ಅಭಿಪ್ರಾಯ / ಸಲಹೆಗಳು

Crime Reported in Mangalore West Traffic PS

ದಿನಾಂಕ 19-08-2022 ರಂದು KA-19-AC-3285 ನೇ ನವದುರ್ಗಾ ಬಸ್ಸನ್ನು ಚಾಲಕನಾಗಿ ಮಂಗಳೂರು ಸರ್ವಿಸ್ ಬಸ್ ನಿಲ್ದಾಣದಿಂದ ಉಡುಪಿ ಕಡೆಗೆ ಹೋಗುವರೇ ಪಿವಿಎಸ್ ಕಡೆಯಿಂದಾಗಿ ಲಾಲ್ ಭಾಗ್ ಕಡೆಗೆ ಹಾದು ಹೋಗುವ ಎಂ.ಜಿ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 8.15 ಗಂಟೆಗೆ ಬಿ.ಜಿ ಸ್ಕೂಲ್ ಜಂಕ್ಷನ್ ಬಳಿ ತಲುಪುವಾಗ ಫಿರ್ಯಾದಿ HARISH ದಾರರು  ಹಿಂದಿನಿಂದ ಅಂದರೆ ಪಿವಿಎಸ್ ಕಡೆಯಿಂದ ಲಾಲ್ ಭಾಗ್ ಕಡೆಗೆ ಹಾದು ಹೋಗುವ ಸಾರ್ವಜನಿಕ ರಸ್ತೆಯಲ್ಲಿ KA-19-AC-8076 ನೇ ಆಟೋ ರಿಕ್ಷಾವನ್ನು ಅದರ ಚಾಲಕನು ನಿರ್ಲಕ್ಷ್ಯತನದಿಂದ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಚಲಾಯಿಸುತ್ತಿದ್ದ ಬಸ್ಸಿನ ಹಿಂಬದಿಯ ಬಲಭಾಗಕ್ಕೆ ಡಿಕ್ಕಿ ಹೊಡೆದು ಜಖಂಗೊಂಡಿದ್ದು ಹಾಗೂ  ಈ ಅಪಘಾತದಿಂದ ಆಟೋ ರಿಕ್ಷಾದ ಮುಂಭಾಗ ಜಖಂಗೊಂಡಿದ್ದು ಹಾಗೂ ಆಟೋ ರಿಕ್ಷಾ ಚಾಲಕನಿಗೂ  ಗಾಯವಾಗಿರುತ್ತದೆ ಎಂಬಿತ್ಯಾದಿ.

 

Crime Reported in Mangalore East Traffic PS                   

ಪಿರ್ಯಾದಿದಾರರಾದ ಅಬ್ದುಲ್ ಜಾಬೀರ್ ಎಂಬುವರು ದಿನಾಂಕ; 18/08/2022 ರಂದು ಪಂಪವೆಲ್  ಫ್ಲೈಓವರ್ ಕಡೆಯಿಂದ ಕರಾವಳಿ ಜಂಕ್ಷನ್ ಕಡೆಗೆ ಇರುವ ಆಟೋಮೋಬೈಲ್ಸ್ ಅಂಗಡಿಯೊಂದರಲ್ಲಿ ಸಾಮಾನು ತರಲೆಂದು ನಡೆದುಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 4-45 ಗಂಟೆ ವೇಳೆಗೆ ಸದರಿ ರಸ್ತೆಯ ಬುಕ್ಕಿಂಗ್ ಆಫೀಸ್ ಎಂಬುದಾಗಿ ಬರೆದಿರುವ ಹೊಸ ಕಟ್ಟಡದ ಎದುರು ತಲುಪುತ್ತಿದ್ದಂತೆ ಅವರ ಹಿಂಬದಿಯಿಂದ ಅಂದರೆ ಪಂಪವೆಲ್ ಫ್ಲೈ ಓವರ್ ಕಡೆಯಿಂದ ಕರಾವಳಿ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ರಸ್ತೆಯಲ್ಲಿ ಅಶೋಕ ಲೈಲ್ಯಾಂಡ್ ಗೂಡ್ಸ್ (ಲಾರಿ) ವಾಹನ ನೊಂದಣಿ ಸಂಖ್ಯೆ: KA-19-AC-2269 ನೇಯದನ್ನು ಅದರ ಚಾಲಕ ಯತಿರಾಜ್ ಎಂಬುವರು ದುಡುಕುತನ ನಿರ್ಲಕ್ಷ್ಯತನದಿಂದ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಾದಿದಾರರ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮುಂದಕ್ಕೆ ಎಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದರಿಂದ ಪಿರ್ಯಾದಿದಾರರ ಬಲ ಭುಜಕ್ಕೆ, ಬೆನ್ನಿಗೆ ಗುದ್ದಿದ ರೀತಿಯ ಗಾಯವಾಗಿದ್ದು ಬಲಕೈಗೆ ತರಚು ಗಾಯಗಳಾಗಿರುತ್ತದೆ ಈ ಬಗ್ಗೆ ಎಸ್.ಸಿ.ಎಸ್. ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದು ಕೊಂಡಿರುವುದಾಗಿದೆ, ಆದುದರಿಂದ ಈ ರಸ್ತೆ ಅಪಫಾತದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳು ವಂತೆ ಕೋರಿಕೆ. ಎಂಬಿತ್ಯಾದಿ.

