Crime Reported in : Mangalore Traffic West PS
ದಿನಾಂಕ 12-08-2022 ರಂದು ಪಿರ್ಯಾದುದಾರರ DEVIPRASAD ಮಂಗಳೂರು ನಗರದ ಹಳೆ ಬಂದರ್ ರಸ್ತೆಯ ಬಳಿ ಸಮವಸ್ತ್ರದಲ್ಲಿ ಕರ್ತವ್ಯ ದಲ್ಲಿ ಇರುವ ಸಮಯ ಸುಮಾರು 13.43 ಗಂಟೆಗೆ ಹಳೆ ಬಂದರು ರಸ್ತೆಯಿಂದಾಗಿ ಮೀನಿನ ದಕ್ಕೆಯ ಕಡೆಗೆ KA-19-HH-5737 ನೇ ದ್ವಿ ಚಕ್ರ ವಾಹನವನ್ನು ಅದರ ಸವಾರನು 1+1 ರ ಬದಲು 1+2 ಸಹ ಸವಾರನನ್ನು ಕುಳ್ಳಿರಿಸಿಕೊಂಡು ತೀರಾ ನಿರ್ಲಕ್ಷತನ ಹಾಗೂ ಮಾನವ ಜೀವಕ್ಕೆ ಅಪಾಯಕಾರಿ ಆಗುವ ರೀತಿಯಲ್ಲಿ ದ್ವಿ ಚಕ್ರ ವಾಹನದಲ್ಲಿ ಸವಾರ ಹಾಗೂ ಸಹಸವಾರರು ಹೆಲ್ಮೆಟ್ ಧರಿಸದೇ ಚಾಲಾಯಿಸಿಕೊಂಡು ಬರುತ್ತಿದ್ದವರ ವೀಡಿಯೋ ಮತ್ತು ಫೂಟೊವನ್ನು ಸಿಬ್ಬಂದಿಯವರ ಮೊಬೈಲ್ ಫೋನ್ ನಿಂದ ತೆಗೆದಿದ್ದು ಸದ್ರಿ ದ್ವಿ ಚಕ್ರ ಸವಾರನ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಎಂಬಿತ್ಯಾದಿ
Crime Reported in : Mangalore Traffic East PS
ಪಿರ್ಯಾದಿದಾರಾದ VISHWANATH RAI ದಿನಾಂಕ 12-08-2022 ರಂದು ಮಂಗಳೂರು ನಗರದ ಮಾರ್ನಮಿಕಟ್ಟೆ ಜಂಕ್ಷನ್ ಬಳಿ ಕರ್ತವ್ಯದಲ್ಲಿದ್ದಾಗ ಸಮಯ ಸುಮಾರು 11.00 ಗಂಟೆಗೆ ಕೋಟಿಚೆನ್ನಯ್ಯ ಸರ್ಕಲ್ ಕಡೆಯಿಂದ ಮಂಗಳಾದೇವಿ ಕಡೆಗೆ ಹಾದು ಹೋಗುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ KA-19-S-5354 ನೇ ನಂಬ್ರದ ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲ್ ನಲ್ಲಿ ಇಬ್ಬರು ಸಹ ಸವಾರರನ್ನು ಕುಳ್ಳಿರಿಸಿಕೊಂಡು ಮೋಟಾರ್ ಸೈಕಲ್ ಸವಾರ ತಲೆಗೆ ಹೆಲ್ಮೆಟ್ ಧರಿಸಿದ್ದು, ಸಹ ಸವಾರರು ತಲೆಗೆ ಹೆಲ್ಮೆಟ್ ಧರಿಸದೇ ನಿರ್ಲಕ್ಷ್ಯತನದಿಂದ ತನ್ನ ಪ್ರಾಣ ಹಾಗೂ ಇತರರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದವರನ್ನು