ಅಭಿಪ್ರಾಯ / ಸಲಹೆಗಳು

Crime Reported in : Traffic North Police Station                       

ಪಿರ್ಯಾದಿ Omprakash A ದಾರರು ದಿನಾಂಕ: 09-11-2022 ರಂದು KA-19-AD-6005 ನಂಬ್ರದ ಕಂಟೈನರ್ ಲಾರಿಯನ್ನು ಚಲಾಯಿಸಿಕೊಂಡು ಮಂಗಳೂರಿನಿಂದ ಮಣಿಪಾಲಕ್ಕೆ ಹೋಗಿ ವಾಪಾಸು ಮಂಗಳೂರು ಕಡೆಗೆ ಬರುತ್ತಾ ಸಂಜೆ ಸಮಯ ಸುಮಾರು 5:45 ಗಂಟೆಗೆ ಸುರತ್ಕಲ್ ನಿಂದ ಮುಂದೆ ಅಗರಿ ಎಂಟರ್ ಪ್ರೈಸಸ್ ಎದುರು ರಾ.ಹೆ 66ನೇ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಿರುವಾಗ ಪಿರ್ಯಾದಿದಾರರ ಲಾರಿಯ ಮುಂದಿನಿಂದ KA-19-C-2270 ನಂಬರಿನ ಸಿಟಿ ಬಸ್ (ರೂಟ್ ನಂಬರ್ 53) ಹೋಗುತ್ತಿದ್ದು ಪಿರ್ಯಾದಿದಾರರು ರಸ್ತೆಯ ಬಲಬದಿ ಡಿವೈಡರ್ ಪಕ್ಕದಲ್ಲಿ ಲಾರಿಯನ್ನು ಚಲಾಯಿಸಿಕೊಂಡು ಬರುತ್ತಿದ್ದು ಪಿರ್ಯಾದಿದಾರರ ಮುಂದೆ ರಸ್ತೆಯ ಮಧ್ಯಭಾಗದಲ್ಲಿ ಅಂದರೆ ಪಿರ್ಯಾದಿದಾರರ ಲಾರಿಯ ಎಡಬದಿಯಲ್ಲಿದ್ದ ಬಸ್ಸನ್ನು ಅದರ ಚಾಲಕ ಅಬ್ದುಲ್ ಅಜೀಜ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿ ಬಸ್ಸನ್ನು ಒಮ್ಮೆಲೇ ಬಲಕ್ಕೆ ತಿರುಗಿಸಿ ಬಳಿಕ ಅಲ್ಲೇ ಎಡಬದಿಯ ಬಸ್ ಸ್ಟಾಪ್ ಗೆ ಹೋಗುವರೇ ಬಸ್ಸನ್ನು ಒಮ್ಮೆಲೇ ಎಡಕ್ಕೆ ತಿರುಗಿಸಿದ ಪರಿಣಾಮ ಬಸ್ಸಿನ ಬಲಭಾಗದ ಹಿಂಬದಿ ಚಕ್ರದ ಬಳಿಯ ಬಾಡಿಯು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಂಟೈನರ್ ಲಾರಿಯ ಮುಂದಿನ ಎಡಭಾಗದ ಕ್ಯಾಬಿನ್ ಭಾಗಕ್ಕೆ ತಾಗಿ ಎಡಭಾಗದ ಡೋರ್, ಸೈಡ್ ಮಿರರ್ ಹಾಗೂ ಎಡಭಾಗದ ಫೈಬರ್ ಬಾಡಿಗೆ ಹಾನಿಯಾಗಿರುತ್ತದೆ ಹಾಗೂ ಅಪಘಾತ ಪಡಿಸಿದ ಬಸ್ಸಿನ ಬಲಭಾಗದಲ್ಲಿ ಮಧ್ಯದಿಂದ ಹಿಂದಿನ ತನಕ ಬಸ್ಸಿನ ಬಾಡಿಗೆ ಸ್ವಲ್ಪ ಹಾನಿಯಾಗಿದ್ದು ಈ ಅಪಘಾತದಲ್ಲಿ ಯಾರಿಗೂ ಗಾಯವಾಗಿರುವುದಿಲ್ಲ ಎಂಬಿತ್ಯಾದಿ.

