ಅಭಿಪ್ರಾಯ / ಸಲಹೆಗಳು

Crime Reported in : Mangalore East Traffic PS                                                  

ದಿನಾಂಕ 23-08-2022 ರಂದು ಪಿರ್ಯಾದಿದಾರರಾದ ರಾಜಶೇಖರ ಜವಳಿರವರು ತಾನು ಚಾಲಕನಾಗಿ ಕೆಲಸ ಮಾಡಿಕೊಂಡಿರುವ PY-05-D-9055  ನೋಂದಣಿ ನಂಬ್ರದ ಕಾರನ್ನು ಮದರ್ ತೆರೇಸಾ ರಸ್ತೆಯಲ್ಲಿರುವ ಮೆಡ್ ಪ್ಲಸ್ ಎದುರುಗಡೆ ಹೈಲ್ಯಾಂಡ್ ಕಡೆಯಿಂದ ಹಂಪನಕಟ್ಟೆ ಕಡೆಗೆ ಸಾಗಿರುವ ರಸ್ತೆಯ ಎಡಬದಿಯಲ್ಲಿರುವ ಮಣ್ಣು ರಸ್ತೆಯಲ್ಲಿ ಪಾರ್ಕ್ ಮಾಡಿ ಹೈಲ್ಯಾಂಡ್ ಆಸ್ಪತ್ರೆಗೆ ಹೋಗಿದ್ದು,  ಸಮಯ ಸುಮಾರು ರಾತ್ರಿ 8.30 ಗಂಟೆಗೆ ಹೈಲ್ಯಾಂಡ್ ಆಸ್ಪತ್ರೆ ಕಡೆಯಿಂದ ಪಾರ್ಕ್ ಮಾಡಿದ್ದ PY-05-D-9055  ಕಾರಿನ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಕಂಕನಾಡಿ ಕಡೆಯಿಂದ ಹಂಪನಕಟ್ಟೆ ಕಡೆಗೆ KA-19-ML-4272 ನೋಂದಣಿ ನಂಬ್ರದ ಕಾರನ್ನು ಅದರ ಚಾಲಕನಾದ ಡಾI ಮೈಲವರಪ್ಪು ವರುಣ್ ಕುಮಾರ್ ಎಂಬವರು ನಿರ್ಲಕ್ಷ್ಯತನದಿಂದ ಮತ್ತು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಪಾರ್ಕ್ ಮಾಡಿದ್ದ ಕಾರಿನ ಕಡೆಯಿಂದ ಮೆಡ್ ಪ್ಲಸ್ ಕಡೆಗೆ ರಸ್ತೆ ದಾಟುತ್ತಿದ್ದ ಪ್ರಾಯ ಸುಮಾರು 45 ವರ್ಷದ ಅಪರಿಚಿತ ಗಂಡಸಿಗೆ ಡಿಕ್ಕಿಪಡಿಸಿ ಕಾರನ್ನು ನಿಯಂತ್ರಿಸಲಾಗದೇ ಮಣ್ಣು ರಸ್ತೆಯಲ್ಲಿ ಪಾರ್ಕ್ ಮಾಡಲಾಗಿದ್ದ PY-05-D-9055  ಕಾರಿನ ಬಲ ಹಿಂಬದಿಗೆ ಡಿಕ್ಕಿಪಡಿಸಿ ನಿಂತಿರುತ್ತದೆ. ಅಪಘಾತದಲ್ಲಿ ಅಪರಿಚಿತ ಗಂಡಸಿಗೆ ಮೂಗಿನ ಬಳಿ, ಎಡಕಾಲಿನ ಮೊಣಗಂಟಿನ ಬಳಿ. ಎಡ ಕೈ ಬೆರಳಿಗೆ ತರಚಿದ ರಕ್ತಗಾಯವಾಗಿದ್ದು, ಅಪಘಾತದ ವೇಳೆ ಪ್ರಜ್ಞಾಹೀನನಾಗಿದ್ದು, ಅಲ್ಲಿ ನೆರೆದ ಸಾರ್ವಜನಿಕರ ಸಹಾಯದಿಂದ ಗಾಯಾಳುವನ್ನು ಅಪಘಾತಪಡಿಸಿದ ಕಾರಿನಲ್ಲಿಯೇ ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಕರೆತರಲಾಗಿದ್ದು, ವೈದ್ಯರು ಆತನನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ ಎಂಬಿತ್ಯಾದಿ.

