Feedback / Suggestions

Kavoor PS     

ದಿನಾಂಕ: 10.05.2023 ರಂದು ಮೂಡುಶೆಡ್ಡೆ ಜಂಕ್ಷನ್  ರಾತ್ರಿ 08-25 ಗಂಟೆಗೆ ಅಲ್ಲಿ ಕಾಂಗ್ರೇಸ್ ಹಾಗೂ ಬಿ.ಜೆ.ಪಿ ಕಾರ್ಯಕರ್ತರು ಕಲ್ಲು ಹಾಗೂ ಸೋಡಾ ಬಾಟಲ್ ಗಳನ್ನು ಹಿಡಿದುಕೊಂಡು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ ಸೇರಿಕೊಂಡು ತಳ್ಳಾಟ ನೂಕಾಟ ಮಾಡಿಕೊಂಡು ಮೋದಿ ಹಾಗೂ ಮಿಥುನ್ ರೈಗೆ ಜೈಕಾರ ಘೋಷಣೆಗಳನ್ನು ಕೂಗುತ್ತಾ ಗಲಾಟೆ ಮಾಡುತ್ತಿರುತ್ತಾರೆ. ಆ ಸಮಯ ವಾಹನದಲ್ಲಿದ್ದ ಪ್ರಹಾರ ದಳದ ಅಧಿಕಾರಿ ಸಿಬ್ಬಂಧಿಗಳು ವಾಹನದಿಂದ ಬಾಡಿ ಪ್ರೋಟೆಕ್ಟರ್, ಕೆನ್ ಶೀಲ್ಡ್, ಹೇಲ್ಮೆಟ್ ಲಾಠಿಯನ್ನು ಹಿಡಿದುಕೊಂಡು ಕೆಳಗೆ ಇಳಿದಿದ್ದು, ಆ ಸಮಯ ಸುಮಾರು 08-30 ರಿಂದ  08-40 ರ ಮಧ್ಯದಲ್ಲಿ ಪಿರ್ಯಾದಿ BHANU PRAKASH ARSI CAR UNIT MANGALURUದಾರರು ಇಲಾಖಾ ವಾಹನದ ಸುರಕ್ಷತಾ ದೃಷ್ಠಿಯಿಂದ ವಾಹನದ ಮುಂದಿನ ಗಾಜಿನ ರಕ್ಷಣೆಗಾಗಿ ವಯರ್ ಮೆಶ್ ನ್ನು ಅಳವಡಿಸುತ್ತಿರುವ ಸಮಯ ಗಲಾಟೆ ನಡೆಯುವ ಸ್ಥಳದಿಂದ ಯಾರೋ ಕಿಡಿಗೇಡಿಗಳು ಕಲ್ಲುಗಳನ್ನು ಬಿಸಾಡಿದ್ದು, ಅದರಲ್ಲಿ 2 ಕಲ್ಲುಗಳು ಎದುರು ವಯರ್ ಮೆಶ್ ಗೆ ಬಿದ್ದಿದ್ದು, ಒಂದು ಕಲ್ಲು ಪಿರ್ಯಾದಿದಾರರ ತಲೆಯ ಹಿಂಭಾಗಕ್ಕೆ ಬಲವಾಗಿ ಬಿದ್ದ ಪರಿಣಾಮ ತಲೆಗೆ ರಕ್ತಗಾಯವಾಗಿರುತ್ತದೆ. ರಕ್ತ ಗಾಯಗೊಂಡ ಪಿರ್ಯಾದಿದಾರರು ವಾಹನದಲ್ಲಿದ್ದ ಪ್ರಾಥಮಿಕ ಚಿಕಿತ್ಸಾ ಕಿಟ್ ನಿಂದ ಪ್ರಥಮ ಚಿಕಿತ್ಸೆ ಮಾಡಿಸಿಕೊಂಡು ನಂತರ ಎ.ಜೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದು, ಪಿರ್ಯಾದಿದಾರರಿಗೆ ಕಲ್ಲು ಬಿಸಾಡಿ ತಲೆಗೆ ರಕ್ತಗಾಯ ಮಾಡಿದ ಆರೋಪಿತರನ್ನು ಪತ್ತೆ ಹಚ್ಚಿ ಆರೋಪಿತರುಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

