆ. ಬಳಿಕ ಕೋವಿಡ್ ಆದ ಕಾರಣ ಒಂದೆರಡು ತಿಂಗಳು ಲಾಭಂಶ ವಿಳಂಬವಾಗಿದ್ದು ಮುಂದಿನ ಎರಡು ತಿಂಗಳಲ್ಲಿ ಅಪ್ಡೇಟ್ ಆಗುತ್ತದೆ ಎಂದು ತಿಳಿಸಿ ನಂಬಿಸಿರುತ್ತಾರೆ. ಆ ಬಳಿಕ ಪುನಃ ವಾಟ್ಸಪ್ ಕರೆ ಮಾಡಿ ಇನ್ನೂ ಸ್ವಲ್ಪ ಹಣ ಹೂಡಿಕೆ ಮಾಡಿದರೆ ಲಾಭಂಶ ಹೆಚ್ಚು ಸಿಗುತ್ತದೆ ಎಂದು ನಂಬಿಸಿದಂತೆ ಜಾಸ್ಮಿನ್ ಹಂಸ ಎಂಬವರ ಹೆಸರನ್ನು ಸೂಚಿಸಿ ಅವರ ಮೂಲಕ ಮಾತನಾಡಿಸಿ ಸದ್ರಿ ಶಫದ್ ರವರು ತಿಳಿಸಿದ ಜಾಸ್ಮಿನ್ ಅವರ 9562973624 ಈ ನಂಬರಿಗೆ ಗೂಗಲ್ ಪೇ ಮೂಲಕ ಹಂತ ಹಂತವಾಗಿ ಸುಮಾರು 7 ಲಕ್ಷಕ್ಕಿಂತಲೂ ಹೆಚ್ಚು ಹಣವನ್ನು ಪಿರ್ಯಾದಿದಾರರು ವರ್ಗಾವಣೆಮಾಡಿರುತ್ತಾರೆ. ನಂತರ ಪಿರ್ಯಾದಿದಾರರ ಸ್ನೇಹಿತರಿಂದ ನಾನು ಹಣ ಪಡೆದು ಆರೋಪಿತರಿಗೆ ಒಟ್ಟು ಸುಮಾರು 3 ಕೋಟಿ ರೂ. ಹೂಡಿಕೆಯ ಮುಖಾಂತರ ಸಂದಾಯವಾಗಿರುತ್ತದೆ. ನಂತರದ ದಿನಗಳಲ್ಲಿ  ಕೋವಿಡ್ ಮಹಮ್ಮಾರಿ ದೇಶಾದಾದ್ಯಂತ ಹಬ್ಬಿದ ಕಾರಣ ಪಿರ್ಯಾದಿದಾರರಿಗೆ ಆರೋಪಿತರಾದ ಶಫದ್ ಆಗಲಿ ಜಾಸ್ಮಿನ್ ಆಗಲಿ ಮತ್ತು ಅಫೀದ್ ಆಗಲಿ ನನ್ನ ಸಂಪರ್ಕಕಕ್ಕೆ ಸಿಗಲಿಲ್ಲ, ಆ ಬಳಿಕ 2022 ರಲ್ಲಿ ಪಿರ್ಯಾದಿದಾರರಿಗೆ ಸದ್ರಿ ಶಪದ್ ಮತ್ತು ತಮ್ಮ ಮುಹಮ್ಮದ್ ಅಫೀದ್ ಸಿ. ಕೆ. ಬೆಂಗಳೂರಿನಲ್ಲಿ ಕ್ರಿಫ್ಟೋ ಕರೆನ್ಸಿ ವಂಚನೆ ಪ್ರಕರಣದಲ್ಲಿ ಒಳಗೊಂಡಿರುವ ಮಾಹಿತಿ  ಸಿಕ್ಕಿರುತ್ತದೆ. ಆರೋಪಿಗಳಾದ ಮುಹಮ್ಮದ್ ಶಫದ್ ಸಿ.ಕೆ, ಮುಹಮ್ಮದ್ ಅಫೀದ್ ಸಿ. ಕೆ, ಸಾದಿಕ್, ಜಾಸ್ಮಿನ್ ಮತ್ತು ಮಹಮ್ಮದ್ ಬಶೀರ್  ಎಂಬವರು ಸಂಚು ನಡೆಸಿ, N-ME INNOVATIONS LLP ಎಂಬ ಆನ್ ಲೈನ್ ಟ್ರೇಡಿಂಗ್ APP ಮೂಲಕ ಹೂಡಿಕೆ ಮಾಡಿದರೆ ಹೆಚ್ಚಿನ ಗಳಿಸಬಹುದು ಎಂಬುದಾಗಿ ನಂಬಿಸಿ  ಪಿರ್ಯಾದಿದಾರರಿಂದ  ಒಟ್ಟು 3 ಕೋಟಿ ರೂಪಾಯಿ ಹೂಡಿಕೆ ಮಾಡಿಸಿ ನಂಬಿಕೆ ದ್ರೋಹ, ವಂಚನೆ ಮಾಡಿರುವುದಾಗಿದೆ  ಎಂಬಿತ್ಯಾದಿ.

