Feedback / Suggestions

Crime Reported in CEN Crime PS

ಪಿರ್ಯಾದಿ ಹೆಚ್.ಡಿ.ಎಫ್.ಸಿ ಬ್ಯಾಂಕ್ ಅಂಧೇರಿ ಪಶ್ಚಿಮ ಮುಂಬೈ,ಮಹಾರಾಷ್ಟ್ರಶಾಖೆಯಲ್ಲಿ ಖಾತೆಯನ್ನು ಹೊಂದಿದ್ದು, ಸದ್ರಿ ಖಾತೆಯ ಎಟಿಎಂ ಕಾರ್ಡನ್ನು ಪಿರ್ಯಾದಿದಾರರು ಉಪಯೋಗಿಸುತ್ತಿದ್ದು, ದಿನಾಂಕ:25-05-2023 ರಂದು ಸಮಯ 09:58  ರಿಂದ  10:00ರ ಮದ್ಯೆ  ಫಿರ್ಯಾದಿದಾರರ ಗಮನಕ್ಕೆ ಬಾರದೇ ಸದ್ರಿ ಖಾತೆಯಿಂದ ಯಾರೋ ಅಪರಿಚಿತರು  ಒಟ್ಟು ರೂ.63,537/-ಹಣವನ್ನು POS ಟ್ರಾನ್ಸಾಕ್ಷನ್ ಮೂಲಕ ವರ್ಗಾಯಿಸಿಕೊಂಡು  ಫಿರ್ಯಾದಿದಾರರಿಗೆ ಮೋಸಮಾಡಿರುವುದಾಗಿದೆ ಎಂಬಿತ್ಯಾದಿ.

Traffic South Police Station                  

ದಿನಾಂಕ: 25-05-2023 ರಂದು ಪಿರ್ಯಾದಿದಾರರಾದ ಮೋಹನದಾಸ್ (49 ವರ್ಷ) ರವರು ಹಾಗೂ ಅವರ ಅಣ್ಣ ರಾಮದಾಸ ರವರು ಬಂಟ್ವಾಳ ತಾಲ್ಲೂಕು ಬಾಳೆಪುನಿ ಗ್ರಾಮ ಮೂಳೂರು ಎಂಬಲ್ಲಿ ಕುಟುಂಬದ ದೈವಾರಧನೆ ಕಾರ್ಯಕ್ರಮಕ್ಕೆ ಬಂದಿದ್ದು ಮೂಳೂರು ಬಸ್ಸು ನಿಲ್ದಾಣದಲ್ಲಿ ರಾತ್ರಿ ಸಮಯ ಸುಮಾರು ರಾತ್ರಿ 9:00 ಗಂಟೆಗೆ ಪಿರ್ಯಾದಿದಾರರು ಹಾಗೂ ಅವರ ಅಣ್ಣ ರಾಮದಾಸ ರವರು ಮಾತನಾಡುತ್ತ ಕುಳಿತಿರುವಾಗ ಜೈಲು ರೋಡ್ ಕಡೆಯಿಂದ ಮುಡಿಪು ಕಡೆಗೆ ಲಾರಿ ನಂಬ್ರ KA-20-A-5170 ನೇದರ ಚಾಲಕ ಅಹಮ್ಮದ ಬಾವಾ ಎಂಬಾತನು ಸರಕುಗಳನ್ನು ತುಂಬಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಸದ್ರಿ ಲಾರಿಯ ಚಾಲಕನು ಲಾರಿ ನಿಯಂತ್ರಣವನ್ನು ಕಳೆದುಕೊಂಡು ವಾಹನ ಸಮೇತ ಪಿರ್ಯಾದಿದಾರರು ಹಾಗೂ ರಾಮದಾಸರವರು ಕುಳಿತಿರುವ ಬಸ್ ನಿಲ್ದಾಣದ ಮೇಲೆ ಮಗುಚಿ ಬಿದ್ದಿರುತ್ತದೆ, ಈ ಅಪಘಾತದಿಂದ ಪಿರ್ಯಾದಿದಾರರಿಗೆ ಗಾಯಗಳು ಆಗಿರುವುದಿಲ್ಲ ಪಿರ್ಯಾದಿದಾರರ ಅಣ್ಣ ರಾಮದಾಸನಿಗೆ ಸದ್ರಿ ಬಸ್ ನಿಲ್ದಾಣದ ಮೇಲ್ಚಾವಣಿಯು ತಲೆಗೆ ಬಿದ್ದು ತಲೆಗೆ ಗಂಬೀರ ಸ್ವರೂಪದ ರಕ್ತಗಾಯವಾಗಿರುತ್ತದೆ, ಅಲ್ಲದೆ ಲಾರಿಯಲ್ಲಿದ್ದ ಪ್ರಯಾಣಿಕ ಕೃಷ್ಣಪ್ಪ ಎಂಬವರಿಗೆ ಸಣ್ಣ ಪ್ರಮಾಣದ ಗಾಯವಾಗಿರುತ್ತದೆ, ಕೂಡಲೇ ಅಲ್ಲಿ ಸೇರಿದ್ದ ಸಾರ್ವಜನಿಕರು ಗಾಯಗೊಂಡವರನ್ನು ಉಪಚರಿಸಿ ಕಾರೊಂದರಲ್ಲಿ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ,ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುವುದಾಗಿದೆ,ಈ ಅಪಘಾತದಲ್ಲಿ ಲಾರಿ ಚಾಲಕನಿಗೆ ಯಾವುದೇ ಗಾಯಗಳಾಗಿರುವುದಿಲ್ಲ, ಎಂಬಿತ್ಯಾದಿ.