ಕಂಡು ಪಿರ್ಯಾದಿದಾರರು ಸದ್ರಿ ಮೋಟಾರ್ ಸೈಕಲನ್ನು ನಿಲ್ಲಿಸುವಂತೆ ಸೂಚಿಸಿದಾಗ ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲನ್ನು ಸ್ಥಳದಲ್ಲಿ ನಿಲ್ಲಿಸದೇ ಮಂಗಳಾದೇವಿ ಕಡೆಗೆ ಸವಾರಿ ಮಾಡಿಕೊಂಡು ಮುಂದೆ ಹೋಗಿದ್ದು, ಪಿರ್ಯಾದಿದಾರರು ಜೊತೆಯಲ್ಲಿದ್ದ ಸಿಬ್ಬಂದಿಯವರ ಮೊಬೈಲ್ ನಲ್ಲಿ ವೀಡಿಯೋ ಹಾಗೂ ಪೋಟೋ ತೆಗೆಸಿರುತ್ತಾರೆ. ಆದ್ದರಿಂದ KA-19-S-5354 ಮೋಟಾರ್ ಸೈಕಲ್ ಸವಾರ ಹಾಗೂ ಸಹ ಸವಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬಿತ್ಯಾದಿ
2) ಪಿರ್ಯಾದಿದಾರಾದ VISHWANATH RAI ದಿನಾಂಕ 12-08-2022 ರಂದು ಮಂಗಳೂರು ನಗರದ ಕದ್ರಿ ದೇವಸ್ಥಾನದ ರಸ್ತೆಯಲ್ಲಿ ಕರ್ತವ್ಯದಲ್ಲಿದ್ದಾಗ ಸಮಯ ಸುಮಾರು 11.30 ಗಂಟೆಗೆ ಕದ್ರಿ ಮೈದಾನದ ಕಡೆಯಿಂದ ಕದ್ರಿ ಕಂಬ್ಳ 1ನೇ ಅಡ್ಡ ರಸ್ತೆ ಕಡೆಗೆ ಹಾದು ಹೋಗುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ KA-19-EN-3015 ನೇ ನಂಬ್ರದ ಸ್ಕೂಟರ್ ಸವಾರನು ತನ್ನ ಸ್ಕೂಟರಿನಲ್ಲಿ ಸಹ ಸವಾರರನ್ನು ಕುಳ್ಳಿರಿಸಿಕೊಂಡು ಇಬ್ಬರೂ ತಲೆಗೆ ಹೆಲ್ಮೆಟ್ ಧರಿಸದೇ ನಿರ್ಲಕ್ಷ್ಯತನದಿಂದ ತನ್ನ ಪ್ರಾಣ ಹಾಗೂ ಇತರರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದವರನ್ನು ಕಂಡು ಸದ್ರಿ ಸ್ಕೂಟರನ್ನು ನಿಲ್ಲಿಸುವಂತೆ ಸ್ಕೂಟರ್ ಸವಾರನು ತನ್ನ ಸ್ಕೂಟರನ್ನು ಸ್ಥಳದಲ್ಲಿ ನಿಲ್ಲಿಸದೇ ಕದ್ರಿ ಕಂಬ್ಳದ 1ನೇ ಅಡ್ಡ ರಸ್ತೆ ಕಡೆಗೆ ಸವಾರಿ ಮಾಡಿಕೊಂಡು ಮುಂದೆ ಹೋಗಿದ್ದು, ನಾನು ನನ್ನ ಜೊತೆಯಲ್ಲಿದ್ದ ಸಿಬ್ಬಂದಿಯವರ ಮೊಬೈಲ್ ನಲ್ಲಿ ವೀಡಿಯೋ ಹಾಗೂ ಪೋಟೋ ತೆಗೆಸಿರುತ್ತಾರೆ. ಆದ್ದರಿಂದ KA-19-EN-3015 ಸ್ಕೂಟರ್ ಸವಾರ ಹಾಗೂ ಸಹ ಸವಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬಿತ್ಯಾದಿ
