ಅಭಿಪ್ರಾಯ / ಸಲಹೆಗಳು

Crime Reported in : Mangalore East PS

ಮಂಗಳೂರು ಪೂರ್ವ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಚಂದ್ರಶೇಖರ  ರವರು ದಿನಾಂಕ: 19-10-2022 ರಂದು ರಾತ್ರಿ  ರೌಂಡ್ಸ್ ಕರ್ತವ್ಯದ ಬಗ್ಗೆ ಠಾಣಾ ಪಿ.ಸಿ  ಹರೀಶ್ ನೇ ಯವರೊಂದಿಗೆ ರಾತ್ರಿ ವೇಳೆಯಲ್ಲಿ ಇಲಾಖಾ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ದಿನಾಂಕ: 20-10-2022 ರಂದು  ಬೆಳಗ್ಗಿನ ಜಾವ ಸುಮಾರು 2.45 ಗಂಟೆ ವೇಳೆಗೆ ಮಂಗಳೂರು ನಗರದ  ಕದ್ರಿ ಮೈದಾನದ ಕೋರ್ದಬ್ಬು ದೈವಸ್ಥಾನದ ಬಳಿ  ತನ್ನ  ಇರುವಿಕೆಯನ್ನು ಮರೆಮಾಚಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದನ್ನು ಹಿಡಿದು ವಿಚಾರಿಸಿದಾಗ ಅವನ  ಹೆಸರು ಪಿ ಎಸ್ ಬೈಜು  ಯಾನೆ ಕುಂಬಾರಿ ಬೈಜು ಪ್ರಾಯ.45 ವರ್ಷ ವಾಸ.ಪೇರುವಾಲಿ ಹೌಸ್ ,ಕಡಕರಪಳ್ಳಿ ಚೋರ್ ತಾಳ ಗ್ರಾಮ ಮತ್ತು ಅಂಚೆ,ಅಲಾಪೆ ಜಿಲ್ಲೆ ಕೇರಳ ಎಂದು ತಿಳಿಸಿದ್ದು, ಇವನು ಅಪರ ವೇಳೆಯಲ್ಲಿ ಮೇಲಿನ ಸ್ಥಳದಲ್ಲಿ ಇದ್ದ ಬಗ್ಗೆ ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡದೇ ಇದ್ದುದ್ದರಿಂದ ಇವನು ಯಾವುದೋ ಬೇವಾರಂಟು ತಕ್ಷೀರನ್ನು ನಡೆಸುವ ಉದ್ದೇಶದಿಂದ ಸದ್ರಿ ಸ್ಥಳದಲ್ಲಿ ರಾತ್ರಿ ವೇಳೆ ಹೊಂಚು ಹಾಕುತ್ತಿರುವುದಾಗಿ ಇವನ ವರ್ತನೆಯಿಂದ ಬಲವಾದ ಸಂಶಯ ಬಂದಿದ್ದು, ಇವರ ವಿರುದ್ದ  ಕಲಂ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

Mangalore North PS