 

Crime Reported in : Konaje PS

ಪಿರ್ಯಾದಿದಾರರು Sadashiva G Shetty  ಬೆಂಗಳೂರಿನಲ್ಲಿರುವ ಪಿರ್ಯಾದಿದಾರರ ಮೊಮ್ಮಗನ ಆರೈಕೆ ಬಗ್ಗೆ ಮಗಳ ಮನೆಗೆ ಹೋಗಿದ್ದು, ದಿನಾಂಕ 02.02.2023 ರಂದು ಸಮಯ ಸುಮಾರು ಬೆಳಗ್ಗೆ 07.30 ಗಂಟೆಗೆ ನೆರೆ ಮನೆಯ ಚಂದ್ರಕಲಾ ಎಂಬವರ ಅಳಿಯ ಮನೋಜ ಎಂಬವರು ಪಿರ್ಯಾದಿದಾರರಿಗೆ ದೂರವಾಣಿ ಕರೆ ಮಾಡಿ “ನಿಮ್ಮ ಮನೆಯ ಬಾಗಿಲನ್ನು ಯಾರೋ ಕಳ್ಳರು ಒಡೆದು, ಒಳಗೆ ನುಗ್ಗಿ ಕಳತನವಾಗಿರುವ ಬಗ್ಗೆ ತಿಳಿಸಿದಂತೆ ಪಿರ್ಯಾದಿದಾರರು ಉಳ್ಳಾಲ ತಾಲೂಕು ಮಂಜನಾಡಿ ಗ್ರಾಮದ ಭಟ್ಯಡ್ಕ ಎಂಬಲ್ಲಿನ ತಮ್ಮ ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಎದುರು ಬಾಗಿಲನ್ನು ಹೊಡೆದು ಒಳಗೆ ನುಗ್ಗಿ ಮನೆಯ ಒಳಗಿದ್ದ ಕಪಾಟುಗಳನ್ನು ಹೊಡೆದು ಅದರಲ್ಲಿದ್ದ ಒಂದು ಗ್ರಾಂ ತೂಕದ ಮೂರು ಚಿನ್ನದ ಉಂಗುರಗಳು ಹಾಗೂ ನಗದು ರೂ.6,500/- ನ್ನು ಕಳವು ಗೈದಿದ್ದು, ಕಳವಾದ 3 ಉಂಗುರಗಳ ಅಂದಾಜು ಮೌಲ್ಯ ರೂ.13,500/- . ಒಟ್ಟು ಕಳವಾದ ಸೊತ್ತಿನ ಮೌಲ್ಯ ಸುಮಾರು ರೂ. 20,000/- ಆಗಬಹುದು ಈ ಕೃತ್ಯವು ದಿನಾಂಕ 01.02.2023 ರಂದು ರಾತ್ರಿ ನಡೆದಿರುತ್ತದೆ ಎಂಬಿತ್ಯಾದಿ.

 

Crime Reported in : Ullal PS

ಪಿರ್ಯಾದಿ Yusuf Hyder  ದಿನಾಂಕ:09-01-2023 ರಂದು ಮಂಗಳೂರು ಉಜ್ಜೋಡಿಯಲ್ಲಿರುವ ಬೈಕ್ ಕ್ಲಿನಿಕ್ ಎಂಬಲ್ಲಿಂದ ಕೆಎ 19 ಎಡಿ 3079 ಹೊಂಡಾ ಆಕ್ಟಿವಾ 6 ಜಿ ಸ್ಕೂಟರ್ ನ್ನು ಬಾಡಿಗೆಗೆ ಪಡೆದುಕೊಂಡು ಅಜಿಲ ಮೊಗೇರು ಉರೂಸ್ ಮಾಲಿದ (ಪ್ರಸಾದ)ವನ್ನು ನೀಡಲೆಂದು ಕಿನ್ಯ, ಮಿನಾದಿಯ ಸಂಬಂಧಿಕರಾದ ರೆಹೆಮತ್ ಆಲಿ ಎಂಬವರ ಮನೆಗೆ ಬಂದು ರಾತ್ರಿ 08-30  ಗಂಟೆಗೆ ಕಿನ್ಯ ಮಿನಾದಿಯ ಬಳಿಯ ರಸ್ತೆಯ ಬದಿಯಲ್ಲಿ ಸ್ಕೂಟರ್  ನ್ನು ಪಾರ್ಕ್ ಮಾಡಿದ ನಂತರ ಅಜಿಲ ಮೊಗೇರು ಪ್ರಸಾದ ನೀಡಲು ಸಂಬಂಧಿಕರ ಮನೆಗೆ ತೆರಳಿ ಅಲ್ಲೇ ವಾಸ್ತವ್ಯ ಮಾಡಿಕೊಂಡಿದ್ದು, ಮರು ದಿನ ದಿನಾಂಕ:10-01-2023 ರಂದು ಬೆಳಿಗ್ಗೆ 10-30 ಗಂಟೆಗೆ ಸ್ಕೂಟರ್ ಪಾರ್ಕಿಂಗ್ ಮಾಡಿದ ಸ್ಥಳಕ್ಕೆ ಬಂದು ನೋಡಿದಾಗ ಸ್ಕೂಟರ್ ಕಾಣಿಸದೇ ಇದ್ದು, ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗದೇ ಇರುತ್ತದೆ. ಈ ಬಗ್ಗೆ ಬಾಡಿಗೆ ಪಡೆದುಕೊಂಡು ಮಾಲಕರಿಗೆ ಮಾಹಿತಿ ನೀಡಿದ್ದು ಅವರು ಕೂಡಾ ಬೇರೆ ಬೇರೆ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಸ್ಕೂಟರ್ ನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿದ ಪಿರ್ಯಾದಿ ಎಂಬಿತ್ಯಾದಿ.