Moodabidre PS

ಪಿರ್ಯಾದಿ Jaleel ದಾರರ ಬಾವನಾದ ಮೊಹಮ್ಮದ್ ಸಾಹೇಬ್ ನ ಮಗ ಇಮಾದ್ ನು ಪಿರ್ಯಾದಿದಾರರ ಅಣ್ಣ ಜಮಾಲುದ್ದಿನ್ ನ ಹೆಂಡತಿಯ ಕುಟುಂಬದ ಮಕ್ಕಳೊಂದಿಗೆ ಗಲಾಟೆ ಮಾಡಿಕೊಂಡಿದ್ದು ಈ ವಿಚಾರವಾಗಿ ಮೃತ ಜಮಾಲುದ್ದಿನ್ ನು  ಇಮಾದ್ ನಿಗೆ ಬುದ್ದಿವಾದ ಹೇಳಿ ಮುಂದಕ್ಕೆ ಗಲಾಟೆ ಮಾಡದಂತೆ  ಎಚ್ಚರಿಕೆ ನೀಡಿರುತ್ತಾರೆ. ಪಿರ್ಯಾದಿದಾರರ ಬಾವ ಮೊಹಮ್ಮದ್ ಸಾಹೇಬ್ ನು ಪಿರ್ಯಾದಿದಾರರ ಅಣ್ಣ ಜಮಾಲುದ್ದಿನ್ ನೊಂದಿಗೆ ಕೆಲವು ದಿನಗಳಿಂದ ದ್ವೇಷ ಕಟ್ಟಿಕೊಂಡಿದ್ದು ಇದೇ ವಿಚಾರವಾಗಿ ಈ ದಿನ ದಿನಾಂಕ 11-05-2023 ರಂದು ಬೆಳಿಗ್ಗೆ 9.30 ಗಂಟೆಗೆ ಜಮಾಲುದ್ದಿನ್ ನೊಂದಿಗೆ ಮೊಹಮ್ಮದ್ ಸಾಹೇಬ್ ನು ಮಾತಿಗೆ ನಿಂತಿದ್ದು ಮಾತಿಗೆ ಮಾತು ಬೆಳೆದಿದ್ದು ಮೊಹಮ್ಮದ್ ಸಾಹೇಬ್ ನು ಮಗ ಇಮಾದ್ ನಿಗೆ ಫೋನ್ ಮಾಡಿ ಸ್ಥಳಕ್ಕೆ ಕರೆಸಿಕೊಂಡು ಬೈದಾಡಿ ಗಲಾಟೆ ಮಾಡುತ್ತಾ ಮೊಹಮ್ಮದ್ ಸಾಹೇಬ್ ನು ಆತನ ಕೈಯಲ್ಲಿ ಹಿಡಿದುಕೊಂಡು ಹೋಗಿದ್ದ ಚಾಕುವಿನಿಂದ ಎದೆಯ ಭಾಗಕ್ಕೆ ಇರಿದು ಮೊಹಮ್ಮದ್ ಸಾಹೇಬ್ ನು ಮತ್ತು ಆತನ ಮಗ ಇಮಾದ್ ನು ಅಲ್ಲಿಂದ ಓಡಿ ಹೋಗಿರುತ್ತಾರೆ. ಆ ಕೂಡಲೇ ಪಿರ್ಯಾದಿದಾರರು ಮತ್ತು ಇತರರು ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾರೆ. ಈ ಘಟನೆ ನಡೆಯುವಾಗ ಸಮಯ ಸುಮಾರು 10.15 ಗಂಟೆ ಆಗಿರಬಹುದು ಎಂಬಿತ್ಯಾದಿ.