ಪಿರ್ಯಾದಿದಾರರಾದ ಶ್ರೀ ಶೇಖ್ ರಿಯಾಜ್ ಎಂಬುವರು ಮಂಗಳೂರು ಸೆಂಟ್ರಲ್ ಮಾರ್ಕೇಟ್ ಎದುರುಗಡೆ ಇರುವ ದುಬೈ ಮಾರ್ಕೇಟಿನಲ್ಲಿ ಮೊಬೈಲ್ ಮ್ಯಾಟ್ರಿಕ್ಸ್ ಎನ್ನುವ ಮೊಬೈಲ್ ಅಂಗಡಿಯನ್ನು ಹೊಂದಿದ್ದು,ಸದ್ರಿ ಅಂಗಡಿಯಲ್ಲಿ ಸುಮಾರು 17 ವರ್ಷಗಳಿಂದ ವ್ಯಾಪಾರ-ವಹಿವಾಟು ಮಾಡಿಕೊಂಡಿದ್ದು, ಕುಂದಾಪುರ ತಾಲೂಕು ಗಂಗೊಳ್ಳಿಯಲ್ಲಿ ಓಮನ್ ಟೆಲ್ ಎನ್ನುವ ಹೆಸರಿನ ಮೊಬೈಲ್ ಅಂಗಡಿಯನ್ನು ನಡೆಸುತ್ತಿದ್ದ ಗಯಾಜ್ ಎಂಬ ವ್ಯಕ್ತಿಯ ಪರಿಚಯ ಪಿರ್ಯಾದುದಾರರಿಗೆ ಆಗಿದ್ದು,ಆತನು ಪಿರ್ಯಾದುದಾರರ ಅಂಗಡಿಗೆ ಬಂದು ಮೊಬೈಲ್ ಗಳನ್ನು ಖರೀದಿಸುತ್ತಿದ್ದು,ದಿನಾಂಕ:12-02-2021 ರಂದು ಸಮಯ 11.30 ಗಂಟೆಗೆ ಸದ್ರಿ ಗಯಾಜ್ ಎಂಬುವರು ಪಿರ್ಯಾದುದಾರರ ಅಂಗಡಿಗೆ ಬಂದು 6,39,000/- ರೂ  ಬೆಲೆಯ  ವಿವಿಧ ಕಂಪೆನಿಯ 62 ಮೊಬೈಲ್ ಗಳನ್ನು ಪಡೆದುಕೊಂಡು ಹೋಗಿದ್ದು,ಹೋಗುವಾಗ ಸ್ವಲ್ಪ ಹಣವನ್ನು ಈಗ ಎಟಿಎಂನಿಂದ ವಿದ್ ಡ್ರಾ ಮಾಡಿಕೊಂಡು ತಂದುಕೊಡುತ್ತೇನೆ ಎಂದು ಹೇಳಿ ಹೋಗಿರುತ್ತಾನೆ. ಆದರೆ ಅವನು ಪಿರ್ಯಾದಿದಾರರಿಗೆ ಯಾವುದೇ ಹಣವನ್ನು ನೀಡದೇ ಹೋಗಿರುತ್ತಾನೆ.ಪಿರ್ಯಾದಿದಾರರು  ಕೂಡಲೆ ಆತನಿಗೆ ಫೋನ್ ಮಾಡಿದಾಗ ಪೋನ್ ನಾಟ್ ರೀಚೇಬಲ್ ಆಗಿದ್ದು ,ಮರುದಿನ ಪಿರ್ಯಾದಿದಾರರು ಆತನಿಗೆ ಕರೆ ಮಾಡಿದಾಗ  ಒಂದು ಕಡೆಯಿಂದ ಹಣ ಬರಲು ಬಾಕಿ ಇದೆ ಅದು ಬಂದ ಮೇಲೆ ಕೊಡುತ್ತೇನೆ ಎಂದು ಹೇಳಿ ದಿನ ದೂಡುತ್ತಿದ್ದು, ನಂತರದ ದಿನಗಳಲ್ಲಿ ಪಿರ್ಯಾದಿದಾರರು ಅಂಗಡಿಯಲ್ಲಿದ್ದ ಸಿಸಿ ಟಿವಿಯನ್ನು ಪರಿಶೀಲಿಸಿದಾಗ ಸುಮಾರು 57,000/- ರೂಪಾಯಿ ಬೆಲೆ ಬಾಳುವ 3 ಮೋಬೈಲ್ ಗಳನ್ನು ಕೂಡ ಪಿರ್ಯಾದಿದಾರರಿಗೆ ತಿಳಿಯದಂತೆ ಗಯಾಜನು ಕೊಂಡುಹೋಗಿರುವುದು ಕಂಡು ಬಂದಿರುತ್ತದೆ..ಆದುದರಿಂದ ಇಷ್ಟರವರೆಗೆ ಗಯಾಜನು ಪಿರ್ಯಾದಿದಾರರಿಂದ ಖರೀದಿಸಿದ ಮೊಬೈಲ್ಗಳ ಹಣವನ್ನು ಕೊಡದೇ ಸತಾಯಿಸಿ ಪಿರ್ಯಾದಿದಾರರಿಗೆ ಮೋಸ,ವಂಚನೆ,ನಂಬಿಕೆ ದ್ರೋಹ ಎಸಗಿರುವುದರಿಂದ ಆರೋಪಿಯ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂಬಿತ್ಯಾದಿಯಾಗಿ ನೀಡಿದ ಪಿರ್ಯಾದಿ ಸಾರಾಂಶವಾಗಿದೆ.