 

Crime Reported in : Traffic South Police Station

ಫಿರ್ಯಾದಿದಾರರು RAFEEQ REHAMAN  ದಿನಾಂಕ 02-02-2023 ರಂದು ಅವರ ಬಾಬ್ತು ಕಾರು ನಂಬ್ರ:  KA-19-MK-4655 ನೇದರಲ್ಲಿ ಮಂಗಳೂರಿನಿಂದ ಅಡ್ಯಾರ ಕಡೆಗೆ ಹೊಗುತ್ತಿರುವಾಗ ಸಮಯ ಸುಮಾರು ಸಂಜೆ 04-30 ಗಂಟೆಗೆ ಪಡೀಲ್ ಫಸ್ಟ್  ನ್ಯೂರೋ ಆಸ್ಪತ್ರೆಯ ಮುಂಭಾಗ ತಲುಪಿದಾಗ ಫಿರ್ಯಾಧಿದಾರರ ಎದುರುಗಡೆಯಿಂದ ಚಲಾಯಿಸುತ್ತಿದ್ದ ಇನೋವಾ ಕಾರು ನಂಬ್ರ  KA 05 AK 3123  ನೇದರ  ಚಾಲಕನು ಅವರ ಕಾರನ್ನು ನಿಧಾನಿಸಿದಾಗ ಪಿರ್ಯಾದಿದಾರಾರು ಕೂಡಾ ಕಾರನ್ನು ನಿಧಾನಿಸಿದ್ದು, ಫಿರ್ಯಾಧಿದಾರರ ಕಾರಿನ ಹಿಂಬದಿಯಿಂದ ಕಾರು ನಂಬ್ರ  KA 03 AF 0800  ನೇದರ ಚಾಲಕ ಮಹಮ್ಮದ ಇರ್ಶಾದ್ ರವರು ಕಾರನ್ನು ದುಡುಕತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಕೊಂಡು ಬಂದು ಫಿರ್ಯಾಧಿದಾರರ ಕಾರಿನ ಹಿಂಬದಿಗೆ ಡಿಕ್ಕಿಪಡಿಸಿದ  ಪರಿಣಾಮ  ಪಿರ್ಯಾದಿರಾರ ಕಾರು ಮುಂದಕ್ಕೆ ಚಲಿಸಿ  KA 05 AK 3123  ನೇ ಇನೋವಾ ಕಾರಿನ ಹಿಂಬದಿಗೆ ಡಿಕ್ಕಿ ಆಗಿರುತ್ತದೆ. ಈ ಅಪಘಾತದಲ್ಲಿ ಯಾರಿಗೂ ಗಾಯಗಳು ಉಂಟಾಗಿರುವುದಿಲ್ಲ  ಆದರೆ ಪಿರ್ಯಾದಿದಾರರ ಕಾರಿನ ಹಿಂಬದಿ ಮತ್ತು ಮುಂಬದಿ ಜಖಂ ಗೊಂಡಿರುತ್ತದೆ.  ಅಲ್ಲದೇ ಕಾರು ನಂಬ್ರ: KA 05 AK 3123  ನೇದರ ಹಿಂಬದಿ ಹಾಗೂ ಅಪಘಾತಪಡಿಸಿದ  ಕಾರು ನಂಬ್ರ  KA 03 AF 0800  ನೇದರ ಮುಂಬದಿ  ಜಖಂಗೊಂಡಿರುತ್ತದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 03-02-2023 06:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080