ಅಭಿಪ್ರಾಯ / ಸಲಹೆಗಳು

Crime Reported in : MANGALORE WEST TRAFFIC

ಪಿರ್ಯಾದು SURESH (50) ದಾರರೊಂದಿಗೆ ಕೆಲಸ ಮಾಡುತ್ತಿರುವ ಶುಭಂ ಹಾಗೂ ರಾಮ್ ಪ್ರತಾಪ್ ಸಿಂಗ್ ರವರು ದಿನಾಂಕ:23-10-2022ರಂದು ರಾತ್ರಿ ಉರ್ವ ಸ್ಟೋರ್ ನಿಂದ ತಮ್ಮ ರೂಂ ಇರುವ ಲೋಹಿತ್ ನಗರ  ಎಂಬಲ್ಲಿಗೆ ನಡೆದುಕೊಂಡು ಬರುತ್ತಾ 21:00 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ಸಾರಿ-66ರ ಕುಂಟಿಕಾನ ಟಿಂಬರ್ ಲ್ಯಾಂಡ್ ಎದುರು ರೂಂ ಗೆ ಸಾಗುವ ರಸ್ತೆಗೆ ಹೋಗಲು ರಾಷ್ಟ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ವಾಹನಗಳು ಬಾರದೇ ಇರುವುದನ್ನು ಗಮನಿಸಿಕೊಂಡು ರಸ್ತೆ ದಾಟುತ್ತಿರುವ ವೇಳೆ ಕೆಪಿಟಿ ಕಡೆಯಿಂದ ಕೂಳೂರು ಕಡೆಗೆ ಸಾರ್ವಜನಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎ:19:ಎಂಎಚ್:5962ನೇ ಕಾರನ್ನು ಅದರ ಚಾಲಕ ಇಮ್ರಾನ್ ಎಂಬಾತನು ತೀರಾ ನಿರ್ಲಕ್ಷ್ಯತನ ಚಲಾಯಿಸಿ ಶುಭಂ ಎಂಬವರಿಗೆ ಡಿಕ್ಕಿ ಪಡಿಸಿ ಗಾಯಗೊಳಿಸಿರುವುದು ಎಂಬಿತ್ಯಾದಿ ಸಾರಾಂಶ.

URWA PS

ಪಿರ್ಯಾದಿದಾರರಾದ ಶ್ರೀ ಹರೀಶ್ ರವರ ಮಗಳಾದ ಕುಮಾರಿ ಧನ್ಯಶ್ರೀಯು (21)ಬಿಜೈ ಆನೆಗುಂಡಿ 2ನೇ ಕ್ರಾಸ್ ಎಂಬಲ್ಲಿ ತನ್ನ ಚಿಕ್ಕಮ್ಮ ಭಾರತಿರವರೊಂದಿಗೆ ವಾಸ್ತವ್ಯವಿದ್ದು, ಕೇರಳದ ಉಪ್ಪಳದಲ್ಲಿರುವ  ಡಾಕ್ಟರ್ಸ್ ಹಾಸ್ಪಿಟಲ್ ನಲ್ಲಿ ಓ.ಟಿ.ಟೆಕ್ನೀಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 20-10-2022 ರಂದು ಮಧ್ಯಾಹ್ನ ಸಮಯ ಸುಮಾರು 03-00 ಗಂಟೆಗೆ ತನಗೆ ರಾತ್ರಿ ಕರ್ತವ್ಯವಿರುವುದಾಗಿ ಮನೆಯಿಂದ ಹೋಗಿದ್ದು ದಿನಾಂಕ 21-10-2022 ರಂದು 19-00 ಗಂಟೆಗೆ ಬಿಜೈ ಜಯಲಕ್ಷ್ಮೀ ಅಂಗಡಿ ಎದುರು ಇರುವ ಬಸ್ ನಿಲ್ದಾಣದ ಬಳಿಯಲ್ಲಿ ಪಿರ್ಯಾದಿದಾರರ ಸಂಬಂಧಿ ಸಂದೇಶ್ ಎಂಬವರು ಧನ್ಯಶ್ರೀಯನ್ನು ನೋಡಿ ಮಾತನಾಡಿಸಿದಲ್ಲಿ ಆಕೆಯು ಮನೆಗೆ ಹೋಗುವುದಾಗಿ ಅವರಲ್ಲಿ ತಿಳಿಸಿ ಹೋದವಳು ಮನೆಗೆ ಬಾರದೆ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಪಿರ್ಯಾದಿದಾರರು ಎಲ್ಲಾ ಕಡೆ ಹುಡುಕಾಡಿ ನೆರೆಕರೆಯವರಲ್ಲಿ ವಿಚಾರಿಸಲಾಗಿ ಎಲ್ಲಿಯೂ ಆಕೆಯ ಬಗ್ಗೆ ಮಾಹಿತಿ ದೊರೆಯದ ಕಾರಣ ದೂರು ನೀಡುತ್ತಿರುವುದಾಗಿದೆ. ಎಂಬಿತ್ಯಾದಿಯಾಗಿರುತ್ತದೆ.

TRAFFIC NORTH POLICE STATION

“ಫಿರ್ಯಾದಿ MAYYADI K ದಾರರ ಸಹೋದರ ಮಹಮ್ಮದ್ (40 ವರ್ಷ) ಎಂಬವರು ದಿನಾಂಕ 22.10.2022 ರಂದು ಸಂಜೆ ರಾಯಿಕಟ್ಟೆ ಮನೆಯಿಂದ ಹೊರಟು ಸಂಜೆ ಸುಮಾರು 6:30 ಗಂಟೆಗೆ ರಾಯಲ್ ಒಕ್ಸ್ ಬೈಕ್ ಶೋ ರೂಮಿನ ಮುಂದಿನಿಂದ ಕೂಳೂರು ಡೆಲ್ಟಾ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಕಡೆಗೆ ರಾಷ್ಟ್ರೀಯ ಹೆದ್ದಾರಿ 66ನೇ ರಸ್ತೆಯನ್ನು ದಾಟುತ್ತಿರುವಾಗ ಕೊಟ್ಟಾರ ಕಡೆಯಿಂದ ಕೂಳೂರು ಕಡೆಗೆ ಮೋಟಾರ್ ಸೈಕಲ್ ನಂಬ್ರ ಕೆಎ-19ಹೆಚ್.ಇ-8844 ನೇಯದನ್ನು ಅದರ ಸವಾರ ತಕ್ಷಿತ್ ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿಕೊಂಡು ಬಂದು ಮಹಮ್ಮದ್ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಮಹಮ್ಮದ್  ರವರ ಎಡಕೈಯ ರಟ್ಟೆಯ ಬಳಿ ಚರ್ಮ ಹರಿದ ಮೂಳೆ ಮುರಿತದ ಗಾಯ ಸೊಂಟದ ಬಲಬದಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಹಣೆ ಎಡಬದಿ ಗುದ್ದಿದ ರಕ್ತ ಗಾಯ ಮತ್ತು ಎಡ ಮೊಣಗಂಟಿನ ಬಳಿ ತರಚಿದ ಗಾಯವಾಗಿದ್ದು ಗಾಯಾಳು ಮಹಮ್ಮದ್ ರವರು ಕುಂಟಿಕಾನ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 24-10-2022 08:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080