 

Crime Reported in Traffic North Police Station                 

ಪಿರ್ಯಾದಿ Rajeesh Paroli ದಾರರು ದಿನಾಂಕ: 18-08-2022 ರಂದು ಅವರ ಪತ್ನಿಯ ಬಾಬ್ತು KA-19-HE-8985 ನಂಬ್ರದ ಬುಲೆಟ್ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ರಾಹೆ 66ರಲ್ಲಿ ಹಳೆಯಂಗಡಿ ಕಡೆಯಿಂದ ಕೋಲ್ನಾಡು ಕಡೆಗೆ ತೆರಳುತ್ತಿದ್ದು ಕೊಲ್ನಾಡು ಜಂಕ್ಷನ್ ಬಳಿ ತೆರೆದ ಡಿವೈಡರ್ ಬಳಿ ತಲುಪುತ್ತಿದ್ದಂತೆ ಪಕ್ಕದಲ್ಲಿರುವ ಪೆಟ್ರೋಲ್ ಪಂಪ್ ಕಡೆಗೆ ಹೋಗಲು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರ್ ಸೈಕಲಿನ ಇಂಡಿಕೇಟರನ್ನು ಹಾಕಿ ಬಲಕ್ಕೆ ತಿರುಗಿಸಲು ಕಾಯುತ್ತಿದ್ದಂತೆ ರಾತ್ರಿ ಸಮಯ ಸುಮಾರು 10:30 ಗಂಟೆಗೆ ಪಿರ್ಯಾದಿದಾರರ ಮೋಟಾರ್ ಸೈಕಲಿನ ಹಿಂಬದಿಯಲ್ಲಿದ್ದ KA-19-ES-8629 ನಂಬ್ರದ ಮೋಟಾರ್ ಸೈಕಲಿಗೆ ಅದರ ಹಿಂದಿನಿಂದ ಬಂದ KL-60-E-3443 ನಂಬ್ರದ ಕಾರನ್ನು ಅದರ ಚಾಲಕ ತಾಹೀರ್ ಆಲಿ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲಿನ ಹಿಂದುಗಡೆ ಇದ್ದ KA-19-ES-8629 ನಂಬ್ರದ ಮೋಟಾರ್ ಸೈಕಲಿಗೆ ಮತ್ತು ಪಿರ್ಯಾದಿದಾರರ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ್ದು ಇದರ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಾಹೆ 66ರ ಡಾಮಾರು ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರಿಗೆ ಬಲಕಣ್ಣಿನ ಬಳಿ ತರಚಿದ ಗಾಯ, ಎಡ ಭುಜದ ಬಳಿ ಗುದ್ದಿದ ಗಾಯ, ಬಲಕಾಲಿನ ಗಂಟಿನ ಬಳಿ ಮೂಳೆ ಮುರಿತದ ತೀವ್ರ ತರದ ಗಾಯವಾಗಿದ್ದು ಪಿರ್ಯಾದಿದಾರರು ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿಯು ಮತ್ತು ಪಿರ್ಯಾದಿದಾರರ ಹಿಂಬದಿಯಲ್ಲಿದ್ದ KA-19-ES-8629 ನಂಬ್ರದ ಮೋಟಾರ್ ಸೈಕಲಿನಲ್ಲಿದ್ದ ಬದ್ರುಲ್ ಮುನೀರ್ ಎಂಬಾತನಿಗೆ ತಲೆಗೆ, ಹಣೆಗೆ, ಹೊಟ್ಟೆಗೆ ತೀವ್ರ ತರದ ಗಾಯವಾಗಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಶ್ರೀನಿವಾಸ ಆಸ್ಪತ್ರೆಯಿಂದ ಆತನ ಸಂಭಂದಿಕರು ಎಜೆ ಆಸ್ಪತ್ರೆಗೆ ದಾಖಲಾಗಿಸಿರುತ್ತಾರೆ ಎಂಬಿತ್ಯಾದಿ.

CEN Crime PS Mangaluru City  

ಕೆಎಂಎಫ್ ಡೈರಿಯಲ್ಲಿ ನೇರ ನೇಮಕಾತಿ ಮೂಲಕ ಉದ್ಯೋಗಕ್ಕೆ ಗುಟ್ಟಾಗಿ ಹಣವನ್ನು ನೀಡಿದ್ದಲ್ಲಿ ಉದ್ಯೋಗ ದೊರೆಯುತ್ತದೆ ಎಂಬುದಾಗಿ ಆರೋಪಿಗಳಾದ 1) RAMAPRASAD(A1) 2)HEMANTH(A2) 3) SURENDRA REDDY(A3) 4) DARSHAN(A4) ರವರುಗಳು  ಪಿರ್ಯಾದುದಾರರಿಗೆ ಹಾಗೂ ಇತರ ಸುಮಾರು 138 ಕ್ಕೂ ಹೆಚ್ಚು ಉದ್ಯೋಗಾರ್ಥಿಗಳನ್ನು ನಂಬಿಸಿ ಅವರುಗಳಿಂದ ಸುಮಾರು ರೂ. 1.84 ಕೋಟಿಗಿಂತಲೂ ಹೆಚ್ಚಿನ ಹಣವನ್ನು ಪಡೆದುಕೊಂಡು, ಆ ಪೈಕಿ ಪಿರ್ಯಾದಿದಾರರಿಗೆ ಹಾಗೂ ಇನ್ನೂ ಕೆಲವರಿಗೆ ಕೆಎಂಎಫ್ ಡೈರಿ ಸರಕಾರಿ ಸಂಸ್ಥೆಯ ನಕಲಿ ಉದ್ಯೋಗ ನೇಮಕಾತಿ ಪತ್ರ, ಕೆಎಂಎಫ್ ಐಡಿ ಕಾರ್ಡ್ ನೀಡಿ ನಂಬಿಕೆ ದ್ರೋಹ ಹಾಗೂ ಮೋಸ ಮಾಡಿರುತ್ತಾರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 19-08-2022 07:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080