3) ಪಿರ್ಯಾದಿದಾರಾದ ಮನೀಶ್ ಕುಮಾರ್ ರಾಜಕ್ ರವರು ದಿನಾಂಕ 11-08-2022 ರಂದು ರಾತ್ರಿ ವೇಳೆ ತನ್ನ ಗೆಳೆಯನಾದ ಬಲರಾಮನ ಜೊತೆ ಕುಲಶೇಖರದಲ್ಲಿ ವಾಸವಾಗಿರುವ ಆತನ ಅಕ್ಕನ ಮನೆಗೆ ತೆರಳಿದ್ದವರು ನಂತರ ಅಲ್ಲಿಂದ ಇಬ್ಬರು ಜೊತೆಯಾಗಿ ಕಲ್ಪನೆಯಲ್ಲಿರುವ ಪಿರ್ಯಾದಿದಾರರ ಅಕ್ಕನಾದ ಶ್ರೀಮತಿ ಸಂದ್ಯಾ ರವರು ವಾಸವಾಗಿರುವ ಮನೆಯ ಕಡೆಗೆ ನಡೆದುಕೊಂಡು ಬರುತ್ತಾ ರಾತ್ರಿ ಸಮಯ ಸುಮಾರು 9.30 ಗಂಟೆಗೆ ಕಲ್ಪನೆಯಲ್ಲಿರುವ ರಸ್ತೆ ಬದಿಯ ಪಾಸ್ಟ್ ಪುಡ್ ಅಂಗಡಿಯ ಎದುರಿನ ರಸ್ತೆಗೆ ಬಂದು ರಸ್ತೆಯನ್ನು ದಾಟುತ್ತಿದ್ದಾಗ ಬಿಕರ್ನಕಟ್ಟೆ ಕೈಕಂಬ ಕಡೆಯಿಂದ ಕುಲಶೇಖರದ ಕಡೆಗೆ KA-19-HK-0948 ನೋಂದಣಿ ನಂಬ್ರದ ಮೋಟಾರು ಸೈಕಲನ್ನು ಅದರ ಸವಾರ ಆಶ್ಮಿತ್ ಹೆಚ್. ಪೂಜಾರಿ ರವರು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಾದಚಾರಿ ಪಿರ್ಯಾದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆ ಮೇಲೆ ಬಿದ್ದು, ಬಲ ಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯ, ಎಡ ಕಾಲಿನ ಮೊಣಗಂಟು, ಎಡ ಕೈ ಮೊಣಗಂಟು, ಹೊಟ್ಟೆಯ ಎಡಭಾಗ ಮತ್ತು ಎಡ ಭುಜದ ಬಳಿ ತರಚಿದ ರಕ್ತ ಕಂದಿದ ಗಾಯ ಉಂಟಾದವರನ್ನು ಅಪಘಾತದ ವಿಚಾರ ತಿಳಿದು ಸ್ಥಳಕ್ಕೆ ಬಂದ ಸಂತೋಷ್ ರವರು ಆಟೋರಿಕ್ಷಾ ಒಂದರಲ್ಲಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಅಪಘಾತಪಡಿಸಿದ ಮೋಟಾರ್ ಸೈಕಲ್ ಸವಾರ ಕೂಡ ವೆನ್ಲಾಕ್ ಆಸ್ಪತ್ರೆಯ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದು, ಪಿರ್ಯಾದಿಯ ಚಿಕಿತ್ಸೆ ಬಗ್ಗೆ ತಗಲುವ ವೆಚ್ಚವನ್ನು ಭರಿಸುವುದಾಗಿ ತಿಳಿಸಿ ನಂತರ ನಿರಾಕರಿಸಿದ್ದರಿಂದ ತಡವಾಗಿ ಪಿರ್ಯಾದಿ ನೀಡಿರುವುದಾಗಿದೆ ಎಂಬಿತ್ಯಾದಿ.