 

Kavoor PS

ದಿನಾಂಕ: 10/05/2023 ರಂದು ಪಿರ್ಯಾದಿ REVANASIDDAPPA PSIದಾರರು ಎಲೇಕ್ಷನ್ ನಿಮಿತ್ಯ 201 ನೇ ವಿಧಾನ ಸಭಾ ಕ್ಷೇತ್ರದ ಸೆಕ್ಟರ್-13 ರಲ್ಲಿ ಸೆಕ್ಟರ್ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ರಾತ್ರಿ 07.30 ಗಂಟೆಗೆ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ  ಜಂಕ್ಷನ್ ಎಂಬಲ್ಲಿ ಗಲಾಟೆಯಾಗುತ್ತಿರುವ ಬಗ್ಗೆ ಮೂಡುಶೆಡ್ಡೆ ಬೂತ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಚ್.ಸಿ- ಬಾಲಕೃಷ್ಣ ರವರು ತಿಳಿಸಿದಂತೆ ಪಿರ್ಯಾದಿದಾರರು ಕೂಡಲೇ ಕರ್ತವ್ಯಕ್ಕೆ ನೀಡಿದ್ದ ವಾಹನದಲ್ಲಿ ಹೊರಟು ಮೂಡುಶೆಡ್ಡೆ ಜಂಕ್ಷನ್ ಗೆ ತಲುಪಿದಾಗ ಅಲ್ಲಿ ಕಾಂಗ್ರೇಸ್ ಹಾಗೂ ಬಿ.ಜೆ.ಪಿ ಕಾರ್ಯಕರ್ತರು ಕಲ್ಲು ಹಾಗೂ ಸೋಡಾ ಬಾಟಲ್ ಗಳನ್ನು ಹಿಡಿದುಕೊಂಡು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ ಸೇರಿಕೊಂಡು ತಳ್ಳಾಟ ನೂಕಾಟ ಮಾಡಿಕೊಂಡು ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಜೈಕಾರ ಹಾಕುತ್ತಾ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮಿಥುನ್ ರೈಗೆ ಜೈ ಎಂಬ ಘೋಷಣೆ ಕೂಗುತ್ತಾ ಗಲಾಟೆ ಮಾಡುತ್ತಿದ್ದವರನ್ನು ಕಂಡು ಪಿರ್ಯಾದಿದಾರರು ಹೋಗಿ ಗಲಾಟೆ ಮಾಡದಂತೆ ತಿಳಿಸಿ ಸೇರಿದ್ದ ಜನರನ್ನು ಚದರುವಂತೆ ಎಲ್ಲರಲ್ಲಿ ಆದೇಶ ನೀಡಿದಾಗ ಅಲ್ಲಿ ಸೇರಿದ್ದ ಪುನೀತ್, ಹರ್ಶೀತ್, ಹರೀಶ್ರಾಜ್, ಚೇತನ್, ಪ್ರಧೀಪ್ ಮೂಡುಶೆಡ್ಡೆ, ರಾಕೇಶ್, ಪ್ರಸಾದ್ ಮಲ್ಲಿ, ಸಂಪತ್ ಶೆಟ್ಟಿ, ಪ್ರಕಾಶ ಶೆಟ್ಟಿ, ಸುಜಯ್ ಹಾಗೂ ಇತರರು ಪಿರ್ಯಾದಿದಾರರು ನೀಡಿದ ಆದೇಶವನ್ನು ದಿಕ್ಕರಿಸಿ ಸಮವಸ್ತ್ರದಲ್ಲಿದ್ದ ಪಿರ್ಯಾದಿದಾರರಿಗೆ ಅಡ್ಡಗಟ್ಟಿ ಕೈಗಳಿಂದ ತಳ್ಳಾಟ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾರೆ. ಸಮಾನ ಉದ್ದೇಶದಿಂದ ಕಲ್ಲು ಹಾಗೂ ಸೋಡಾ ಬಾಟಲ್ಗಳನ್ನು ಹಿಡಿದುಕೊಂಡು ಅಕ್ರಮ ಕೂಟ ಸೇರಿ ದೊಂಬಿ ನಡೆಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿತರುಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

    