 

Crime Reported in Traffic South Police Station

 ದಿನಾಂಕ  23-08-2022 ರಂದು  ಪಿರ್ಯಾದಿ P H HYDAR ದಾರರು  ಸ್ಕೂಟರ್  ನಂಬ್ರ   KA-19-HE-0700  ನೇ ಸ್ಕೂಟರ್  ನಲ್ಲಿ  ಸವಾರರಾಗಿಯೂ  ಮತ್ತು   ಅವರ   ಹೆಂಡತಿ ಫೌಜಿಯಾ ಎಂಬವರನ್ನು   ಸಹ ಸವಾರಳಾಗಿ ಕುಳ್ಳಿರಿಸಿಕೊಂಡು  ಹರೇಕಳ ಕಡೆಯಿಂದ   ದೇರಳಕಟ್ಟೆ  ವಿದ್ಯಾರತ್ನ ಶಾಲೆಯ  ಕಡೆಗೆ  ಸ್ಕೂಟರನ್ನು  ಸವಾರಿ   ಮಾಡಿಕೊಂಡು   ಹೋಗುತ್ತಿರುವ  ಸಮಯ  ಸುಮಾರು  ಮಧ್ಯಾಹ್ನ  12:20 ಗಂಟೆಗೆ   ದೇರಳಕಟ್ಟೆ  ಬದ್ರಿಯ  ಮಸೀದಿ  ಎದುರು   ವಿದ್ಯಾರತ್ನ ಶಾಲೆಯ ಕಡೆಗೆ  ಹೋಗಲು ಅಂದರೆ  ರಸ್ತೆಯ  ಬಲಬದಿಯ ರಸ್ತೆಗೆ ಹೋಗಲು  ಇಂಡಿಕೇಟರ್ ಹಾಕಿ  ಸೂಚನೆ   ನೀಡಿ  ತಿರುಗಿಸುತ್ತಿರುವಾಗ ತೊಕ್ಕೊಟ್ಟು  ಕಡೆಯಿಂದ ಅಸೈಗೊಳಿ ಕಡೆಗೆ  ಬರುವ ರಸ್ತೆಯಲ್ಲಿ  ಬಸ್ಸ್  ತಂಗುದಾಣದಲ್ಲಿ  ಜನರನ್ನು   ಹತ್ತಿಸಿ  ಇಳಿಸಲು  ನಿಲ್ಲಿಸಿದ್ದ ಎನ್ ಎಸ್   ಟ್ರಾವೆಲ್ಸ್  ಬಸ್ಸು ನಂಬರ್ KA-20-AB-3349 ನೇದನ್ನು   ಅದರ ಚಾಲಕ ನಿಯಾಜ್ ಎಂಬಾತನು  ದುಡುಕುತನ ಹಾಗೂ   ನಿರ್ಲಕ್ಷ್ಯತನದಿಂದ  ಒಮ್ಮೆಲೆ ಮುಂದಕ್ಕೆ   ಚಲಾಯಿಸಿ ಪಿರ್ಯಾದಿದಾರು  ಸವಾರಿ ಮಾಡುತ್ತಿದ್ದ  ಸ್ಕೂಟರ್  ನ ಎಡಭಾಗಕ್ಕೆ   ಡಿಕ್ಕಿ  ಪಡಿಸಿದ  ಪರಿಣಾಮ ಪಿರ್ಯಾದಿದಾರರು ಮತ್ತು  ಅವರ  ಹೆಂಡತಿ ಸ್ಕೂಟರ್   ಸಮೇತ  ಡಾಮಾರು ರಸ್ತೆಗೆ   ಬಿದ್ದು ಪಿರ್ಯಾದಿದಾರರಿಗೆ  ಸಣ್ಣಪುಟ್ಟ   ಗಾಯಗಳಾಗಿರುತ್ತವೆ  ಹಾಗೂ ಅವರ  ಹೆಂಡತಿ ಫೌಜಿಯರವರಿಗೆ  ಎಡಗಾಲಿಗೆ  ಮೂಳೆ   ಮುರಿತದ   ಗಾಯ  ಮತ್ತು   ಸೊಂಟಕ್ಕೆ   ಮತ್ತು   ತಲೆಗೆ  ಗುದ್ದಿದ  ರೀತಿಯ   ಗಾಯವಾಗಿದ್ದು ಚಿಕಿತ್ಸೆ   ಬಗ್ಗೆ   ಅವರನ್ನು   ಅಲ್ಲಿ   ಸೇರಿದ   ಸಾರ್ವಜನಿಕರು  ಆಟೋರಿಕ್ಷವೊಂದರಲ್ಲಿ  ದೇರಳಕಟ್ಟೆ  ಕಣಚೂರು  ಆಸ್ಪತ್ರೆಗೆ  ಕರೆದುಕೊಂಡು ಹೋಗಿ  ದಾಖಲು  ಮಾಡಿರುತ್ತಾರೆ . ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 24-08-2022 06:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080