Crime Reported in : Kavoor PS
ಪಿರ್ಯಾದಿದಾರಾದ SUDHAKARA PRABHU ಮಾಲೇಮಾರ್ ರಸ್ತೆಯಲ್ಲಿರುವ ಸುಪ್ರದಿ ಸ್ಟೋರ್ ಎಂಬ ಅಂಗಡಿಯನ್ನು ಹೊಂದಿದ್ದು, ಅವರ ಸಹೋದರ ಸಂಬಂಧಿಯಾಗಿರುವ ನಾಗೇಶ್ ಪ್ರಭು ಎಂಬವರ ಕೆಎ 19 ಇಹೆಚ್ 8239 ನೇ ನಂಬ್ರದ ಹೋಂಡಾ ಆಕ್ವೀವಾ ಬಿ.ಎಸ್ 3 ದ್ವಿಚಕ್ರ ವಾಹನವನ್ನು ಉಪಯೋಗಿಸುತ್ತಿದ್ದು, ದಿನಾಂಕ: 03-08-2022 ರಂದು ರಾತ್ರಿ 07.00 ಗಂಟೆಗೆ ಮನೆಯ ಅಂಗಳದಲ್ಲಿ ಇಟ್ಟು ಹ್ಯಾಂಡ್ ಲಾಕ್ ಮಾಡಿ ಮನೆಯ ಗೇಟಿಗೆ ಬೀಗ ಹಾಕಿರುತ್ತಾರೆ. ನಂತರ ದಿನಾಂಕ: 04-08-2022 ಬೆಳಗ್ಗೆ ಸಮಯ ಸುಮಾರು 06.30 ಗಂಟೆಗೆ ನೋಡಿದಾಗ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳುವಾಗಿರುತ್ತದೆ. ಇದರ ಅಂದಾಜು ಮೌಲ್ಯ ಸುಮಾರು 10,000 ರೂ ಆಗಬಹುದು ಎಂಬಿತ್ಯಾದಿ.
Crime Reported in : Urva PS
ಪಿರ್ಯಾದಿದಾರಾದ Harish H V ದಿನಾಂಕ 12-08-2022 ರಂದು ಬೆಳಿಗ್ಗೆ ಸುಮಾರು 08-30 ಗಂಟೆಯಿಂದ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಸಂಚಾರಿಸುತ್ತಿದ್ದಾಗ ಸಮಯ ಸುಮಾರು 09-10 ಗಂಟೆಗೆ ಉರ್ವ ಸ್ಟೋರ್ ಸಂತೋಷ್ ಬಾರ್ ಬಳಿ ಉರ್ವಸ್ಟೋರ್ ನಿಂದ ಮಂಗಳೂರು ಕಡೆಗೆ ಹೋಗುವ ರಸ್ತೆಯಲ್ಲಿ ಕೆಎ-19-ಸಿ-3204 ನೊಂದಣಿ ಸಂಖ್ಯೆಯ ಮೌಲ ಹೆಸರಿನ 2ಸಿ ರೂಟ್ ನಂಬ್ರದ ಬಸ್ಸಿನ ಚಾಲಕನು ಕೆಎ-51-ಎ ಎಪ್ -6079 ನೊಂದಣಿ ಸಂಖ್ಯೆಯ ರಾಜಲಕ್ಷ್ಮಿ ಹೆಸರಿನ ಸರ್ವಿಸ್ ಬಸ್ಸಿನ ಮುಂದುಗಡೆ ಬಸ್ಸನ್ನು ನಿಲ್ಲಿಸಿ ಸುಗಮ ಸಂಚಾರಕ್ಕೆ ತೊಂದರೆಯನ್ನುಂಟು ಮಾಡುತ್ತಿದ್ದವನನ್ನು ಗಮನಿಸಿ ಪಿರ್ಯಾದಿದಾರರು ಇಲಾಖಾ ವಾಹನದಿಂದ ಇಳಿದು ಬಸ್ಸಿನ ಬಳಿ ಹೋಗುತ್ತಿದ್ದಂತೆ ಎರಡೂ ಬಸ್ಸಿನಿಂದ ಇಳಿದ 4 ಜನ ಯುವಕರು ಪಿರ್ಯಾದಿದಾರರ ಸಮಕ್ಷಮ ಸಾರ್ವಜನಿಕರ ನೆಮ್ಮದಿಗ ಭಂಗವನ್ನುಂಟು ಮಾಡುವ ರೀತಿಯಲ್ಲಿ ರಸ್ತೆಯ ಬದಿಯಲ್ಲಿ ಪರಸ್ಪರ ಕೈಯಲ್ಲಿ ದೂಡಾಡಿಕೊಂಡು ಹೊಡೆದಾಡುತ್ತಿದ್ದವರನ್ನು ತಡೆದು ವಿಚಾರಿಸಿದಾಗ ಒಬ್ಬನು ಕೆಎ-19-ಸಿ-3204 