Kavoor PS

 ಪಿರ್ಯಾದಿ VASANTH K V ದಾರರು ಮಂಗಳೂರು ನಗರದ ಸಿ.ಎ.ಆರ್.ಘಟಕದಲ್ಲಿ ಸಹಾಯಕ ಪೊಲೀಸ್ ಉಪ-ನಿರೀಕ್ಷಕರಾಗಿ ಕರ್ತವ್ಯವನ್ನು ನಿರ್ವಹಿಸಿಕೊಂಡಿರುತ್ತಾರೆ, ಪ್ರಸ್ತುತ್ತ ಮಂಗಳೂರು ನಗರದ ಪೊಲೀಸ್ ಉಪ-ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ ವಿಭಾಗ ರವರ ಇಲಾಖಾ ವಾಹನವಾದ ಇನೋವಾ ಕಾರು ನಂಬ್ರ ಕೆಎ.19-ಜಿ-0990 ನೇಯದರಲ್ಲಿ ಚಾಲಕನಾಗಿ ಕರ್ತವ್ಯವನ್ನು ನಿರ್ವಹಿಸಿಕೊಂಡಿರುತ್ತಾರೆ. ದಿನಾಂಕ:10-05-2023 ರಂದು ಕರ್ನಾಟಕ ವಿಧಾನ-ಸಭಾ ಚುನಾವಣೆ ನಡೆಯುತ್ತಿರುವ ಪ್ರಯುಕ್ತ ಮಾನ್ಯ ಪೊಲೀಸ್ ಉಪ-ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ ರವರು ದಿನಾಂಕ:10-05-2023 ರಂದು ಬೆಳಿಗ್ಗಿನಿಂದಲೂ ನಗರದಲ್ಲಿ ರೌಂಡ್ಸ್ ಮಾಡುತ್ತಿರುವ ಸಮಯ ಸುಮಾರು ರಾತ್ರಿ 20-40ರ ವೇಳೆಗೆ ಮಂಗಳೂರು ತಾಲೂಕು ಮೂಡುಶೆಡ್ಡೆ ಗ್ರಾಮದ ಮೂಡುಶೆಡ್ಡೆ ಜಂಕ್ಷನ್ ಬಳಿ ಬಿ.ಜೆ.ಪಿ. ಮತ್ತು ಕಾಂಗ್ರೇಸ್ ಪಕ್ಷದವರು ಆಕ್ರಮಕೂಟ ಸೇರಿ ಕಲ್ಲು ಹಾಗೂ ಸೋಡಾ ಬಾಟ್ಲಿ ಬಿಸಾಡಿಕೊಂಡು ಗಲಾಟೆ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಮಾನ್ಯ ಪೊಲೀಸ್ ಉಪ-ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ ರವರ ಆದೇಶದಂತೆ ಕಾರಿನಲ್ಲಿ ಸದ್ರಿ ಸ್ಥಳಕ್ಕೆ ಬಂದಾಗ ಅಲ್ಲಿ ಬಿ.ಜೆ.ಪಿ. ಮತ್ತು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ತುಂಬಾ ಜನ ಸೇರಿ ಜೈಕಾರವನ್ನು ಕೂಗುತ್ತಾ ಗಲಾಟೆ ಮಾಡುತ್ತಿದ್ದರು. ಈ ವೇಳೆಗೆ ಪಿರ್ಯಾದಿದಾರರು ಇಲಾಖಾ ಕಾರನ್ನು ಕಾವೂರಿನಿಂದ ಮೂಡುಶೆಡ್ಡೆ ಜಂಕ್ಷನ್ ಕಡೆಗೆ ಹೋಗುವ ರಸ್ತೆಯ ಬಳಿ ನಿಲ್ಲಿಸಿದಾಗ ಕಾರಿನಲ್ಲಿದ್ದ ಮಾನ್ಯ ಪೊಲೀಸ್ ಉಪ-ಆಯುಕ್ತರು ಕಾರಿನಿಂದ ಇಳಿದು ಗಲಾಟೆ ನಡೆಯುವ ಸ್ಥಳಕ್ಕೆ ಹೋಗಿ ಗಲಾಟೆ ಮಾಡುವವರನ್ನು ಸಮಾಧಾನಪಡಿಸುವ ಸಮಯ ಪಿರ್ಯಾದಿದಾರರು ಸದ್ರಿ ಇಲಾಖಾ ಇನೋವಾ ವಾಹನ ನಂಬ್ರ ಕೆಎ.19-ಜಿ-0990 ನೇಯದನ್ನು ಸ್ವಲ್ಪ ದೂರ ರಸ್ತೆಯ ಎಡಬದಿಗೆ ನಿಲ್ಲಿಸುವರೇ ಕಾರನ್ನು ಮುಂದಕ್ಕೆ ಚಲಾಯಿಸುವ ಸಮಯ ಕಾರನ್ನು ತಡೆದು ನಿಲ್ಲಿಸಿ ಯಾರೋ ಕಿಡಿಕೇಡಿಗಳು ಏಕಾಏಕಿ ಇಂಟರ್ ಲಾಕ್ ತುಂಡನ್ನು ಬಿಸಾಡಿ ಕಾರಿನ ಮುಂದಿನ ಗಾಜಿಗೆ, ಬೋನೇಟ್ , ಚಾಲಕನ ಹಿಂಬದಿಯ ಡೋರ್ ಬಳಿ ಹಾಗೂ ಬಲ ಮತ್ತು ಎಡ ಬದಿಯ ಟಾಫ್ ಗೆ ಜಖಂಗೊಳಿಸಿರುತ್ತಾರೆ. ಸದ್ರಿ ಜಖಂಗೊಂಡ ಸೊತ್ತಿನ ಅಂದಾಜು ಮೌಲ್ಯ 40,000/-ರೂ ಆಗಬಹುದು. ಆದ್ದರಿಂದ ಇಲಾಖಾ ವಾಹನವಾದ ಇನೋವಾ ಕಾರು ಕೆಎ.19-ಜಿ-0990 ನೇಯದನ್ನು ಜಖಂಗೊಳಿಸಿದ ಆರೋಪಿಗಳನ್ನು ಗಳನ್ನು ಪತ್ತೆ ಹಚ್ಚಿ ಅವರ  ವಿರುದ್ದ ಸೂಕ್ತ ಕಾನೂನು ಕ್ರಮಜರಗಿಸುವರೇ ಎಂಬಿತ್ಯಾದಿ.