Kankanady Town PS

ಪಿರ್ಯಾದುದಾರರಾದ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರವರು ದಿನಾಂಕ: 20.10.2022 ರಂದು ಮುಂಜಾನೆ 05:30 ಗಂಟೆಗೆ ಕಣ್ಣೂರು ಮಸೀದಿ ಬಳಿಯ ನೇತ್ರಾವತಿ ನದಿಯಿಂದ ಮರಳು ತೆಗೆಯುತ್ತಿರುವ ಬಗ್ಗೆ ಸ್ವೀಕರಿಸಿದ ಮಾಹಿತಿಯಂತೆ ಸಿಬ್ಬಂದಿಯವರೊಡನೆ ಕಣ್ಣೂರು ಮಸೀದಿ ಬಳಿಯ ನೇತ್ರಾವತಿ ನದಿ ಕಿನಾರೆಗೆ ಬೆಳಿಗ್ಗೆ ಸುಮಾರು 06:00 ಗಂಟೆಗೆ ಇಲಾಖಾ ವಾಹನದಲ್ಲಿ ಬಂದು ಸಿಬ್ಬಂದಿ ಮುಖೇನ ಸುತ್ತುವರಿದಾಗ ಒಂದು ಟಿಪ್ಪರ್ ಲಾರಿಯ ಚಾಲಕ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದು, ಇನ್ನೊಂದು ಟಿಪ್ಪರ್ ಲಾರಿಯ ಚಾಲಕನನ್ನು ವಿಚಾರಿಸಿದಾಗ ತನ್ನ ಹೆಸರು ಮೊಹಮ್ಮದ್ ಆಯುಬ್ ಕಣ್ಣೂರು, ಪ್ರಾಯ: 45,  ವಾಸ: ಬೋರುಗುಡ್ಡೆ ಹೌಸ್, ಕಣ್ಣೂರು ಅಂಚೆ, ಮಂಗಳೂರು ತಾಲೂಕು ಎಂಬುದಾಗಿ ತಿಳಿಸಿದ್ದು, ತಾನು ಹಣ ಮಾಡುವ ಉದ್ದೇಶದಿಂದ ದೋಣಿ ಮುಖಾಂತರ ನದಿಯಿಂದ ಕಳ್ಳತನದ ಮುಖೇನಾ ಮರಳು ತೆಗೆದು ಸಾಗಾಟ ಮಾಡುತ್ತಿರುವುದಾಗಿ ನುಡಿದಿರುತ್ತಾನೆ. ಹಾಗೆಯೇ ಜೆ.ಸಿ.ಬಿ ಚಾಲಕ ಅಲ್ಲಾವುದ್ದೀನ್, ಪ್ರಾಯ: 40,  ವಾಸ: ಗಾಬಕಾಮ್, ಚಂದಾವರ್, ಝಾರ್ಕಂಡ್ ರಾಜ್ಯ ರವರು ತಾನು ಮೊಹಮ್ಮದ್ ಆಯುಬ್ ರವರ ಸೂಚನೆಯಂತೆ ಮರಳನ್ನು ಟಿಪ್ಪರಿಗೆ ಲೋಡ್ ಮಾಡುತ್ತಿರುವುದಾಗಿ ತಿಳಿಸಿರುತ್ತಾನೆ. ಇಲ್ಲಿಂದ ಸುಮಾರು ಅರ್ಧ ಕಿ.ಮೀ ದೂರ ಪಶ್ಚಿಮ ದಿಕ್ಕಿನಲ್ಲಿ ಸುಮಾರು 10 ಯುನಿಟ್ ಮರಳನ್ನು ದಾಸ್ತಾನು ಇರಿಸಿ ಸದ್ರಿ ಟಿಪ್ಪರ್ ಚಾಲಕ / ಮಾಲಕ ಆಯುಬ್ ರವರು ನೇತ್ರಾವತಿ ನದಿಯಿಂದ ಮರಳನ್ನು ಅಕ್ರಮವಾಗಿ ತೆಗೆದು ಲಾರಿಯಲ್ಲಿ ತುಂಬಿಸಿ ಸಾಗಿಸಲು ಅಧಿಕೃತ ಪರವಾನಿಗೆಯನ್ನು ಹೊಂದದೇ ಸಾರ್ವಜನಿಕ ಖನಿಜ ವಸ್ತುವಾದ ಮರಳನ್ನು ಯಾವುದೇ ಪರವಾನಿಗೆ ಇಲ್ಲದೇ ರಾಜ್ಯ ಸರಕಾರಕ್ಕೆ ರಾಜಧನ ಪಾವತಿಸದೇ ಅಕ್ರಮವಾಗಿ ಸರಕಾರದ ಸೊತ್ತಾದ ಮರಳನ್ನು ಕಳುವು ಮಾಡಿ ಲಾರಿಯಲ್ಲಿ ಅಕ್ರಮವಾಗಿ ತುಂಬಿಸಿಕೊಂಡು ಬರುತ್ತಿರುವುದು ದೃಢಪಟ್ಟಿರುವುದರಿಂದ ಮರಳು ತುಂಬಿದ ಟಿಪ್ಪರ್ ಲಾರಿ KA-19-AD-8645 ಮತ್ತು ಮರಳು ತುಂಬಿಸಲು ತಂದಿರಿಸಿದ ಟಿಪ್ಪರ್ ಲಾರಿ KA-19-AD-7207 ಹಾಗೂ ಲೋಡ್ ಮಾಡಲು ಉಪಯೋಗಿಸಿದ ಜೆ.ಸಿ.ಬಿ KA-19-MK-7310 ನೇದನ್ನು ಮತ್ತು ಅಕ್ರಮ ಮರಳು ಸಾಗಾಟಕ್ಕೆ ಸಹಕರಿಸಿದ KA-19-EA-3480, KA-19-HD-7209 ಮತ್ತು KA-19-EA-9670 ನೇ ದ್ವಿಚಕ್ರ ವಾಹನವನ್ನು  ವಶಪಡಿಸಿಕೊಳ್ಳಲಾಗಿದ್ದು ಸದ್ರಿ ಲಾರಿಗಳ ಚಾಲಕ ಮತ್ತು ಮಾಲಕ ಹಾಗೂ ಜೆಸಿಬಿಯ ಚಾಲಕ ಮತ್ತು ಮಾಲಕ  ಹಾಗೂ ಅಕ್ರಮ ಮರಳುಗಾರಿಕೆ ಸಹಕರಿಸಿ ಪರಾರಿಯಾದ ದ್ವಿಚಕ್ರ ವಾಹನ ಸವಾರರ  ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ.

Traffic North Police Station       

ದಿನಾಂಕ 19-10-2022 ರಂದು ಪಿರ್ಯಾದಿ KORADA SRINIVAS KALYAN ದಾರರು ಹಾಗೂ ಅವನ ಗೆಳೆಯರಾದ ಮಜ್ಜಿ ವೆಂಕಟ ವರ್ಷಿತ್, ಪೊಡಿನಾಳ ಸುಹಾಸ್ ಹಾಗೂ ಸಕೇತ್ ರವರು ಈಗಾಗಲೇ ಮಂಗಳೂರಿನ ಪಾಂಡೇಶ್ವರದ ಬೈಕ್ & ರೋಲ್ ಎಂಬಲ್ಲಿಂದ ಬಾಡಿಗೆಗಾಗಿ ಪಡೆದು ಕೊಂಡಿದ್ದ KA-19-AD- 3085 ಮತ್ತು KA-19-AD-2705 ನಂಬ್ರದ ಸ್ಕೂಟರುಗಳಲ್ಲಿ ಪಿರ್ಯಾದಿ ದಾರರು ಹಾಗೂ ಮೇಲ್ಕಾಣಿಸಿದ ಗೆಳೆಯರೊಂದಿಗೆ ರಾತ್ರಿ ಊಟ ಮಾಡುವ ಸಲುವಾಗಿ ಸುರತ್ಕಲಿನ ಮನ್ಹಾಸ್ ಮಂದಿ ಹೊಟೇಲಿಗೆ ಹೋಗಿದ್ದವರು ರಾತ್ರಿ ಊಟ ಮುಗಿಸಿಕೊಂಡು ವಾಪಾಸು ಅವರ ಕಾಲೇಜು ಕ್ಯಾಂಪಸ್ ಕಡೆಗೆ ಹೋಗುತ್ತಾ ಪಿರ್ಯಾದಿದಾರರು ಸಕೇತ್ ಎಂಬಾತನು ಸವಾರಿ ಮಾಡುತ್ತಿದ್ದ KA-19-AD-3085 ನಂಬ್ರದ ಸ್ಕೂಟರಿನಲ್ಲಿ ಸಹ ಸವಾರನಾಗಿ ಕುಳಿತಿದ್ದು, ಹಾಗೆಯೇ KA-19-AD-2705 ನಂಬ್ರದ ಸ್ಕೂಟರಿನಲ್ಲಿ ಮಜ್ಜಿ ವೆಂಕಟ ವರ್ಷಿತ್ ಎಂಬಾತನು ಸವಾರನಾಗಿ ಪೊಡಿನಾಳ ಸುಹಾಸ್ ನನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಸುರತ್ಕಲಿನಿಂದ ಪದ್ಮಾವತಿ ಆಸ್ಪತ್ರೆಯ ಸರ್ವೀಸ್ ರಸ್ತೆಯ ಮೂಲಕ ಬಂದು ಪಿರ್ಯಾದಿದಾರರ ಸ್ಕೂಟರನ್ನು ಸವಾರಿ ಮಾಡುತ್ತಿದ್ದ ಸಕೇತ್ ಎಂಬಾತನು ರಾತ್ರಿ 11:40 ಗಂಟೆಗೆ ಹೊಟೇಲ್ ಸೂರಜ್ ಇಂಟರ್ ನ್ಯಾಶನಲ್ ಎದುರು ರಾ.ಹೆ 66ನೇ ರಸ್ತೆ ಬದಿಯಲ್ಲಿ ನಿಲ್ಲಿಸಿ ಮೂಲ್ಕಿ ಕಡೆಯಿಂದ ಸುರತ್ಕಲ್ ಕಡೆಗೆ ಬರುವ ವಾಹನಗಳನ್ನು ಗಮನಿಸುತ್ತಿದ್ದ ವೇಳೆ KA-19-AD-2705 ನಂಬ್ರದ ಸ್ಕೂಟರನ್ನು ಅದರ ಸವಾರ ಮಜ್ಜಿ ವೆಂಕಟ ವರ್ಷಿತ್ ನಿರ್ಲಕ್ಷ್ಯತನದಿಂದ ಒಮ್ಮೆಲೇ ರಾ.ಹೆ 66ನೇ ಡಾಮಾರು ರಸ್ತೆಗೆ ಮುನ್ನುಗ್ಗಿಸಿ ಡಿವೈಡರ್ ಕಡೆಗೆ ಹೋಗಿದ್ದು, ಇದೇ ವೇಳೆ ಮೂಲ್ಕಿ ಕಡೆಯಿಂದ KA-20-AA-0927 ನಂಬ್ರದ ಮೀನು ಸಾಗಿಸುವ ವಾಹನವನ್ನು ಅದರ ಚಾಲಕನಾದ ದಿವಾಕರ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮಜ್ಜಿ ವೆಂಕಟ ವರ್ಷಿತ್ ನ ಸ್ಕೂಟರಿಗೆ ಪರಸ್ಪರ ಡಿಕ್ಕಿಯಾಗಿ ಸ್ಕೂಟರ್ ಸವಾರ ಹಾಗೂ ಸಹಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಸಹಸವಾರನಾಗಿ ಕುಳಿತಿದ್ದ ಪೊಡಿನಾಳ ಸುಹಾಸನಿಗೆ ತಲೆಗೆ ಮತ್ತು ಹೊಟ್ಟೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು ಅಲ್ಲದೇ ಬಲಕಾಲಿಗೆ ತರಚಿದ ರೀತಿಯ ಗಾಯವಾಗಿದ್ದು, ಸ್ಕೂಟರ್ ಸವಾರ ಮಜ್ಜಿ ವೆಂಕಟ ವರ್ಷಿತ್ ನಿಗೆ ಎಡಕೈ ಭುಜ, ಎಡಕೈ ಮಧ್ಯ ಬೆರಳು ಮತ್ತು ಉಂಗುರ ಬೆರಳಿಗೆ ಎಡಕಾಲಿನ ತೊಡೆಯ ಭಾಗಕ್ಕೆ, ಪಾದಕ್ಕೆ ಮತ್ತು ಸೊಂಟದ ಹಿಂಭಾಗಕ್ಕೆ ಅಲ್ಲಲ್ಲಿ ತರಚಿದ ಸಾಮಾನ್ಯ ಸ್ವರೂಪದ ಗಾಯವಾಗಿ ಚಿಕಿತ್ಸೆಯ ಬಗ್ಗೆ AJ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 20-10-2022 06:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080