ಬಸ್ಸಿನ ಚಾಲಕ ಶ್ರೀ ಮೊಹಮ್ಮದ್ ಶಫಿಕ್ 24 ವರ್ಷ ವಾಸ: 1-183 ಕುರ್ಸು ಗುಡ್ಡೆ ಕಳವಾರು ಗ್ರಾಮ ಮಂಗಳೂರು ತಾಲೂಕು ಬಸ್ಸಿನ ಕಂಡಕ್ಟರ್ ಶ್ರೀ ಸಲ್ಮಾನ್ 20 ವರ್ಷ ವಾಸ ಮಸಿತಾ ಮಂಜಿಲ್ ಕುರ್ಸು ಗುಡ್ಡೆ ಕಳವಾರು ಗ್ರಾಮ ಮಂಗಳೂರು ತಾಲೂಕು ಹಾಗೂ ಇನ್ನೊಬ್ಬನು ಕೆಎ-51-ಎ ಎಪ್ -6079 ನೊಂದಣಿ ಸಂಖ್ಯೆಯ ಬಸ್ಸಿನ ಚಾಲಕ ಶ್ರೀ ಶಿವ ಪ್ರಸಾದ್ ಪ್ರಾಯ 24 ವರ್ಷ, ವಾಸ: 56,1-65/ಎ ಅತ್ತೂರು ಕೆಮ್ರಾಲ್ ಅಂಚೆ ಮಂಗಳೂರು ತಾಲೂಕು ಬಸ್ಸಿನ ಕಂಡಕ್ಟರ್ ಶ್ರೀ ವರುಣ್ 23 ವರ್ಷ ವಾಸ: ಶ್ರೀ ಗೌರಿ ನಿವಾಸ ಕೊಲ್ಲೂರು ಅಂಚೆ ಉಳೆಪ್ಪಾಡಿ ಗ್ರಾಮ ಮಂಗಳೂರು ತಾಲೂಕು ನಾಲ್ಕೂ ಜನರು ಟೈಮಿಂಗ್ ವಿಚಾರವಾಗಿ ಹೊಡೆದಾಡುತ್ತಿರುವುದಾಗಿ ತಿಳಿದು ಬಂತು ಅದರಂತೆ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಿ ನಾಲ್ವರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆ ತಂದು ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.
Crime Reported in : Mulki PS
ದಿನಾಂಕ: 12-08-2022 ರಂದು 20.15 ಗಂಟೆಗೆ ಮಂಗಳೂರು ತಾಲೂಕು ಮೆನ್ನಬೆಟ್ಟು ಗ್ರಾಮದ ಕಾಪಿಕಾಡು ಸ್ವಾಗತ್ ಬಾರ್ ನಲ್ಲಿ ಪಿರ್ಯಾದಿದಾರಾದ Umanatha Shetty ತನ್ನ ಸ್ನೇಹಿತ ಮಂಜುನಾಥ ಎಂಬವರ ಜೊತೆ ಅಮಲು ಪದಾರ್ಥ ಸೇವಿಸುತ್ತಿದ್ದ ವೇಳೆ ಆರೋಪಿ ನಿತಿನ್ ಪಿರ್ಯಾದಿದಾರರನ್ನು ದುರುಗುಟ್ಟಿಕೊಂಡು ನೋಡಿದ್ದು, ಇದರಿಂದ ಭಯಭೀತರಾದ ಪಿರ್ಯಾದಿದಾರರು ತನ್ನ ಸ್ನೇಹಿತ ಪ್ರಶಾಂತ್ ಎಂಬವರಿಗೆ ಫೋನ್ ಮಾಡಿ ತಿಳಿಸಿದ್ದು ಅವರು ತಾನು ಮೂರು ಕಾವೇರಿ ಬಳಿ ಲಲಿತ ಬಾರ್ ನಲ್ಲಿದ್ದು ಅಲ್ಲಿಗೆ ಬರುವಂತೆ ತಿಳಿಸಿದಂತೆ ಪಿರ್ಯಾದಿದಾರರು ಸ್ವಾಗತ್ ಬಾರ್ ನಿಂದ ಹೊರಬಂದು ತನ್ನ ಮೋಟಾರ್ ಸೈಕಲಿನ ಬಳಿ ಹೋಗುತ್ತಿದ್ದಂತೆ ಆರೋಪಿತರಾದ ನಿತಿನ್, ಪ್ರಸಾದ್ ಹಾಗೂ ಇತರ 4-5 ಜನರು ಪಿರ್ಯಾದಿದಾರರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ “ ಬೇವರ್ಸಿ, ಎಲ್ಲಿಗೆ ಹೋಗುತ್ತೀಯ” ಎಂಬುದಾಗಿ ಅವಾಚ್ಯ ಶಬ್ಧಗಳಿಂದ ಬೈದಿದ್ದು ಬಳಿಕ ಪಿರ್ಯಾದಿದಾರರು ಮೋಟಾರ್ ಸೈಕಲಿನಲ್ಲಿ ಕುಳಿತು ಹೊರಡಲು ಮುಂದಾದ ವೇಳೆ “ಎಲ್ಲಿಗೆ ಹೋಗುತ್ತೀಯ, ನಿನ್ನನ್ನು ಮುಗಿಸದೇ ಬಿಡುವುದಿಲ್ಲ” ಎಂದು ಆರೋಪಿ ನಿತಿನ್ ನು ಬೆದರಿಕೆ ಒಡ್ಡಿದ್ದು ಅಲ್ಲದೇ ಬಳಿಕ ಪಿರ್ಯಾದಿದಾರರು ಮೂರು ಕಾವೇರಿಯಲ್ಲಿ ಲಲಿತ್ ಬಾರ್ ನಲ್ಲಿ ಕುಳಿತಿದ್ದ ವೇಳೆ ಆರೋಪಿ ಪ್ರಸಾದ್ ನು ಅಲ್ಲಿಗೆ ಬಂದು ಪಿರ್ಯಾದಿದಾರರನ್ನು ಗುರಾಯಿಸಿ ನೋಡಿದ್ದು ಬಾರ್ ನ ಹೊರಗೆ ಆರೋಪಿತರು ಗುಂಪು ಸೇರಿ ಪಿರ್ಯಾದಿದಾರರನ್ನು ಕಾಯುತ್ತಿದ್ದು ರಾತ್ರಿ 10.30 ಗಂಟೆಗೆ ಪೊಲೀಸ್ ಹೊಯ್ಸಳ ವಾಹನದ ಸೈರನ್ ಕೇಳಿ ಆರೋಪಿತರು ಅಲ್ಲಿಂದ ಕೆಂಪು ಬಣ್ಣದ ಆಲ್ಟೋ ಕಾರಿನಲ್ಲಿ ಹೋಗಿರುತ್ತಾರೆ ಎಂಬಿತ್ಯಾದಿ.
Crime Reported in : Mangalore Traffic North PS
ಪಿರ್ಯಾದಿದಾರಾದ Kanthappa ದಿನಾಂಕ 12-08-2022 ರಂದು ಸುರತ್ಕಲ್ ಪೊಲೀಸ್ ಠಾಣಾ ಸರಹದ್ದಿನ ಶಂಶುದ್ದೀನ್ ಸರ್ಕಲ್ ನಲ್ಲಿ ನಿಗದಿತ ಸಮವಸ್ತ್ರ ಧರಿಸಿಕೊಂಡು ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ ಸಮಯ ಸುಮಾರು 09:20 ಗಂಟೆಗೆ KA-19-EX-0065 ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರನು ಹಿಂಬದಿಯಲ್ಲಿ ಸಹ ಸವಾರರಿಬ್ಬರನ್ನು ಕುಳ್ಳಿರಿಸಿಕೊಂಡು ಮೂವರೂ ತಲೆಗೆ ಹೆಲ್ಮೆಟ್ ಧರಿಸದೇ ಶಂಶುದ್ದೀನ್ ಸರ್ಕಲ್ ಕಡೆಯಿಂದ ಗಣೇಶಪುರ ಕಡೆಗೆ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬರುತ್ತಿದ್ದವರನ್ನು ಕಂಡು ಸಮವಸ್ತ್ರದಲ್ಲಿದ್ದ ನಾವು ಸದ್ರಿ ಮೋಟಾರ್ ಸೈಕಲನ್ನು ನಿಲ್ಲಿಸಲು ಕೈ ಸನ್ನೆ ಮಾಡಿ ನಿಲ್ಲಿಸಲು ಸೂಚನೆ ನೀಡಿದರೂ ನಮ್ಮ ಸೂಚನೆಯನ್ನು ಧಿಕ್ಕರಿಸಿ ಸದ್ರಿ ಮೋಟಾರ್ ಸೈಕಲನ್ನು ಅದರ ಸವಾರ ಸ್ಥಳದಲ್ಲಿ ನಿಲ್ಲಿಸದೇ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಗಣೇಶಪುರ ಕಡೆಗೆ ಹೋಗಿರುತ್ತಾರೆ ಎಂಬಿತ್ಯಾದಿ.