    

Bajpe PS

ದಿನಾಂಕ 10.05.2023 ರಂದು  ಸಮಯ 18-00 ಗಂಟೆಗೆ ಭಾರತೀಯ ಪಾಸ್‌ ಪೋರ್ಟ್ ಸಂಖ್ಯೆ Z4996924 ಮೂಲಕ ದುಬೈ ಯಿಂದ IX-384 ನೇ ವಿಮಾನದಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕ EDAKKEPRAVAN PUTHANVEED RAMACHANDRAN ಎಂಬವರ ಪಾಸ್ ಪೋರ್ಟ್ ನ್ನು ಇಮಿಗ್ರೇಷನ್ ಕೌಂಟರ್ ನಂಬ್ರ 09 ನೇಯದರಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಶ್ರೀಮತಿ ಸುಮತಿ ರವರು ಚೆಕ್ ಮಾಡಿದಾಗ ಪಾಸ್‌ ಪೋರ್ಟ್‌ ನ ಪುಟ ಸಂಖ್ಯೆ 41 ಮತ್ತು 51 ರಲ್ಲಿ ಯೆಮೆನ್ ದೇಶದ ವೀಸಾ ಸ್ಟ್ಯಾಂಪ್ ಮಾಡಿರುವುದು ಕಂಡುಬಂದಿದೆ. ದಿನಾಂಕ 29-11-2022,ದಿನಾಂಕ:04-04-2023 ರಂದು ಯೆಮೆನ್‌ ಪ್ರವೇಶ ಮುದ್ರೆಗಳು ಮತ್ತು ದಿನಾಂಕ:18-12-2022 ಮತ್ತು ದಿನಾಂಕ:09-05-2023 ರಂದು ಯೆಮೆನ್‌ ನಿರ್ಗಮನ ಮುದ್ರೆಯನ್ನು ಸ್ಟ್ಯಾಂಪ್ ಮಾಡಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಪ್ರಯಾಣಿಕರಲ್ಲಿ ವಿಚಾರಿಸಿದಾಗ ತಾನು ಪ್ರಸ್ತುತ ದುಬೈ ದೇಶದ ವೀಸಾ ಹೊಂದಿದ್ದು ಸ್ವಂತ ಕಂಪೆನಿಯ ಕೆಲಸದ ನಿಮಿತ್ತ ಯೆಮೆನ್‌ ದೇಶಕ್ಕೆ ಪ್ರಯಾಣಿಸಿರುವುದಾಗಿ ತಿಳಿಸಿರುತ್ತಾನೆ. ಆಪಾದಿತನು ಭಾರತೀಯ ನಾಗರಿಕರ ಪ್ರಯಾಣ ನಿಷೇಧಿಸಿರುವ ಯೆಮನ್ ದೇಶಕ್ಕೆ ಪ್ರಯಾಣಿಸಿರುತ್ತಾನೆ ಎಂಬಿತ್ಯಾದಿಯಾಗಿರುತ್ತದೆ.

Traffic South Police Station                  

ಪಿರ್ಯಾದಿದಾರರಾದ ದೇವಸ್ಯ ಅಬ್ದುಲ್ ರಜಾಕ್ (43 ವರ್ಷ) ರವರು ದಿನಾಂಕ: 10-05-2023 ರಂದು ಕೆಲಸದ ಬಗ್ಗೆ ಗ್ರಾಮಚಾವಡಿ ಕಡೆಗೆ ಹೋಗಲು ಅವರ ನೆರೆಯ ಜಾಬಿರ್ ಅವರ ಧಣಿಯವರಾದ ಮಹಮ್ಮದ್ ಅಸ್ಲಂ ರವರ ಸ್ಕೂಟರ್ ನಂಬ್ರ;KA-19-HD-7231 ನೇದರಲ್ಲಿ ಜಾಬಿರ್ ಸವಾರನಾಗಿ ಪಿರ್ಯಾದಿದಾರರು ಸಹ ಸವಾರನಾಗಿ ಪಂಜಿಕ್ಕಲ್ ಕಡೆಯಿಂದ ಗ್ರಾಮಚಾವಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 6-30 ಗಂಟೆಗೆ ಸಣ್ಣ ಪದವು ಎಂಬಲ್ಲಿ ತಿರುವು ರಸ್ತೆಗೆ ತಲುಪಿದಾಗ ಗ್ರಾಮ ಚಾವಡಿ ಕಡೆಯಿಂದ ನಾಟೇಕಲ್ ಕಡೆಗೆ ಕಾರು ನಂಬ್ರ: KA-19-ML-5436 ನೇದನ್ನು ಅದರ ಚಾಲಕ ಶಪ್ರೃದ್ದೀನ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್ ನ ಎದುರು ಬಲ ಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು ಸವಾರ ಜಾಬಿರ್ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಕೈ ಕಾಲುಗಳಿಗೆ ತರಚಿದ ಹಾಗೂ ಗುದ್ದಿದ ಗಾಯ ಜಾಬಿರ್ ರವರಿಗೆ ತುಟಿಗೆ ಗಾಯ ಮತ್ತು ಬಲಕಾಲಿನ ತೊಡೆಗೆ ಮೂಳೆ ಮುರಿತದ ಗಾಯವಾಗಿದ್ದ ಅವರನ್ನು ಅಲ್ಲಿ ಸೇರಿದ ಜನರು ಹಾಗೂ ಅಪಘಾತ ಕಾರಿನ ಚಾಲಕ ಅಪಘಾತ ಪಡಿಸಿದ ಕಾರಿನಲ್ಲೆ ಚಿಕಿತ್ಸೆ ಬಗ್ಗೆ ದೇರಳಕಟ್ಟೆಯ ಕಣಚೂರು ಆಸ್ಪತ್ರೆಯಲ್ಲಿ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಪಿರ್ಯಾದಿದಾರರಿಗೆ ಹೊರ ರೋಗಿಯಾಗಿ ಚಿಕಿತ್ಸೆ ನೀಡಿ ಜಾಬಿರ್ ನನ್ನು ಒಳ ರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

Last Updated: 21-08-2023 12:51 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080