 

Traffic North Police Station

ಪಿರ್ಯಾದಿ Vajresh ದಿನಾಂಕ: 24-05-2023 ರಂದು ಅವರ ಬಾಬ್ತು KA-19-HD-7504 ನಂಬ್ರದ ಸ್ಕೂಟರ್ ನಲ್ಲಿ ಅಬೆಜಾನ್ ಡೆಲಿವರಿ ಕೆಲಸದ ನಿಮಿತ್ತ ಮಂಗಳೂರಿನ ಬಂದರಿನ ಆಫೀಸಿನಿಂದ ಹೊರಟು ಕಾವೂರು ಮಾರ್ಗವಾಗಿ ಪಂಜಿಮೊಗರು ಎಂಬಲ್ಲಿಗೆ ಹೋಗುತ್ತಾ ಬೆಳಿಗ್ಗೆ 08:45 ಗಂಟೆಗೆ ಕಾವೂರು ಶಾಂತಿನಗರ ಎಂಬಲ್ಲಿ ತಲುಪುತಿದ್ದಂತೆ KA-19-AA-5434 ನಂಬ್ರದ ಗೂಡ್ಸ್ ಟೆಂಪೋವನ್ನು ಅದರ ಚಾಲಕ ರಂಜಿತ್ ಎಂಬವರು ಯಾವುದೇ ಸೂಚನೆ ನೀಡದೇ ಒಮ್ಮೇಲೆ ನಿರ್ಲಕ್ಷ್ಯತನದಿಂದ ಬಲಕ್ಕೆ ತಿರುಗಿಸಿದ ಪರಿಣಾಮ ಪಿರ್ಯಾದಿದಾರರ ಸ್ಕೂಟರಿನ ಎಡಬದಿಯ ಹ್ಯಾಂಟಲ್ ಗೆ ಗೂಡ್ಸ್ ಟೆಂಪೋದ ಬಲಬದಿಯ ಬಂಪರ್ ತಾಗಿ ರಸ್ತೆಗೆ ಬಿದ್ದ  ಪರಿಣಾಮ  ಅವರ ಎಡಕಾಲಿನ ಮಣಿಗಂಟಿನ ಬಳಿ ಗುದ್ದಿದ ರೀತಿಯ ಗಾಯ ಮತ್ತು ಬಲ ಕಾಲಿನ ಮೊಣಗಂಟಿನ ಬಳಿ ತರಚಿದ ಗಾಯವಾಗಿದ್ದು  ಆರೋಪಿ ರಂಜಿತನು ಪಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ಟೆಂಪೋದಲ್ಲಿ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲುಮಾಡಿಕೊಂಡಿರುತ್ತಾರೆ ಎಂಬಿತ್ಯಾಧಿ.

Moodabidre PS

ಪಿರ್ಯಾದಿ Sheikh Usman Basha ದಿನಾಂಕ 23-05-2023 ರಂದು ಮೊಹಮ್ಮದ್ ಅದ್ನಾನ್ ಎಂಬುವರ ಜೊತೆ KA-19-EW-7191 ನಂಬರಿನ ಸ್ಕೂಟರಿನಲ್ಲಿ ಹಿಂಬದಿ ಸವಾರರಾಗಿ ಕುಳಿತುಕೊಂಡು ತೋಡಾರಿನಿಂದ ಮೂಡಬಿದ್ರೆ ಕಡೆಗೆ ಹೊರಟಿದ್ದು, ಸ್ಕೂಟರಿನ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಸಮಯ ಸುಮಾರು 11.30 ಗಂಟೆಗೆ ತೋಡಾರಿನ ಪಡುಪೇರಳಕಟ್ಟೆ ಎಂಬಲ್ಲಿಗೆ ತಲುಪುತ್ತಿದ್ದಂತೆ ನಾಯಿಯು ರಸ್ತೆಗೆ ಅಡ್ಡ ಬಂದಿದ್ದು, ಅದನ್ನು ತಪ್ಪಿಸಲು ಹೋಗಿ ಒಂದೇ ಸಲಕ್ಕೆ ಬ್ರೇಕ್ ಹಿಡಿದಿದ್ದು, ನಿಯಂತ್ರಣ ಸಿಗದೇ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದುದಾರರಿಗೆ ಬಲ ತೊಡೆಯ ಮೇಲ್ಭಾಗ ಸೊಂಟದ ಬಳಿ ಮೂಳೆ ಮುರಿತವಾಗಿ ಶಸ್ತ್ರಚಿಕಿತ್ಸೆಗಾಗಿ  ಅಲಂಗಾರಿನ ಮೌಂಟ್ ರೋಸರಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.

 

 

Last Updated: 21-08-2023 01:01 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080