Ullal PS

ಪಿರ್ಯಾದಿಯ ಸಾರಂಶವೇನೆಂದರೆ, ದಿನಾಂಕ:20-10-2022 ರಂದು ಪಿರ್ಯಾದಿ Ashwath ದಾರರು ತನ್ನ ಅಜ್ಜಿಯ ಆರೈಕೆ ನೋಡಿಕೊಳ್ಳಲು ಸಂಜೆ 5-00 ಗಂಟೆಗೆ ದೇರಳಕಟ್ಟೆ ಯೆನೆಪೋಯಾ ಆಸ್ಪತ್ರೆಯ ಬಳಿಗೆ ಬಂದು ಅಲ್ಲಿಯ ಹೊರಭಾಗದಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ತನ್ನ ಮೋಟಾರು ಬೈಕ್ KA-19 HJ 3816 ನೇದನ್ನು ಪಾರ್ಕ್ ಮಾಡಿ, ದೇರಳಕಟ್ಟೆ ಯೆನೆಪೋಯಾ ಆಸ್ಪತ್ರೆಯ ಒಳಗೆ ಹೋಗಿದ್ದು,  ನಂತರ ಅಜ್ಜಿಯ ಆರೈಕೆ ನೋಡಿಕೊಂಡು ದಿನಾಂಕ:21-10-2022 ರಂದು ಬೆಳಿಗ್ಗೆ 08-00 ಗಂಟೆಗೆ ಕೆಲಸಕ್ಕೆ  ತೆರಳಲೆಂದು ಪಿರ್ಯಾದಿದಾರರು ಪಾರ್ಕ್ ಮಾಡಿದ್ದ ಮೋಟಾರು ಬೈಕ್ ಬಳಿಗೆ ಬಂದು ನೋಡಿದಾಗ ನಾನು ಪಾರ್ಕಿಂಗ್ ಮಾಡಿದ್ದ KA-19 HJ 3816 ನೇನಂಬ್ರದ ಮೋಟಾರು ಬೈಕ್  ಕಾಣಿಸಲಿಲ್ಲ. ಕೂಡಲೇ ಪಿರ್ಯಾದಿದಾರರು ಅಲ್ಲೇ ಅಕ್ಕಪಕ್ಕದಲ್ಲಿ ಹುಡುಕಾಡಿದ್ದು ಎಲ್ಲಿಯೂ ಕಂಡು ಬರಲಿಲ್ಲ. ಮೋಟಾರು ಬೈಕ್ ನ್ನು ಅಂದಿನಿಂದ ಇಂದಿನ ತನಕ ಬೇರೆ ಬೇರೆ ಕಡೆಗಳಲ್ಲಿ ಹುಡುಕಾಡಿದ್ದು , ವಿಚಾರಿಸಿಕೊಂಡಿದ್ದು, ಆದರೆ ಮೋಟಾರು ಬೈಕ್ ಪತ್ತೆಯಾಗಿರುವುದಿಲ್ಲ. ಎಲ್ಲಾ ಕಡೆಗಳಲ್ಲಿ ಈ ತನಕ ಹುಡುಕಾಡಿದ್ದರಿಂದ ಠಾಣೆಗೆ ದೂರು ನೀಡಲು ತಡವಾಗಿರುತ್ತದೆ. KA-19 HJ 3816 ನೇ ನಂಬ್ರದ ಮೋಟಾರು ಬೈಕ್ ಯಾರೋ ಕಳ್ಳರು ಕಳವು ಮಾಡಿದ್ದು, ಕಳವಾದ ನನ್ನ ಮೋಟಾರು ಬೈಕ್  ಪತ್ತೆ ಮಾಡಿಕೊಡಬೇಕಾಗಿ ನೀಡಿದ ಪಿರ್ಯಾದಿ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 10-11-2022 04:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080