ಅಭಿಪ್ರಾಯ / ಸಲಹೆಗಳು

Crime Reported in : Mangalore North PS  

ಪಿರ್ಯಾದಿ MAMATHA ದಾರರು  ಗಂಡ ಮಕ್ಕಳೊಂದಿಗೆ ವಾಸ ಮಾಡಿಕೊಂಡಿದ್ದು. ಪಿರ್ಯಾದಿದಾರರಿಗೆ  ಒಟ್ಟು 1 ಗಂಡು ಮತ್ತು 1 ಹೆಣ್ಣು ಮಕ್ಕಳಿರುತ್ತಾರೆ. ಪಿರ್ಯಾದಿದಾರರ  ಮಗಳು ಮಧುಶ್ರೀ (19ವರ್ಷ) ಒಂದೂವರೇ ತಿಂಗಳಿನಿಂದ ಕಾರ್ ಸ್ಟ್ರೀಟ್ ನಲ್ಲಿರುವ ಸ್ಟೀಲ್  ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾಳೆ. ದಿನಾಂಕ:02-11-022 ರಂದು ಎಂದಿನಂತೆ ಬೆಳಿಗ್ಗೆ 08.00 ಗಂಟೆಗೆ ಕೆಎ 19 ಹೆಚ್.ಎಫ್ 3573 ಸ್ಟೂಟರ್ ನಲ್ಲಿ ಕಾರ್ ಸ್ಟ್ರೀಟ್ ನಲ್ಲಿರುವ  ಸ್ಟೀಲ್  ಅಂಗಡಿಗೆ ಬಂದಿದ್ದು  ಸಮಯ 14.00 ಗಂಟೆಗೆ ಯಾರನ್ನೋ ನೋಡಲು ಹೋಗಿ ಬರುತ್ತೇನೆ ಎಂದು ಅಂಗಡಿಯಲ್ಲಿರುವವರಿಗೆ ಹೇಳಿ ಹೋಗಿದ್ದು ಇದುವರೆಗೂ ಮನೆಗೆ ಬಂದಿರುವುದಿಲ್ಲ. ನಂತರ ಪಿರ್ಯಾದಿದಾರರು  ಎಲ್ಲಾ ಕಡೆ ಹುಡುಕಾಡಿ, ಸಂಬಂಧಿಕರಲ್ಲಿ ವಿಚಾರಿಸಿ ದಿನ 03-11-2022 ರಂದು ಪಿರ್ಯಾದಿದಾರರ  ಮಗಳು ಮಧುಶ್ರೀ (19ವರ್ಷ) ಕಾಣೆಯಾದ ಬಗ್ಗೆ ಠಾಣೆಗೆ ಬಂದು ದೂರು ನೀಡಿರುವುದಾಗಿದೆ.

Traffic North Police Station               

 ಪಿರ್ಯಾದಿ Ashok Bhandary ದಾರರ ತಾಯಿ ಶ್ರೀಮತಿ ಜಯಂತಿ (57) ರವರು ದಿನಾಂಕ: 03-11-2022 ರಂದು ಮನೆಗೆ ತರಕಾರಿ ತರಲು ಕಿನ್ನಿಗೋಳಿಯ ಕಾನ್ಸೆಟ್ಟಾ ಆಸ್ಪತ್ರೆಯ ಸಮೀಪದ ಮಾರುಕಟ್ಟೆಯಿಂದ ತರಕಾರಿಗಳನ್ನು ಖರೀದಿಸಿ ವಾಪಾಸು ಮನೆ ಕಡೆಗೆ ನಡೆದುಕೊಂಡು ಬರುತ್ತಾ ಬೆಳಿಗ್ಗೆ ಸುಮಾರು 10:40 ಗಂಟೆಗೆ K.G ಮಲ್ಯ ಕಾಂಪ್ಲೆಕ್ಸ್ ಸಮೀಪ ತಲುಪುತ್ತಿದ್ದಂತೆಯೇ ಎದುರಿನಿಂದ ಅಂದರೆ ಕಿನ್ನಿಗೋಳಿ ಜಂಕ್ಷನ್ ಕಡೆಯಿಂದ ಮೂಡಬಿದ್ರೆ ಕಡೆಗೆ ಹಾದು ಹೋಗುವ ರಸ್ತೆಯಲ್ಲಿ KA-19-MG-5019 ನಂಬ್ರದ ಬ್ರೀಝಾ ಕಾರನ್ನು ಅದರ ಚಾಲಕನಾದ ಅಬ್ದುಲ್ ಖಾದರ್ ಎಂಬಾತನು ಅಜಾಗರೂಕತೆ ಮತ್ತು ಅಪಾಯಕಾರಿ ರೀತಿಯಲ್ಲಿ ರಸ್ತೆಯ ಎಡಬದಿಯಿಂದ ಬಲಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಫಿರ್ಯಾದಿದಾರರ ತಾಯಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರ ತಲೆಗೆ ಗುದ್ದಿದ ಗಂಬೀರ ಸ್ವರೂಪದ ಒಳಗಾಯ ಆಗಿದ್ದು ಮೇಲ್ಬಾಗದ ಎರಡೂ ಹಲ್ಲುಗಳು ಮುರಿತಗೊಂಡಿದ್ದು, ಗಲ್ಲಕ್ಕೆ, ಎಡ ಕೈ ಮೊಣಗಂಟಿಗೆ ಮತ್ತು ಎಡಕಾಲಿಗೆ ಅಲ್ಲಲ್ಲಿ ಪರಚಿದ ಗಾಯವಾಗಿದ್ದು ಅಲ್ಲದೇ ಕಾರು ಪಿರ್ಯಾದಿದಾರರ ತಾಯಿಯವರಿಗೆ ಡಿಕ್ಕಿ ಪಡಿಸಿ ಅದೇ ವೇಗದಲ್ಲಿ ಇನ್ನೂ ಮುಂದಕ್ಕೆ ಚಲಿಸಿ K.G ಮಲ್ಯ ಕಾಂಪ್ಲೆಕ್ಸ್ ಕಟ್ಟಡದ ಗೋಡೆಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿನ ಚಾಲಕ ಅಬ್ದುಲ್ ಖಾದರ್ ಮತ್ತು ಕಾರಿನಲ್ಲಿ ಇದ್ದ ಇತರ ಮೂರು ಜನ ಪ್ರಯಾಣಿಕರಿಗೂ ಕೂಡಾ ಗಾಯಗಳಾಗಿದ್ದು ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಕಿನ್ನಿಗೋಳಿಯ ಕಾನ್ಸೆಟ್ಟಾ ಆಸ್ಪತ್ರೆಗೆ ಸಾಗಿಸಿದ್ದು ನಂತರ ಶ್ರೀಮತಿ ಜಯಂತಿಯವರನ್ನು ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಸಿರುವುದಾಗಿದೆ ಎಂಬಿತ್ಯಾದಿ.