Crime Reported in : Kankanady Town PS
ಪಿರ್ಯಾದಿದಾರಾದ Manjunath Rai ಸುಮಾರು 10 ವರ್ಷಗಳಿಂದ ಪಂಪವೆಲ್ ನಲ್ಲಿರುವ ಅರುಣೋದಯ ಹೆಚ್.ಪಿ ಗ್ಯಾಸ್ ಎಜೆನ್ಸಿರವರಿಂದ ಮನೆಗೆ ಗ್ಯಾಸ್ ಕಲೆಕ್ಷನ್ ಹಾಗೂ ಎರಡು ಸಿಲೆಂಡರ್ ನೀಡಿದ್ದು,ಗ್ಯಾಸ್ ಖಾಲಿ ಆದಾಗ ಕಂಪನಿಗೆ ಬುಕ್ ಮಾಡಿ ಖಾಲಿ ಆದ ಸಿಲೆಂಡರ್ ನ್ನು ಮನೆಯ ಹೊರಗಡೆ ಇಡುತ್ತಿದ್ದು ಅದೇ ರೀತಿಯಲ್ಲಿ ಕಂಪನಿಯವರು ಮನೆಯ ಬಳಿ ಬಂದು ಗ್ಯಾಸ್ ತುಂಬಿದ ಸಿಲೇಂಡರ್ ನ್ನು ಕೊಟ್ಟು ಖಾಲಿ ಸಿಲೆಂಡರ್ ಕೊಂಡುಹೋಗುತ್ತಿದ್ದರು.ದಿನಾಂಕ:11-08-2022 ರಂದು ಪಿರ್ಯಾದಿದಾರರು ಮನೆಯ ಸಿಲೇಂಡರ್ ಗ್ಯಾಸ್ ಖಾಲಿ ಆದ ಕಾರಣ ಸಿಲೇಂಡರ್ ಗ್ಯಾಸ್ ನ್ನು ಮನೆಯ ಹೊರಗೆ ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಹೋಗುವಾಗ ಇಟ್ಟಿದ್ದು ಸಂಜೆ 5:30 ಗಂಟೆಗೆ ಬಂದು ನೋಡಿದಾಗ ಸಿಲೆಂಡರ್ ಗ್ಯಾಸ್ ಕಾಣೆಯಾಗಿದ್ದು, ಎಲ್ಲಾ ಕಡೆ ಹುಡುಕಾಡಿದರೂ ಎಲ್ಲಿಯೂ ಪತ್ತೆಯಾಗದೇ ಇದ್ದು ,ಯಾರೋ ಕಳ್ಳರು ಪಿರ್ಯಾದಿದಾರರ ಖಾಲಿ ಸಿಲೇಂಡರನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಎಂಬಿತ್ಯಾದಿ.ಖಾಲಿ ಸಿಲೆಂಡರ್ ನ ಅಂದಾಜು ಮೌಲ್ಯ ಸುಮಾರು 4000/- ರೂ ಆಗಬಹದು.