Traffic South Police Station                                               

ದಿನಾಂಕ: 03-11-2022 ರಂದು ಪಿರ್ಯಾದಿದಾರರಾದ ದಿವ್ಯಾ ಡಿಸೋಜಾ (27 ) ರವರು ಅವರ ಮನೆಯಾದ ಕುತ್ತಾರ್ ಗುತ್ತು ಕಡೆಗೆ ನಡೆದುಕೊಂಡು ಹೋಗಲು ಸಮಯ ಸುಮಾರು ಸಂಜೆ 4-30 ಗಂಟೆಗೆ ಕುತ್ತಾರ್ ಕೊರಗಜ್ಜನ ಕಟ್ಟೆಯ ಬಳಿ ತಲುಪುತ್ತಿದ್ದಂತೆ ಎಲಿಯಾರ್ ಪದವು ಕಡೆಯಿಂದ ಕುತ್ತಾರ್ ಕಡೆಗೆ ಬರುತ್ತಿದ್ದ ಕಾರು ನಂಬ್ರ: KA-05-P-7440 ನೇದರ ಕಾರು ಚಾಲಕ ಸುಖಾನಂದ ಶೆಟ್ಟಿ  ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಕಾರನ್ನು ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಯ ಬದಿಗೆ ಬಿದ್ದು ದಿವ್ಯಾ ಡಿಸೋಜಾ ರವರ ಎಡಗಾಲಿಗೆ ಮೂಳೆ ಮುರಿತದ ಗಾಯ ಕೈ ಮತ್ತು ಮುಖಕ್ಕೆ ತರಚಿದ ಗಾಯವಾಗಿದ್ದ ಅವರನ್ನು ಕೂಡಲೇ ಅಲ್ಲಿ ಸೇರಿದ ಜನರು ಮತ್ತು ಅಪಘಾತಪಡಿಸಿದ ಕಾರಿನ ಚಾಲಕ ಚಿಕಿತ್ಸೆಬಗ್ಗೆ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಗೆ ಆಟೋರಿಕ್ಷಾವೊಂದರಲ್ಲಿ ಕರೆದುಕೊಂಡು ಬಂದು ಒಳ ರೋಗಿಯಾಗಿ ದಾಖಲಿಸಿರುತ್ತಾರೆ ಹಾಗೂ ಅಪಘಾತ ಪಡಿಸಿದ ಕಾರಿನ ಚಾಲಕ ಸುಖಾನಂದ ಶೆಟ್ಟಿ  ರವರು ಅಪಘಾತ ಸಮಯ ಚಿಕಿತ್ಸಾ ವೆಚ್ಚ ಭರಿಸುವುದಾಗಿ ತಿಳಿಸಿದ್ದು ನಂತರ ಚಿಕಿತ್ಸಾ ವೆಚ್ಚ ಜಾಸ್ತಿಯಾಗಿರುವುದರಿಂದ ಚಿಕಿತ್ಸಾ ವೆಚ್ಚ  ಭರಿಸಲು ನಿರಾಕರಿಸಿರುತ್ತಾರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 04-11-2022 06:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080